Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

19/03/2026 6:30 AM

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

19/03/2026 6:29 AM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !
INDIA

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

By kannadanewsnow5719/03/2026 6:29 AM

ನವದೆಹಲಿ: ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿಗೊಳಿಸಲಾಗಿದ್ದು, ಇನ್ನು ಮುಂದೆ ಹಣ ಪಣಕ್ಕಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್ ಆಟಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಲೋಕಸಭೆಯಲ್ಲಿ ಸಂಸದ ರಾವ್ ರಾಜೇಂದ್ರ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರು, ಈ ಹೊಸ ಕಾಯ್ದೆಯು ಕೇವಲ ಆಟಗಳಿಗಷ್ಟೇ ಸೀಮಿತವಾಗಿಲ್ಲ, ಅದರ ಸುತ್ತಮುತ್ತಲಿನ ಸಂಪೂರ್ಣ ಜಾಲಕ್ಕೆ ಬಲೆ ಬೀಸಿದೆ, ಎಲ್ಲಾ ಮಾದರಿಯ ಹಣದ ಆಟಗಳು: ಅದು ಕೌಶಲ್ಯದ ಆಟವಿರಲಿ (Game of Skill) ಅಥವಾ ಅದೃಷ್ಟದ ಆಟವಿರಲಿ (Game of Chance), ಹಣದ ವ್ಯವಹಾರವಿದ್ದರೆ ಅಂತಹ ಆಟಗಳನ್ನು ನಿಷೇಧಿಸಲಾಗಿದೆ.

ಜಾಹೀರಾತು ಮತ್ತು ಪ್ರಚಾರ: ಆನ್‌ಲೈನ್ ಹಣದ ಆಟಗಳ ಪ್ರಚಾರ ಮಾಡುವುದು ಅಥವಾ ಅದಕ್ಕೆ ಸಂಬಂಧಿಸಿದ ಜಾಹೀರಾತು ನೀಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕುಗಳು ಅಥವಾ ಯಾವುದೇ ಪಾವತಿ ವ್ಯವಸ್ಥೆಗಳ ಮೂಲಕ ಇಂತಹ ಆಟಗಳಿಗೆ ಹಣ ವರ್ಗಾವಣೆ ಮಾಡುವುದನ್ನೂ ನಿಷೇಧಿಸಲಾಗಿದೆ.

ಶಿಕ್ಷೆ ಮತ್ತು ದಂಡದ ವಿವರಗಳು
ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಸರ್ಕಾರ ಭಾರೀ ದಂಡ ಮತ್ತು ಕಠಿಣ ಶಿಕ್ಷೆಯನ್ನು ನಿಗದಿಪಡಿಸಿದೆ:

ಅಪರಾಧದ ವಿವರ ಮೊದಲ ಬಾರಿ ಶಿಕ್ಷೆ ಎರಡನೇ ಬಾರಿ (ಮರುಕಳಿಸಿದರೆ)
ಆಟ ನೀಡುವುದು/ಹಣಕಾಸು ನೆರವು 3 ವರ್ಷ ಜೈಲು ಅಥವಾ ₹1 ಕೋಟಿ ದಂಡ 5 ವರ್ಷ ಜೈಲು ಮತ್ತು ₹2 ಕೋಟಿ ದಂಡ
ಜಾಹೀರಾತು/ಪ್ರಚಾರ ಮಾಡುವುದು 2 ವರ್ಷ ಜೈಲು ಅಥವಾ ₹50 ಲಕ್ಷ ದಂಡ 3 ವರ್ಷ ಜೈಲು ಮತ್ತು ₹1 ಕೋಟಿ ದಂಡ

ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ ಸ್ಥಾಪನೆ
ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ ಎಂಬ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸುತ್ತಿದೆ. ಈ ಪ್ರಾಧಿಕಾರವು ಕೆಳಗಿನ ಜವಾಬ್ದಾರಿಗಳನ್ನು ಹೊಂದಿರುತ್ತದೆ:

ಯಾವ ಆಟಗಳನ್ನು ಆಡಬಹುದು ಮತ್ತು ಯಾವುದನ್ನು ಆಡಬಾರದು ಎಂದು ನಿರ್ಧರಿಸುವುದು.

ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆಟಗಳಿಗೆ ಉತ್ತೇಜನ ನೀಡುವುದು.

ಬಳಕೆದಾರರ ದೂರುಗಳನ್ನು ಆಲಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆ ರೂಪಿಸುವುದು.

ಸಾರ್ವಜನಿಕರ ಅಭಿಪ್ರಾಯಕ್ಕೆ ಆಹ್ವಾನ
ಸರ್ಕಾರವು ಈ ಕಾಯ್ದೆಯ ಕರಡು ನಿಯಮಗಳ ಕುರಿತು ಸಾರ್ವಜನಿಕರು ಮತ್ತು ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 2, 2025 ರಂದು ಈ ಕರಡು ಪ್ರಕಟವಾಗಿದ್ದು, ಎಲ್ಲರ ಸಹಮತದೊಂದಿಗೆ ಸುರಕ್ಷಿತ ಡಿಜಿಟಲ್ ಪರಿಸರ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ.

BIG NEWS: All types of 'online money games' banned in the country: Even if you promote it you will be fined Rs. 1 crore and the punishment is fixed!
Share. Facebook Twitter LinkedIn WhatsApp Email

Related Posts

ವಾಹನ ಸವಾರರೇ ಗಮನಿಸಿ ; ಏ.1 ರಿಂದ ನಿಯಮಿತ ‘ಪೆಟ್ರೋಲ್’ ಲಭ್ಯವಿರೋದಿಲ್ಲ ; ಸರ್ಕಾರದ ಹೊಸ ನಿಯಮ!

19/03/2026 6:22 AM3 Mins Read

ಗ್ರಾಹಕರಿಗೆ ಬಿಗ್ ಶಾಕ್ : ಏಪ್ರಿಲ್ 1 ರಿಂದ `UPI ATM’ ವಿತ್‌ಡ್ರಾ ಉಚಿತವಲ್ಲ !

19/03/2026 6:17 AM2 Mins Read

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ಭಾರತದ 1.7 ಮಿಲಿಯನ್ ಟನ್ ಇಂಧನ: ತೈಲ, ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ!

18/03/2026 10:14 PM2 Mins Read
Recent News

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

19/03/2026 6:30 AM

BIG NEWS : ದೇಶದಲ್ಲಿ ಎಲ್ಲಾ ರೀತಿಯ `ಆನ್‌ ಲೈನ್ ಹಣದ ಗೇಮ್’ ನಿಷೇಧ : ಪ್ರಚಾರ ಮಾಡಿದರೂ 1 ಕೋಟಿ ರೂ. ದಂಡದ ಜೊತೆಗೆ ಶಿಕ್ಷೆ ಫಿಕ್ಸ್ !

19/03/2026 6:29 AM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM

ವಾಹನ ಸವಾರರೇ ಗಮನಿಸಿ ; ಏ.1 ರಿಂದ ನಿಯಮಿತ ‘ಪೆಟ್ರೋಲ್’ ಲಭ್ಯವಿರೋದಿಲ್ಲ ; ಸರ್ಕಾರದ ಹೊಸ ನಿಯಮ!

19/03/2026 6:22 AM
State News
KARNATAKA

ALERT : ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಹೃದಯಾಘಾತ ಸಂಭವಿಸಬಹುದು ಎಚ್ಚರ !

By kannadanewsnow5719/03/2026 6:30 AM KARNATAKA 1 Min Read

ನಾವು ಸಾಮಾನ್ಯವಾಗಿ ಬಾಯಿಯ ಆರೋಗ್ಯವನ್ನು ಕೇವಲ ಹಲ್ಲು ಮತ್ತು ವಸಡುಗಳಿಗೆ ಮಾತ್ರ ಸೀಮಿತ ಎಂದು ಭಾವಿಸುತ್ತೇವೆ. ಆದರೆ ಇತ್ತೀಚಿನ ವೈದ್ಯಕೀಯ…

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

19/03/2026 6:24 AM

ಸಾರ್ವಜನಿಕರೇ ಗಮನಿಸಿ : ಆಸ್ತಿ ಹಕ್ಕು, ಪಿಂಚಣಿ ಪಡೆಯಲು `ವಂಶವೃಕ್ಷ’ ಕಡ್ಡಾಯ, ಜಸ್ಟ್ ಹೀಗೆ ಪಡೆಯಿರಿ !

19/03/2026 6:20 AM

ರಾಜ್ಯದ 5000 ಅಂಗನವಾಡಿಗಳಲ್ಲಿ `LKG-UKG’ ಆರಂಭ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

19/03/2026 6:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.