ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೈಗೊಂಡಿರುವ ಬಸ್ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್ಯು ಲೀಡರ್ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2025 ಪುರಸ್ಕಾರ ದೊರಕಿದೆ.
ಈ ಪ್ರಶಸ್ತಿಯನ್ನು ಹೈಯಟ್ ರಿಜೆನ್ಸಿ ಹೋಟೆಲ್, ನವದೆಹಲಿಯಲ್ಲಿ 2025ರ ಜೂನ್ 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು. ಈ ಪುರಸ್ಕಾರವನ್ನು ಶ್ರೀ ಇಂದರ್ ಪಾಲ್ ಸಿಂಗ್ ಸೇಥಿ, ಡೈರೆಕ್ಟರ್ ಜನರಲ್ , ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC), ಭಾರತ ಸರ್ಕಾರ ರವರು ನಿಗಮಕ್ಕೆ ನೀಡಿದರು.
ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ಶ್ರೀ ವೆಂಕಟೇಶ್ ಟಿ, ಮುಖ್ಯ ಕಾನೂನು ಅಧಿಕಾರಿ ಮತ್ತು ಶ್ರೀ ಕುತ್ಬುದ್ದೀನ್ ಹವಾಲ್ದಾರ್, ಮುಖ್ಯ ಕಾಮಗಾರಿ ಅಭಿಯಂತರರು, ಕೇಂದ್ರ ಕಚೇರಿ, ಬೆಂಗಳೂರು ಇವರು ಸ್ವೀಕರಿಸಿದರು.