Subscribe to Updates
Get the latest creative news from FooBar about art, design and business.
Author: kannadanewsnow09
ಪಾಟ್ನಾ: ನವೆಂಬರ್ 22 ರ ಮೊದಲು ಬಿಹಾರದಲ್ಲಿ ಮುಂದಿನ ಸರ್ಕಾರ ರಚನೆಯಾಗಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಭಾನುವಾರ ಹೇಳಿದ್ದಾರೆ. ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಶೀಘ್ರದಲ್ಲೇ ಸರ್ಕಾರ ರಚನೆಗೆ ನೀಲನಕ್ಷೆಯನ್ನು ಅಂತಿಮಗೊಳಿಸಲಿದೆ ಮತ್ತು ಒಂದು ಅಥವಾ ಎರಡು ದಿನಗಳಲ್ಲಿ ಅದರ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಹೇಳಿದರು. “ಇದು ಶೀಘ್ರದಲ್ಲೇ ನಡೆಯಲಿದೆ. ಚರ್ಚೆಗಳು ನಡೆಯುತ್ತಿವೆ” ಎಂದು ಬಿಹಾರದಲ್ಲಿ ಸರ್ಕಾರ ರಚನೆಯ ಬಗ್ಗೆ ಕೇಳಿದಾಗ ಪಾಸ್ವಾನ್ ಹೇಳಿದರು. “ಸರ್ಕಾರದ ನೀಲನಕ್ಷೆಯ ಬಗ್ಗೆ ಸ್ಪಷ್ಟತೆಯ ಅರಿವು ಬರುತ್ತದೆ. ಇಂದು ರಾತ್ರಿಯೊಳಗೆ, ನಾನು ಹಿರಿಯ ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ಇಂದು ಅಥವಾ ನಾಳೆಯೊಳಗೆ ನೀಲನಕ್ಷೆ ಸಿದ್ಧವಾಗಲಿದೆ. ನವೆಂಬರ್ 22 ರ ಮೊದಲು ನಾವು ಸರ್ಕಾರ ರಚಿಸಬೇಕು. ಅದು ಪೂರ್ಣಗೊಳ್ಳುತ್ತದೆ.” 43 ವರ್ಷದ ಅವರ ಹೇಳಿಕೆಯು ಜನತಾದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಅವರನ್ನು…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದೆ. ಹುಲಿ ದಾಳಿಯಿಂದಾಗಿ ಹಸುವೊಂದು ಬಲಿಯಾಗಿದ್ದು, ಕೂದಲೆಳೆಯ ಅಂತರದಲ್ಲಿ ರೈತನೊಬ್ಬ ಪಾರಾಗಿದ್ದಾನೆ. ಮೈಸೂರು ಜಿಲ್ಲೆಯ ಬೆಣ್ಣೆಗೆರೆ ಬಳಿ 1 ಲಕ್ಷ ಮೌಲ್ಯದ ಹೆಚ್ ಎಫ್ ತಳಿಯ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ, ಕೊಂದು ಹಾಕಿದೆ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಸು ಮೇಲೆ ಹುಲಿ ದಾಳಿ ವೇಳೆ ಅಲ್ಲೇ ಇದ್ದಂತ ರೈತ ರಾಜಶೇಖರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ರೈತ ಜಯಪ್ಪ ಎಂಬುವರಿಗೆ ಸೇರಿದಂತ ಹೆಚ್ ಎಫ್ ತಳಿಯ ಹಸು ಹುಲಿದಾಳಿಗೆ ಬಲಿಯಾಗಿದೆ. ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದನ್ನು ಕಂಡಂತ ರೈತ ಜಯಪ್ಪ, ಬಿಡಿಸಲಾಗದೇ ತಾನು ಬದುಕಿದರೆ ಸಾಕು ಎಂಬುದಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಲಿ ಹಿಡಿಯದಂತ ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. https://kannadanewsnow.com/kannada/hospitals-must-provide-immediate-first-aid-for-animal-bites-without-asking-for-advance-payment-state-government-orders/ https://kannadanewsnow.com/kannada/shocking-under-the-pretext-of-petting-a-dog-a-pervert-sexually-harassed-a-young-woman-by-touching-her-body/
ಬೆಂಗಳೂರು : ಸಂಪುಟ ಪುನಾರಚನೆ, ಪವರ್ ಶೇರಿಂಗ್ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿರುವ ಸುದ್ದಿ ಬಗ್ಗೆ ಕೇಳಿದಾಗ, “ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇದು ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಕಾದು ನೋಡೋಣ” ಎಂದರು. ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಚರ್ಚೆ ಇದೆಯಲ್ಲ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ ಹೊರತು ಬೇರೆಯವರಲ್ಲ” ಎಂದು ಪ್ರತಿಕ್ರಿಯಿಸಿದರು. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ದೆಹಲಿಗೆ ಹೋಗಿದ್ದು, ನೀವೂ ತೆರಳುತ್ತಿರುವ ಕಾರಣ ಎಂದು ಕೇಳಿದಾಗ, ನಾನು ಈಗಾಗಲೇ ದೆಹಲಿಗೆ ತೆರಳಿರುವುದಾಗಿ ಮಾಧ್ಯಮಗಳು ಪ್ರಕಟಿಸಿವೆ.…
ಕಲಬುರ್ಗಿ: ಆರ್ ಎಸ್ ಎಸ್ ತೆರಿಗೆ ವಂಚನೆ, ಕೆ ಕೆ ಆರ್ ಡಿ ಬಿಯಿಂದ ಲೂಟಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ಬಿಡುಗಡೆ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಾವು ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ವಿರೋಧ ಮಾಡಿಲ್ಲ. ಆದರೇ ಅನುಮತಿಯನ್ನು ಪಡೆದುಕೊಂಡು ಪಥಸಂಚಲನ ಮಾಡಿ ಎಂದು ಹೇಳಿದ್ದೇವೆ ಎಂದರು. ಇಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಕೊಟ್ಟವರು ನಾವು. ಎಷ್ಟು ಮಂದಿ ಭಾಗಿಯಾಗಬೇಕು. ಮಾರ್ಗ ಎಲ್ಲಿಂದ ಎಲ್ಲಿಗೆ ಇರಬೇಕು ಎಂದು ಹೇಳಿದ್ದೇವೆ. ಇದರಲ್ಲಿ ಗೊಂದಲವೇನಿದೆ ಎಂಬುದಾಗಿ ಪ್ರಶ್ನಿಸಿದರು. ಕಲಬುರ್ಗಿಯ ಚಿತ್ತಾಪುರದ ಆರ್ ಎಸ್ ಎಸ್ ಪಥಸಂಚಲನಕ್ಕೆ 3 ಲಕ್ಷ ಬರ್ತೀವಿ ಅಂದ್ರು ಬಂದ್ರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಬರ್ತೀವಿ ಅಂದ್ರು ಬಂದಿದ್ದಾರಾ? ಯಾರು ಬಂದಿಲ್ಲ. ಯಾವುದೇ ಪ್ರಮುಖ ನಾಯಕರಿಲ್ಲದೇ ಚಿತ್ತಾಪುರದಲ್ಲಿ ಪಥಸಂಚನ ನಡೆಯುತ್ತಿದೆ ಎಂದರು. ಆರ್…
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರನ್ನು ತೆಗೆದಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿಗೆ 18 ಲಕ್ಷ ಜನರನ್ನು ಸೇರಿಸಿದ್ದರು. ವಿಧಾನಸಭಾ ಚುನಾವಣೆಗೂ ಮೊದಲು 1 ಕೋಟಿ ಜನರಿಗೆ ಹಣ ನೀಡಿದ್ದಾರೆ. ಒಂದು ಕೋಟಿ ಜನರ ಖಾತೆಗೆ ತಲಾ 10,000 ಹಣ ಹಾಕಿದ್ದರು. ಕೇಂದ್ರ ಸರ್ಕಾರದ ಜೊತೆಗೆ ಚುನಾವಣಾ ಆಯೋಗ ಶಾಮೀಲಾಗಿದೆ ಎಂಬುದಾಗಿ ಆರೋಪಿಸಿದರು. ಕೇಂದ್ರ ಚುನಾವಣಾ ಆಯೋಗವೇ ಬಿಜೆಪಿ ಜೊತೆಗೆ ಸೇರಿಕೊಂಡಾಗ ಕಳ್ಳನನ್ನು ಹಿಡಿಯುವವರು ಯಾರು ಎಂಬುದಾಗಿ ಪ್ರಶ್ನಿಸಿದಂತ ಸಚಿವ ರಾಮಲಿಂಗಾರೆಡ್ಡಿ, ಚುನಾವಣಾ ಆಯೋಗದ ನಡೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. https://kannadanewsnow.com/kannada/if-siddaramaiah-is-removed-from-the-cm-post-the-revolution-will-be-fixed-vatal-nagaraj/ https://kannadanewsnow.com/kannada/follow-these-steps-to-grow-mushrooms-in-a-bucket-at-home/
ಮೈಸೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಕೇಳಬಹುದು. ಆದರೇ ಅದು ಆಗುವುದಿಲ್ಲ. ಅದು ಸಿಎಂ ಸ್ಥಾನದಿಂದ ಸಿದ್ಧರಾಮಯ್ಯ ತೆಗೆದಾಗ ಮಾತ್ರ ಫಿಕ್ಸ್ ಎಂಬುದಾಗಿ ಸಿಎಂ ಪರವಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಬ್ಯಾಟ್ ಬೀಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 2028ರ ಚುನಾವಣೆಗೂ ಸಿಎಂ ಸಿದ್ಧರಾಮಯ್ಯನವರೇ ಇರಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನಷ್ಟು ಸಮರ್ಥ ವ್ಯಕ್ತಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಇಲ್ಲ ಎಂಬುದಾಗಿ ತಿಳಿಸಿದರು. ನವೆಂಬರ್ ಕ್ರಾಂತಿ ಕೇಳಬಹುದು. ಆದರೇ ಅದು ಆಗುವುದಿಲ್ಲ. ಸಿದ್ಧರಾಮಯ್ಯ ಬಹಳ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಸಿಎಂ ಸ್ಥಾನದಿಂದ ಸಿದ್ಧರಾಮಯ್ಯನವರನ್ನು ತೆಗೆದರೇ ಮಾತ್ರ ಕ್ರಾಂತಿಯಾಗಲಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರವಾಗಿ ಇರುತ್ತಾರೆ ಎಂದರು. https://kannadanewsnow.com/kannada/rss-procession-begins-in-chittapur-kalaburagi/ https://kannadanewsnow.com/kannada/follow-these-steps-to-grow-mushrooms-in-a-bucket-at-home/
ಕಲಬುರ್ಗಿ: 300 ಗಣವೇಷಧಾರಿಗಳು, 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಮಂದಿಯಿಂದ ಕಲಬುರ್ಗಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನ ಆರಂಭಗೊಂಡಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚನಕ್ಕೆ ಜಿಲ್ಲಾಡಳಿತ ಆರಂಭದಲ್ಲಿ ಅವಕಾಶ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಕೋರ್ಟ್ ಅರ್ಜಿ ವಿಚಾರಣೆ ನಡೆಸಿ, ಸೂಕ್ತ ನಿರ್ಧಾರ ಕೈಗೊಂಡು, ಪಥಸಂಚಲನಕ್ಕೆ ಅನುಮತಿಸುವಂತೆ ನಿರ್ದೇಶಿಸಿತ್ತು. ಈ ಹಿನ್ನಲೆಯಲ್ಲಿ ಚಿತ್ತಾಪುರ ತಾಲ್ಲೂಕು ಆಡಳಿತವು ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿಸಿ ಆದೇಶಿಸಿತ್ತು. ಜೊತೆ ಜೊತೆಗೆ 300 ಕಾರ್ಯಕರ್ತರು, 50 ಬ್ಯಾಂಡ್ ನವರು ಸೇರಿದಂತೆ 350 ಜನರಿಗೆ ಮಾತ್ರವೇ ಅವಕಾಶ ನೀಡುವಂತ ಷರತ್ತು ವಿಧಿಸಲಾಗಿತ್ತು. ಈ ಷರತ್ತಿನಂತೆ ಕಲಬುರ್ಗಿಯಲ್ಲಿ 300 ಗಣಧಾರಿಗಳು, 50 ಬ್ಯಾಂಡ್ ನವರೊಂದಿಗೆ ಆರ್ ಎಸ್ ಎಸ್ ಪಥಸಂಚಲನವು ಚಿತ್ತಾಪುರದಲ್ಲಿ ನಡೆಯುತ್ತಿದೆ. https://kannadanewsnow.com/kannada/shocking-under-the-pretext-of-petting-a-dog-a-pervert-sexually-harassed-a-young-woman-by-touching-her-body/ https://kannadanewsnow.com/kannada/follow-this-method-and-grow-cardamom/
ಉತ್ತರ ಕನ್ನಡ: ಜಿಲ್ಲೆಯಲ್ಲಿ ಮನೆಗೆ ಆಕಸ್ಮಿಕವಾಗಿ ಬಂಕಿ ಬಿದ್ದ ಪರಿಣಾಮ, ಮನೆಯೊಳಗೆ ಇದ್ದಂತ ವೃದ್ದೆಯೊಬ್ಬರು ಸಜೀವವಾಗಿ ದಹನವಾಗಿರುವಂತ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಹನಮಾಪುರದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಪಕೀರವ್ವ ರಾಮಣ್ಣ ಆಲೂರು(70) ಸಜೀವವಾಗಿ ದಹನವಾಗಿದ್ದಾರೆ. ಪಕೀರವ್ವ ಏಕಾಂಗಿಯಾಗಿ ಮನೆಯಲ್ಲಿ ವಾಸವಾಗಿದ್ದರು. ಬೆಂಕಿ ಮನೆಗೆ ತಗುಲಿದ್ದರಿಂದ ವೃದ್ಧೆ ಪಕೀರವ್ವ ಹೊರಗೆ ಬರಲಾಗದೇ ಮನೆಯಲ್ಲೇ ಸಜೀವವಾಗಿ ದಹನವಾಗಿದ್ದಾರೆ. ಈ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/follow-these-steps-to-grow-mushrooms-in-a-bucket-at-home/ https://kannadanewsnow.com/kannada/shocking-under-the-pretext-of-petting-a-dog-a-pervert-sexually-harassed-a-young-woman-by-touching-her-body/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಟೋಮೊಬೈಲ್ ತಂತ್ರಜ್ಞಾನವು ಶಾಶ್ವತವಾಗಿ ವಿಕಸನಗೊಳ್ಳುತ್ತಿದೆ, ಆದರೆ ಕೆಲವು ವಿಷಯಗಳು ಯಾವಾಗಲೂ ಒಂದೇ ಆಗಿರುತ್ತವೆ ಎಂದು ತೋರುತ್ತದೆ. ಹಿಂದಿನ ದಶಕಗಳಂತೆ, ಇಂದು ಕಾರುಗಳು ಸ್ಟೀರಿಂಗ್ ವೀಲ್, ಟ್ರಾನ್ಸ್ಮಿಷನ್ ಮತ್ತು ಆಕ್ಸಲ್ಗಳಲ್ಲಿ ನಾಲ್ಕು ಚಕ್ರಗಳನ್ನು ಹೊಂದಿವೆ. ಮತ್ತು ಅವು ಉರುಳಿಸುವ ಟೈರ್ಗಳು ಆಳವಾದ ಕಪ್ಪು ಬಣ್ಣದ್ದಾಗಿರುತ್ತವೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಆಧುನಿಕ ಇತಿಹಾಸದಲ್ಲಿ ತಯಾರಕರು ಮತ್ತು ಮಾದರಿಗಳಲ್ಲಿ ಇದು ಸ್ಥಿರವಾಗಿ ಕಂಡುಬರುತ್ತದೆ. ಹಾಗಾದ್ರೇ ವಾಹನಗಳ ಟೈರ್ ಗಳು ಯಾಕೆ ಕಪ್ಪು ಬಣ್ಣದಲ್ಲಿ ಅಷ್ಟೇ ಇರ್ತಾವೆ ಎನ್ನುವ ಬಗ್ಗೆ ಮುಂದೆ ಓದಿ. ಉತ್ತರವು ನಿಮ್ಮನ್ನು ಆಶ್ಚರ್ಯಗೊಳಿಸಬಹುದು: ಇದು ಟೈರ್ ದಕ್ಷತೆ ಮತ್ತು ಒಟ್ಟಾರೆ ಶಕ್ತಿಯನ್ನು ಹೆಚ್ಚು ಸುಧಾರಿಸುವ ಪ್ರಮುಖ ಅಂಶದಿಂದಾಗಿ. ಟೈರ್ಗಳು ಮತ್ತು ಚಕ್ರಗಳು ವಾಹನದ ಫ್ಯಾಷನ್ ಪರಿಕರಗಳಂತೆ. ಆನ್ಲೈನ್ ವ್ಯುತ್ಪತ್ತಿ ನಿಘಂಟಿನ ಪ್ರಕಾರ, “ಟೈರ್” ಎಂಬುದು ಚಕ್ರದ ಡ್ರೆಸ್ಸಿಂಗ್ನಲ್ಲಿರುವಂತೆ “ಉಡುಪು” ಯ ಸಂಕ್ಷಿಪ್ತ ರೂಪವಾಗಿದೆ. ಕಾಲ, ಪ್ರವೃತ್ತಿಗಳು ಮತ್ತು ಅಭಿರುಚಿಗಳು ಬದಲಾದಂತೆ, ಟೈರ್ಗಳು ಮತ್ತು ಚಕ್ರಗಳ ನೋಟವೂ ಬದಲಾಯಿತು. 19…
ಕೋಲ್ಕತ್ತಾ: ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ನಾಲ್ಕು ವಿಕೆಟ್ ಗಳ ಭರ್ಜರಿ ಪ್ರದರ್ಶನ ನೀಡಿ, ಭಾನುವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 30 ರನ್ ಗಳಿಂದ ಸೋಲಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಎರಡನೇ ಟೆಸ್ಟ್ ನವೆಂಬರ್ 22 ರಿಂದ 26 ರವರೆಗೆ ಗುವಾಹಟಿಯಲ್ಲಿ ನಡೆಯಲಿದೆ. 15 ವರ್ಷಗಳಲ್ಲಿ ಭಾರತದಲ್ಲಿ ದಕ್ಷಿಣ ಆಫ್ರಿಕಾ ಪಡೆದ ಮೊದಲ ಟೆಸ್ಟ್ ಗೆಲುವು ಇದಾಗಿದೆ. ಮೊದಲ ಟೆಸ್ಟ್ ನ ಮೂರನೇ ದಿನದಂದು 124 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡ ಕುತ್ತಿಗೆ ನೋವಿನಿಂದಾಗಿ ಪಂದ್ಯದ ಉಳಿದ ಪಂದ್ಯದಲ್ಲಿ ಭಾಗವಹಿಸಲು ಅಲಭ್ಯ ಎಂದು ಘೋಷಿಸಲ್ಪಟ್ಟ ಕಾರಣ ಭಾರತ 93/9 ಕ್ಕೆ ಆಲೌಟ್ ಆಯಿತು. ಸೈಮನ್ ಹಾರ್ಮರ್ 4/21 ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ 7-3-15-2 ರನ್ ಗಳಿಸಿ ತಂಡಕ್ಕೆ ಮರಳಿದರು. ವಾಷಿಂಗ್ಟನ್ ಸುಂದರ್ 92 ಎಸೆತಗಳಲ್ಲಿ 31 ರನ್ ಗಳಿಸಿದರು ಆದರೆ ಬೌಲರ್ ಗಳಿಗೆ ಅನುಕೂಲಕರವಾದ ಪಿಚ್ ನಲ್ಲಿ ಭಾರತದ…














