ಬೆಂಗಳೂರು : ಗೌರಿ-ಗಣೇಶ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ಗಳಿಗೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಿಂದ ವಿವಿಧ ಊರುಗಳಿಗೆ ಹೋಗುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತೀವೆ. ಬೆಂಗಳೂರು-ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಖಾಸಗಿ ಬಸ್ ಟಿಕೆಟ್ ದರ 1000 ರೂ-1500 ರೂ.ವರೆಗೆ ನಿಗದಿ ಮಾಡಿವೆ. ಸೆ. 5 ರಂದು ಬೆಂಗಳೂರು-ದಾವಣಗೆರೆ ಖಾಸಗಿ ಟ್ರಾವೆಲ್ಸ್ ಒಂದರ ಬಸ್ ನ ಟಿಕೆಟ್ ದರ 900-2000 ರೂ. ದರ ನಿಗದಿಪಡಿಸಲಾಗಿದೆ.
ಇನ್ನು ಬೆಂಗಳೂರು-ಗುಲ್ಬರ್ಗ: 1200-1800 ರೂ., ಬೆಂಗಳೂರು-ಯಾದಗಿರಿ: 1100-1750 ರೂ., ಬೆಂಗಳೂರು-ದಾವಣಗೆರೆ: 900-2000 ರೂ., ಬೆಂಗಳೂರು-ಹಾಸನ: 899-1800 ರೂ., ಬೆಂಗಳೂರು-ಧಾರವಾಡ: 1200-3000 ರೂ., ಬೆಂಗಳೂರು-ಚಿಕ್ಕಮಗಳೂರು: 900-1500 ರೂ.ಗೆ ಏರಿಸಲಾಗಿದ್ದು, ಊರಿಗೆ ಹೊರಟ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ.