ಬೆಂಗಳೂರು : ಬಿಜೆಪಿ ಶಾಸಕ ಕೆ ಗೋಪಾಲರಿಗೆ ಕೊಲೆ ಬೆದರಿಕೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜ್ನನ್ನು ಪೊಲೀಸರುಪಡಿಸಿಕೊಂಡಿದ್ದರು. ನಂತರ ಜಾಮೀನು ಪಡೆದು ಹೊರ ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಪಕ್ಷ ನಾಯಕ ಆರ್ ಅಶೋಕ್ ಅವರು ನನ್ನನ್ನು ಮೇಯರ್ ಮಾಡಲು ಒಂದು ಕೋಟಿ ರೂಪಾಯಿ ಪಡೆದಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2010ರಲ್ಲಿ ನನ್ನನ್ನು ಬಿಬಿಎಂಪಿ ಮೇಯರ್ ಮಾಡುವುದಾಗಿ ಹಾಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಅವರು ಒಂದು ಕೋಟಿ ರು. ಪಡೆದಿದ್ದರು. ಆ ಹಣವನ್ನು ವಾಪಸ್ ಪಡೆದಿದ್ದಕ್ಕೆ ನನ್ನ ಮೇಲೆ ಅವರಿಗೆ ಸಿಟ್ಟಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಎಸ್.ಪದ್ಮರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ, ಮಾಜಿ ಸಚಿವ ಗೋಪಾಲಯ್ಯರವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಶೋಕ್ ಹಾಗೂ ಗೋಪಾಲಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಯಾರಿಗೂ ಕೊಲೆ ಬೆದರಿಕೆ ಹಾಕಿಲ್ಲ. ಎಲ್ಲವನ್ನೂ ಧರ್ಮಸ್ಥಳದ ಮಂಜುನಾಥಸ್ವಾಮಿ ನೋಡಿಕೊಳ್ಳುತ್ತಾನೆ ಎಂದು ತಿಳಿಸಿದರು.
ಕೆಲ ತಿಂಗಳ ಹಿಂದೆ ನಾನು ಗುತ್ತಿಗೆ ಕೆಲಸದ ಸಂಬಂಧ ಶಾಸಕ ಗೋಪಾಲಯ್ಯ ಅವರಿಗೆ 15 ಲಕ್ಷ ರು ಕೊಟ್ಟಿದ್ದೆ. ಆ ಹಣವನ್ನು ಕೇಳಲು ಮಂಗಳವಾರ ರಾತ್ರಿ ಫೋನ್ ಮಾಡಿದ್ದಾಗ ನನ್ನ ಮೇಲೆ ಅವರು ಸಿಕ್ಕಾಪಟ್ಟೆ ರೇಗಾಡಿದರು. ಆಗ ನಾನು ಕೋಪದಲ್ಲಿ ಮಾತನಾಡಿದ್ದೇನೆ ಹೊರತು ಜೀವ ಬೆದರಿಕೆ ಹಾಕಿದ್ದೇನೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.