Author: kannadanewsnow09

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆವಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 10.12.2025 (ಬುಧವಾರ) ರಂದು ಬೆಳಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆ ಬೆಂಗಳೂರಿನ ಐಬೆಕ್ಸ್ ಫ್ಯಾಕ್ಟರಿ, ರಾವುಗೋಡ್ಲು, ನೆಟ್ಟಿಗೆರೆ, ಗುಂಡಾಂಜನೇಯ ಟೆರನ್ಪಲ್, ಗಿರಿಗೌಡನದೊಡ್ಡಿ, ಮುತ್ತುರಾಯನಪುರ, ಗೊಟ್ಟಿಗೆಹಳ್ಳಿ, ಇನೋರದೊಡ್ಡಿ, ಸೋನಾರೆದೊಡ್ಡಿ, ಗಾಂಧಿನಗರ, ಪಟ್ಟರೆಡ್ಡಿಪಾಳ್ಯ, ನೌಕಲ್ಪಾಳ್ಯ, ಗುಡಿಪಾಳ್ಯ, ನಾಗನವಕನಹಳ್ಳಿ, ಮಲ್ಲಿಪಾಳ್ಯ, ತಾಸುದೇವರಪಾಳ್ಯ, ತಾಸುದೇವರಪಾಳ್ಯ, ವಾಸುದೇವರಪಾಳ್ಯ, ಗೊಲ್ಲರಪಾಳ್ಯದಲ್ಲಿ ಕರೆಂಟ್ ಇರೋದಿಲ್ಲ. ಇದಲ್ಲದೇ ನಲ್ಲಕನದೊಡ್ಡಿ. CRPF ಕ್ಯಾಂಪ್ ಗೇಟ್ 1&82, ಎಡಿಫೈ ಸ್ಕೂಲ್ ಸೋಮನಹಳ್ಳಿ, ಕೆರೆಚೂದರ್ನಹಳ್ಳಿ, ಸಾಧನಪಾಳ್ಯ. ಹೊಸದೊಡ್ಡಿ, ನೆಲಗುಳಿ, ಲಿಂಗಪ್ಪರನದೊಡ್ಡಿ, ಯೋಗವನ ಬೇಟ, ಬೋಳಾರೆ, ವೀರಸಾಂದ್ರ, ಜಟ್ಟಿಪಾಳ್ಯ, ಗೊಲ್ಲರಪಾಳ್ಯ, 1912 ತಿಟ್ಟಹಳ್ಳಿ. ಗಂಗಕನಗೊಡ್ಡಿ, ಬೋಕಿಪುರ, ತೋಕತಿಮ್ಮನದೊಡ್ಡಿ, ಏಡುಮಾಡು, ಅವಸರಲ ಫ್ಯಾಕ್ಟರ್, ರಾವರದೊಡ್ಡಿ, ತಾತಗುಪ್ಪೆ, ಗಡಿಪಾಳ್ಯ, ಮುಕ್ಕೋಡ್ಲು, ಮುನಿನಗರ, ಕಗ್ಗಲೀಪುರ ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

Read More

ದಾವಣಗೆರೆ: ಬಳಕೆಯಾಗದೆ ಉಳಿದ ಸಿಎಸ್ ಆರ್ ನಿಧಿಗಳ ಕುರಿತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾಹಿತಿ ಕೇಳಿದ್ದಾರೆ ಹಾಗೂ ಅವರ ಪ್ರಶ್ನೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಉತ್ತರ ನೀಡಿದೆ. ಕಳೆದ 2022, 2023 ಮತ್ತು 2024 ರಲ್ಲಿ ದೇಶದಲ್ಲಿ ಬಳಕೆಯಾಗದೆ ಉಳಿದ ಸಿಎಸ್ಆರ್ ನಿಧಿಗಳು ಹಾಗೂ ಬಳಕೆಯಾಗದ ಸಿಎಸ್ಆರ್ ನಿಧಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ, ಬಳಕೆಯಾಗದ ಸಿಎಸ್ಆರ್ ಖಾತೆಗೆ ವರ್ಗಾಯಿಸಲಾದ ಖರ್ಚು ಮಾಡದ ಸಿಎಸ್ಆರ್ ನಿಧಿಗಳ ಮೊತ್ತದ ವರ್ಷವಾರು ವಿವರ ಹಾಗೂ 2020 ರಿಂದ ಸಿಎಸ್ಆರ್ ವೆಚ್ಚದ ವಿವರಗಳು, ಸಿಎಸ್ಆರ್ ಕೊಡುಗೆಗಳ ಮೂಲಕ ಬೆಂಬಲಿತ ಸರ್ಕಾರಿ ಯೋಜನೆಗಳು ಮತ್ತು ದೇಶಾದ್ಯಂತ ರಾಜ್ಯವಾರು ನಿಧಿಯ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಸದರೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ. ಈ‌ ಬಗ್ಗೆ ಕೇಂದ್ರ ಸಚಿವಾಲಯ ಉತ್ತರ ನೀಡಿದ್ದು ಕಂಪನಿಗಳ ಕಾಯ್ದೆ, 2013ರ ಪ್ರಕಾರ ನಡೆಯುತ್ತಿರುವ ಯೋಜನೆಗಳ ಖರ್ಚು ಆಗದ ಸಿಎಸ್ ಆರ್ ಮೊತ್ತವನ್ನು 30…

Read More

ಬೆಳಗಾವಿ ಸುವರ್ಣ ವಿಧಾನಸೌಧ : ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಸದನಕ್ಕೆ ಈ ಮಾಹಿತಿ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿದ್ದು, 118.5 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದೆ. ಆದರೆ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದಾಗಿ ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, 2023 ರಲ್ಲಿ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದಾಗ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ನಮ್ಮ ಸರ್ಕಾರ…

Read More

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು, ಡಿ.10ರಿಂದ 19ರವರೆಗೆ ತಮ್ಮ ಮೂಲ ದಾಖಲೆಗಳನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸಲ್ಲಿಸಲು ಕೋರಲಾಗಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಛಾಯ್ಸ್- 2 ಮತ್ತು 3 ಅನ್ನು ಆಯ್ಕೆ‌ ಮಾಡಿರುವ ಅಭ್ಯರ್ಥಿಗಳು ಡಿ.10ರಿಂದ 12ರವರೆಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದುವರೆಗೂ ಸೀಟು ಹಂಚಿಕೆಯಾಗದಿರುವವರು ಡಿ.13ರಿಂದ 19ರವರೆಗೆ ದಾಖಲೆ ಸಲ್ಲಿಸಬೇಕು. ಪಿಜಿ‌ ನೀಟ್ Rank ಪ್ರಕಾರ ವೇಳಾಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ಆ ಪ್ರಕಾರ ಬಂದು ದಾಖಲೆ ಸಲ್ಲಿಸಬೇಕು. ದಾಖಲೆ ಸಲ್ಲಿಸಿದವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದರು. ಹೆಚ್ಚಿನ ವಿವರಗಳಿಗೆ ವೆಬ್‌ ಸೈಟ್ ನೋಡಲು ಕೋರಲಾಗಿದೆ. ಜಲಮಂಡಲಿ ಪರೀಕ್ಷಾ ದಿನಾಂಕ ಬದಲು ಬೆಂಗಳೂರು ಜಲಮಂಡಲಿಯ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮ್ಯಾಕಾನಿಕಲ್ ವಿಭಾಗದ ಕಿರಿಯ ಎಂಜಿನಿಯರ್ ಹುದ್ದೆಗಳ‌‌ ನೇಮಕಾತಿಗೆ ಡಿ.20ರ ಬದಲಿಗೆ ಡಿ. 22ರಂದು ಲಿಖಿತ…

Read More

ಬೆಳಗಾವಿ ಸುವರ್ಣ ವಿಧಾನಸೌಧ : ರಾಜ್ಯದಲ್ಲಿ ಒಟ್ಟು 98 ಸಕ್ಕರೆ ಕಾರ್ಖಾನೆಗಳು ಅಸ್ತಿತ್ವದಲ್ಲಿದ್ದು, ಇವುಗಳಲ್ಲಿ ಪ್ರಸ್ತುತ 81 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಅಲ್ಲದೆ, ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಯಾವುದೇ ರೀತಿಯ ಕಬ್ಬಿನ ದರ ಬಾಕಿ ಉಳಿದಿಲ್ಲ. ಇನ್ನು 2024-25ನೇ ಸಾಲಿನಲ್ಲಿ 521.61 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್‌ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ (2022-23, 2023-24 ಮತ್ತು 2024-25ರ) ಕಾರ್ಖಾನೆಗಳಿಗೆ ಸರಬರಾಜು ಮಾಡಿದ ಕಬ್ಬಿನ ಸಂಪೂರ್ಣ ಮೊತ್ತವನ್ನು ರೈತರಿಗೆ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. 3 ವರ್ಷಗಳಲ್ಲಿ ಕಬ್ಬು ಅರೆದಿರುವ ವಿವರ ಕಾರ್ಖಾನೆಗಳಲ್ಲಿ ಅರೆಯಲಾದ ಕಬ್ಬಿನ ಪ್ರಮಾಣ: ಲಕ್ಷ ಮೆಟ್ರಿಕ್ ಟನ್‌ಗಳಲ್ಲಿ ವಿವರ • 2022-23: ಒಟ್ಟು 603.55 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ – ಇದರಲ್ಲಿ ಪಾವತಿಸಿದ…

Read More

ನವದೆಹಲಿ: 8ನೇ ವೇತನ ಆಯೋಗದ ಘೋಷಣೆಯ ನಂತರ, ಹೊಸ ವೇತನ ಸಮಿತಿಯ ಶಿಫಾರಸುಗಳು ಯಾವಾಗ ಜಾರಿಗೆ ಬರುತ್ತವೆ ಮತ್ತು ಎಷ್ಟು ಫಲಾನುಭವಿಗಳು ಇದರ ವ್ಯಾಪ್ತಿಗೆ ಬರುತ್ತಾರೆ ಎಂದು ಹಲವರು ಕಾಯುತ್ತಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 69 ಲಕ್ಷ ಪಿಂಚಣಿದಾರರು 8ನೇ ಕೇಂದ್ರ ವೇತನ ಆಯೋಗದ ವ್ಯಾಪ್ತಿಗೆ ಬರುತ್ತಾರೆ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ. ಆದಾಗ್ಯೂ, ಅದರ ಅನುಷ್ಠಾನ ಮತ್ತು ಅದಕ್ಕೆ ಹೇಗೆ ಹಣಕಾಸು ಒದಗಿಸಲಾಗುತ್ತದೆ ಎಂಬುದರ ಕುರಿತು ನಿರ್ಧಾರಗಳನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. 8ನೇ ವೇತನ ಆಯೋಗದ ಅನುಷ್ಠಾನ 8ನೇ ವೇತನ ಆಯೋಗದ ಅನುಷ್ಠಾನದ ಕುರಿತು ನಕ್ಷತ್ರ ಹಾಕಿದ ಪ್ರಶ್ನೆಗೆ ಉತ್ತರಿಸುತ್ತಾ, ಹಣಕಾಸು ಖಾತೆಯ ರಾಜ್ಯ ಸಚಿವ (MoS) ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಆಯೋಗವನ್ನು ಈಗಾಗಲೇ ರಚಿಸಲಾಗಿದೆ ಮತ್ತು ಅದರ ಉಲ್ಲೇಖ ನಿಯಮಗಳನ್ನು (ToR) ನವೆಂಬರ್ 3, 2025 ರಂದು ಹಣಕಾಸು ಸಚಿವಾಲಯದ ನಿರ್ಣಯದ ಮೂಲಕ ತಿಳಿಸಲಾಗಿದೆ ಎಂದು ಹೇಳಿದರು. 8ನೇ ಸಿಪಿಸಿ ಅನುಷ್ಠಾನದ…

Read More

ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ, ದೇಶದ ಹವಾಮಾನ ಸಂಸ್ಥೆಯು ಭಾರಿ ಭೂಕಂಪ ಸಂಭವಿಸಬಹುದು ಎಂದು ಅಪರೂಪದ ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಯನ್ನು NHK ಜಪಾನ್ ಮಂಗಳವಾರ ವರದಿ ಮಾಡಿದೆ. ಇದಕ್ಕೂ ಮೊದಲು, ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವಾರು ಪ್ರದೇಶಗಳಲ್ಲಿ ಪ್ರಬಲ ಕಂಪನಗಳು ಸಂಭವಿಸಿವೆ. ಇದರ ತೀವ್ರತೆಯು ಪೆಸಿಫಿಕ್ ಕರಾವಳಿಯ ಕೆಲವು ಭಾಗಗಳಲ್ಲಿ ಸುನಾಮಿ ಅಲೆಗಳನ್ನು ಉಂಟುಮಾಡಿದೆ. ಜಪಾನ್‌ನ ಹವಾಮಾನ ಸಂಸ್ಥೆಯ ಪ್ರಕಾರ, ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿ ರಾತ್ರಿ 11:15 ಕ್ಕೆ ಭೂಕಂಪ ಸಂಭವಿಸಿದೆ. ಇದನ್ನು ಮೊದಲು 7.6 ಎಂದು ಅಳೆಯಲಾಯಿತು, ಆದರೆ ನಂತರ 7.5 ಕ್ಕೆ ನವೀಕರಿಸಲಾಗಿದೆ. ಕನಿಷ್ಠ 30 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ತೀವ್ರ ಕಂಪನದ ಸಮಯದಲ್ಲಿ ವಸ್ತುಗಳು ಕಪಾಟುಗಳು ಮತ್ತು ಗೋಡೆಗಳಿಂದ ಬಿದ್ದ ನಂತರ ಹಲವಾರು ಅಪಘಾತಗಳು ವರದಿಯಾಗಿವೆ. “ಹಾನಿಯನ್ನು ಅರ್ಥಮಾಡಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಪ್ರಧಾನಿ…

Read More

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು `ಶಾಶ್ವತ ವಿಶೇಷ ಕೃಷಿ ವಲಯ’ವೆಂದು ಸರಕಾರ ಘೋಷಿಸಿದೆ. ಇದರಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ಈ ಕುರಿತು ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಹೇಳಿದ್ದಾರೆ. ಈ ಸಂಬಂಧವಾಗಿ ಕೆಲವು ಕಡೆಗಳಲ್ಲಿ, ರೈತರ ಜಮೀನು ಮಾರಾಟದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಎನ್ನುವಂತೆ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, `ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಸರಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹೀಗೆ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬುದು ಸುಳ್ಳು. ಸರ್ಕಾರದ ಉದ್ದೇಶ ಈ ಕೃಷಿ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡುವುದನ್ನು ಹಾಗೂ ರೈತರ…

Read More

ಬೆಳಗಾವಿ : “ರಾಜ್ಯಕ್ಕೆ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು. ಬೆಳಗಾವಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಿದಾಗ “ಕಬ್ಬು, ಮೆಕ್ಕೆಜೋಳ, ಸಕ್ಕರೆ, ಎಥನಾಲ್ ಸೇರಿದಂತೆ ಪ್ರತಿ ವಿಚಾರದಲ್ಲಿ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ಸಹಾಯ ಮಾಡಲು ಮಹದಾಯಿ ಯೋಜನೆ ಬಗ್ಗೆ ತೀರ್ಮಾನ ಮಾಡಲು ಇವರೆಗೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮೇಕೆದಾಟು ವಿಚಾರದಲ್ಲಿ ನಮ್ಮ ಹೋರಾಟದಿಂದ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದು, ಒಂದೇ ದಿನದಲ್ಲಿ ಅನುಮತಿ ಕೊಡಿಸುತ್ತೇವೆ ಎಂದು ಹೇಳಿದ್ದವರು ಇನ್ನೂ ಕೊಡಿಸಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ ₹5,400 ಹಣವನ್ನು ಇದುವರೆಗೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ…

Read More

ಮುಂಬೈ,: ಅನಂತ್ ಅಂಬಾನಿ ಅವರು ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಆರೈಕೆ ವಿಚಾರವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಆರಂಭಿಸಿದ ವಂತಾರ ಉಪಕ್ರಮಕ್ಕಾಗಿ ಜಾಗತಿಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಾನವೀಯ ದಯಾಪರತೆ ವ್ಯಕ್ತಿಗಳನ್ನು ಗುರುತಿಸಿ, ನೀಡುವಂಥ ಪ್ರತಿಷ್ಠಿತ ಗೌರವ ಇದಾಗಿದೆ. ಗ್ಲೋಬಲ್ ಹ್ಯುಮೇನ್ ಸೊಸೈಟಿ ನೀಡುವಂಥ ‘ಗ್ಲೋಬಲ್ ಹ್ಯುಮಾನಿಟೇರಿಯನ್ ಅವಾರ್ಡ್ ಫಾರ್ ಅನಿಮಲ್ ವೆಲ್ಫೇರ್’ ಪ್ರಶಸ್ತಿಯು ಅನಂತ್ ಅಂಬಾನಿ ಅವರಿಗೆ ಸಂದಿದೆ. ಅಮೆರಿಕದಲ್ಲಿ ಇರುವಂಥ ಅತ್ಯಂತ ಹಳೆಯ ರಾಷ್ಟ್ರೀಯ ಮಾನವೀಯ ದಯಾಪರತೆ ಸಂಘಟನೆಯಾಗಿದ್ದು, ಆ ಅಮೆರಿಕನ್ ಹ್ಯುಮೇನ್ ಸೊಸೈಟಿಯ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಗ್ಲೋಬಲ್ ಹ್ಯುಮೇನ್ ಸೊಸೈಟಿ ಸೇವೆ ಸಲ್ಲಿಸುತ್ತಿದೆ. ಅಂದ ಹಾಗೆ ಇದು ಪ್ರಾಣಿಗಳ ಹಿತರಕ್ಷಣೆಯನ್ನು ದೃಢೀಕರಿಸುವ ವಿಶ್ವದ ಅತಿದೊಡ್ಡ ಸಂಘಟನೆ ಸಹ ಹೌದು. ವನ್ಯಪ್ರಾಣಿಗಳ ಸಂರಕ್ಷಣೆಗೆ ಅಂತಲೇ ಮೀಸಲಾದ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ಹಲವು ರೀತಿಯಲ್ಲಿ ಐತಿಹಾಸಿಕ ಎನಿಸಿಕೊಂಡಿತು. ಏಕೆಂದರೆ, ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಏಷ್ಯನ್…

Read More