Author: kannadanewsnow09

ಅಸ್ಸಾಂ: ಭಾನುವಾರ ಅಸ್ಸಾಂನ ದರ್ರಾಂಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಅದು ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಸೇರುತ್ತಿದೆ ಮತ್ತು ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು. ನಮ್ಮ ಧೈರ್ಯಶಾಲಿ ಸೈನಿಕರೊಂದಿಗೆ ನಿಲ್ಲುವ ಬದಲು, ಕಾಂಗ್ರೆಸ್ ಒಳನುಸುಳುವವರು ಮತ್ತು ಭಾರತದ ಏಕತೆಗೆ ಬೆದರಿಕೆ ಹಾಕುವವರನ್ನು ಬೆಂಬಲಿಸಲು ಆಯ್ಕೆ ಮಾಡಿದೆ. ಈ ಪಕ್ಷವು ಪದೇ ಪದೇ ರಾಷ್ಟ್ರವಿರೋಧಿ ಶಕ್ತಿಗಳಿಗೆ ರಕ್ಷಣೆ ನೀಡಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಆಪರೇಷನ್ ಸಿಂಧೂರ್ ಯಶಸ್ಸು ಆಪರೇಷನ್ ಸಿಂಧೂರ್ ಮುಗಿದ ನಂತರ ಪ್ರಧಾನಿಯವರ ಮೊದಲ ಭೇಟಿ ಇದಾಗಿದ್ದು, ಇದನ್ನು ಅವರು “ದೊಡ್ಡ ಯಶಸ್ಸು” ಎಂದು ಬಣ್ಣಿಸಿದರು, ಇದನ್ನು ಮಾ ಕಾಮಾಕ್ಯ ಮತ್ತು ಶ್ರೀಕೃಷ್ಣನಿಗೆ ಅರ್ಪಿಸಿದರು. “ಆಪರೇಷನ್ ಸಿಂಧೂರ್ ನಂತರ ನಿನ್ನೆ ಅಸ್ಸಾಂಗೆ ನನ್ನ ಮೊದಲ ಭೇಟಿಯಾಗಿತ್ತು. ಮಾ ಕಾಮಾಕ್ಯಳ ಆಶೀರ್ವಾದದೊಂದಿಗೆ, ಕಾರ್ಯಾಚರಣೆ ಯಶಸ್ವಿಯಾಯಿತು. ಇಂದು, ಈ ಪವಿತ್ರ ಭೂಮಿಯಲ್ಲಿ ದೈವಿಕ ಸಂಪರ್ಕವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು…

Read More

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಒಂದು ಸಿದ್ದಾಂತ. ಬೆವರಿನ‌ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.‌ ಪತ್ರಕರ್ತನಾಗಿ ಎರಡು ಕಣ್ಣುಗಳಿಂದ ಸಮಾಜವನ್ನು ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತದೆ ಎನ್ನುವ ಸಾಮಾಜಿಕ ಎಚ್ಚರವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ. ಒಂದು ಬಲಿಷ್ಠವಾದ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ನಾನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಲಿತೆ. ನಾನು ಮಾನ್ಯ ಮುಖ್ಯಮಂತ್ರಿಗಳ ನೆರಳಿಗೆ ಬಂದು ಒಂದು ಡಜನ್ ವರ್ಷಗಳೇ ಕಳೆದವು. ಈ ಅವಧಿಯಲ್ಲಿ ನಾನು ಗ್ರಹಿಸಿದ್ದು ಏನೆಂದರೆ,…

Read More

ಶಿವಮೊಗ್ಗ: ಕಮಿಷನ್ ದರದಲ್ಲಿ ಆದ ಹಿನ್ನೆಡೆ, ಪೌತಿ ಸದಸ್ಯರು ಹಾಗೂ ಸುಸ್ತಿಯಾಗಿ ದೀರ್ಘ ಕಾಲ ಸಂದ ಸಾಲದ ಮೇಲಿನ ಬಡ್ಡಿ ರಿಯಾಯ್ತಿ ಮೊದಲಾದ ಸವಾಲುಗಳ ಹೊರತಾಗಿಯೂ ಸಂಸ್ಥೆ ಹಿಂದಿನ ಸಾಲಿನಲ್ಲಿ 64.47 ಲಕ್ಷ ರೂ. ಲಾಭವನ್ನು ಸಂಪಾದಿಸಿದೆ ಎಂದು ಸಾಗರದ ತೋಟಗರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ. ದೇವಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಭದ್ರಕಾಳಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಈ ಹಿಂದೆ ಸಹಕಾರಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು ವಿಶ್ರಮಿಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆ ನಡೆದಿದೆ. ಹೀಗೆ ನಿರ್ಗಮಿಸಿದವರು ಸಂಸ್ಥೆಯ ಕಟ್ಟಡ ನಿಧಿಗೆ ತಮ್ಮದೇ ಆದ ದೇಣಿಗೆಯನ್ನೂ ನೀಡಿದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಇದೇ ಕಾರಣದಿಂದ ಈ ಬಾರಿ 8 ಜನ ಹೊಸ ನಿರ್ದೇಶಕರ ಜೊತೆ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ ಎಂದರು. ಸಂಸ್ಥೆ ಬರುವ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ…

Read More

ಮಂಡ್ಯ: ಜಿಲ್ಲೆಯಲ್ಲಿ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ನಡೆಸಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದರು. ಇಂತಹ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ದಸರಾ ದಸರಾ ಉದ್ಘಾಟರ ಬದಲಾವಣೆಗೆ ಹಿಂದೂ ಕಾರ್ಯಕರ್ತರ ಪಟ್ಟು ಹಿಡಿದ್ದಾರೆ. ಬಜರಂಗ ಸೇನೆಯಿಂದ ಚಾಮುಂಡಿ ಬೆಟ್ಟ ಚಲೋ ಕೈಗೊಳ್ಳಲಾಗಿತ್ತು. ಮಂಡ್ಯದಲ್ಲಿ ಬಜರಂಗಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ನೇತೃತ್ವದಲ್ಲಿ ಚಾಮುಂಡಿ ಬೆಟ್ಟ ಚಲೋ ನಡೆಸಲು ಮುಂದಾಗಿತ್ತು. ಲೇಖಕಿ ಬಾನು ಮುಷ್ತಾಕ ಆಯ್ಕೆಗೆ ವಿರೋಧ ವ್ಯಕ್ತವಾಗಿತ್ತು. ಮಂಡ್ಯದ ಶಕ್ತಿ ದೇವತೆ ಕಾಳೀಕಾಂಭ ದೇವಾಲಯದಿಂದ ತೆರಳಲು ಸಿದ್ದತೆ ನಡೆಸಲಾಗಿತ್ತು. ಚಾಮುಂಡಿ ಬೆಟ್ಟ ಚಲೋಗೆ ತೆರಳುತ್ತಿರುವ ಸುಮಾರು 50 ಕಾರುಗಳಲ್ಲಿ 300 ಜನರು ಹೊರಟಿದ್ದರು. ಭುವನೇಶ್ವರಿ ತಾಯಿಯನ್ನ ಮುಸ್ಲಿಂ ವಿರೋಧಿ ರೀತಿ ಮಾತನಾಡಿದ್ದಾರೆ. ಕನ್ನಡದ ಧ್ವಜದ ಬಗ್ಗೆ ಮಾತನಾಡಿರುವ ಮಾತು ಮತಾಂಧ ಮಾನಸಿಕತೆ ತೋರುತ್ತದೆ. ಅಂತಹ ವ್ಯಕ್ತಿ ಚಾಮುಂಡೇಶ್ವರಿಯ ಆರಾಧನೆ ಮಾಡಲು ಹೇಗೆ ಸಾಧ್ಯ. ರಾಜ್ಯ ಸರ್ಕಾರದ ಹಿಂದೂಗಳ ಭಾವನೆಗಳಿಗೆ ದಕ್ಕೆ…

Read More

ಬಳ್ಳಾರಿ: ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಮಗುವೊಂದು ಕಳ್ಳತನವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿಯೇ ಪರಿಗಣಿಸಿದಂತ ಪೊಲೀಸರು, ಒಂದೇ ದಿನದಲ್ಲಿ ಬೇಧಿಸಿ, ತಾಯಿಯ ಮಡಿಲಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯ ಬ್ರೂಸಪೇಟೆ ಠಾಣೆ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳ ಮಗು ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಬೇಧಿಸಿರುವಂತ ಪೊಲೀಸರು, ಕಳ್ಳತನ ನಡೆ ಕೇವಲ 12 ಗಂಟೆಯ ಒಳಗಾಗಿ ಮಗುವನ್ನು ಪತ್ತೆ ಹಚ್ಚಿ, ರಕ್ಷಿಸಿದ್ದಾರೆ. ಆ ಬಳಿಕ ಮಗುವನ್ನು ತಾಯಿಯ ಮಡಿಲು ಸೇರಿಸಿ್ದದಾರೆ. ಈ ಪ್ರಕರಣ ಸಂಬಂಧ ಆರೋಪಿಗಳಾದಂತ ಶಮೀಮ್(25), ಹೆಚ್.ಎಂ ಇಸ್ಮಾಯಿಲ್ ಸಾಬ್(65), ಭಾಷಾ (55) ಮತ್ತು ಬಸವರಾಜ ಮಹಾಂತಪ್ಪ (43) ಎಂಬುವರನ್ನು ಬಂಧಿಸಿದ್ದಾರೆ. ಬ್ರೂಸ್ ಪೇಟೆ ಠಾಣೆಯ ಪೊಲೀಸರ ಈ ಕಾರ್ಯವನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಶ್ಲಾಘಿಸಿದ್ದಾರೆ. https://kannadanewsnow.com/kannada/kpcc-in-full-swing-for-greater-bengaluru-authority-elections-dk-orders-formation-of-preparatory-committee/

Read More

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಭರ್ಜರಿ ತಯಾರಿ ನಡೆಸಿದೆ. ಇದಕ್ಕಾಗಿ ಬಂಗಳೂರು ಐದು ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವಂತ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು,  ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ, ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಬರುವ 5 ನಗರಪಾಲಿಕೆಗಳಲ್ಲಿ ಚುನಾವಣಾ ಪೂರ್ವತಯಾರಿ, ಪಕ್ಷ ಸಂಘಟನೆಗೆ ಸಂಬಂಧಪಟ್ಟ, ಇತರ ಪುಕ್ರಿಯೆಗಳನ್ನು ಪೂರ್ಣಗೊಳಿಸಿ ಪಕ್ಷವನ್ನು ಮುಂಬರುವ ನಗರಪಾಲಿಕೆ ಚುನಾವಣೆಗೆ ಸಜ್ಜುಗೊಳಿಸಲು “ಬೆಂಗಳೂರು 5 ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ” ರಚಿಸಲಾಗಿದೆ ಎಂದಿದ್ದಾರೆ. ಈ ಕೆಳಕಾಣಿಸಿದ ಸಮಿತಿಯ ಎಲ್ಲ ಸದಸ್ಯರುಗಳು ತಮಗೆ ನೀಡಲಾದ ಜವಾಬ್ದಾರಿಯನ್ನು ವಹಿಸಿಕೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 5 ಬೆಂಗಳೂರು ನಗರಪಾಲಿಕೆಗಳಿ ನಡೆಸಲು ಉದ್ದೇಶಿಸಲಾದ ಚುನಾವಣೆಗೆ ಸಂಬಂಧಪಟ್ಟಂತೆ ಬೆಂಗಳೂರು ನಗರ ವ್ಯಾಪ್ತಿಯ ಪಕ್ಷದ ಎಲ್ಲ…

Read More

ಹಾವೇರಿ: ರಾಜ್ಯದಲ್ಲಿ ಅನೇಕ ಮುಸ್ಲೀಮರು ಇನ್ನೂ ಗುಡಿಸಲಿನಲ್ಲಿದ್ದಾರೆ. ನೀರು, ಟಾಯ್ಲೆಟ್ ಇಲ್ಲ. ನಾವು ಮುಸ್ಲಿಮರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ ಎಂಬುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಾತಿಗಣತಿ ವಿಚಾರದಲ್ಲಿ ನಮ್ಮದೂ ಲೋಪವಿದೆ. ಜಾತಿಗಣತಿ ಮಾಡಿ 11 ವರ್ಷ ಆಗಿದೆ. ಹಾಗಾಗಿ ಹೊಸದಾಗಿ ಮಾಡ್ತಿದ್ದೇವೆ ಎಂದರು. ಆಯಾ ಜಾತಿಯವರಿಗೆ ಇನ್ನೊಂದು ಸಲ ಮನವರಿಕೆ ಮಾಡಿಕೊಡ್ತೇವೆ. ನಿಮ್ಮ ನಿಮ್ಮ ಜಾತಿ ಸರಿಯಾಗಿ ಬರೆಸಿ ಅಂತಾ ಮನವರಿಕೆ ಮಾಡುತ್ತೇವೆ ಎಂದರು. ಕಾಂಗ್ರೆಸ್ ನಿಂದ ಮುಸ್ಲಿಂ ತುಷ್ಠೀಕರಣ ಹೆಚ್ಚಾಗಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಸಂಸದ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ ಮುಸ್ಲೀಮರು ಇನ್ನೂ ಗುಡಿಸಲಿನಲ್ಲೇ ಇದ್ದಾರೆ. ನೀರು, ಟಾಯ್ಲೆಟ್ ಇಲ್ಲ. ನಾವು ಮುಸ್ಲೀಮರಿಗೆ ಬಹಳ ದೊಡ್ಡದಾಗಿ ಏನೂ ಮಾಡಿಲ್ಲ ಎಂದರು. ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥನೆ ಮಾಡಲು ಆಗಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

Read More

ನೇಪಾಳ ಪ್ರಧಾನಿ ಸುಶೀಲಾ ಕರ್ಕಿ ಜನರಲ್ ಝಡ್ ಪ್ರತಿಭಟನೆಯ ಸಂತ್ರಸ್ತರನ್ನು ಹುತಾತ್ಮರೆಂದು ಘೋಷಿಸಿದ್ದಾರೆ, ನೆರವು ಘೋಷಿಸಿದ್ದಾರೆ ಇತ್ತೀಚಿನ ಜನರಲ್ ಝಡ್ ಪ್ರತಿಭಟನೆಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಮತ್ತು ಪರಿಹಾರವನ್ನು ಪ್ರತಿಜ್ಞೆ ಮಾಡುವ ಮೂಲಕ ಸುಶೀಲಾ ಕರ್ಕಿ ಭಾನುವಾರ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕೃತವಾಗಿ ತಮ್ಮ ಪಾತ್ರಕ್ಕೆ ಕಾಲಿಟ್ಟರು. ಮೃತರನ್ನು ‘ಹುತಾತ್ಮರು’ ಎಂದು ಕರೆದ ಅವರು, ಸ್ಥಳೀಯ ವರದಿಗಳ ಪ್ರಕಾರ, ಪ್ರತಿ ಬಲಿಪಶುವಿನ ಕುಟುಂಬಕ್ಕೆ 1 ಮಿಲಿಯನ್ ರೂ (ರೂ. 10 ಲಕ್ಷ) ಆರ್ಥಿಕ ಸಹಾಯವನ್ನು ಘೋಷಿಸಿದರು. ಯುವ ನೇತೃತ್ವದ ಚಳುವಳಿಯಿಂದ ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡದ ನಂತರ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಕರ್ಕಿ ಅವರನ್ನು ಶುಕ್ರವಾರ ಅಧ್ಯಕ್ಷ ರಾಮಚಂದ್ರ ಪೌಡೆಲ್ ಪ್ರಮಾಣ ವಚನ ಸ್ವೀಕರಿಸಿದರು. ಎರಡು ದಿನಗಳ ನಂತರ ಅವರು ಲೈಂಚೌರ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗಂಭೀರ ಭೇಟಿ ನೀಡುವ ಮೂಲಕ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದರು, ಅಲ್ಲಿ ಅವರು ಸಿಂಘಾ ದರ್ಬಾರ್‌ಗೆ ಹೋಗುವ ಮೊದಲು ಸತ್ತವರಿಗೆ ಗೌರವ ಸಲ್ಲಿಸಿದರು.

Read More

ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಕಡಿವಾಣಕ್ಕೆ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ದೇಶದಲ್ಲೇ ಮೊದಲು ಎನ್ನುವಂತೆ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. 16,000ಕ್ಕೂ ಹೆಚ್ಚು ಸೈಬರ್ ಕೇಸ್ ಗಳು ಬಾಕಿ ಇವೆ. ಹೀಗಾಗಿ ಸೈಬರ್ ಅಪರಾಧ ತಡೆಗೆ ಹೈಕೋರ್ಟ್ ಸೂಚಿಸಿತ್ತು. ಹೀಗಾಗಿ ಸೈಬರ್ ವೈಚನೆ ಕಡಿವಾಣಕ್ಕೆ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ದೇಶದಲ್ಲೇ ಮೊದಲು ಎನ್ನುವಂತೆ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದೆ. ಈ ಸೈಬರ್ ಕಮಾಂಡ್ ಸೆಂಟರ್ ನಲ್ಲಿ ನಾಲ್ಕು ವಿಂಗ್ ಗಳನ್ನು ರಚನೆ ಮಾಡಲಾಗಿದೆ. ಮೊದಲೆಯ ವಿಂಗ್ ಸೈಬರ್ ಕ್ರೈಂ ವಿಂಗ್ ಆಗಿದೆ. ಇದು ಸೈಬರ್ ಅಪರಾಧಗಳನ್ನು ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತದೆ. ಇನ್ನೂ 2ನೇ ಕಮಾಂಡ್ ಸೆಂಟರ್ ಸೈಬರ್ ಸೆಕ್ಯೂರಿಟಿ ವಿಂಗ್, ಬ್ಯಾಂಕ್ ಖಾತೆ, ಸಾಮಜಿಕ ಜಾಲತಾಣ, ಸಾಫ್ಟ್ ವೇರ್ ಹ್ಯಾಕ್ ಮಾಡುವವರನ್ನ ಪತ್ತೆ ಮಾಡುತ್ತೆ. ಮೂರನೇ ಕಮಾಂಡ್ ಸೆಂಟರ್ ವಿಂಗ್ ಐಡಿಟಿಯು ವಿಂಗ್ ಆಗಿದೆ. ಇದು ಸೈಬರ್ ಅಪರಾಧಗಳ ಸ್ಥಳ…

Read More

ಬೆಂಗಳೂರು: ಮಂಡ್ಯದ ಅಬಕಾರಿ ಕಚೇರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ, ಲೋಕಾಯುಕ್ತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ದೂರು ಕೊಟ್ಟಿದೆ. ಮಂಡ್ಯ ಜಿಲ್ಲೆಯ ಮಂಡ್ಯ ನಗರದ ಕೇಂದ್ರಸ್ಥಾನದಲ್ಲಿರುವ ಅಬಕಾರಿ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಅಬಕಾರಿ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಸಿಎಂ ಮತ್ತು ಇಲಾಖೆ ಆಯುಕ್ತ ಹೆಸರಿನಲ್ಲಿ ಅಧಿಕಾರಿಗಳು, ಮದ್ಯದಂಗಡಿಗಳಲ್ಲಿ ಹಾಫ್ತಾ ವಸೂಲಿ ಮಾಡುತ್ತಿದ್ದಾರೆ. ಹೊಸದಾಗಿ ಹೋಟೆಲ್ ಮತ್ತು ವಸತಿ ಗೃಹ(ಸಿಎಲ್-7) ಪರವಾನಗಿ ಮಂಜೂರಾತಿ ಕೊಡಲು ಜಾತಿ ನೋಡಿ ಲಂಚ ನಿಗದಿ ಮಾಡುತ್ತಿದ್ದಾರೆ. ಸಿಎಲ್7 ಲೈಸೆನ್ಸ್ ನೀಡಲು 60 ಲಕ್ಷ ರೂ.ಬೇಡಿಕೆ ಇಟ್ಟಿರುವ ಮಂಡ್ಯ ಅಬಕಾರಿ ಉಪ ಆಯುಕ್ತ ವಿರುದ್ಧ ಈಗಾಗಲೇ ಕೆಲವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ಕೊಟ್ಟಿರುವ ದೂರಿನಲ್ಲಿ ಸಂಘದ ಅಧ್ಯಕ್ಷ ಇ.ಎನ್.ಕೃಷ್ಣೇಗೌಡ ಉಲ್ಲೇಖಿಸಿದ್ದಾರೆ. ನಾಗಶಯನ ಒಬ್ಬ ಭ್ರಷ್ಟ್ರ ಅಧಿಕಾರಿ ಆಗಿದ್ದಾರೆ. ಹಿಂದೆ ಚಿತ್ರದುರ್ಗದ ಅಬಕಾರಿ ಉಪ…

Read More