ಬೆಂಗಳೂರು: ಕೋವಿಡ್-19 ( Covid19 ) ಸಂದರ್ಭದಲ್ಲಿ ವಿವಿಧ ಪರೀಕ್ಷಾ ಫಲಿತಾಂಶಗಳು ಶೈಕ್ಷಣಿಕ ವರ್ಷದಂತೆ ಪ್ರಕಟವಾಗಿರಲಿಲ್ಲ. ಹೀಗಾಗಿ ಅನುಕಂಪದ ಆಧಾರದ ನಿರೀಕ್ಷೆಯಲ್ಲಿದ್ದವರು ಪರೀಕ್ಷೆ ಫಲಿತಾಂಶ ( Exam Results ) ತಡವಾಗಿ ಪ್ರಕಟವಾಗಿದ್ದರಿಂದ ನೌಕರಿ ಸಿಗದೇ ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಆದ್ರೇ ಇದೀಗ ಸರ್ಕಾರ ಈ ವೇಳೆಯ ಪರೀಕ್ಷಾ ಫಲಿತಾಂಶವನ್ನು 2020-21ನೇ ಸಾಲಿನ ಅನುಕಂಪದ ಆಧಾರದ ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯಾಗಿ ಪರಿಗಣಿಸಿ ಆದೇಶಿಸಿದೆ.
BREAKING NEWS : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ :`ಮಹಾ’ ಸಚಿವರ ಬೆಳಗಾವಿ ಭೇಟಿ ಕ್ಯಾನ್ಸಲ್
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ಸುತ್ತೋಲೆ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಸರ್ಕಾರ ಹೊರಡಿಸಿರುವಂತ ಸುತ್ತೋಲೆಯಲ್ಲಿ ಸರ್ಕಾರಿ ನೌಕರರು ( Government Servant ) ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು, ಆತನ ಅವಲಂಬಿತರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ( Compassionate employment ) ನೀಡಲಾಗುತ್ತದೆ ಎಂದಿದೆ.
Good News : ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್ : 204.47 ಕೋಟಿ ರೂ ಬಿಡುಗಡೆ
ಸರ್ಕಾರ ನೀಡುವಂತ ನೌಕರಿಗಾಗಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಹಾಗೂ ಅಂತಹ ಅವಲಂಬಿತ ಅಭ್ಯರ್ಥಿಯ ಪದವಿ ಪೂರ್ವ (ಪಿಯುಸಿ) ಪರೀಕ್ಷಾ ಫಲಿತಾಂಶ ಪ್ರಕಟಣೆಯು 2019-20ನೇ ಸಾಲಿನಲ್ಲಿ ಕೋವಿಡ್-19ರ ಲಾಕ್ ಡೌನ್ ಕಾರಣದಿಂದ ವಿಳಂಬವಾಗಿತ್ತು ಎಂದಿದ್ದಾರೆ.
ಈ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಪಿಯುಸಿ ಜೊತೆಗೆ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ ಹಾಗೂ ಇನ್ನಿತರೆ ತತ್ಸಮಾನ ವಿದ್ಯಾರ್ಹತೆಗಳನ್ನು, ಗಣನೆಗೆ ತೆಗೆದುಕೊಂಡು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಎಲ್ಲಾ ಸಕ್ಷಮ, ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದ್ದಾರೆ.