ಬೆಂಗಳೂರು : ನಾನು ಮತ್ತೆ ಬಿಜೆಪಿಗೆ ಹೋಗುವ ಬೆಳವಣಿಗೆ ಆಗಿಲ್ಲ ಹಾಗಾಗಿ ಸದ್ಯಕ್ಕಂತು ಬಿಜೆಪಿಗೆ ನಾನು ವಾಪಸ್ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವ ತಟಸ್ಥ ಬಣವು ಸಹ ನನ್ನನ್ನು ಇದುವರೆಗೂ ಸಂಪರ್ಕ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಕೆಲಸ ಮಾಡಿದ್ದೇವೆ. ನಿಮ್ಮನ್ನು ಕೈ ಬಿಡಲ್ಲ ಯಾವಾಗಲೂ ನಿಮ್ಮ ಜೊತೆಗೆ ಇರುತ್ತೇವೆ ಅಂತ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ.
ಬಿಜೆಪಿಯಲ್ಲಿ ಆಗಬೇಕಿರುವ ಶುದ್ಧೀಕರಣದ ಬಗ್ಗೆ ಹೇಳುತ್ತೇನೆ. ನಾನು ಹೈಕಮಾಂಡ್ ನಾಯಕರ ಗಮನಕ್ಕೆ ಬಿಜೆಪಿಯಲ್ಲಿರುವ ಆಗುವ ಶುದ್ಧಿಕರಣ ಕುರಿತು ಗಮನಕ್ಕೆ ತರುತ್ತೇನೆ. ಕೇಂದ್ರದ ನಾಯಕರು ಮುಂದೆ ಬಂದರೆ ಈ ವಿಚಾರವಾಗಿ ಚರ್ಚಿಸುತ್ತೇನೆ. ಮನಸ್ಸಿಗೆ ಸಮಾಧಾನ ಆದರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ ಎಂದು ಬೆಂಗಳೂರಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.