Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!

25/11/2025 10:07 AM

BIG NEWS : ಕರ್ನಾಟಕದಲ್ಲಿ `ಅನುಕಂಪದ ಆಧಾರದ ಮೇಲೆ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

25/11/2025 10:03 AM

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

25/11/2025 9:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕದಲ್ಲಿ `ಅನುಕಂಪದ ಆಧಾರದ ಮೇಲೆ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ಕರ್ನಾಟಕದಲ್ಲಿ `ಅನುಕಂಪದ ಆಧಾರದ ಮೇಲೆ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5725/11/2025 10:03 AM

ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138) ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಸರ್ಕಾರ ದಿನಾಂಕ: 12.09.1996 ರ ಉಲ್ಲೇಖ (1) ರ ಅಧಿಸೂಚನೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ನ್ನು ರಚಿಸಿದ್ದು, ಈ ನಿಯಮಗಳು ದಿನಾಂಕ 13.09.1996 ರಿಂದ ಜಾರಿಗೆ ಬಂದಿರುತ್ತವೆ. ಈ ನಿಯಮಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿರುತ್ತದೆ. ದಿನಾಂಕ 09.04.2021 ರ ಉಲ್ಲೇಖ (2) ರ ಅಧಿಸೂಚನೆಯಲ್ಲಿ 1996 ರ ಸದರಿ ನಿಯಮಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ.

ದಿನಾಂಕ 12.11.2024 ರ ಉಲ್ಲೇಖ (3) ರ ಸುತ್ತೋಲೆಯಲ್ಲಿ ಮತ್ತು ದಿನಾಂಕ 13.01.2025 ರ ಉಲ್ಲೇಖ (4) ರ ಸುತ್ತೋಲೆಯಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.

2. ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತನಾದಾಗ, ಆತನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ, ಅಂತಹ ಅರ್ಜಿಗಳನ್ನು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 202187/2023 (ಎಸ್-ಕೆಎಟಿ) – ರಾಜ್ಯ ಸರ್ಕಾರ ವಿರುದ್ಧ ಶ್ರೀ ಮೆಹಬೂಬ್ ಪಟೇಲ್ ಪ್ರಕರಣದಲ್ಲಿ ದಿನಾಂಕ 25.07.2025 ರಂದು ನೀಡಿರುವ ತನ್ನ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಿರುತ್ತದೆ:

“22. ಸಹಾನುಭೂತಿಯ ನೇಮಕಾತಿ ವಿಷಯಗಳು ದುಃಖಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಕಲ್ಯಾಣ ಕ್ರಮವಾಗಿದ್ದು, ರಾಜ್ಯವು ಕಾರ್ಯವಿಧಾನದ ನ್ಯಾಯಯುತತೆಯ ಹೆಚ್ಚಿನ ಕರ್ತವ್ಯವನ್ನು ಹೊಂದಿದೆ. ಸಕಾಲಿಕ ಅರ್ಜಿಯನ್ನು, ವಿಶೇಷವಾಗಿ ಅನಕ್ಷರಸ್ಥ ಅಥವಾ ವಿಧವೆಯಿಂದ ಸಲ್ಲಿಸಿದಾಗ, ಅಧಿಕಾರಿಗಳು ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಮತ್ತು ಸಹಾಯಕವಾಗಿ ಕಾರ್ಯನಿರ್ವಹಿಸಬೇಕು ಹಾಗೆ ಮಾಡಲು ವಿಫಲವಾದರೆ, ಸರಿಯಾದ ಅವಲಂಬಿತರಿಗೆ ಅವರ ಅವಕಾಶವನ್ನು ನಿರಾಕರಿಸಬಹುದು.

23. ಅಂತಹ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು ಮತ್ತು ಅನುಕಂಪದ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆ, ಪಾರದರ್ಶಕತೆ ಮತ್ತು ಕಾರ್ಯವಿಧಾನದ ನ್ಯಾಯಸಮ್ಮತತೆಯನ್ನು ತರಲು, ನಾವು ಈ ಕೆಳಗಿನ ನಿರ್ದೇಶನಗಳನ್ನು ನೀಡುತ್ತೇವೆ.

i) ಅನುಕಂಪದ ನೇಮಕಾತಿಗಾಗಿ ಪ್ರತಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಥವಾ ಇಲ್ಲದೆ, ಪ್ರಾಧಿಕಾರವು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು ಮತ್ತು ಸ್ಪಷ್ಟ ಸಂವಹನದೊಂದಿಗೆ

ಎ) ಅರ್ಜಿಯ ಸ್ಥಿತಿ (ಅಪೂರ್ಣ ಅಥವಾ ಸಂಪೂರ್ಣ),

ಬಿ) ಸ್ವರೂಪ/ದಾಖಲೆಯಲ್ಲಿನ ಯಾವುದೇ ದೋಷಗಳು;

ಸಿ) ಇತರ ಅವಲಂಬಿತರು ಅರ್ಜಿ ಸಲ್ಲಿಸುವ ಹಕ್ಕುಗಳು,

d) ಅನ್ವಯವಾಗುವ ಮಿತಿ ಅವಧಿ,

ii) ಅರ್ಜಿದಾರರು ವಿಧವೆ, ಅನಕ್ಷರಸ್ಥ ಅಥವಾ ಇತರ ಸಂದರ್ಭಗಳಲ್ಲಿ, ಸಂಬಂಧಪಟ್ಟ ಇಲಾಖೆಗಳು ಅರ್ಜಿಯನ್ನು ಸರಿಯಾದ ನಮೂನೆಯಲ್ಲಿ ಸಲ್ಲಿಸಲು ಸಹಾಯ ಮಾಡಲು ಮತ್ತು ಇತರ ಅವಲಂಬಿತರು ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು;

iii) ಎಲ್ಲಾ ಅರ್ಜಿಗಳನ್ನು ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಗರಿಷ್ಠ 90 ದಿನಗಳ ಒಳಗೆ ನಿರ್ಧರಿಸಬೇಕು. ಅರ್ಜಿಯು ನಿರ್ವಹಣೆಗೆ ಯೋಗ್ಯವಾಗಿಲ್ಲ ಎಂದು ಕಂಡುಬಂದರೆ, ಅರ್ಜಿದಾರರಿಗೆ ತಕ್ಷಣವೇ ಸಮಂಜಸವಾದ ಆದೇಶವನ್ನು ತಿಳಿಸಬೇಕು.

iv) ಕಾರ್ಯವಿಧಾನದ ಲೋಪಗಳು ಸಂಭವಿಸದಂತೆ ನೋಡಿಕೊಳ್ಳಲು ಸರ್ಕಾರವು ಏಕರೂಪದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಮತ್ತು ಅನುಕಂಪದ ನೇಮಕಾತಿಯನ್ನು ನಿರ್ವಹಿಸುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು.

ಅನುಕಂಪದ ನೇಮಕಾತಿಗಾಗಿ ಅರ್ಜಿಗಳನ್ನು ಮೇಲೆ ತಿಳಿಸಲಾದ ಸಮಯದೊಳಗೆ ನಿರ್ಧರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು.

3. ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ರನ್ವಯ ಮೃತ ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ, ಅಂತಹ ಅರ್ಜಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯವು ಮೇಲ್ಕಂಡ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ವಯ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಸಕ್ಷಮ / ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.

BIG NEWS: `Compassionate recruitment' in Karnataka: Important order from the state government
Share. Facebook Twitter LinkedIn WhatsApp Email

Related Posts

BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!

25/11/2025 10:07 AM1 Min Read

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

25/11/2025 9:56 AM2 Mins Read

ALERT : ಮೃತ ವ್ಯಕ್ತಿಯ `ATM’ ಕಾರ್ಡ್ ನಿಂದ ಹಣ ತೆಗೆದ್ರೆ ಜೈಲು ಶಿಕ್ಷೆ ಫಿಕ್ಸ್ : ಬ್ಯಾಂಕ್ `ರೂಲ್ಸ್’ತಿಳಿಯಿರಿ.!

25/11/2025 9:34 AM1 Min Read
Recent News

BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!

25/11/2025 10:07 AM

BIG NEWS : ಕರ್ನಾಟಕದಲ್ಲಿ `ಅನುಕಂಪದ ಆಧಾರದ ಮೇಲೆ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

25/11/2025 10:03 AM

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

25/11/2025 9:56 AM

ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 26,000 ಕ್ಕಿಂತ ಕಡಿಮೆ ಓಪನ್, ಸೆನ್ಸೆಕ್ಸ್ 80 ಪಾಯಿಂಟ್ ಕುಸಿತ; ಡಾ.ರೆಡ್ಡೀಸ್ ಲ್ಯಾಬ್ ಶೇ.1.2ರಷ್ಟು ಏರಿಕೆ

25/11/2025 9:54 AM
State News
KARNATAKA

BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!

By kannadanewsnow0525/11/2025 10:07 AM KARNATAKA 1 Min Read

ದಾವಣಗೆರೆ : ರಾಜ್ಯದಲ್ಲಿ ಇತ್ತೀಚಿಗೆ ಬೆಂಗಳೂರು ನಗರದಲ್ಲಿ 7 ಕೋಟಿ ದರೋಡೆ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ಮತ್ತೊಂದು ದರೋಡೆ ನಡೆದಿತ್ತು.…

BIG NEWS : ಕರ್ನಾಟಕದಲ್ಲಿ `ಅನುಕಂಪದ ಆಧಾರದ ಮೇಲೆ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

25/11/2025 10:03 AM

BIG NEWS : ರಾಜ್ಯ ಸರ್ಕಾರದ ಎಲ್ಲಾ ವಾಹನ ಚಾಲಕರು, ಡಿ-ಗ್ರೂಪ್ ನೌಕರರು ಕರ್ತವ್ಯದ ವೇಳೆ ಸಮವಸ್ತ್ರ. `I.D ಕಾರ್ಡ್’ ಧರಿಸುವುದು ಕಡ್ಡಾಯ.!

25/11/2025 9:56 AM

ALERT : ಮೃತ ವ್ಯಕ್ತಿಯ `ATM’ ಕಾರ್ಡ್ ನಿಂದ ಹಣ ತೆಗೆದ್ರೆ ಜೈಲು ಶಿಕ್ಷೆ ಫಿಕ್ಸ್ : ಬ್ಯಾಂಕ್ `ರೂಲ್ಸ್’ತಿಳಿಯಿರಿ.!

25/11/2025 9:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.