Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ : ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತ ಪಟ್ಟು ಮತ್ತೋಬ್ಬ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ. ಚನ್ನಪಟ್ಟಣದ ಜೀವನ್ ಪುರ್ ನಗರದ ಮೆಹರಾನ್ ಖಾನ್ (20) ಮೃತ ಪಟ್ಟ ಯುವಕನಾಗಿದ್ದಾನೆ. ಚನ್ನಪಟ್ಟಣದಿಂದ ಮೆಹರಾನ್ ಖಾನ್ ಮತ್ತು ಆತನ ಸ್ನೇಹಿತ ಮಹಮದ್ ಖಾಸಿಂ ಇಬ್ಬರು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ( KA-02-EU-9389 ) ಟಿ.ನರಸೀಪುರದ ಕುರಿ ಸಂತೆಗೆ ಹೋಗುತ್ತಿದ್ದ ವೇಳೆ ಮದ್ದೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ (KA-09-F-5060) ಸಾರಿಗೆ ಬಸ್ (ಮೈಸೂರು ಡಿಪೋ) ಮದ್ದೂರು ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ತಿರುವುನಲ್ಲಿ ಬಂದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೆಹರಾನ್ ಖಾನ್ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲಿ ಮಹರಾನ್ ಖಾನ್ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ…
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದನು. ಇಂದು ಗಾಯಗೊಂಡಿದ್ದಂತ ಮತ್ತೋರ್ವ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ನಿಗೂಢ ಸ್ಪೋಟ ಘಟನೆ ನಡೆದಿತ್ತು. ಆ ಬಳಿಕ ಪರಿಶೀಲಿಸಿದಾಗ ಸಿಲಿಂಡರ್ ಸ್ಪೋಟಗೊಂಡಿರುವುದಾಗಿ ತಿಳಿದು ಬಂದಿತ್ತು. ಈ ಘಟನೆಯಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದನು. ಇನ್ನೂ ಈ ದುರಂತದಲ್ಲಿ ಗಾಯಗೊಂಡಿದ್ದಂತ 8 ವರ್ಷದ ಬಾಲಕಿ ಖಯಾಲಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಬಾಲಕಿ ಖಯಾಲಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಸಿಲಿಂಡರ್ ಸ್ಪೋಟ ಘಟನೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. https://kannadanewsnow.com/kannada/benefit-from-the-e-pathi-account-movement-maddur-tahsildar-parashuram-sattigeri/ https://kannadanewsnow.com/kannada/lalbagh-flower-show-opens-viewed-by-580000-people-so-far/
ಪೂರ್ವಜರ ಆರಾಧನೆಯನ್ನು ಅತ್ಯಂತ ವಿಶೇಷವಾದ ಆರಾಧನೆ ಎಂದು ಪರಿಗಣಿಸಲಾಗಿದೆ. ಕುಲದೇವತೆಯ ಕೃಪೆಯಿಂದಲೇ ನಮ್ಮ ಜೀವನದಲ್ಲಿ ಪ್ರತಿಯೊಂದು ಶುಭ ಕಾರ್ಯಗಳು ನಡೆಯುತ್ತವೆ ಎಂಬುದು ಹಲವರ ಅನುಭವಕ್ಕೆ ಬಂದಿರುವ ಸತ್ಯ. ಆದುದರಿಂದಲೇ ಇಂದಿನ ಕಾಲದಲ್ಲಿ ಕುಲದೇವತಾ ಆರಾಧನೆಯು ಬಹಳ ವಿಶೇಷವಾಗಿದೆ. ಅಂತಹ ಕುಲದೇವತೆಗೆ ನಾವು ಮಾಡುವ ಪ್ರತಿಯೊಂದು ರೀತಿಯ ಪೂಜೆಯು ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ಯಶಸ್ಸನ್ನು ಸಾಧಿಸಲು ಮತ್ತು ಅಡೆತಡೆಗಳನ್ನು ಕಡಿಮೆ ಮಾಡಲು ಕುಲದೈವವನ್ನು ಯೋಚಿಸಿ ಬೆಳಗಬೇಕಾದ ದೀಪದ ಬಗ್ಗೆ ನಾವು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ಅಡೆತಡೆಗಳನ್ನು…
ಬೆಂಗಳೂರು: 218ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ ದೊರೆತಿದೆ. ಈವರೆಗೆ ಬರೋಬ್ಬರಿ 5.80 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ಕುರಿತಂತೆ ಲಾಲ್ ಬಾಗ್ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾಹಿತಿ ಹಂಚಿಕೊಂಡಿದ್ದು, 218ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್.7ರಿಂದ 18ರ ಇಂದಿನವರೆಗೆ ಆಯೋಜಿಸಲಾಗಿತ್ತು ಎಂದಿದ್ದಾರೆ. ಕೊನೆಯ ದಿನವಾದಂತ ಇಂದು ಪ್ಲವರ್ ಶೋವನ್ನುವಯಸ್ಕರು— 7960, ಮಕ್ಕಳು — 2400, ಶಾಲಾ ಮಕ್ಕಳು 16,950 ಸೇರಿದಂತೆ ಒಟ್ಟು — 27,310 ಮಂದಿ ವೀಕ್ಷಣೆ ಮಾಡಿದ್ದಾರೆ. ಇದರ ಒಟ್ಟು ಮೊತ್ತ ರೂ 3,45,000 ಆಗಿರುತ್ತದೆ ಎಂದು ಹೇಳಿದ್ದಾರೆ. ಕಳೆದ 12 ದಿವಸಗಳ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ವೀಕ್ಷರ ಸಂಖ್ಯೆ ಒಟ್ಟು 6.24 ಲಕ್ಷಗಳ ಮಂದಿಯಾಗಿದ್ದಾರೆ. ಇದರಿಂದ ಸಂಗ್ರಹವಾದ ಒಟ್ಟು ಮೊತ್ತ ರೂ 2,78,45,560 ಅಂದರೇ ಪ್ರವೇಶ ಶುಲ್ಕ ರೂ 2,4732 ಕೋಟಿಗಳು ,ಪ್ರಾದರ್ಶಿಕೆಗಳ ಶುಲ್ಕ ರೂ…
ಮಂಡ್ಯ : ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ- ಪೌತಿ ಖಾತಾ ಆಂದೋಲನ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಮನವಿ ಮಾಡಿದರು. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಇ- ಪೌತಿ ಖಾತಾ ಆಂದೋಲನದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಕೃಷಿ ಜಮೀನಿನ ಇಡುವಳಿದಾರರು/ ಖಾತೆದಾರರು ಮೃತಗೊಂಡ ನಂತರ ಹಲವಾರು ವರ್ಷಗಳಿಂದ ವಾರಸುದಾರರು ತಮ್ಮ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಆದ್ದರಿಂದ ಪಹಣಿಗಳಲ್ಲಿ ಮೃತ ಖಾತೆದಾರರ ಹೆಸರು ಮುಂದುವರೆಯುತ್ತಿದೆ. ಇದನ್ನು ಸರಿಪಡಿಸಿಲು ಕಂದಾಯ ಇಲಾಖೆ ಸ್ವಯಂ ಪ್ರೇರಿತವಾಗಿ ಇ-ಪೌತಿ ಖಾತಾ ಆಂದೋಲನವನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಆಧಾರ್ ವಿವರವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿ ಸಹಕರಿಸಬೇಕೆಂದರು. ಈಗಾಗಲೇ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಗ್ರಾಮ ಪಂಚಾಯಿತಿಗಳಲ್ಲೇ…
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶ ಸಂಬಂಧ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್ ದಾಖಲಿಸಲು ಮತ್ತು ಶುಲ್ಕ ಪಾವತಿಸಲು ಆ.19ರಂದು ಮಧ್ಯಾಹ್ನ 3ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ. ಶುಲ್ಕ ಪಾವತಿ ನಂತರ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಮಂಗಳವಾರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದುವರೆಗೂ ಯಾವುದೇ ಛಾಯ್ಸ್ ಆಯ್ಕೆ ಮಾಡದವರು ಹಾಗೂ ಶುಲ್ಕ ಪಾವತಿಸದಿರುವವರಿಗೆ ನೀಡಿರುವ ಕೊನೆ ಅವಕಾಶವಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಈ ಅವಕಾಶದ ನಂತರವೂ ಯಾವುದೇ ಛಾಯ್ಸ್ ಆಯ್ಕೆ ಮಾಡದ ಹಾಗೂ ಶುಲ್ಕ ಪಾವತಿ ಮಾಡದಿರುವವರ ಸೀಟುಗಳನ್ನು ರದ್ದುಪಡಿಸಿ, ಆ ಸೀಟುಗಳನ್ನು 2ನೇ ಸುತ್ತಿನ ಸೀಟು ಮ್ಯಾಟ್ರಿಕ್ಸ್ ಗೆ ಸೇರಿಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. https://kannadanewsnow.com/kannada/the-government-has-ordered-to-give-mlc-dinesh-gooligowda-the-position-of-state-minister/ https://kannadanewsnow.com/kannada/actor-darshans-wife-vijayalakshmi-met-him-in-jail-gave-him-fruits-and-inquired-about-his-well-being/
ಬೆಂಗಳೂರು: ಕರ್ನಾಟಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರನ್ನಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಆದೇಶಿಸಿತ್ತು. ಇಂದು ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶ ಮಾಡಿದೆ. ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ದಿನೇಶ್ ಗೂಳಿಗೌಡ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನದೊಂದಿಗೆ ರಾಜ್ಯ ಸಚಿವ ಸ್ಥಾನಮಾನಕ್ಕೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದ್ದಾರೆ. https://kannadanewsnow.com/kannada/after-airtel-jio-and-vodafone-networks-are-down-across-the-country-users-are-complaining/ https://kannadanewsnow.com/kannada/actor-darshans-wife-vijayalakshmi-met-him-in-jail-gave-him-fruits-and-inquired-about-his-well-being/
ಬೆಂಗಳೂರು: ಪಿವಿಆರ್ ಐನಾಕ್ಸ್, ಬೆಂಗಳೂರು ಹಾಗೂ ಮುಂಬೈನಲ್ಲಿ 8 ಅತ್ಯಾಧುನಿಕ ಪರದೆಗಳನ್ನು ಅನಾವರಣಗೊಳಿಸಿದೆ – ಮುಂಬೈನ ಬೋರಿವಲಿ ಪೂರ್ವದಲ್ಲಿರುವ ಸ್ಕೈ ಸಿಟಿ ಮಾಲ್ನಲ್ಲಿ 10-ಪರದೆಗಳ ಮೆಗಾಪ್ಲೆಕ್ಸ್ ಮತ್ತು ಬೆಂಗಳೂರಿನ ಮಹೀಂದ್ರಾ ಮಿಲೇನಿಯಮ್ ಮಾಲ್ನಲ್ಲಿ ರೋಮಾಂಚಕ, ವಿನ್ಯಾಸ-ಮುಂದುವರೆದ 8-ಪರದೆಗಳ ಮಲ್ಟಿಪ್ಲೆಕ್ಸ್. ಭಾರತದ ಎರಡು ಅತ್ಯಂತ ನಿರೀಕ್ಷಿತ ಬಿಡುಗಡೆಗಳಾದ ಕೂಲಿ ಮತ್ತು ವಾರ್ 2 ಜೊತೆಗೆ ಆಗಮಿಸುತ್ತಿರುವ ಈ ಬಿಡುಗಡೆಗಳು ಪ್ರೇಕ್ಷಕರಿಗೆ ವರ್ಷದ ಅತಿದೊಡ್ಡ ಪ್ರದರ್ಶನಗಳನ್ನು ನೋಡಲು ಮುಂದಿನ ಸಾಲಿನ ಆಸನವನ್ನು ಭರವಸೆ ನೀಡುತ್ತವೆ, ಇದನ್ನು ಅತ್ಯಂತ ತಲ್ಲೀನಗೊಳಿಸುವ ಸ್ವರೂಪಗಳು ಮತ್ತು ಅತ್ಯಂತ ಕ್ರಿಯಾತ್ಮಕ ಸ್ಥಳಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಬೊರಿವಲಿಯಲ್ಲಿರುವ ಸ್ಕೈ ಸಿಟಿ ಮಾಲ್ ಮೆಗಾಪ್ಲೆಕ್ಸ್ ಮುಂಬೈನ ಪಶ್ಚಿಮ ಉಪನಗರಗಳನ್ನು ಮುಂದಿನ ಪೀಳಿಗೆಯ ಚಲನಚಿತ್ರ ವೀಕ್ಷಣೆಯ ಕೇಂದ್ರವಾಗಿ ಮರು ವ್ಯಾಖ್ಯಾನಿಸುತ್ತದೆ. ಬಹು ಹಂತಗಳಲ್ಲಿ ಹರಡಿರುವ ಈ ಆಸ್ತಿಯು, ಇನ್ಸಿಗ್ನಿಯಾ, ಐಮ್ಯಾಕ್ಸ್ ವಿತ್ ಲೇಸರ್ ಮತ್ತು 4DX ಸೇರಿದಂತೆ ಪ್ರೀಮಿಯಂ ಸ್ವರೂಪಗಳನ್ನು ನೀಡುತ್ತದೆ, ಜೊತೆಗೆ ಚಿಕ್ ಲೌಂಜ್ ಸ್ಥಳಗಳು ಮತ್ತು ಹೊಸ ಪೀಳಿಗೆಯ ಸಾಮಾಜಿಕ ಮತ್ತು ಮನರಂಜನಾ…
ನವದೆಹಲಿ: ಸೋಮವಾರ ಏರ್ಟೆಲ್ ಬಳಕೆದಾರರು ಇದೇ ರೀತಿಯ ಸ್ಥಗಿತವನ್ನು ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಜಿಯೋ ಮತ್ತು ವೊಡಾಫೋನ್-ಐಡಿಯಾ ನೆಟ್ವರ್ಕ್ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. ತಾಂತ್ರಿಕ ದೋಷಗಳನ್ನು ಮೇಲ್ವಿಚಾರಣೆ ಮಾಡುವ ಪೋರ್ಟಲ್ ಡೌನ್ಡೆಕ್ಟರ್, ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಜಿಯೋ ಸ್ಥಗಿತಗೊಂಡಿರುವ ಬಗ್ಗೆ 200 ಕ್ಕೂ ಹೆಚ್ಚು ವರದಿಗಳನ್ನು ಕಂಡಿದೆ. ವೊಡಾಫೋನ್-ಐಡಿಯಾ ಸ್ಥಗಿತವು ಇದೀಗ ವ್ಯಾಪಕವಾಗಿ ಕಂಡುಬರುತ್ತಿಲ್ಲವಾದರೂ, ಪೋರ್ಟಲ್ ಸುಮಾರು 50 ಸ್ಥಗಿತ ವರದಿಗಳನ್ನು ವರದಿ ಮಾಡಿದೆ. ಎರಡೂ ಏರ್ಟೆಲ್ ಸ್ಥಗಿತ ವರದಿಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ, ಆದರೆ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಡೌನ್ಡೆಕ್ಟರ್ ಒದಗಿಸಿದ ಸ್ಥಗಿತ ನಕ್ಷೆಯ ಪ್ರಕಾರ, ವೊಡಾಫೋನ್-ಐಡಿಯಾ ಸ್ಥಗಿತವು ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಜೈಪುರದಂತಹ ನಗರಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಜಿಯೋ ಸ್ಥಗಿತ ನಕ್ಷೆಯು ಹೆಚ್ಚು ವ್ಯಾಪಕವಾಗಿದೆ, ಇದು ಚಂಡೀಗಢ, ಹೈದರಾಬಾದ್, ಲಕ್ನೋ, ಪಾಟ್ನಾ, ಅಹಮದಾಬಾದ್ ಮತ್ತು ಇನ್ನೂ ಅನೇಕ ನಗರಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಟೆಲಿಕಾಂ ದೈತ್ಯ…
ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಉದ್ಯೋಗ ಕಡಿತದ ಹೊರತಾಗಿಯೂ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕಾಗ್ನಿಜೆಂಟ್ನ ತನ್ನ ಶೇಕಡ 80 ರಷ್ಟು ಅರ್ಹ ಉದ್ಯೋಗಿಗಳಿಗೆ ನವೆಂಬರ್ 1, 2025 ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದೆ. ಇದು ಎರಡನೇ ತ್ರೈಮಾಸಿಕ ಗಳಿಕೆಯ ಸಮಯದಲ್ಲಿ 2025 ರ ದ್ವಿತೀಯಾರ್ಧದಲ್ಲಿ ಬಹುಪಾಲು ಉದ್ಯೋಗಿಗಳಿಗೆ ಅರ್ಹತೆ ಆಧಾರಿತ ವೇತನ ಹೆಚ್ಚಳವನ್ನು ನೀಡಲು ಯೋಜಿಸಿದೆ ಎಂದು ಘೋಷಿಸುವುದರೊಂದಿಗೆ ಹೊಂದಿಕೆಯಾಗುತ್ತದೆ. ಈ ಹೆಚ್ಚಳಗಳನ್ನು ಸೀನಿಯರ್ ಅಸೋಸಿಯೇಟ್ ಮಟ್ಟಗಳವರೆಗೆ ವಿಸ್ತರಿಸಿದೆ, ಎಲ್ಲಾ ವಲಯದ ಉದ್ಯೋಗಿಗಳಿಗೂ ತಮ್ಮ ಉದ್ಯೋಗದ ಅರ್ಹತೆ ಆಧಾರದ ಮೇಲೆ ಹಾಗೂ ವೈಯಕ್ತಿಕ ಕಾರ್ಯಕ್ಷಮತೆ ರೇಟಿಂಗ್ ಆಧಾರದ ಮೇಲೆ ಸಂಬಳ ಹೆಚ್ಚಳ ಪಡೆಯಲಿದ್ದಾರೆ. ಇತ್ತೀಚೆಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಸಾಕಷ್ಟು ಉದ್ಯೋಗಿಗಳ ಕಡಿತದಿಂದ ತತ್ತರಿಸಿದ್ದಾರೆ. ಆದರೆ, ಕಾಗ್ನಿಜೆಂಟ್ ತನ್ನ ಉದ್ಯೋಗಿಗಳ ಕ್ಷೇಮವನ್ನು ಕಾಪಾಡಲಿದೆ, ಜೊತೆಗೆ ದುಡಿತಕ್ಕೆ ಸೂಕ್ತ ಸಂಬಳ ನೀಡುವುದು ಸಂಸ್ಥೆಯ ಕರ್ತವ್ಯವೆಂದು ಭಾವಿಸಿದೆ.…