Author: KNN IT TEAM

ಹಾಸನ: ಇತ್ತೀಚೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ರಸಿದ್ಧ ಬೂಕನಬೆಟ್ಟ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜನವರಿ 6 ರಿಂದ ಜನವರಿ 22 ರವರೆಗೆ ಜಿಲ್ಲೆಯಾದ್ಯಂತ ರಾಸುಗಳ ಜಾತ್ರೆ, ಸಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಬೂಕನಬೆಟ್ಟದ ಪ್ರವೇಶ ದ್ವಾರದಲ್ಲಿ ಜಾನುವಾರುಗಳ ಜಾತ್ರೆ ರದ್ದು ಎಂದು ಮುಜರಾಯಿ ಇಲಾಖೆ ಪ್ರಕಟಣೆ ಹೊರಡಿಸಿದೆ.ಕಳೆದ ವಾರ ರೈತರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮೂರು ದಿನಗಳ ಕಾಲ ರಾಸುಗಳ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. https://kannadanewsnow.com/kannada/kalaburagi-firing-case-fir-lodged-against-10-people/ ಇದೀಗ ದಿಢೀರ್ ಜಾತ್ರೆ ನಿಷೇಧ ಮಾಡಿರುವುದಕ್ಕೆ ರೈತರು ಆಕ್ರೋಶ ಕಾರಣವಾಗುತ್ತದೆ. ಮೂರು ದಿನಗಳ ಕಾಲ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ.ಈಗಾಗಲೇ ರೈತರು ಜಾನುವಾರುಗಳನ್ನು ಕಟ್ಟಲು ಸಿದ್ದತೆ ಮಾಡಿಕೊಂಡಿದ್ದು, ಅನೇಕ ಮಾಲೀಕರು ಸಿಹಿ ತಿಂಡಿ, ಕೃಷಿ ಉಪಕರಣದ ಅಂಗಡಿಗಳು, ಹೋಟೆಲ್‌ಗಳನ್ನು ತೆರೆದಿದ್ದಾರೆ. ಮಾತ್ರವಲ್ಲದೆ ತಾಲ್ಲೂಕು ಆಡಳಿತವು ಬೂಕನಬೆಟ್ಟಕ್ಕೆ ಬರುವ ಎರಡು…

Read More

ಹರಿಯಾಣ: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಕರ್ನಾಲ್‌ ಪ್ರದೇಶಕ್ಕೆ ತಲುಪಿದ್ದು ಬೆಳ್ಳಂಬೆಳ್ಗಗೆ ‘ ಮೈ ನಡುಗುವ ಚಳಿʼಯಲ್ಲಿ ಬರಿ ಮೈನಲ್ಲಿ ಕುಣಿದ ‘ ಕೈ ‘ ಕಾರ್ಯಕರ್ತರ ವಿಡಿಯೋ ವೈರಲ್‌ ಆಗಿದೆ. https://twitter.com/ANI/status/1611923602064179202?ref_src=twsrc%5Etfw%7Ctwcamp%5Etweetembed%7Ctwterm%5E1611923602064179202%7Ctwgr%5Ecec9ade12dc75146563664d46de300b29b786d5e%7Ctwcon%5Es1_c10&ref_url=https%3A%2F%2Fwww.udayavani.com%2Fnews-section%2Fnational-news%2Fcongress-workers-dance-shirtless-in-bitter-cold ಕರ್ನಾಲ್‌ನಲ್ಲಿ 4.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದರು ಲೆಕ್ಕಿಸದೇ ಶರ್ಟ್‌ ಬಿಚ್ಚಿ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮದಲ್ಲಿ ತೊಡಗಿದ್ದಾರೆ. ಈ ಭಾರತ್‌ ಜೋಡೋ ಯಾತ್ರೆಯಲ್ಲಿ ಹರ್ಯಾಣ ಮಾಜಿ ಮುಖ್ಯಮಂತ್ರ ಭೂಪೇಂದ್ರ ಸಿಂಗ್‌ ಹೂಡಾ ಕೂಡಾ ಸೇರಿದಂತೆ ಹಲವು ಪಾಲ್ಗೊಂಡಿದ್ದರು. https://kannadanewsnow.com/kannada/india-now-worlds-3rd-largest-auto-market-after-china-and-us-report/ ಜನವರಿ 10ರಂದು ಶಂಭು ಗಡಿ ಭಾಗಕ್ಕೆ ತಲುಪಲಿದೆ. ಗುರುಧ್ವಾರ ಸಾಹೆಬ್‌ ಬಳಿ ಕಾಂಗ್ರೆಸ್‌ ನಾಯಕ ಜನವರಿ 14ರಂದು ರಾಹುಲ್‌ ಗಾಂಧಿ ಸಮಾವೇಶ ನಡೆಸಲಿದ್ದಾರೆ. https://kannadanewsnow.com/kannada/india-now-worlds-3rd-largest-auto-market-after-china-and-us-report/

Read More

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿಗೂ ಸ್ಯಾಂಟ್ರೊ ರವಿ ಎಂಬಾತನಿಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಬಿಜೆಪಿ ಟ್ವೀಟರ್ ಮಾಡಿ ಸ್ಪಷ್ಟಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಬೊಮ್ಮಾಯಿಯವರಿಗಾಗಲಿ, ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜೊತೆ ಯಾವುದೇ ಸಂಬಂಧವಿರುವುದಿಲ್ಲ. ವಿರೋಧ ಪಕ್ಷಗಳ ಸುಳ್ಳಿನ ಕಾರ್ಖಾನೆಗಳಲ್ಲಿ ತಯಾರಾದ ಪ್ರಾಡಕ್ಟ್‌ಗಳಿವು ಎಂದು ಹೇಳಿದೆ. https://twitter.com/BJP4Karnataka/status/1611695442068410370?cxt=HHwWhMDU6eSd8t0sAAAA ಮುಖ್ಯಮಂತ್ರಿಗಳ ಮನೆಗೆ ಅನೇಕರು ಬಂದು ಹೋಗುತ್ತಾರೆ. ಅಲ್ಲಿ ಬಂದವರು ಸಿಎಂ  ಹಾಗೂ ಅವರ ಕುಟುಂಬದ ಜೊತೆ ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ. ಸ್ಯಾಂಟ್ರೊ ರವಿ ಎಂಬಾತ ಕೂಡ ಅದೇ ರೀತಿ ಫೋಟೋ ತೆಗೆಸಿಕೊಂಡಿರಬಹುದು ಎಂದು ಟ್ವೀಟ್ ಮಾಡಿದೆ.

Read More

ಟೋಕಿಯೊ: ಇತ್ತೀಚಿನ ಉದ್ಯಮದ ಅಂಕಿಅಂಶಗಳ ಪ್ರಕಾರ, ಭಾರತವು 2022 ರಲ್ಲಿ ವಾಹನ ಮಾರಾಟದಲ್ಲಿ ಜಪಾನ್ ಅನ್ನು ಹಿಂದಿಕ್ಕಿ, ಮೊದಲ ಬಾರಿಗೆ ಮೂರನೇ ಸ್ಥಾನಕ್ಕೇರಿದೆ ಎಂದು ವರದಿಯಾಗಿದೆ. Nikkei ಏಷ್ಯಾದ ಇತ್ತೀಚಿನ ವರದಿಯಲ್ಲಿ, ಭಾರತದ ಹೊಸ ವಾಹನಗಳ ಮಾರಾಟವು ಕನಿಷ್ಠ 4.25 ಮಿಲಿಯನ್ ಯುನಿಟ್‌ಗಳಾಗಿದ್ದು, ಪ್ರಾಥಮಿಕ ಫಲಿತಾಂಶಗಳ ಆಧಾರದ ಮೇಲೆ ಜಪಾನ್‌ನಲ್ಲಿ ಮಾರಾಟವಾದ 4.2 ಮಿಲಿಯನ್‌ಗಿಂತ ಅಗ್ರಸ್ಥಾನದಲ್ಲಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಪ್ರಕಾರ, 2022 ರ ಜನವರಿ ಮತ್ತು ನವೆಂಬರ್ ನಡುವೆ ಭಾರತದಲ್ಲಿ ಒಟ್ಟು 4.13 ಮಿಲಿಯನ್ ಹೊಸ ವಾಹನಗಳನ್ನು ವಿತರಿಸಲಾಗಿದೆ. ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಜನವರಿ 1 ರಂದು ವರದಿ ಮಾಡಿದ ಡಿಸೆಂಬರ್‌ನ ಮಾರಾಟದ ಪ್ರಮಾಣವನ್ನು ಸೇರಿಸಿದಾಗ ಸಂಖ್ಯೆಯು ಸರಿಸುಮಾರು 4.25 ಮಿಲಿಯನ್ ಯುನಿಟ್‌ಗಳಿಗೆ ಏರುತ್ತದೆ. ನಿಕ್ಕಿ ಏಷ್ಯಾದ ಪ್ರಕಾರ, ಟಾಟಾ ಮೋಟಾರ್ಸ್ ಮತ್ತು ಇತರ ವಾಹನ ತಯಾರಕರು ಇನ್ನೂ ಬಿಡುಗಡೆ ಮಾಡಬೇಕಾದ ವರ್ಷಾಂತ್ಯದ ಫಲಿತಾಂಶಗಳೊಂದಿಗೆ ವಾಣಿಜ್ಯ ವಾಹನಗಳಿಗೆ ಬಾಕಿ ಉಳಿದಿರುವ ನಾಲ್ಕನೇ ತ್ರೈಮಾಸಿಕ…

Read More

ಬೆಂಗಳೂರು: ಮೋದಿ ಸರ್ಕಾರಕ್ಕೆ ಕರ್ನಾಟಕವೆಂದರೇ ಗೌರವವಿಲ್ಲ. ಒಂಥರ ಅಸಡ್ಡೆ. ಈ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಗರದಲ್ಲಿ ಇಂದು ಕರ್ನಾಟಕದ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಿರಾಕರಣೆ ವಿಚಾರವಾಗಿ ಮಾತನಾಡಿದಂತ ಅವರು, ರಾಜ್ಯದ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮಾತನಾಡುವ  ಶಕ್ತಿ, ಧೈರ್ಯವಿಲ್ಲ ಬಿಜೆಪಿ ನಾಯಕರಿಗೆ ಇಲ್ಲ. ರಾಜ್ಯದಲ್ಲಿ 25 ಸಂಸದರಿದ್ದಾರೆ. ಅವರನ್ನು ಕರೆದು ಒಂದು ದಿನ ಕೂಡ ಚರ್ಚೆ ಮಾಡಿಲ್ಲ ಎಂದರು. ರಾಜ್ಯದ ಸಮಸ್ಯೆ ಬಗ್ಗೆ ನಿಯೋಗ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕಾಗಿತ್ತು. ಆದ್ರೇ ಹಾಗೆ ಮಾಡಿಲ್ಲ. ಮಹದಾಯಿ ಬಗ್ಗೆಯೂ ನಿಯೋಗ ಕರೆದೊಯ್ಯುವ ಮಾತಾಡಬಹುದಲ್ವಾ ಎಂದು ಪ್ರಶ್ನಿಸಿದರು.  ಮೀಸಲಾತಿ ಹೆಚ್ಚಳದ ಬಗ್ಗೆ ಸರಿಯಾದ ಮಾಹಿತಿಯನ್ನು ಈ ಸರ್ಕಾರ ನೀಡಿಲ್ಲ. ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬುದು ಅದರಿಂದ ಗೊತ್ತಾಗುತ್ತಿದೆ. ಈ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಬೇಕು ಎಂಬುದಾಗಿ…

Read More

ಕಲಬುರಗಿ: ನಗರದ ಆಳಂದ ಚೆಕ್‌ ಪೋಸ್ಟ್‌ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಸಯ್ಯಾ ಗುತ್ತೇದಾರ, ದಸ್ತಯ್ಯಾ ಗುತ್ತೇದಾರ, ರಾಜು, ಶಾಂತಿಬಾಯಿ ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ನಗರದ ಸಬ್-ಅರ್ಬನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಜೈ ಭವಾನಿ ಮರಾಠ ಖಾನಾವಳಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿತ್ತು. ಕಾಂಗ್ರೆಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಪಾಟೀಲ್ ಸಹೋದರ ಚನ್ನವೀರ ಪಾಟೀಲ್ ಮೇಲೆ ಗುಂಡಿನ ದಾಳಿ ನಡೆದಿತ್ತು. https://kannadanewsnow.com/kannada/a-horrific-act-by-miscreants-in-bengaluru-car-bike-parked-in-front-of-house-set-on-fire/ ಘಟನೆಯಲ್ಲಿ ಚನ್ನವೀರ ಕೈಗೆ ಗುಂಡು ತಗುಲಿದ್ದು, ಅಬ್ಬುಬೂಕರ್ ಎಂಬವರ ಕಾಲಿಗೂ ಗುಂಡು ತಗುಲಿತ್ತು.ದುಷ್ಕರ್ಮಿಗಳು ಬೊಲೆರೊ ವಾಹನದಲ್ಲಿ ಬಂದು ಗುಂಡಿನ ದಾಳಿ ನಡೆಸಿ, ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಬ್-ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು : ಕರಾವಳಿ ಕೋಸ್ಟ್‌ಗಾರ್ಡ್‌ ಹೆಚ್ಚಿನ ಭದ್ರತೆಗಾಗಿ ರಾಡಾರ್ ಆಳವಡಿಕೆ ಮಾಡುವ ಮೂಲಕ ಕಣ್ಗಾವಲು ಇಡಲಾಗುತ್ತದೆ ಎಂದು  ಕರ್ನಾಟಕ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.  https://kannadanewsnow.com/kannada/a-horrific-act-by-miscreants-in-bengaluru-car-bike-parked-in-front-of-house-set-on-fire/ ಜ.8 ರಂದು ಪಣಂಬೂರಿನಲ್ಲಿ ಆಯೋಜಿಸಿದ್ದ ಭಾರತೀಯ ಕೋಸ್ಟ್‌ಗಾರ್ಡ್‌ ಮೀನುಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ದೇಶದ ಕರಾವಳಿ ತೀರದ ಭದ್ರತೆ ದೃಷ್ಟಿಯಿಂದ  ಉಡುಪಿಯ ಕುಂದಾಪುರ & ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿಯಲ್ಲಿ ರಾಡಾರ್‌ ಅಳವಡಿಸಲಾಗುವುದು ದೆಸುರತ್ಕಲ್‌ ಮತ್ತು ಭಟ್ಕಳದ ರಾಡಾರ್‌ ಕೇಂದ್ರಗಳ ಸಹಾಯದಿಂದ ಕರ್ನಾಟಕದ ಸಂಪೂರ್ಣ 320 ಕಿ.ಮೀ. ಉದ್ದದ ಕರಾವಳಿಯನ್ನು ಕಣ್ಗಾವಲು ಮಾಡಲಾಗುತ್ತದೆ. https://kannadanewsnow.com/kannada/a-horrific-act-by-miscreants-in-bengaluru-car-bike-parked-in-front-of-house-set-on-fire/ ಬೇಲೇಕೇರಿಯಲ್ಲಿ ರಾಡಾರ್‌ ಕೇಂದ್ರ ಬಹುತೇಕ ಸಿದ್ಧವಾಗಿದ್ದು, ಕುಂದಾಪುರ ಸುತ್ತಮುತ್ತ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತೀ ರಾಡಾರ್‌ ಕೇಂದ್ರವು ಸಮುದ್ರದೊಳಗೆ 30 ನಾಟಿಕಲ್‌ ಮೈಲುಗಳವರೆಗೆ ಕ್ರಮಿಸುತ್ತದೆ. https://kannadanewsnow.com/kannada/a-horrific-act-by-miscreants-in-bengaluru-car-bike-parked-in-front-of-house-set-on-fire/ ರಾಡಾರ್‌ನಲ್ಲಿರುವ ಕ್ಯಾಮೆರಾ ಐದರಿಂದ ಏಳು ನಾಟಿಕಲ್‌ ಮೈಲುಗಳನ್ನು ಕ್ರಮಿಸುತ್ತದೆ. ಮುಂಬಯಿ ಭಯೋತ್ಪಾದನ ದಾಳಿಯ ಅನಂತರ ಕರಾವಳಿ ಕಣ್ಗಾವಲು ಜಾಲದ ಅಡಿಯಲ್ಲಿ ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ಕರ್ನಾಟಕ ಕಮಾಂಡರ್‌ ಡಿಐಜಿ…

Read More

ಹಾವೇರಿ : ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್​ನ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ, ಹಾವೇರಿಯಲ್ಲಿ ಕಸಾಪ ಅಧ್ಯಕ್ಷರ ನೇತೃತ್ವದಲ್ಲಿ ಇಂದು ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 9 ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವಂತೆ ಮನವಿ ಮಾಡಿದರು. ಈ ಮನವಿಗೆ ಹೆಚ್ಚಿನ ಜನರು ಬೆಂಬಲ ಸೂಚಿಸಿದ ಹಿನ್ನಲೆ ಮಂಡ್ಯ ಜಿಲ್ಲೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಮತ ಚಲಾಯಿಸಲಾಯಿತು. ಒಟ್ಟು 46 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. ಈ ಪೈಕಿ 17 ಮತಗಳು ಮಂಡ್ಯ ಜಿಲ್ಲೆಗೆ ಬಂದಿದ್ದು, ಬಳ್ಳಾರಿ ಜಿಲ್ಲೆಗೆ 16 ಮತಗಳು ಬಂದವು. ಅತಿ ಹೆಚ್ಚು ಮತ ಪಡೆದ ಮಂಡ್ಯ…

Read More

ನವದೆಹಲಿ: WhatsApp ಆಗಾಗ್ಗೆ ಹೊಸ ನವೀಕರಣಗಳನ್ನು ತರುತ್ತಿರುತ್ತದೆ. ಇದೀಗ ಮತ್ತೊಂದು ವೈಶಿಷ್ಟ್ಯವನ್ನು ತರಲು ಮುಂದಾಗಿದ್ದು, Google ಡ್ರೈವ್‌ನಲ್ಲಿ ಚಾಟ್‌ಗಳನ್ನು ಬ್ಯಾಕಪ್ ಮಾಡದೆಯೇ ಬಳಕೆದಾರರು ತಮ್ಮ ಚಾಟ್ ಇತಿಹಾಸವನ್ನು ನೇರವಾಗಿ Android ಸಾಧನಗಳಿಗೆ ವರ್ಗಾಯಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ವೈಶಿಷ್ಟ್ಯದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಚಾಟ್ ಇತಿಹಾಸ ವರ್ಗಾವಣೆಯನ್ನು ಪ್ರಾರಂಭಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದರ ನಂತರ ನೀವು ಚಾಟ್ ಇತಿಹಾಸವನ್ನು ಹೊಸ ಫೋನ್‌ಗೆ ವರ್ಗಾಯಿಸಲು ಬಯಸುತ್ತೀರಾ ಎಂದು ಅಪ್ಲಿಕೇಶನ್ ನಿಮ್ಮನ್ನು ಕೇಳುತ್ತದೆ. ಇದರ ಮೇಲೆ ‘ಸ್ಟಾರ್ಟ್’ ಕ್ಲಿಕ್ ಮಾಡುವ ಮೂಲಕ, ನೀವು ಚಾಟ್‌ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್‌ನಿಂದ ಈ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ. ಪ್ರಸ್ತುತ, ಬಳಕೆದಾರರು ತಮ್ಮ ಚಾಟ್‌ಗಳನ್ನು ಹೊಸ Android ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಲು Google ಡ್ರೈವ್‌ನಲ್ಲಿ ಚಾಟ್ ಬ್ಯಾಕಪ್ ಮಾಡದೆಯೇ ಬಳಕೆದಾರರು ತಮ್ಮ…

Read More

ದಾವಣಗೆರೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಫಾರ್ಮಸಿ ಅಧಿಕಾರಿ ಮತ್ತು ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. 16 ಫಾರ್ಮರ್ಸಿ ಅಧಿಕಾರಿಗಳು ಹಾಗೂ 1 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ  ತಾತ್ಕಾಲಿಕವಾಗಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲು ಜ.17 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಅರ್ಹ ಆಸಕ್ತಿಯುಳ್ಳ ಅಭ್ಯರ್ಥಿಗಳು  ತಮ್ಮ ವಿದ್ಯಾರ್ಹತೆ ಮೂಲ ದಾಖಲೆಗಳು ಮತ್ತು ಪ್ರಮಾಣ ಪತ್ರಗಳೊಂದಿಗೆ ಹಾಗೂ ಒಂದು ಸೆಟ್ ದೃಢೀಕೃತ  ಜೆರಾಕ್ಸ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/bigg-news-good-news-for-those-looking-for-loans-applications-invited-for-loan-facility-under-various-schemes/ https://kannadanewsnow.com/kannada/bigg-news-parents-enrolling-their-children-in-school-note-jawahar-navodaya-vidyalaya-invites-applications-for-admission-to-class-6th-standard/

Read More