ಕುಂದಾಪುರ : ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಎಲೆಚುಕ್ಕೆ ರೋಗ ನಷ್ಟ ಪರಿಹಾರವಾಗಿ ತಕ್ಷಣ 10 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೈಂದೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿದ್ದು, ಬೆಳೆಗಾರರು ದೃತಿಗೆಡಬಾರದು, ರೋಗ ಅಧ್ಯಯನಕ್ಕೆ ತಜ್ಞರ ತಂಡ ನಿಯೋಜನೆ ಮಾಡಿದ್ದೇವೆ. ಕೃಷಿ ವಿವಿ ಹಾಗೂ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ರೋಗ ಹರಡದಂತೆ ವಿಜ್ಞಾನಿಗಳು ಕೆಲವೊಂದು ಸಲಹೆ ನೀಡಿದ್ದಾರೆ. ಎಲೆಚುಕ್ಕೆ ರೋಗದ ಮೂಲ ತಿಳಿದುಕೊಂಡು ಸೂಕ್ತ ಔಷಧಿ ಪತ್ತೆ ಹಚ್ಚುತ್ತೇವೆ ಎಂದರು.