ಬೆಂಗಳೂರು : ಸಾಕು ನಾಯಿಗಳ ಕಾರಣಕ್ಕೆ ಪ್ರಕರಣಗಳು ಕೋರ್ಟ್ ಮೆಟ್ಟಿಲು ಏರುತ್ತಿದ್ದು ಸಾಕು ನಾಯಿಗಳನ್ನು ನಿಯಂತ್ರಿಸದ ಮಾಲಿಕರಿಂದಾಗಿ ಕೇಸುಗಳು ಹೆಚ್ಚುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗ ಪ್ರಸನ್ನ ಅವರಿದ್ದ ಪೀಠ ಅಸಮಾಧಾನ ಹೊರಹಾಕಿದೆ.
ಸಾಕು ನಾಯಿ ಕರೆದು ಇದು ಬೇರೆ ಮನೆಯ ಮುಂದೆ ಮಲ-ಮೂತ್ರ ವಿಸರ್ಜನೆ ಪ್ರಶ್ನಿಸಿದ್ದ ಮನೆಯ ಮಾಲೀಕ ಸಾಕು ನಾಯಿ ಮಾಲೀಕರ ನಡುವೆ ಗಲಾಟೆ ಆಗಿದೆ. ದೂರು ಪ್ರತಿಧೂರು ದಾಖಲಾಗಿ ಅಮೃತಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ನಾಯಿ ಮಾಲಿಕ ದಾಖಲಿಸಿದ ಎಫ್ಐಆರ್ ಗೆ ಹೈಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.








