ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ, ಬಿಬಿಎಂಪಿ ಸಮರ ಸಾರಿದೆ. ಇಂದು ಕೂಡ ಒತ್ತುವರಿ ತೆರವಿಗೆ ಇಳಿದಂತ ಅಧಿಕಾರಿಗಳ ಮುಂದೆ, ದಂಪತಿಗಳಿಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋ ಬೆದರಿಕೆ ಹಾಕಿದಂತ ಘಟನೆಯೂ ನಡೆಯಿತು.
ಬೆಂಗಳೂರಿನ ಕೆ ಆರ್ ಪುರಂನಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರೆ ತೆರವಿಗೆ ಇಳಿದಿದ್ದರು. ಬಸವನಪುರ ಮುಖ್ಯರಸ್ತೆಯ ಎಸ್ ಆರ್ ಲೇಔಟ್ ನಲ್ಲಿನ ಕಾಲುವೆ ಒತ್ತುವರಿ ಮಾಡಿಕೊಂಡಿದ್ದರಿಂದ ತೆರವಿಗೆ ಮುಂದಾಗರು. ಈ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು, ನಾವು ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಗೆ ಬಂತು ಎಂಬುದಾಗಿ ಪ್ರಶ್ನಿಸಿದರು.
ನಾವು ಪಾಕಿಸ್ತಾನದಿಂದ ಬಂದಿಲ್ಲ. ಕರ್ನಾಟಕದವರೇ, ನಮಗೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಇಷ್ಟೊಂದು ತೊಂದರೆ ಕೊಡ್ತಾ ಇದ್ದಾರೆ. ನಮ್ಮ ಮನೆ ತೆರವಿಗೆ ಮುಂದಾದರೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದರು.
ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಎಷ್ಟೇ ಮನವೊಲಿಕೆಗೆ ಇಳಿದ್ರು ಪ್ರಯೋಜನವಾಗಲಿಲ್ಲ. ನಾವು ಮನೆಯನ್ನು 40 ಲಕ್ಷ ಲೋನ್ ತಗೊಂಡು ಕಟ್ಟಿದ್ದೇನೆ. ನಮ್ಮ ಮನೆಯನ್ನು ಯಾವುದೇ ಕಾರಣಕ್ಕೂ ಒಡೆಯೋದಕ್ಕೆ ಬಿಡಲ್ಲ. ಸ್ಥಳಕ್ಕೆ ಸಿಎಂ ಬೊಮ್ಮಾಯಿ ಬರಬೇಕು ಎಂದು ಪಟ್ಟು ಹಿಡಿದರು.
BIGG NEWS : ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್ : ಚಾಲಕ, ಪ್ರಯಾಣಿಕರಿಗೆ ಗಾಯ
ಸೋನಾ ಮತ್ತು ಸುನೀಲ್ ದಂಪತಿಗಳ ಆತ್ಮಹತ್ಯೆಯ ಬೆದರಿಕೆಗೆ ಅಧಿಕಾರಿಗಳ ಬೆಚ್ಚಿಬಿದ್ದರು. ಕೊನೆಗೆ ನಿಧಾನವಾಗಿ ಹಿಂದಿನಿಂದ ತೆರಳಿದಂತ ಅಗ್ನಿಶಾಮಕ ಸಿಬ್ಬಂದಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ದಂಪತಿಗಳನ್ನು ತಡೆದರು. ಈ ಬಳಿಕ ಮನೆ ಒತ್ತುವರಿ ತೆರವು ಮುಂದುವರೆಸಿದರು.