Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಂಚೆ ಇಲಾಖೆಯಲ್ಲಿ ಹೊಸ ಯುಗದ ಪ್ರಾರಂಭ : `APT 2.0 ಸಾಫ್ಟ್ವೇರ್’ ಯಶಸ್ವಿಯಾಗಿ ಜಾರಿಗೆ
KARNATAKA

BIG NEWS : ಅಂಚೆ ಇಲಾಖೆಯಲ್ಲಿ ಹೊಸ ಯುಗದ ಪ್ರಾರಂಭ : `APT 2.0 ಸಾಫ್ಟ್ವೇರ್’ ಯಶಸ್ವಿಯಾಗಿ ಜಾರಿಗೆ

By kannadanewsnow57

ಸಾರ್ವಜನಿಕ ಸೇವೆಗಳ ಪೂರೈಕೆಯಲ್ಲಿ ಇನ್ನಷ್ಟು ಪಾರದರ್ಶಕತೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತರಲು ಭಾರತ ಅಂಚೆ ಇಲಾಖೆ ಸದಾ ಮುಂದಾಗಿದ್ದು, ಅದೇ ಹಿನ್ನೆಲೆಯಲ್ಲಿ ಇತ್ತೀಚೆಗೆ (ಜೂ. 23ರಂದು) ಕೊಪ್ಪಳ ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಜ್ಞಾನವಾದ ಎಪಿಟಿ (APT) 2.0 ಸಾಫ್ಟ್ವೇರ್ ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

 ಈ ಹೊಸ ತಂತ್ರಾಂಶವನ್ನು ಮೈಸೂರಿನ ಸಿಇಪಿಟಿ (Centre for Excellence in Postal Technology) ಎಂಬ ಅಂಚೆ ಇಲಾಖೆಯ ಶ್ರೇಷ್ಠ ತಂತ್ರಜ್ಞಾನ ಸಂಸ್ಥೆ ತನ್ನದೇ ಆದ ತಂತ್ರಜ್ಞಾನ ತಜ್ಞರ ಮೂಲಕ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದ್ದು, ಇದು ಸಂಪೂರ್ಣವಾಗಿ ಭಾರತೀಯ ಅಂಚೆ ಇಲಾಖೆಯ ಆಂತರಿಕ ಸಂಪತ್ತಾಗಿದೆ. ಹಿಂದಿನ ದಿನಗಳಲ್ಲಿ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳ ತಂತ್ರಾಂಶವನ್ನು ಭಾರಿ ವೆಚ್ಚದಲ್ಲಿ ಬಳಸುತ್ತಿದ್ದು, ನಿರಂತರ ನಿರ್ವಹಣಾ ವೆಚ್ಚ ಹಾಗೂ ಸೀಮಿತ ನಿಯಂತ್ರಣದ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈಗ, ಎಪಿಟಿ 2.0 ಎಂಬ ತನ್ನದೇ ಆದ ಸಮಗ್ರ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಅಂಚೆ ಇಲಾಖೆ, ಎಲ್ಲಾ ಅಗತ್ಯ ಸೇವೆಗಳನ್ನು ಒಂದೇ ಸಾಫ್ಟ್ವೇರ್ನಲ್ಲಿ ನಿರ್ವಿಘ್ನವಾಗಿ ನಿರ್ವಹಿಸಲು ಸಿದ್ಧವಾಗಿದೆ.

 ಎಪಿಟಿ 2.0 ತಂತ್ರಾಂಶದ ಮೂಲಕ ಅಂಚೆ ಇಲಾಖೆ ತನ್ನ ಸಿಬ್ಬಂದಿ ನಿರ್ವಹಣೆ, ಪಿಂಚಣಿ ಸೇವೆಗಳು, ವೇತನ ಲೆಕ್ಕಪತ್ರ, ಕಾರ್ಮಿಕ ಸೇವೆಗಳು, ಆಂತರಿಕ ವರದಿ ವ್ಯವಸ್ಥೆ ಹಾಗೂ ವಿವಿಧ ನಾಗರಿಕ ಸೇವೆಗಳ ಪ್ರಕ್ರಿಯೆಗಳನ್ನು ಒಂದೇ ಪ್ಲಾಟ್ಫಾರ್ಮ್ನಲ್ಲಿ ನವೀಕರಿಸಿ, ಡಿಜಿಟಲ್ ಶಾಖೆ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯು ಸಾರ್ವಜನಿಕರಿಗೆ ಗತಿಯುತ, ತಪ್ಪಿಲ್ಲದ ಹಾಗೂ ಗುಣಮಟ್ಟದ ಸೇವೆ ನೀಡುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ.

 ಈ ನವೀನ rollout ಕಾರ್ಯಕ್ರಮವನ್ನು ಕೊಪ್ಪಳ ಮುಖ್ಯ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ವಿಭಾಗೀಯ ಅಂಚೆ ಅಧೀಕ್ಷಕರಾದ ಶಿವಾನಂದ ಬಿ. ರಬಕವಿ ಅವರು ವಿಶೇಷವಾಗಿ ಉಪಸ್ಥಿತರಿದ್ದು ಹೊಸ ತಂತ್ರಜ್ಞಾನದ ಯಶಸ್ವಿ ಜಾರಿಗೆ ಶುಭಾಶಯ ಕೋರಿದರು. ಅವರೊಂದಿಗೆ ಕೋಪ್ಪಳ ಎಚ್ಒ ಪೋಸ್ಟ್ಮಾಸ್ಟರ್ ಬಿ.ನಾಗರಾಜ್, ಇನ್ಸ್ಪೆಕ್ಟರ್ ಆಫ್ ಪೋಸ್ಟ್ಸ್ ಸಾಗರ್, ಸಹಾಯಕ ಅಂಚೆ ಅಧೀಕ್ಷಕರಾದ ಗೋಪಿಸಾಗರ್ ಹಾಗೂ ಹಲವಾರು ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಬಿ. ರಬಕವಿ ಅವರು ಮಾತನಾಡಿ, “ಎಪಿಟಿ 2.0 ತಂತ್ರಾಂಶದ ಅಂಚೆ ಇಲಾಖೆಯ ಪಾರದಂಪರಿಕ ಸೇವೆಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬಂದಿದೆ. ಹಿಂದಿನ ದಿನಗಳಲ್ಲಿ ಸ್ಕ್ಯಾಂಟ/ಮ್ಯಾನುಯಲ್ ದಾಖಲೆ ನಿರ್ವಹಣೆ, ದೈಹಿಕ ದಾಖಲೆ ಪರಿಶೀಲನೆ, ಸಮಯಪೂರ್ಣ ಡಾಟಾ ಲಭ್ಯವಿಲ್ಲದ ಕಾರಣದಿಂದಾಗಿ ಹಲವಾರು ಸೇವೆಗಳು ತಡವಾಗಿ ಅಥವಾ ತಪ್ಪಾಗಿ ಸಾಗುತ್ತಿದ್ದವು. ಆದರೆ ಈಗ ಈ ಸಾಫ್ಟ್ವೇರ್ನಿಂದಾಗಿ ಪತ್ರ, ಡಾಕುಮೆಂಟ್, ಮನುಷ್ಯರ ಮೂಲಕ ತಲುಪುವ ಕಾಗದದ ಚಲನವಲನದಿಂದ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗೆ ಮರುಸೂಚನೆ ಆಗಿದೆ ಎಂದರು.

 ಮೂಡಣ ಸೇವೆಗಳಾದ ರಜಿಸ್ಟರ್ಡ್ ಪತ್ರಗಳು, ಸ್ಪೀಡ್ ಪೋಸ್ಟ್, ಮಿನಿ ಪ್ಯಾಕೆಟ್ಗಳು, ಲೆಟರ್ಗಳು, ಪತ್ರಿಕಗಳು, ಇಂಲ್ಯಾಂಡ್ ಮತ್ತು ಪೋಸ್ಟಕಾರ್ಡ್ಗಳ ವಹಿವಾಟು ಈಗ ನಿಖರ ದಾಖಲೆ ವ್ಯವಸ್ಥೆಯ ಮೂಲಕ ಸಂಗ್ರಹವಾಗುತ್ತಿದೆ. ಎಪಿಟಿ 2.0 ತಂತ್ರಾಂಶದ ಮೂಲಕ ಆ ಜವಾಬ್ದಾರಿಯ ಮಾಹಿತಿ ತಕ್ಷಣ ಲಭ್ಯವಾಗುವಂತೆ ಮಾಡಲಾಗಿದೆ. ಸಾಮಾನ್ಯ ಸಾರ್ವಜನಿಕರಿಗೆ ಅಂಚೆ ಕಚೇರಿಯೊಳಗಿನ ಸೇವೆಗಳು-ಅಂಚೆ ರವಾನೆ, ಪ್ರಾಪ್ತಿಯ ಸ್ಥಿತಿಜ್ಞಾನ, ಮಿಷನ್ ಪೋರ್ಟಲ್ಗಳ ಮೂಲಕ ಪೂರೈಕೆ/ಪಾವತಿ ಮಾಹಿತಿ-ಈಗ ಸುಲಭವಾಗಿ, ವೇಗವಾಗಿ ಮತ್ತು ಸರಿಯಾದ ರೀತಿಯಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ವಸ್ತುಗಳು ಎಲ್ಲಿ ತಲುಪಿವೆ ಎಂಬ ಮಾಹಿತಿ ಟ್ರ್ಯಾಕ್ ಮಾಡಲು ಅಧಿಕಾರಿಗಳಿಗೆ ತಕ್ಷಣದ ತಂತ್ರಜ್ಞಾನವಿದೆ. ಹಳೆಯ ಕಾಲದಲ್ಲಿ ಯಾವುದೇ ಅಂಚೆ ಸೇವೆಯ ಕಳುಹಣೆ ಅಥವಾ ಸ್ವೀಕೃತಿಯ ಬಗ್ಗೆ ದಾಖಲೆ ಇಲ್ಲದ ಪರಿಸ್ಥಿತಿ ಇತ್ತು. ಆದರೆ ಎಪಿಟಿ 2.0 ಪ್ಲಾಟ್ಫಾರ್ಮ್ನಲ್ಲಿ ಎಲ್ಲವೂ ಪೂರಕವಾಗಿ ಲಾಗ್ ಆಗಿ, ಯಾವುದೇ ಸಮಯದಲ್ಲಿ ಪರಿಶೀಲನೆಗೆ ಲಭ್ಯವಾಗುತ್ತದೆ. ಇದು ಅಧಿಕಾರಿ ಹಾಗೂ ಸಾರ್ವಜನಿಕರ ನಡುವಣ ನಂಬಿಕೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

 ಅಂತರ್ ಇಲಾಖಾ ಅಂಚೆ, ಲೆಕ್ಕಪತ್ರಗಳ ವಿನಿಮಯ, ಅಧಿಕೃತ ಸಂವಹನಗಳ ಹಂಚಿಕೆ–ಇವೆಲ್ಲವೂ ಈಗ ಸಮಯಬದ್ಧವಾಗಿ, ದಾಖಲೆ ಆಧಾರಿತವಾಗಿ ನಡೆಯುತ್ತಿದೆ. ಇಲಾಖೆಯ ಗತಿಯು, ನಿಯಂತ್ರಣ ಶಕ್ತಿಯು ಮತ್ತು ಉತ್ತರದಾಯಿತ್ವತೆಯು ಈ ಸಾಫ್ಟ್ವೇರ್ ಮೂಲಕ ಮತ್ತಷ್ಟು ದೃಢಗೊಂಡಿದೆ. ಗ್ರಾಮೀಣ ಮತ್ತು ಶಹರಿ ಕ್ಷೇತ್ರದ ಅಂಚೆ ಕಚೇರಿಗಳು ಈಗ ಒಂದೇ ತಂತ್ರಜ್ಞಾನ ಬಳಸಿ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಸೇವಾ ಮಟ್ಟದಲ್ಲಿ ಏಕರೂಪತೆ ಮತ್ತು ಗುಣಮಟ್ಟದ ಸ್ಥಿರತೆ ಬಂದಿದೆ. ಇದು ನಮ್ಮ ಪಾರದಂಪರಿಕ ಸೇವೆಗಳನ್ನು ಪುರಾತನ ಪದ್ಧತಿಗಳಿಂದ ಪ್ರಸ್ತುತ ಇ-ಗವರ್ಮೆಂಟ್ ದಿಶೆಯತ್ತ ಒಯ್ಯುತ್ತಿದೆ. ಈ ಹೊಸ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಾರ್ವಜನಿಕ ಸೇವೆಗಳ ತ್ವರಿತ ಮತ್ತು ನಿಖರ ವಿತರಣೆಗೆ ಇದು ಸಹಕಾರಿಯಾಗುತ್ತಿದೆ. ಡಿಜಿಟಲೀಕರಣದ ಈ ಹೆಜ್ಜೆಯು “ನ್ಯೂ ಇಂಡಿಯಾ” ನಿರ್ಮಾಣದ ದೃಷ್ಟಿಕೋಣಕ್ಕೆ ತಕ್ಕದ್ದು ಎಂದು ಅವರು ಹೇಳಿದರು.

BIG NEWS: A new era begins in the Postal Department: `APT 2.0 software’ successfully implemented
Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.