Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದೇವಸ್ಥಾನ, ದೇವರ ಕೆಲಸ ಮತ್ತು ದೇವರ ದುಡ್ಡುಲ್ಲಿ ಮೋಸ, ವಂಚನೆ ಇರಬಾರದು. ದೇವರ ದುಡ್ಡು ದೇವರಿಗೆ ಸಲ್ಲಬೇಕು. ಆದರೆ ದೇವರ ದುಡ್ಡನ್ನು ಕಳ್ಳತನ ಮಾಡಿ , ಭಕ್ತರ ಭಕ್ತಿಗೆ, ಭಾವನೆಗೆ ಅಪಚಾರ ಮಾಡುತ್ತಿರುವುದು ಸಾಕ್ಷಿ ಸಮೇತ ದೊರಕಿದ್ದಾಗ್ಯೂ ಸಹ ಕುರುಡರಂತೆ ವರ್ತಿಸುವುದು ಅಕ್ಷಮ್ಯ ಎಂಬುದಾಗಿ ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರು ನಗರ ಬ್ಯಾಟರಾಯನಪುರ, ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಥಿ೯ಕ ದುರುಪಯೋಗ ಮತ್ತು ಆಡಳಿತ ನಿವ೯ಹಣೆ ಅಸರ್ಮಪಕವಾಗಿ ನಡೆಯುತ್ತಿರುವುದಾಗಿ ಹಲವು ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವರು ಸರಿಯಾದ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿರುತ್ತಾರೆ. ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ನಿರ್ವಹಿಸಿರುವುದಿಲ್ಲ. ಆದಾಯವನ್ನೇ ತೋರಿಸದೇ ವೆಚ್ಚವನ್ನು ಮಾತ್ರ ತೋರಿಸುತ್ತಿದ್ದಾರೆ. ಟ್ರಸ್ಟಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಹಲವು ಗುಂಪುಗಳಾಗಿ ಮಾರ್ಪಟ್ಟಿದೆ. ದೇವಸ್ಥಾನದ ಹುಂಡಿಯ ಹಣವನ್ನು ಲಪಾಟಯಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರದಾಡಿದ್ದು, ಸರ್ಕಾರವು ಭಕ್ತರ ಹಿತ…
ಬೆಂಗಳೂರು: ಕೆ ಐ ಎ ಡಿ ಬಿ ಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ ಜಮೀನು ನೀಡುವುದಿಲ್ಲ ಎಂಬುದಾಗಿ ರೈತ ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ಆದರೇ ಇಂದು ದಿಢೀರ್ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದು, ನಾವು 1771 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇವನಹಳ್ಳಿ ತಾಲ್ಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು ಪತ್ರ ಬರೆದಿದೆ. ಅದರಲ್ಲಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಜಮೀನನನ್ನು ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರವು ರೈತರ ಭೂಮಿಗೆ ಒಳ್ಳೆಯ ಬೆಲೆ ನಿಗದಿ ಪಡಿಸಬೇಕು. ಆ ಮೂಲಕ ಜಮೀನು ಖರೀದಿ ಮಾಡಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ವಿನಂತಿಸಿದ್ದಾರೆ. ಇನ್ನೂ ನಾಲ್ಕು ಷರತ್ತುಗಳನ್ನು ರೈತ ಹೋರಾಟ ಸಮಿತಿ ವಿಧಿಸಿದೆ. ಅದರಲ್ಲಿ ಮೊದಲನೆಯ ಷರತ್ತು ಪ್ರತಿ ಎಕರೆಗೆ 3.50 ಕೋಟಿಗಳ ದರ ನಿಗದಿ ಪಡಿಸಬೇಕು. ಎರಡನೇಯದು ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸದ…
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಹೊಸದಾಗಿ ಘೋಷಿಸಲಾದ ತಾಲೂಕಿನಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು Non FRU CHC ( Block PHC) ಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ಹೊಸ 8 ತಾಲ್ಲೂಕಿನ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು, 2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ 138 (ii) ರಲ್ಲಿ “ಹೊಸದಾಗಿ ಘೋಷಿಸಲಾಗಿರುವ ತಾಲ್ಲೂಕುಗಳಾದ ಹನೂರು, ಅಳ್ಳಾವರ, ಅಣ್ಣಿಗೇರಿ, ಮಸ್ಕಿ ಸಿರಿವಾರ, ಕಾಪು ಬಬಲೇಶ್ವರ, ಕೊಲಾರ ಬೇಳೂರು ಮತ್ತು ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ. ಆರ್ಥಿಕ ಇಲಾಖೆಯು ಆಯವ್ಯಯ ಘೋಷಣೆಗಳ ಅನುಷ್ಠಾನದ ಮಾರ್ಗಸೂಚಿಯಲ್ಲಿ ಈ ಯೋಜನೆಗೆ KKRDB, KMERC ಹಾಗೂ NHHI 15ನೇ ಹಣಕಾಸು ಆಯೋಗದಿಂದ ವೆಚ್ಚ ಭರಿಸಲು ತಿಳಿಸಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ…
ಬೆಂಗಳೂರು: ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಿಎಂ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಬಿಬಿಎಂಪಿಯಲ್ಲಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು. ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ…
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆಎಸ್ ಆರ್ ಟಿಸಿಗೆ ಮತ್ತೊಂದು ಕಿರೀಟ ಮುಡಿಗೇರಿದೆ. ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ET HRWorld Employee Experience ಪ್ರಶಸ್ತಿ-2025 ಲಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಕೈಗೊಂಡಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ETHR World Employee Experience ಪ್ರಶಸ್ತಿ-2025 ರವರ ಅತ್ಯುತ್ತಮ ನೌಕರ ಅನುಭವ – ಸಾರ್ವಜನಿಕ ವಲಯ ಸಂಸ್ಥೆಗಳು (PSUs) ವರ್ಗದಲ್ಲಿ ಪುರಸ್ಕಾರ ದೊರಕಿದೆ. ಜುಲೈ.11ರಂದು ಈ ಪ್ರಶಸ್ತಿಯನ್ನು ಬೆಂಗಳೂರಿನ ಶೇರಟನ್ ಗ್ರಾಂಡ್ ಹೋಟೆಲ್ ನಲ್ಲಿ ನಡೆದಂತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ಅಶ್ರಫ್ ಕೆ ಎಂ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸ್ವೀಕರಿಸಿದರು. https://kannadanewsnow.com/kannada/an-fda-employee-who-attempted-suicide-by-pouring-petrol-has-died-despite-treatment/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ಬಳ್ಳಾರಿ: ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎದುರು ಪೆಟ್ರೋಲ್ ಸುರಿದುಕೊಂಡು ಎಫ್ ಡಿಎ ಸುಂಕಪ್ಪ ಕೊರವರ ಆತ್ಮಹತ್ಯೆಗೆ ಯತ್ನಿಸಿದ್ದರು. ಇಂತಹ ಅವರು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಕೊಪ್ಪಳದ ಬಿಇಒ ಕಚೇರಿಯಲ್ಲಿ ಎಫ್ ಡಿ ಎ ಆಗಿ ಸುಂಕಪ್ಪ ಕೊರವರ ಕಾರ್ಯನಿರ್ವಹಿಸುತ್ತಿದ್ದರು. ಅವರು ಕಳೆದ 7 ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದರಿಂದ ವೇತನ ನೀಡಿರಲಿಲ್ಲ. ಮದ್ಯವೆಸನಿಯಾಗಿದ್ದ ಸುಂಕಪ್ಪಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಜುಲೈ.8ರಂದು ವೇತನ ಕೇಳಲು ಬಿಇಒ ಕಚೇರಿಗೆ ಸುಂಕಪ್ಪ ತೆರಳಿದ್ದರು. ಈ ಸಂದರ್ಭದಲ್ಲಿ ಮನನೊಂದು ಕಚೇರಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡಿದ್ದರು. ಶೇ.80ರಷ್ಟು ಸುಟ್ಟಗಾಯದಿಂದ ಬಳಲುತ್ತಿದ್ದಂತ ಸುಂಕಪ್ಪ ಅವರನ್ನು ಎರಡು ದಿನ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಜುಲೈ.10ರಂದು ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/another-victim-of-heart-attack-in-the-state-bus-drivers-death/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ಚಾಮರಾಜನಗರ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನೊಬ್ಬ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿರುವಂತ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ಚಾಲಕನನ್ನು ಆರ್ ಪಿ ಕೆ ಖಾಸಗಿ ಬಸ್ಸಿನ ಚಾಲಕ ಗುರುಸಿದ್ದು (55) ಎಂಬುದಾಗಿ ತಿಳಿದು ಬಂದಿದೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಆರ್ ಪಿಕೆ ಖಾಸಗಿ ಬಸ್ ಚಲಾಯಿಸಿಕೊಂಡು ಗುರುಸಿದ್ದು ತೆರಳುತ್ತಿದ್ದರು. ಬಸ್ ಚಾಲನೆ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿದೆ. ಚಾಲಕ ಗುರುಸಿದ್ದಪ್ಪನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾದಂತೆ ಆಗಿದೆ. https://kannadanewsnow.com/kannada/pilot-may-have-deliberatedy-crashed-air-india-flight-captain-mohan-ranganathan/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ನವದೆಹಲಿ: ಏರ್ ಇಂಡಿಯಾ ಫ್ಲೈಟ್ 171 ರ ಮಾರಕ ಅಪಘಾತವು ಉದ್ದೇಶಪೂರ್ವಕ ಮಾನವ ಕ್ರಿಯೆಯ ಪರಿಣಾಮವಾಗಿರಬಹುದು ಎಂದು ಪ್ರಮುಖ ವಾಯುಯಾನ ಸುರಕ್ಷತಾ ತಜ್ಞರು ಸೂಚಿಸಿದ್ದಾರೆ. ಇದು ಮೊದಲ ಬಾರಿಗೆ ಪೈಲಟ್ ಪ್ರೇರಿತ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸಿದೆ. ಭಾರತದ ಪ್ರಮುಖ ವಾಯುಯಾನ ತಜ್ಞರಲ್ಲಿ ಒಬ್ಬರಾದ ಕ್ಯಾಪ್ಟನ್ ಮೋಹನ್ ರಂಗನಾಥನ್, ಇಂಧನ ಕಟ್ಆಫ್ ಸ್ವಿಚ್ಗಳು ಮತ್ತು ಕಾಕ್ಪಿಟ್ ಆಡಿಯೊದ ಅನುಕ್ರಮವನ್ನು ಸೂಚಿಸಿ, ಅಪಘಾತವು ಕಾಕ್ಪಿಟ್ನಲ್ಲಿ ತೆಗೆದುಕೊಂಡ ಉದ್ದೇಶಪೂರ್ವಕ ಕ್ರಮಗಳಿಂದ ಉಂಟಾಗಿರಬಹುದು. ಬಹುಶಃ ಆತ್ಮಹತ್ಯೆಯೂ ಆಗಿರಬಹುದು ಎಂದು ಸೂಚಿಸಿದ್ದಾರೆ. ಪೈಲಟ್ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ಇಂಧನವನ್ನು ಸ್ವಿಚ್ ಆಫ್ ಮಾಡಿದ್ದೀರಾ ಎಂದು NDTV ಕೇಳಿದಾಗ, ಹಾಗೆ ಮಾಡುವುದರಿಂದ ಅಪಘಾತಕ್ಕೆ ಕಾರಣವಾಗಬಹುದು ಎಂದು ಸಂಪೂರ್ಣವಾಗಿ ತಿಳಿದಿತ್ತು, ಕ್ಯಾಪ್ಟನ್ ರಂಗನಾಥನ್ “ಖಂಡಿತ” ಎಂದು ಹೇಳಿದರು. “ಇದನ್ನು ಹಸ್ತಚಾಲಿತವಾಗಿ ಮಾಡಬೇಕು” ಎಂದು ಡ್ರೀಮ್ಲೈನರ್ನ ಎಂಜಿನ್ಗಳಿಗೆ ಇಂಧನವನ್ನು ಸ್ಥಗಿತಗೊಳಿಸಲು ಯಾವುದೇ ಮಾರ್ಗವಿದೆಯೇ ಎಂದು ಕೇಳಿದಾಗ ಕ್ಯಾಪ್ಟನ್ ರಂಗನಾಥನ್ NDTV ಗೆ ತಿಳಿಸಿದರು. ಇದನ್ನು ಸ್ವಯಂಚಾಲಿತವಾಗಿ ಅಥವಾ ವಿದ್ಯುತ್ ವೈಫಲ್ಯದಿಂದಾಗಿ ಮಾಡಲು ಸಾಧ್ಯವಿಲ್ಲ ಏಕೆಂದರೆ…
ತಮಿಳುನಾಡು: ಬರೋಬ್ಬರಿ 30 ವರ್ಷಗಳ ನಂತ್ರ ಉಗ್ರ ಅಬೂಬಕರ್ ಸಿದ್ದಿಕಿಯನ್ನು ಬಂಧಿಸಲಾಗಿದೆ. ಬಂಧಿತ ಉಗ್ರ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಇಂತಹ ಆರೋಪಿಯನ್ನು ತಮಿಳುನಾಡು ಎಟಿಎಸ್ ನಿಂದ ಬಂಧಿಸಲಾಗಿದೆ. ತಮಿಳುನಾಡು ಎಟಿಎಸ್ ನಿಂದ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಂತ ಉಗ್ರ ಅಬೂಬಕರ್ ಸಿದ್ದಕಿಯನ್ನು ಬಂಧಿಸಲಾಗಿದೆ. ಈತನಿಗೆ ಆಶ್ರಯ ನೀಡಿದ್ದಂತ ಮೊಹಮ್ಮದ್ ಆಲಿ ಕೂಡ ಬಂಧನವಾಗಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಸ್ಪೋಟದಲ್ಲಿ ಭಾಗಿಯಾಗಿದ್ದಂತ ಆರೋಪಿ ಅಬೂಬಕರ್ ಸಿದ್ದಿಕಿ ಆಗಿದ್ದಾನೆ. ಉಗ್ರ ಅಬೂಬಕರ್ ಸಿದ್ದಿಕಿ ಬೆಂಗಳೂರಿಗೆ ಕರೆತರಲು ಎಟಿಎಸ್ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈ.14ರಂದು ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಅಬೂಬಕರ್ ಕರೆತರುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಬಾಂಬ್ ತಯಾರಿಸುವುದರಲ್ಲಿ ಸಿದ್ಧಿಕಿ ನಿಸ್ಸೀಮನಾಗಿದ್ದನು. https://kannadanewsnow.com/kannada/life-imprisonment-for-the-criminal-who-sexually-assaulted-a-3-year-old-girl/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ಮಂಡ್ಯ: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯದ ಆದೇಶಿಸಿದೆ. ಈ ಮೂಲಕ ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷ ಕೃತ್ಯವೆಸಗಿದಂತ ಆರೋಪಿಗೆ ತಕ್ಷ ಶಿಕ್ಷೆಯಾಗಿದೆ. ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯದಿಂದ ಈ ಆದೇಶ ಹೊರಡಿಸಲಾಗಿದೆ. 53 ವರ್ಷದ ಶಿವಣ್ಣ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾರೆ. 2023 ಡಿಸೆಂಬರ್ 11ರಂದು ನಡೆದಿದ್ದ ಲೈಂಗಿಕ ದೌರ್ಜನ್ಯ ಎಸಗಿದ್ದರು. 3 ವರ್ಷದ ಬಾಲಕಿ ಮೇಲೆ ಕಾಮುಕ ಶಿವಣ್ಣ ಲೈಂಗಿಕ ದೌರ್ಜನ್ಯವೆಸಗಿದ್ದರು. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ ಒಂದರಲ್ಲಿ ನಡೆದಿದ್ದ ಪ್ರಕರಣ ಇದಾಗಿ್ತತು. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಪುಸಲಾಯಿಸಿ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ್ದನು. ಅಲ್ಲದೇ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ದೂರಿನ ಬಳಿಕ ವಿಚಾರಣೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧ ವಾದವನ್ನು ಸರ್ಕಾರಿ ವಕೀಲ ಹೆಬ್ಬಕವಾಡಿ ನಾಗರಾಜು ಮಾಡಿದ್ದರು. ವಾದ ಆಲಿಸಿದಂತ ಮಂಡ್ಯ…