Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಪೋಷಕರ ಗಮನಕ್ಕೆ: ಜೂ.28ರಂದು ರಾಜ್ಯಾಧ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

BIG NEWS : 12 ವರ್ಷಗಳಲ್ಲಿ 57 ಲಕ್ಷ ಕೋಟಿ ರೂ. ದೋಚಿದ ಮೋದಿ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

BREAKING : ನನ್ನ ಕರದ್ರೆ ದೆಹಲಿಗೆ ಹೋಗ್ತೀನಿ : ಸಿಎಂ ಬೆನ್ನಲ್ಲೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಪ್ಲಾನ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 12 ವರ್ಷಗಳಲ್ಲಿ 57 ಲಕ್ಷ ಕೋಟಿ ರೂ. ದೋಚಿದ ಮೋದಿ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
KARNATAKA

BIG NEWS : 12 ವರ್ಷಗಳಲ್ಲಿ 57 ಲಕ್ಷ ಕೋಟಿ ರೂ. ದೋಚಿದ ಮೋದಿ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

By kannadanewsnow57

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಇಂಧನ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 57 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಜಂಟಿ ಮಾಧ್ಯಮ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ ದಾಟಿದ್ದು, ಇದು ಕಳೆದ 78 ವರ್ಷಗಳಲ್ಲೇ ದಾಖಲೆಯಾಗಿದೆ. ಕೇವಲ 11 ದಿನಗಳಲ್ಲಿ ಇಂಧನ ಬೆಲೆಯನ್ನು ಲೀಟರ್ಗೆ ₹7.52 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕರ ಜೀವನೋಪಾಯದ ಬಿಕ್ಕಟ್ಟಿಗೆ ಸ್ಪಂದಿಸದೆ ಮೌನ ವಹಿಸಿದೆ ಎಂದು ಅವರು ಟೀಕಿಸಿದ್ದಾರೆ.

11 ದಿನಗಳಲ್ಲಿ 4 ಬಾರಿ ಬೆಲೆ ಏರಿಕೆಯ ಬರೆ!
ಕಳೆದ 11 ದಿನಗಳಲ್ಲಿ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ನಾಲ್ಕು ಬಾರಿ ಬೆಲೆ ಏರಿಕೆಯ ದಾಳಿ ನಡೆಸಿದೆ ಎಂದು ನಾಯಕರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ:

ಮೇ 15: ಪೆಟ್ರೋಲ್, ಡೀಸೆಲ್ ಲೀಟರ್ಗೆ ₹3 ಹೆಚ್ಚಳ

ಮೇ 19: ಲೀಟರ್ಗೆ 90 ಪೈಸೆ ಹೆಚ್ಚಳ

ಮೇ 23: ಲೀಟರ್ಗೆ 91 ಪೈಸೆ ಹೆಚ್ಚಳ

ಮೇ 25: ಲೀಟರ್ಗೆ ₹2.71 ಭಾರಿ ಹೆಚ್ಚಳ

ಸಿಎನ್ಜಿ ಬೆಲೆ: ಕಳೆದ 11 ದಿನಗಳಲ್ಲಿ ₹4 ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಕೆ.ಜಿಗೆ ₹90.10 ತಲುಪಿದೆ.

“2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 108 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ₹71.41 ಇತ್ತು. ಆದರೆ ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದರೂ ಬೆಂಗಳೂರಿನಲ್ಲಿ ಪೆಟ್ರೋಲ್ ₹110.93 ಹಾಗೂ ಡೀಸೆಲ್ ₹98.89 ತಲುಪಿದೆ. ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಪೆಟ್ರೋಲ್ ₹61.60 ಮತ್ತು ಡೀಸೆಲ್ ₹56.99 ಇರಬೇಕಿತ್ತು. ಉಳಿದ ಹೆಚ್ಚುವರಿ ಹಣವೆಲ್ಲವೂ ಬಿಜೆಪಿಯ ಹಗಲು ದರೋಡೆಯಾಗಿದೆ” ಎಂದು ನಾಯಕರು ಆರೋಪಿಸಿದ್ದಾರೆ.

ಆರ್ಬಿಐ ತುರ್ತು ನಿಧಿಗೂ ಕನ್ನ!
ಬಿಜೆಪಿ ಸರ್ಕಾರವು ಕೇವಲ ತೆರಿಗೆಗಳ ಮೂಲಕ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು ಮಾತ್ರವಲ್ಲದೆ, ದೇಶದ ತುರ್ತು ಪರಿಸ್ಥಿತಿಗೆ ಇರಬೇಕಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದ “ತುರ್ತು ಮೀಸಲು ನಿಧಿ”ಯನ್ನೂ ಲೂಟಿ ಮಾಡಿದೆ. ಮೇ 23 ರಂದು ರೂಪಾಯಿ ಮೌಲ್ಯ ಕುಸಿತದ ಲಾಭ ಪಡೆದು, ಆರ್ಬಿಐನ ವಿದೇಶಿ ವಿನಿಮಯ ಮೀಸಲನ್ನು ಮಾರಾಟ ಮಾಡಿ ₹2.87 ಲಕ್ಷ ಕೋಟಿಯನ್ನು ಸರ್ಕಾರ ಪಡೆದುಕೊಂಡಿದೆ. ಕಳೆದ 12 ವರ್ಷಗಳಲ್ಲಿ ಆರ್ಬಿಐನಿಂದಲೇ ಒಟ್ಟು ₹14 ಲಕ್ಷ ಕೋಟಿಯನ್ನು ಮೋದಿ ಸರ್ಕಾರ ಲೂಟಿ ಮಾಡಿದೆ ಎಂದು ಜಂಟಿ ಹೇಳಿಕೆಯಲ್ಲಿ ದೂರಲಾಗಿದೆ.

ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೆ:
ಇಂಧನ ಮಾತ್ರವಲ್ಲದೆ ಗೃಹಬಳಕೆ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಗಳೂ ಜನಸಾಮಾನ್ಯರ ಕೈಗೆಟಕದಂತಾಗಿವೆ:

ಗೃಹಬಳಕೆಯ ಎಲ್ಪಿಜಿ: 2014 ರಲ್ಲಿ ₹412 ಇದ್ದ ಸಿಲಿಂಡರ್ ಬೆಲೆ ಇಂದು ₹915.50 ಕ್ಕೆ (122% ಏರಿಕೆ) ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ 38.5% ನಷ್ಟು ಕಡಿಮೆಯಾಗಿದ್ದರೂ ಭಾರತದಲ್ಲಿ ಮಾತ್ರ ಬೆಲೆ ಏರಿಸಲಾಗಿದೆ.

ವಾಣಿಜ್ಯ ಸಿಲಿಂಡರ್ (Commercial LPG): 2014 ರಲ್ಲಿ ₹1,241 ಇದ್ದ ಬೆಲೆ ಇಂದು ₹3,152 ಕ್ಕೆ ತಲುಪಿದೆ. ಮಾರ್ಚ್ 1 ರಿಂದ ಮೇ 25 ರ ನಡುವೆ ಬರೋಬ್ಬರಿ 5 ಬಾರಿ ಬೆಲೆ ಹೆಚ್ಚಿಸಲಾಗಿದ್ದು, ಮೇ 1 ರಂದೇ ಒಂದೇ ಬಾರಿಗೆ ₹993 ಹೆಚ್ಚಳ ಮಾಡಲಾಗಿದೆ.

ಕಾಂಗ್ರೆಸ್ ತಕ್ಷಣದ ಒತ್ತಾಯ:
ಕೇಂದ್ರದ ಬಿಜೆಪಿ ಸರ್ಕಾರವು ಈ “ಇಂಧನ ಲೂಟಿ”ಯನ್ನು ತಕ್ಷಣವೇ ನಿಲ್ಲಿಸಬೇಕು. ಪೆಟ್ರೋಲ್, ಡೀಸೆಲ್, ಗೃಹಬಳಕೆಯ ಗ್ಯಾಸ್, ವಾಣಿಜ್ಯ ಸಿಲಿಂಡರ್ ಹಾಗೂ ಸಿಎನ್ಜಿ ಬೆಲೆಗಳನ್ನು ಕೂಡಲೇ ಕಡಿತಗೊಳಿಸಿ ಜನಸಾಮಾನ್ಯರು, ರೈತರು, ಬಡವರು ಮತ್ತು ಗೃಹಿಣಿಯರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲಾ ಜಂಟಿಯಾಗಿ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಸುಲಿಗೆ ಖಂಡಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala, ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ @DKShivakumar, ಮುಖ್ಯಮಂತ್ರಿ @Siddaramaiah ಅವರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿದರು.

ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಸಚಿವರಾದ ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಧ್ಯಮ… pic.twitter.com/PtNLXr15SL

— Karnataka Congress (@INCKarnataka) May 25, 2026

BIG NEWS: Modi government looted Rs 57 lakh crore in 12 years: CM Siddaramaiah attacks
Share. Facebook Twitter LinkedIn WhatsApp Email

Related Posts

ಮಕ್ಕಳ ಪೋಷಕರ ಗಮನಕ್ಕೆ: ಜೂ.28ರಂದು ರಾಜ್ಯಾಧ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

2 Mins Read

BREAKING : ನನ್ನ ಕರದ್ರೆ ದೆಹಲಿಗೆ ಹೋಗ್ತೀನಿ : ಸಿಎಂ ಬೆನ್ನಲ್ಲೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಪ್ಲಾನ್!

1 Min Read

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

1 Min Read
Recent News

ಮಕ್ಕಳ ಪೋಷಕರ ಗಮನಕ್ಕೆ: ಜೂ.28ರಂದು ರಾಜ್ಯಾಧ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

BIG NEWS : 12 ವರ್ಷಗಳಲ್ಲಿ 57 ಲಕ್ಷ ಕೋಟಿ ರೂ. ದೋಚಿದ ಮೋದಿ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

BREAKING : ನನ್ನ ಕರದ್ರೆ ದೆಹಲಿಗೆ ಹೋಗ್ತೀನಿ : ಸಿಎಂ ಬೆನ್ನಲ್ಲೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಪ್ಲಾನ್!

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

State News
KARNATAKA

ಮಕ್ಕಳ ಪೋಷಕರ ಗಮನಕ್ಕೆ: ಜೂ.28ರಂದು ರಾಜ್ಯಾಧ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮುಂಬರುವ ಜೂನ್ 28ರ ಭಾನುವಾರದಂದು ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನವನ್ನು…

BIG NEWS : 12 ವರ್ಷಗಳಲ್ಲಿ 57 ಲಕ್ಷ ಕೋಟಿ ರೂ. ದೋಚಿದ ಮೋದಿ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

BREAKING : ನನ್ನ ಕರದ್ರೆ ದೆಹಲಿಗೆ ಹೋಗ್ತೀನಿ : ಸಿಎಂ ಬೆನ್ನಲ್ಲೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಪ್ಲಾನ್!

BIG NEWS : ನಾಳೆ 11 ಗಂಟೆಗೆ ಹೈಕಮಾಂಡ್ ಜೊತೆ ಸಭೆಯಲ್ಲಿ ಭಾಗಿಯಾಗ್ತೇನೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.