Author: kannadanewsnow57

ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯನ್ನುಕಡ್ಡಾಯವಾಗಿ ಬಳಸಬೇಕು ಎಂದು ಜಿ.ಪಂ.ಸಿಇಓ ಡಾ. ಎಸ್. ಆಕಾಶ್ ನಿರ್ದೇಶನ ನೀಡಿದರು. ಬ್ಯಾಂಕಿನ ಎಲ್ಲಾ ಅರ್ಜಿಗಳು, ಚಲನ್ ಮತ್ತು ಸುತ್ತೋಲೆಗಳು ಇಂಗ್ಲಿμï ಮತ್ತು ಹಿಂದಿಯೊಂದಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲಿ ಲಭ್ಯವಿರಬೇಕು. ಗ್ರಾಮೀಣ ಭಾಗದ ಜನರಿಗೆ ಭಾಷಾ ಸಮಸ್ಯೆಯಿಂದ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಯಾವುದೇ ರೀತಿಯ ಅಡೆತಡೆ ಅಥವಾ ನಿರಾಶೆಯಾಗಬಾರದು. ಪ್ರತಿ ಶಾಖೆಯಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು. ತಮ್ಮ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿ ಈ ನಿಯಮಗಳು ಪಾಲನೆಯಾಗುತ್ತಿರುವ ಕುರಿತು ಜಿಲ್ಲಾ ಮಟ್ಟದ ಬ್ಯಾಂಕ್ ಸಮನ್ವಯಾಧಿಕಾರಿಗಳು ಮತ್ತು ಪ್ರತಿನಿಧಿಗಳು  ಖಚಿತಪಡಿಸಿಕೊಳ್ಳಬೇಕು ಎಂದು ಜಿ.ಪಂ.ಸಿಇಓ ಡಾ. ಎಸ್. ಆಕಾಶ್ ನಿರ್ದೇಶನ ನೀಡಿದರು. ನಿಷ್ಕ್ರಿಯ ಠೇವಣಿ ವಿಲೇವಾರಿಗೆ ಕಟ್ಟುನಿಟ್ಟಿನ ಸೂಚನೆ: ಜಿಲ್ಲೆಯ ವಿವಿಧ ಬ್ಯಾಂಕ್ಗಳಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ವ್ಯವಹಾರವಿಲ್ಲದೆ ಉಳಿದಿರುವ ಹಕ್ಕು ಪಡೆಯದ ಠೇವಣಿಗಳನ್ನು  (Unclaimed Deposits)  ವಾರಸುದಾರರಿಗೆ ತಲುಪಿಸಲು ವಿಶೇಷ ಅಭಿಯಾನವನ್ನು ಚುರುಕುಗೊಳಿಸುವಂತೆ ಜಿ.ಪಂ. ಸಿಇಓ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ…

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರ್ಸ್ನ ಬೇಜವಾಬ್ದಾರಿತನಕ್ಕೆ ಎಳೆಯ ಕಂದಮ್ಮನೊಬ್ಬನ ಬೆರಳು ತುಂಡಾಗಿರುವ ಘನಘೋರ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಘಟನೆಯ ವಿವರ: ಜ್ವರ ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಗಂಡು ಮಗುವನ್ನು ಪೋಷಕರು ಕಳೆದ ಫೆಬ್ರವರಿ 19ರಂದು ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ, ಮಗು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಡಿಸ್ಚಾರ್ಜ್ ಮಾಡಲು ವೈದ್ಯರು ಸೂಚಿಸಿದ್ದರು. ಮಗುವಿನ ತಂದೆ ವಿಜಯ್ ಕುಮಾರ್ ಅವರು ಬಿಲ್ಲಿಂಗ್ ಕೌಂಟರ್ನಲ್ಲಿ ಹಣ ಪಾವತಿಸಲು ಹೋಗಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಮಗುವಿನ ಕೈಗೆ ಹಾಕಲಾಗಿದ್ದ ಡ್ರಿಪ್ಸ್ನ ಬ್ಯಾಂಡೇಜ್ (ಡ್ರೆಸ್ಸಿಂಗ್) ತೆಗೆಯುವಾಗ, ನರ್ಸ್ ಕತ್ತರಿಯನ್ನು ಅಜಾಗರೂಕತೆಯಿಂದ ಬಳಸಿದ್ದಾರೆ. ಈ ವೇಳೆ ಮಗುವಿನ ಎಡಗೈ ಕಿರುಬೆರಳಿನ ಅರ್ಧ ಭಾಗ ಕಟ್ ಆಗಿದೆ. ದೂರಿನಲ್ಲಿ ಏನಿದೆ? ಘಟನೆ ಸಂಬಂಧ ಮಗುವಿನ ತಂದೆ ವಿಜಯ್ ಕುಮಾರ್ ಪೊಲೀಸ್ ದೂರು ದಾಖಲಿಸಿದ್ದು, ಡ್ರೆಸ್ಸಿಂಗ್ ತೆಗೆಯುವಾಗ ನರ್ಸ್ ತೋರಿದ…

Read More

ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆ ಮತ್ತು ನ್ಯಾಯಾಂಗದ ನಡುವೆ ಈಗ ದೊಡ್ಡ ಸಂಘರ್ಷವೊಂದು ಶುರುವಾಗಿದೆ. ಎನ್ಸಿಇಆರ್ಟಿ (NCERT) ಹೊರತಂದಿರುವ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ವಿಷಯವನ್ನು ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿವಾದಕ್ಕೆ ಕಾರಣವೇನು? ಎನ್ಸಿಇಆರ್ಟಿಯ ಹೊಸ ಪಠ್ಯಪುಸ್ತಕದ “ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸವಾಲುಗಳ ಬಗ್ಗೆ ವಿವರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ: ವಿವಿಧ ಹಂತದ ನ್ಯಾಯಾಲಯಗಳಲ್ಲಿರುವ ಭ್ರಷ್ಟಾಚಾರ. ಲಕ್ಷಾಂತರ ಪ್ರಕರಣಗಳ ಬಾಕಿ ಇರುವಿಕೆ. ನ್ಯಾಯಾಧೀಶರ ಕೊರತೆ ಮತ್ತು ಸಂಕೀರ್ಣ ಕಾನೂನು ಪ್ರಕ್ರಿಯೆಗಳು. ಈ ವಿಷಯವನ್ನು ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. “ಸಣ್ಣ ಮಕ್ಕಳಿಗೆ ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದೆ ಎಂದು ಬೋಧಿಸುವುದು ಆತಂಕಕಾರಿ ವಿಷಯ. ಇದರಿಂದ ಇಡೀ ವಕೀಲರ ಸಮುದಾಯ ಅಸಮಾಧಾನಗೊಂಡಿದೆ” ಎಂದು ಅವರು ವಾದಿಸಿದರು. ಸಿಜೆಐ ಸೂರ್ಯಕಾಂತ್ ಅವರ ಖಡಕ್ ಎಚ್ಚರಿಕೆ ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ…

Read More

ಹೈದರಾಬಾದ್: ಪ್ರೀತಿ ವಿಫಲವಾದ ಹಿನ್ನೆಲೆಯಲ್ಲಿ ಖ್ಯಾತ ಯೂಟ್ಯೂಬರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಹೈದರಾಬಾದ್ನ ಗಚ್ಛಿಬೌಲಿಯಲ್ಲಿ ನಡೆದಿದೆ. ಮಣಿಕೊಂಡ ಚಿತ್ರಪುರಿ ಕಾಲೋನಿ ನಿವಾಸಿ ಕೋಮಲಿ ಬೋನು (21) ಮೃತಪಟ್ಟ ದುರ್ದೈವಿ. ಘಟನೆಯ ಹಿನ್ನೆಲೆ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಓದುತ್ತಿದ್ದ ಕೋಮಲಿ, ಯೂಟ್ಯೂಬ್ ವಿಡಿಯೋಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಸಾಫ್ಟ್ವೇರ್ ಉದ್ಯೋಗಿ ಹಾಗೂ ಸಹ ಯೂಟ್ಯೂಬರ್ ಆಗಿರುವ ಅಖಿಲ್ ರೆಡ್ಡಿ ಎಂಬುವವರ ಪರಿಚಯವಾಗಿತ್ತು. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಆಗಿತ್ತು. ಅಖಿಲ್ನನ್ನು ಮರೆಯಲಾಗದೆ ಕೋಮಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು, ಆದರೆ ಕುಟುಂಬಸ್ಥರು ಸಕಾಲದಲ್ಲಿ ಗಮನಿಸಿ ಪ್ರಾಣ ಉಳಿಸಿದ್ದರು. ನಡೆದದ್ದೇನು? ಕಳೆದ ಎರಡು ದಿನಗಳ ಹಿಂದೆ ಕೋಮಲಿ ಮತ್ತೆ ಅಖಿಲ್ ರೆಡ್ಡಿಗೆ ಕರೆ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಫೋನ್ ನಲ್ಲಿ…

Read More

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ ತುಂಬಿದವರಿಗೆ ಮಾಸಿಕ 3000 ರೂ. ಪಿಂಚಣಿ, ಅಂಗವಿಕಲರಿಗೆ 2000 ರೂ. ಹಾಗೂ ಮರಣಾ ನಂತರ ಕುಟುಂಬಕ್ಕೆ 1500 ರೂ. ಪಿಂಚಣಿ ಲಭ್ಯವಿದೆ. ಶೈಕ್ಷಣಿಕ, ಹೆರಿಗೆ, ಮದುವೆ, ಉಪಕರಣಗಳ ನೆರವೂ ಇದೆ. ನೋಂದಣಿ ಮತ್ತು ನವೀಕರಣಕ್ಕೆ ಅವಕಾಶವಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದ ಲಕ್ಷಾಂತರ ಕಾರ್ಮಿಕರ ಹಿತದೃಷ್ಟಿಯಿಂದ ಹಲವಾರು ಆರ್ಥಿಕ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಮುಖ್ಯವಾಗಿ ವೃದ್ಧಾಪ್ಯದಲ್ಲಿ ಆಸರೆಯಾಗುವ ಮಾಸಿಕ ಪಿಂಚಣಿ ಮತ್ತು ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ಆಸರೆಯಾಗುವ ಕುಟುಂಬ ಪಿಂಚಣಿ ಸೌಲಭ್ಯಗಳು ಸೇರಿವೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಗೆ 60 ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ನಿರ್ವಹಣೆಗೆ ಪಿಂಚಣಿ ನೀಡಲಾಗುತ್ತದೆ. ಇದರ ಜೊತೆಗೆ…

Read More

ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಸೇರಲು ಆಸಕ್ತಿಯಿರುವ ರಾಯಚೂರು ಸೇರಿದಂತೆ ಕೊಪ್ಪಳ, ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ ಹಾಗೂ ಬೀದರ ಜಿಲ್ಲೆಗಳ ಯುವಕರಿಗೆ ಅರ್ಜಿ ಸಲ್ಲಿಸಲು ಮಾರ್ಚ 1ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಯುವಕರು ಸೇನೆಯ ಅಧಿಕೃತ ವೆಬ್ಸೈಟ್ https://www.joinindianarmy.nic.in/Authentication.aspx ಗೆ ಭೇಟಿ ನೀಡಿ ಅಲ್ಲಿ ಅಗ್ನಿಪಥ್ ಟ್ಯಾಬ್ ಕ್ಲಿಕ್ ಮಾಡಿ, ಆಧಾರ್ ಅಥವಾ 10ನೇ ತರಗತಿ ಸರ್ಟಿಫಿಕೇಟ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಶುಲ್ಕ 250 ರೂ. ನಿಗದಿಪಡಿಸಲಾಗಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿಯಲ್ಲಿ ಕನಿಷ್ಠ ಶೇ.45 ರಷ್ಟು ಅಂಕಗಳೊAದಿಗೆ ಉತ್ತೀರ್ಣರಾಗಿರಬೇಕು. ಅಗ್ನಿ ವೀರ್ ಟೆಕ್ನಿಕಲ್ಗೆ ಅರ್ಜಿ ಸಲ್ಲಿಸಲು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣ ಅಥವಾ 10ನೇ ತರಗತಿಯ ಜೊತೆಗೆ ಐಟಿಐ ಮುಗಿಸಿರಬೇಕು. ಅಗ್ನಿವೀರ್ ಕ್ಲರ್ಕ್ ಹಾಗೂ ಸ್ಟೋರ್ ಕೀಪರ್ ಹುದ್ದೆಗಳಿಗೆ ಯಾವುದೇ ವಿಭಾಗದ ಪಿಯುಸಿಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು. ಇಂಗ್ಲಿಷ್ ಮತ್ತು ಗಣಿತ ವಿಷಯ ಕಡ್ಡಾಯವಾಗಿರುತ್ತದೆ. ಅಗ್ನಿವೀರ್ ಟ್ರೇಡ್ಸ್ಮನ್…

Read More

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹ್ಯಾಕರ್‌ಗಳು ದಿನಕ್ಕೊಂದು ಹೊಸ ದಾರಿಯ ಮೂಲಕ ಜನಸಾಮಾನ್ಯರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಟರ್ನೆಟ್ ಅಥವಾ ಬಗ್‌ಗಳ ಮೂಲಕ ಹ್ಯಾಕ್ ಮಾಡುವುದು ಹಳೆಯದಾಯಿತು, ಈಗ ‘ಕಾಲ್ ಫಾರ್ವರ್ಡಿಂಗ್’ (Call Forwarding) ಮೂಲಕ ಸುಲಭವಾಗಿ ಹ್ಯಾಕ್ ಮಾಡಲಾಗುತ್ತಿದೆ. ಹ್ಯಾಕರ್‌ ಗಳ ಹೊಸ ಪ್ಲಾನ್ ಹೀಗಿದೆ: ಸೈಬರ್ ಅಪರಾಧಿಗಳು ನಿಮಗೆ ಒಂದು ಮೆಸೇಜ್ ಅಥವಾ ಕಾಲ್ ಮಾಡುತ್ತಾರೆ. “ನಿಮ್ಮ ಕೊರಿಯರ್ ಬಂದಿದೆ”, “ನಿಮಗೊಂದು ಉಡುಗೊರೆ ಕಾಯುತ್ತಿದೆ” ಅಥವಾ “ಡೆಲಿವರಿ ಬಾಯ್‌ಗೆ ಅಡ್ರೆಸ್ ತಿಳಿಯುತ್ತಿಲ್ಲ, ಈ ನಂಬರ್‌ಗೆ ಕಾಲ್ ಮಾಡಿ” ಎಂದು ನಂಬಿಸುತ್ತಾರೆ. ಅವರು ನೀಡಿದ ನಂಬರ್‌ಗೆ ನೀವು ಕರೆ ಮಾಡಿದ ತಕ್ಷಣ, ನಿಮ್ಮ ಫೋನಿನ ಕಾಲ್ ಮತ್ತು ಮೆಸೇಜ್‌ಗಳು ಹ್ಯಾಕರ್ ನಂಬರ್‌ಗೆ ಫಾರ್ವರ್ಡ್ ಆಗುತ್ತವೆ. ಇದರಿಂದ ನಿಮ್ಮ ಬ್ಯಾಂಕ್ OTPಗಳು ಮತ್ತು ವೈಯಕ್ತಿಕ ಕರೆಗಳು ಅವರಿಗೆ ತಲುಪುತ್ತವೆ. ಅಷ್ಟೇ ಅಲ್ಲದೆ, ನಿಮ್ಮ ವಾಟ್ಸಾಪ್ ಕೂಡ ಅವರ ವಶವಾಗುವ ಸಾಧ್ಯತೆ ಇರುತ್ತದೆ. ಹ್ಯಾಕ್ ಆಗಿದೆಯೇ…

Read More

ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್ಗಳ ವಿರುದ್ಧ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ರೆಸಾರ್ಟ್ ಮತ್ತು ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಎಫ್ಐಆರ್ ಆದ ರೆಸಾರ್ಟ್ಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸಿ ಇತರೆ ಕ್ರಮಗಳನ್ನು ಜರುಗಿಸಬೇಕು. ಪ್ರತಿಯೊಂದಕ್ಕೂ ನಾನೇ ಕರೆದು ತಮಗೆ ಹೇಳಬೇಕಾ, ಹಾಗಾದರೆ ತಮ್ಮ ಜವಾಬ್ದಾರಿ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಇಲಾಖೆಗಳಿಗೆ ಸಂಬAಧಿಸಿದ ಕೆಲಸವನ್ನು ಜವಾಬ್ದಾರಿಯಿಂದ ತಾವು ನಿರ್ವಹಿಸಬೇಕು. ಸರ್ಕಾರದ ನಿಯಮಗಳನ್ವಯ ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಹೋಂಸ್ಟೇ ಮತ್ತು ರೆಸಾರ್ಟ್ಗಳಿಗೆ ಕಟ್ಟಡ ಪರವಾನಗಿ ನೀಡಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ರೆಸಾರ್ಟ್ ಹಾಗೂ ಹೋಂಸ್ಟೇಗಳು…

Read More

ಮೂಲರೂಪ : ಶಂಕುಕರ್ಣ ಅವತಾರಗಳು : ಪ್ರಹ್ಲಾದರಾಜರು, ಬಾಹ್ಲೀಕರಾಜರು, ವ್ಯಾಸರಾಜರು, ಶ್ರೀ ರಾಘವೇಂದ್ರ ಗುರುಸಾರ್ವಭೌಮರು. ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ ಗೋತ್ರ : ಗೌತಮ ಮುತ್ತಾತ : ಶ್ರೀ ಕೃಷ್ಣಭಟ್ಟ ತಾತ : ಶ್ರೀ ಕನಕಾಚಲ ಭಟ್ಟ ತಂದೆ : ಶ್ರೀ ತಿಮ್ಮಣ್ಣ ಭಟ್ಟ ತಾಯಿ : ಶ್ರೀಮತಿ ಗೋಪಿಕಾಂಬ ಅಕ್ಕ : ಶ್ರೀಮತಿ ವೇಂಕಟಾಂಬಾ ಅಣ್ಣ : ಶ್ರೀ ಗುರುರಾಜಾಚಾರ್ಯ ಜನನ : ಕ್ರಿ.ಶ. 1595ನೇ ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ/ಶುಕ್ರವಾರ ಜನ್ಮ ನಕ್ಷತ್ರ : ಮೃಗಶಿರಾ ಜನ್ಮಸ್ಥಳ : ಭುವನಗಿರಿ ಪೂರ್ವಾಶ್ರಮದ ಹೆಸರು : ವೇಂಕಟನಾಥ ಚೌಲ ಹಾಗೂ ಅಕ್ಷರಾಭ್ಯಾಸ : ಕ್ರಿ.ಶ. 1597-98ನೇ ಹೇವಿಲಂಬಿ ಸಂವತ್ಸರ ಭಾವ ಹಾಗೂ ಪ್ರಾಥಮಿಕ ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು ಉಪನಯನ : ಕ್ರಿ.ಶ. 1602ನೇ ಶುಭಕೃತ ಸಂವತ್ಸರ ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥರಲ್ಲಿ ವಿವಾಹ : ಕ್ರಿ.ಶ. 1614ನೇ ಆನಂದನಾಮ ಸಂವತ್ಸರ ಪತ್ನಿಯ…

Read More

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಶಾಲೆಯಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ: ಕಳೆದ ಫೆಬ್ರವರಿ 19 ರಂದು ವಿದ್ಯಾರ್ಥಿನಿಗೆ ಹಠಾತ್ ರಕ್ತಸ್ರಾವ ಉಂಟಾಗಿತ್ತು. ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿದೆ. ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕುಗೊಳಿಸಿದ ಪೊಲೀಸರು, ವಿದ್ಯಾರ್ಥಿನಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ವಂಚಿಸಿದ ಆರೋಪಿಯನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ. ಸರ್ಕಾರದ ಸುಪರ್ದಿಯಲ್ಲಿರುವ, ಅತ್ಯಂತ ಕಟ್ಟುನಿಟ್ಟಾದ ಕಾವಲು ಇರಬೇಕಾದ ವಸತಿ ಶಾಲೆಯ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಯ ಗಂಭೀರತೆ ಅರಿತು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ವಾರ್ಡನ್ ಹಾಗೂ ಶಾಲಾ ಸಿಬ್ಬಂದಿ ವಿರುದ್ಧ…

Read More