Author: kannadanewsnow57

ಬೆಂಗಳೂರು : ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಫ್ರೀಡಂ ಪಾರ್ಕ್‌ನಲ್ಲಿ ದಿನಾಂಕ 12.03.2026 ರಂದು ಬೃಹತ್ ಪ್ರತಿಭಟನೆಯಿದ್ದು ಪ್ರತಿಭಟನೆಯ ಸಂದರ್ಭದಲ್ಲಿ ಶೇಷಾದ್ರಿ ರಸ್ತೆಯ ಮೂಲಕ ಜನರು ಮತ್ತು ವಾಹನಗಳು ಪ್ರತಿಭಟನೆಗೆ ಆಗಮಿಸುವ ಕಾರಣ ಫ್ರೀಡಂ ಪಾರ್ಕ್ ಸುತ್ತ ಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿರುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ. ತಾತ್ಕಾಲಿಕವಾಗಿ ಕೆಳಕಂಡಂತೆ ಸಂಚಾರ ನಿರ್ಭಂದ : ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್ ನಿಂದ ಆನಂದ ರಾವ್ ಪ್ರೈ ಓವರ್, ಓಲ್ಡ್ ಜೆ.ಡಿ.ಎಸ್. ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ವರೆಗೆ ಪರ್ಯಾಯ ಮಾರ್ಗಗಳು ಲುಲು ಮಾಲ್, ಕೆಎಫ್‌ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಪ್ರೈ ಓವರ್, ರೇಸ್ ಕೋರ್ಸ್ ರಸ್ತೆ. > ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ ಕೆ.ಜಿ ರಸ್ತೆ,…

Read More

ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಸಹಪಾಠಿಯ ಕಿರುಕುಳ ತಾಳಲಾರದೆ 16 ವರ್ಷದ ಶಾಲಾ ಬಾಲಕಿಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ವಿವರ: ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ (16) ಎಂದು ಗುರುತಿಸಲಾಗಿದೆ. ಈಕೆ ಶಾಲಾ ಕಟ್ಟಡದ ಮೇಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಭೆಮಳಖೇಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿರುಕುಳವೇ ಸಾವಿಗೆ ಕಾರಣ? ಮದಿಯಾ ಸಾವಿನ ಕುರಿತು ಆಕೆಯ ಚಿಕ್ಕಪ್ಪ ಎಂ.ಡಿ. ಯೂಸುಫ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸಹಪಾಠಿಯೊಬ್ಬ ಮದಿಯಾಗೆ ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತು ನನ್ನ ಮಗಳು ಈ ನಿರ್ಧಾರ ಕೈಗೊಂಡಿದ್ದಾಳೆ,” ಎಂದು ಅವರು ಆರೋಪಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಕಿರುಕುಳದ ಆರೋಪಕ್ಕೆ ಪುಷ್ಟಿ ನೀಡುವಂತೆ, ಶಾಲೆಯ ಆವರಣದಲ್ಲಿ ಸಹಪಾಠಿ ವಿದ್ಯಾರ್ಥಿಯು ಬಾಲಕಿಗೆ ಚುಡಾಯಿಸುತ್ತಿದ್ದ ದೃಶ್ಯಗಳು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ…

Read More

ಸೊಳ್ಳೆಗಳು ಕೇವಲ ಕಿರಿಕಿರಿ ಉಂಟುಮಾಡುವ ಕೀಟಗಳಷ್ಟೇ ಅಲ್ಲ, ಅವು ಡೆಂಗ್ಯೂ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳನ್ನು ಹರಡುವ ವಾಹಕಗಳೂ ಹೌದು. ಅಶುಚಿಯಾದ ಪರಿಸರ ಮತ್ತು ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪ್ರಮುಖ ಕಾರಣ. ಸಾಮಾನ್ಯವಾಗಿ ನಾವು ಬಳಸುವ ರಾಸಾಯನಿಕಯುಕ್ತ ಕಾಯಿಲ್‌ಗಳು ಅಥವಾ ಲಿಕ್ವಿಡ್‌ಗಳು ನಮ್ಮ ಶ್ವಾಸಕೋಶಕ್ಕೆ, ವಿಶೇಷವಾಗಿ ಮಕ್ಕಳಿಗೆ ಹಾನಿಕಾರಕ. ಇದಕ್ಕೆ ಪರ್ಯಾಯವಾಗಿ, ಮನೆಯಲ್ಲಿಯೇ ಸಿಗುವ ಕರ್ಪೂರ ಮತ್ತು ಲವಂಗ ಬಳಸಿ ನೈಸರ್ಗಿಕವಾಗಿ ಸೊಳ್ಳೆಗಳನ್ನು ಓಡಿಸಬಹುದು. ಸೊಳ್ಳೆ ನಿವಾರಣೆಯಲ್ಲಿ ಲವಂಗ ಮತ್ತು ಕರ್ಪೂರದ ಪಾತ್ರ ಲವಂಗ: ಲವಂಗದಲ್ಲಿರುವ ತೀಕ್ಷ್ಣವಾದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ನಾಲ್ಕೈದು ಲವಂಗಗಳನ್ನು ಪುಡಿ ಮಾಡಿ ಅಥವಾ ಲವಂಗದ ಎಣ್ಣೆಯನ್ನು ದೀಪದ ಬತ್ತಿಗೆ ಹಚ್ಚಿ ಬೆಳಗಿಸುವುದರಿಂದ ಹೊರಬರುವ ಹೊಗೆ ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ಓಡಿಸುತ್ತದೆ. ಕರ್ಪೂರ: ಕರ್ಪೂರವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ದೀಪ ಹಚ್ಚುವುದು ಅಥವಾ ಎಸೆನ್ಷಿಯಲ್ ಆಯಿಲ್ ಡಿಫ್ಯೂಸರ್‌ಗಳಲ್ಲಿ ಬಳಸುವುದು ಅತ್ಯುತ್ತಮ ಮಾರ್ಗ. ಅಷ್ಟೇ ಅಲ್ಲದೆ, ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆಗಳು ಕಚ್ಚದಂತೆ…

Read More

ಸೊಂತ ಮನೆ ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಆದರೆ ಆಸ್ತಿ ಖರೀದಿಸುವಾಗ ಕೇವಲ ಲೊಕೇಶನ್ ಅಥವಾ ಬೆಲೆಯನ್ನು ಮಾತ್ರ ನೋಡಿದರೆ ಸಾಲದು. ದಾಖಲೆಗಳ ಪರಿಶೀಲನೆಯಲ್ಲಿ ಸ್ವಲ್ಪ ಎಡವಿದರೂ ನಿಮ್ಮ ಜೀವನದ ಅತಿದೊಡ್ಡ ಆರ್ಥಿಕ ನಿರ್ಧಾರವು ಸಂಕಷ್ಟಕ್ಕೆ ಸಿಲುಕಬಹುದು. ನಗರವಿರಲಿ ಅಥವಾ ಹಳ್ಳಿಯಿರಲಿ, ರಿಜಿಸ್ಟ್ರೇಶನ್ ಮಾಡುವ ಮುನ್ನ ಪ್ರತಿಯೊಬ್ಬ ಖರೀದಿದಾರರು ಕಡ್ಡಾಯವಾಗಿ ಪರಿಶೀಲಿಸಬೇಕಾದ 5 ಪ್ರಮುಖ ದಾಖಲೆಗಳು ಇಲ್ಲಿವೆ: 1 ಅನುಮೋದಿತ ಕಟ್ಟಡ ಯೋಜನೆ (Approved Building Plan) ನೀವು ಖರೀದಿಸುವ ಮನೆ ಅಥವಾ ಅಪಾರ್ಟ್‌ಮೆಂಟ್‌ನ ನಕ್ಷೆಗೆ ಸ್ಥಳೀಯ ಮುನ್ಸಿಪಲ್ ಅಥವಾ ಟೌನ್ ಪ್ಲಾನಿಂಗ್ ಅಧಿಕಾರಿಗಳಿಂದ ಅನುಮೋದನೆ ಸಿಕ್ಕಿದೆಯೇ ಎಂದು ಮೊದಲು ಪರಿಶೀಲಿಸಿ. ನಿಯಮಾನುಸಾರ ಕಟ್ಟದಿದ್ದರೆ ಭವಿಷ್ಯದಲ್ಲಿ ದಂಡ ತೆರಬೇಕಾಗಬಹುದು ಅಥವಾ ಕಟ್ಟಡ ತೆರವು ಮಾಡುವ ನೋಟಿಸ್ ಬರಬಹುದು. ಅಷ್ಟೇ ಅಲ್ಲ, ಅನುಮೋದಿತ ಪ್ಲಾನ್ ಇಲ್ಲದ ಆಸ್ತಿಗೆ ಬ್ಯಾಂಕ್‌ಗಳು ಸಾಲವನ್ನೂ ನೀಡುವುದಿಲ್ಲ. 2 ಎನ್ಕಂಬರೆನ್ಸ್ ಸರ್ಟಿಫಿಕೇಟ್ (EC – ಋಣಭಾರ ಪ್ರಮಾಣಪತ್ರ) ನೀವು ಕೊಳ್ಳುತ್ತಿರುವ ಆಸ್ತಿಯ ಮೇಲೆ ಯಾವುದೇ ಸಾಲ, ಅಡಮಾನ ಅಥವಾ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ದ್ವಿತೀಯ ಪಿಯುಸಿ ಉತ್ತೀರ್ಣಕ್ಕೆ ಶೇಕಡಾ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಇದೀಗ ಮುಂದುವರೆದು ಪ್ರಥಮ ಪಿಯುಸಿಗೂ ಉತ್ತೀರ್ಣತಾ ಪ್ರಮಾಣವನ್ನು ನಿಗದಿ ಪಡಿಸಿದೆ. ಇನ್ಮುಂದೆ ಶೇ.33ರಷ್ಟು ಅಂಕ ಬಂದ್ರು ಪ್ರಥಮ ಪಿಯುಸಿಯಲ್ಲಿ ಪಾಸ್ ಎಂಬುದಾಗಿ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪದವಿಪೂರ್ವ), ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಓದಲಾದ (1)ರ ಅಧಿಸೂಚನೆಯನ್ವಯ ಕರ್ನಾಟಕ ಪದವಿ ಪೂರ್ವ ಪರೀಕ್ಷೆ (ಮೌಲ್ಯಮಾಪನ ವಿಧಾನ) ನಿಯಮಗಳು, 2025ನ್ನು ಜಾರಿಗೆ ತರುವುದರ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತೀರ್ಣತಾ ಮಟ್ಟವನ್ನು ಪರಿಮಾಣಾತ್ಮಕವಾಗಿ ಹೆಚ್ಚಿಸುವ ದೃಷ್ಟಿಯಿಂದ ಹಾಲಿ ಇರುವ ನಿಯಮಕ್ಕೆ ತಿದ್ದುಪಡಿ ತಂದು ಉತ್ತೀರ್ಣತಾ ಪುಮಾಣವನ್ನು ಪ್ರತಿಶತ 33 ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದು ಗಮನಾರ್ಹವಾಗಿದ್ದು, ಪದವಿ ಪೂರ್ವ ಶಿಕ್ಷಣವು ಎರಡು ವರ್ಷಗಳ ಸಂಯುಕ್ತ ಕೋರ್ಸ್ ಆಗಿರುವುದರಿಂದ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡೂ ತರಗತಿಗಳು ಪರಸ್ಪರ…

Read More

ಬೆಂಗಳೂರು : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾರದರ್ಶಕ ಆಡಳಿತವನ್ನು ಉತ್ತೇಜಿಸಲು ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಪಂಚಾಯಿತಿಯ ಪ್ರತಿಯೊಂದು ಚಟುವಟಿಕೆಯ ಮಾಹಿತಿಯನ್ನು ಪಡೆಯುವುದು ಸಾರ್ವಜನಿಕರ ಹಕ್ಕಾಗಿದ್ದು, ಈ ಕೆಳಗಿನ 30 ಪ್ರಮುಖ ಮಾಹಿತಿಗಳು ಈಗ ಜನಸಾಮಾನ್ಯರಿಗೆ ಮುಕ್ತವಾಗಿ ಲಭ್ಯವಿವೆ. ಗ್ರಾಮದ ಅಭಿವೃದ್ಧಿ ಕೆಲಸಗಳು ಹೇಗೆ ನಡೆಯುತ್ತಿವೆ? ಹಣ ಎಲ್ಲಿಂದ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ? ಎಂಬ ಗೊಂದಲಗಳಿಗೆ ತೆರೆ ಎಳೆಯಲು ಈ ಮಾಹಿತಿ ಪಟ್ಟಿ ಸಹಕಾರಿಯಾಗಿದೆ. ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯಿಂದ ಈ ಕೆಳಗಿನ ವಿವರಗಳನ್ನು ಅಧಿಕೃತವಾಗಿ ಪಡೆಯಬಹುದಾಗಿದೆ. ಗ್ರಾಮ ಪಂಚಾಯಿತಿಯಿಂದ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ. 1. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು. 2. ಗ್ರಾಮ ಪಂಚಾಯಿತಿಯ ವೆಚ್ಚ 3. ಗ್ರಾಮ ಪಂಚಾಯತಿ ಡಿ.ಸಿ.ಬಿ. ತಪ್ತ ವಿವರಗಳು (ಬೇಡಿಕೆ, ವಸೂಲಿ ಮತ್ತು ಬಾಕಿ) 4. ಮನೆ ಖಾತೆ ಉದ್ಭತ ಭಾಗ, ಡಿಮ್ಯಾಂಡ್ ಉದೃತ ಭಾಗ, ಲೈಸೆನ್ಸ್, ಮ್ಯೂಟೇಶನ್ ಇತ್ಯಾದಿ ಪತ್ರಗಳು 5. ಗ್ರಾಮ ಪಂಚಾಯತಿ ಜಮಾ ಮತ್ತು…

Read More

ಬೆಳಗಿನ ಉಪಾಹಾರ ಎಂದರೆ ಇಡ್ಲಿ, ದೋಸೆ, ಚಪಾತಿಗಳೇ ನೆನಪಾಗುತ್ತವೆಯೇ? ಹಾಗಿದ್ದರೆ ಸ್ವಲ್ಪ ಭಿನ್ನವಾಗಿ ಈ ಬಾರಿ ‘ಅಕ್ಕಿ ರೊಟ್ಟಿ’ ಟ್ರೈ ಮಾಡಿ ನೋಡಿ. ಹೋಟೆಲ್‌ಗಳಲ್ಲಿ ಸಿಗುವ ಮೃದುವಾದ ಮತ್ತು ರುಚಿಕರವಾದ ಅಕ್ಕಿ ರೊಟ್ಟಿಯನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಖಾದ್ಯ, ರುಚಿಯ ಜೊತೆಗೆ ಆರೋಗ್ಯವನ್ನೂ ನೀಡುವ ಸಾಂಪ್ರದಾಯಿಕ ಉಪಾಹಾರವಾಗಿದೆ. ಇದನ್ನು ಬೆಳಗಿನ ತಿಂಡಿಗಷ್ಟೇ ಅಲ್ಲದೆ ಸಂಜೆಯ ಸ್ನಾಕ್ಸ್ ರೂಪದಲ್ಲೂ ಸವಿಯಬಹುದು. ಕೇವಲ ಅಕ್ಕಿ ಹಿಟ್ಟಿನಿಂದ ಮಾತ್ರವಲ್ಲದೆ, ಇದರಲ್ಲಿ ವೈವಿಧ್ಯಮಯ ತರಕಾರಿಗಳನ್ನು ಬಳಸುವುದರಿಂದ ಇದು ಪೋಷಕಾಂಶಗಳ ಗಣಿಯಾಗುತ್ತದೆ. ಕಡಿಮೆ ಎಣ್ಣೆ ಬಳಸಿ ಮಾಡುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಮತ್ತು ಡಯಟ್ ಮಾಡುವವರಿಗೆ ಇದು ಉತ್ತಮ ಆಯ್ಕೆ. ಅಕ್ಕಿ ರೊಟ್ಟಿ ತಯಾರಿಸಲು ಬೇಕಾಗುವ ಪದಾರ್ಥಗಳು: ಅಕ್ಕಿ ಹಿಟ್ಟು: 1 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ: 1 ಹಸಿಮೆಣಸಿನಕಾಯಿ: 2 (ನಿಮ್ಮ ಖಾರಕ್ಕೆ ತಕ್ಕಂತೆ) ತುರಿದ ಕ್ಯಾರೆಟ್, ಸೌತೆಕಾಯಿ, ಎಲೆಕೋಸು: ತಲಾ ಅರ್ಧ ಕಪ್ ಕೊತ್ತಂಬರಿ ಸೊಪ್ಪು:…

Read More

ನವದೆಹಲಿ: ಕೇಂದ್ರ ಸರ್ಕಾರದ ನಾಗರಿಕ ಹುದ್ದೆಗಳು ಮತ್ತು ಸೇವೆಗಳ ನೇರ ನೇಮಕಾತಿಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ (OBC) ಶೇಕಡಾ 27 ರಷ್ಟು ಮೀಸಲಾತಿಯನ್ನು ಒದಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಬಿ. ಎಲ್. ವರ್ಮಾ ಅವರು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುತ್ತಾ ಈ ಮಾಹಿತಿ ಹಂಚಿಕೊಂಡಿದ್ದಾರೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (DoPT) 1993ರ ಸೆಪ್ಟೆಂಬರ್ 8 ರಂದು ಹೊರಡಿಸಿದ ಅಧಿಕೃತ ಜ್ಞಾಪನಾ ಪತ್ರ (OM) ಮತ್ತು ಕಾಲಕಾಲಕ್ಕೆ ನೀಡಲಾದ ಸೂಚನೆಗಳ ಅನ್ವಯ, ನೇರ ನೇಮಕಾತಿಯಲ್ಲಿ OBC ಅಭ್ಯರ್ಥಿಗಳಿಗೆ 27% ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿ ನೀತಿಯ ಅನುಷ್ಠಾನದ ಉಸ್ತುವಾರಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೋಡಿಕೊಳ್ಳುತ್ತಿದೆ. ಕೇವಲ ಉದ್ಯೋಗ ಮಾತ್ರವಲ್ಲದೆ, OBC ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವರು ವಿವರಿಸಿದರು. ಶೈಕ್ಷಣಿಕ ಮತ್ತು ಕಲ್ಯಾಣ ಯೋಜನೆಗಳು: ಸಚಿವರು…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾದ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ನೋಂದಾಯಿತರಾಗಿರುವ ಹೆಣ್ಣು ಮಕ್ಕಳಿಗೆ ಈಗ ಸಿಹಿ ಸುದ್ದಿ. ಬಾಂಡ್ ಅವಧಿ ಮುಗಿದ ನಂತರ 1 ಲಕ್ಷ ರೂಪಾಯಿಗಳ ಮೊತ್ತವನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಬಾಂಡ್ ಹಣ ಪಡೆಯಲು ಇರಬೇಕಾದ ಅರ್ಹತೆಗಳು ಮತ್ತು ಪ್ರಕ್ರಿಯೆಯ ವಿವರ ಇಲ್ಲಿದೆ: ಹಣ ಪಡೆಯಲು ಇರಬೇಕಾದ ಪ್ರಮುಖ ಶರತ್ತುಗಳು: ಬಾಂಡ್ ಹಣ ಮಂಜೂರಾಗಲು ಫಲಾನುಭವಿಗಳು ಈ ಕೆಳಗಿನ ನಿಯಮಗಳನ್ನು ಪಾಲಿಸಿರುವುದು ಕಡ್ಡಾಯ: ವಯೋಮಿತಿ: ಬಾಂಡ್ ಹಣ ಪಡೆಯುವ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು. ಶಿಕ್ಷಣ: ಮಗು ಕನಿಷ್ಠ 8ನೇ ತರಗತಿಯವರೆಗೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಬಾಲ್ಯ ವಿವಾಹ ನಿಷೇಧ: 18 ವರ್ಷ ತುಂಬುವ ಮೊದಲು ಮಗುವಿಗೆ ಮದುವೆಯಾಗಿರಬಾರದು. ಬಾಲ ಕಾರ್ಮಿಕ ಪದ್ಧತಿ: ಮಗು ಯಾವುದೇ ರೀತಿಯ ಬಾಲ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬಾರದು. ಅಗತ್ಯವಿರುವ ದಾಖಲೆಗಳ ಪಟ್ಟಿ: ಅರ್ಜಿ ಸಲ್ಲಿಸುವ ಮುನ್ನ ಈ…

Read More

ಬೆಂಗಳೂರು: ನೀವು ಹೊಸ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಇನ್ನು ತಡಮಾಡಬೇಡಿ. ಮುಂದಿನ ಕೆಲವು ತಿಂಗಳಲ್ಲಿ ಕಂಪ್ಯೂಟರ್ ಉಪಕರಣಗಳ ಬೆಲೆಯಲ್ಲಿ ಬರೊಬ್ಬರಿ ಶೇ. 35ರಷ್ಟು ಭಾರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮುನ್ಸೂಚನೆ ನೀಡಿದ್ದಾರೆ. ಬೆಲೆ ಏರಿಕೆಗೆ ಅಸಲಿ ಕಾರಣಗಳೇನು? ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಈ ದಿಢೀರ್ ಏರಿಕೆಗೆ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸಲಾಗಿದೆ: ಬಿಡಿಭಾಗಗಳ ಬೆಲೆ ಏರಿಕೆ: ಕಂಪ್ಯೂಟರ್‌ನ ಪ್ರಮುಖ ಭಾಗಗಳಾದ ಪ್ರೊಸೆಸರ್, ಗ್ರಾಫಿಕ್ಸ್ ಕಾರ್ಡ್ (GPU) ಮತ್ತು ಮೆಮೊರಿ (RAM) ಬೆಲೆಗಳು ಗಗನಕ್ಕೇರುತ್ತಿವೆ. ವಿಶೇಷವಾಗಿ DDR RAM ಬೆಲೆ ಈಗಾಗಲೇ 2.5 ರಿಂದ 3 ಪಟ್ಟು ಹೆಚ್ಚಾಗಿದೆ. AI ತಂತ್ರಜ್ಞಾನದ ಅಬ್ಬರ: ಪ್ರಸ್ತುತ ವಿಶ್ವದಾದ್ಯಂತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಡೇಟಾ ಸೆಂಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ತಯಾರಕರು ಹೆಚ್ಚಿನ ಬಿಡಿಭಾಗಗಳನ್ನು ಈ ಸೆಂಟರ್‌ಗಳಿಗೆ ಪೂರೈಸುತ್ತಿರುವುದರಿಂದ, ಸಾಮಾನ್ಯ ಗ್ರಾಹಕರಿಗೆ ಬಿಡಿಭಾಗಗಳ ಕೊರತೆ ಉಂಟಾಗಿದೆ. ಜಾಗತಿಕ ಸಂಘರ್ಷ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯು ಸೆಮಿಕಂಡಕ್ಟರ್ ತಯಾರಿಕೆಗೆ ಅಗತ್ಯವಾದ ಇಂಧನ…

Read More