Author: kannadanewsnow09

ಲಕ್ನೋ: ಉತ್ತರ ಪ್ರದೇಶ ಸರ್ಕಾರವು ನವರಾತ್ರಿಯ ಕೊನೆಯ ದಿನವಾದ ಏಪ್ರಿಲ್ 6 ರವರೆಗೆ ಧಾರ್ಮಿಕ ಸ್ಥಳಗಳಿಂದ 500 ಮೀಟರ್ ಒಳಗೆ ಅಕ್ರಮ ಕಸಾಯಿಖಾನೆಗಳು ಮತ್ತು ಮಾಂಸ ಮಾರಾಟದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಿದೆ. 2014 ಮತ್ತು 2017 ರಲ್ಲಿ ನಿಷೇಧ ಆದೇಶಗಳನ್ನು ಹೊರಡಿಸಲಾಗಿತ್ತು. ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಅವರು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಪುರಸಭೆ ಆಯುಕ್ತರಿಗೆ ಆದೇಶದ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ. ಈ ಕಾರ್ಯಕ್ಕಾಗಿ ಜಿಲ್ಲಾ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಮಧ್ಯಪ್ರದೇಶದ ದೇವಾಲಯ ಪಟ್ಟಣವು ನವರಾತ್ರಿಯ ಸಮಯದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸುತ್ತದೆ ಚೈತ್ರ ನವರಾತ್ರಿಯ ಸಮಯದಲ್ಲಿ ದೇವಾಲಯ ಪಟ್ಟಣವಾದ ಮೈಹಾರ್‌ನಲ್ಲಿ ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆಗಳ ಮಾರಾಟವನ್ನು ನಿಷೇಧಿಸಲಾಗಿದೆ – ಮಾರ್ಚ್ 30 ರಿಂದ ಏಪ್ರಿಲ್ 7 ರವರೆಗೆ. ಭೋಪಾಲ್‌ನಿಂದ 470 ಕಿ.ಮೀ ದೂರದಲ್ಲಿರುವ ಮೈಹಾರ್, ಶಕ್ತಿಪೀಠವಾದ ಮಾ ಶಾರದಾ ಮಂದಿರದ ನೆಲೆಯಾಗಿದೆ. ಇದನ್ನು…

Read More

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಾರೆ. ಅವರ ವಿರುದ್ಧದ ತನಿಖೆಗೆ ನೇಮಿಸಿದ್ದಂತ ಗೌರವ್ ಗುಪ್ತ ಸಮಿತಿಯು ತನ್ಮ ವರದಿಯನ್ನು ಸಲ್ಲಿಸಿದೆ. ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಗೌರವ್ ಗುಪ್ತಾ ನೇತೃತ್ವದ ಸಮಿತಿಯು ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ತನಿಖಾ ವರದಿಯನ್ನು ಸಲ್ಲಿಸಿದೆ. ಸುಮಾರು 230 ಪುಟಗಳ ಪ್ರಕರಣದ ವರದಿಯಲ್ಲಿ ನಟಿ ರನ್ಯಾ ರಾವ್ ಅವರಿಗೆ ಶಿಷ್ಟಾಚಾರ ಸೌಲಭ್ಯ ನೀಡಲು ಡಿಜಿ ರಾಮಚಂದ್ರ ರಾವ್ ಸೂಚಿಸಿಲ್ಲ. ಆದರೇ ರನ್ಯಾ ರಾವ್ ಪ್ರೋಟೋಕಾಲ್ ಬಳಕೆ ಮಾಡ್ತಿದ್ದದ್ದು ಗೊತ್ತಿತ್ತು ಎಂದು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ 230 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದ್ದು, ಕೇಸ್ ನಲ್ಲಿ ಡಿಜಿ ರಾಮಚಂದ್ರ ರಾವ್ ಪಾತ್ರ ಒಳಗೊಂಡಿರೋದನ್ನು ಉಲ್ಲೇಖಿಸಲಾಗಿದೆ. https://kannadanewsnow.com/kannada/earthquake-of-magnitude-5-1-on-richter-scale-hits-myanmar/ https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/

Read More

ಮ್ಯಾನ್ಮಾರ್: ಕೆಲ ದಿನಗಳ ಹಿಂದಷ್ಟೇ 7.7 ತೀವ್ರತೆಯಲ್ಲಿ ಮ್ಯಾನ್ಮಾರ್ ನಲ್ಲಿ ಭೂಕಂಪನ ಉಂಟಾಗಿತ್ತು. ಈ ಪ್ರಬಲ ಭೂಕಂಪನದಿಂದ 1644 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಮ್ಯಾನ್ಮಾರ್ ಸರ್ಕಾರವು 7.7 ತೀವ್ರತೆಯಲ್ಲಿ ಭೂಕಂಪನ ಉಂಟಾದ ಬಳಿಕ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಜೊತೆಗೆ ಮತ್ತೆ ಭೂಕಂಪನ ಆಗುವಂತ ಮುನ್ಸೂಚನೆಯನ್ನು ನೀಡಲಾಗಿತ್ತು. ಈಗ ಅದರಂತೆಯೇ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಹೀಗಾಗಿ ಭೂಮಿ ಕಂಪಿಸಿದ್ದರಿಂದ ಮ್ಯಾನ್ಮಾರ್ ಜನರು ಬೆಚ್ಚಿ ಬೀಳುವಂತೆ ಆಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಭೂಕಂಪದ ತೀವ್ರತೆಯನ್ನು 5.1 ಎಂದು ದಾಖಲಿಸಿದೆ. ಏತನ್ಮಧ್ಯೆ, ಭೂಕಂಪವು 4.6 ತೀವ್ರತೆಯಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಅದೇ ಸಮಯದಲ್ಲಿ, ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ರಿಕ್ಟರ್ ಮಾಪಕವು 5.2 ರಷ್ಟಿತ್ತು ಎಂದು ಹೇಳಿದೆ. ಭಾನುವಾರ ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಮ್ಯಾನ್ಮಾರ್ನ ಮಾಂಡಲೆಯಲ್ಲಿ ಭೂಕಂಪ ಸಂಭವಿಸಿದೆ. “ಎಂನ ಇಕ್ಯೂ:…

Read More

ಬಾಗಲಕೋಟೆ: ಕೋಡಿಮಠ ಶ್ರೀಗಳ ಭವಿಷ್ಯ ನುಡಿಯಂತೆ, ಮತ್ತೊಂದು ಶಾಕಿಂಗ್ ಭವಿಷ್ಯವನ್ನು ಬೀಳಗಿಯ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗಿದೆ. ವಿಶ್ವದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಭೂಕಂಪನವಾಗಲಿದೆ. ಮುಂಬರುವಂತ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗವಿದೆ ಅಂತ ಶಾಕಿಂಗ್ ಭವಿಷ್ಯ ನುಡಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಯುಗಾದಿ ಪಾಡ್ಯದ ದಿನದ ವಿಶೇಷ ಭವಿಷ್ಯ ಇದಾಗಿದ್ದು, ನಿಜವಾಗುವುದೆಂದೇ ನಂಬಿದ್ದಾರೆ. ಇಂದು ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ವಿಶೇಷ ಭವಿಷ್ಯವನ್ನು ನುಡಿಯಲಾಗಿದ್ದು, ವಿಶ್ವದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಭೂಕಂಪನಕ್ಕೆ ತತ್ತರಿಸಿ ಹೋಗಲಿದೆ ಎಂಬುದಾಗಿ ಹೇಳಲಾಗಿದೆ. ಅಲ್ಲದೇ ರಾಜಕೀಯ ವ್ಯಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಕಂಟಕ ಕಾದಿದೆ ಎಂಬುದಾಗಿ ಭವಿಷ್ಯ ನುಡಿಯಲಾಗಿದೆ. ಅಂದಹಾಗೇ ಮಣ್ಣನಿಂದ ಒಂದು ಕಟ್ಟೆ ನಿರ್ಮಿಸಿ, ಅದಕ್ಕೆ ಜಕನೇರನಕಟ್ಟೆ ಎಂಬುದಾಗಿ ಜನರು ಬೀಳಗಿಯಲ್ಲಿ ಕರೆಯುತ್ತಾರೆ. ಈ ಕಟ್ಟೆಯ ಮೇಲೆ ಬಸವಣ್ಣನ ಮಣ್ಣಿನ ಮೂರ್ತಿ ಮಾಡಿ, ಬಿಂದಿಗೆ ನೀರು ಇರಿಸಿ ಪೂಜೆ ಮಾಡಿ, ತೆರಳುತ್ತಾರೆ. ರಾತ್ರಿ ಅಲ್ಲಿ…

Read More

ಹಾಸನ: ಜಿಲ್ಲೆಯಲ್ಲಿ ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೋಡು ತಾಲ್ಲೂಕಿನ ಕೊಣನೂರಿನಲ್ಲಿ ಇಂದು ಈ ಘಟನೆ ನಡೆದಿದೆ. ಪಟೇಲ್ ರಾಮೇಗೌಡ ಎಂಬುವರ ಮನೆಯಲ್ಲಿ ತಿಥಿ ಕಾರ್ಯದ ನಿಮಿತ್ತ ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಿಗಿದ್ದಾಗ ಈ ದುರ್ಘಟನೆ ನಡೆದಿದೆ. ಸಿಲಿಂಡರ್ ಸ್ಟೋಟದಲ್ಲಿ ಮೀನಾಕ್ಷಿ, ಮಂಗಳಾ, ರಾಧಾ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಸ್ಪೋಟದ ತೀವ್ರತೆಯಿಂದಾಗಿ ಮನೆಯಲ್ಲಿದ್ದಂತ ವಸ್ತುಗಳಿಗೂ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಈ ಸಂಬಂಧ ಅರಕಲಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/

Read More

ನವದೆಹಲಿ: ಒಡಿಶಾದಲ್ಲಿ ಬೆಂಗಳೂರು ಕಾಮಾಕ್ಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ. ರೈಲು ಸಂಖ್ಯೆ 12551 ಬೆಂಗಳೂರು-ಕಾಮಾಕ್ಯ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ 11 ಬೋಗಿಗಳು ಪೂರ್ವ ಕರಾವಳಿ ರೈಲ್ವೆಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದ ನೆರ್ಗುಂಡಿ ನಿಲ್ದಾಣದ ಬಳಿ 30.03.2025 ರಂದು (ಭಾನುವಾರ) ಬೆಳಿಗ್ಗೆ 11:54 ರ ಸುಮಾರಿಗೆ ಹಳಿ ತಪ್ಪಿವೆ ಎಂಬುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪೂರ್ವ ಕರಾವಳಿ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಖುರ್ದಾ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಾಧಿತ ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ವಿಶೇಷ ರೈಲು ಯೋಜಿಸಲಾಗಿದೆ ಎಂದಿದೆ. ಸಹಾಯವಾಣಿ ಸಂಖ್ಯೆ…

Read More

ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಆರೂವರೆ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿಯ ಖಾನಾಪುರದಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯೇ ನಡೆದಿದೆ. ಖಾನಾಪುರದ ವಿದ್ಯಾನಗರದಲ್ಲಿ ನೂರಾರು ಜನರು ಆರೂವರೆ ಎಕರೆ ಜಾಗಕ್ಕೆ ಜಗಳ ಆಡಿದ್ದಾರೆ. ಜಾಗ ನಮ್ಮದೆಂದು ಸ್ಥಳೀಯರು ಹಾಗೂ ಸೆರಾಮಿಕ್ಸ್ ಸಿಬ್ಬಂದಿಯ ನಡುವೆ ಉಂಟಾಗದಂತ ಜಗಳ, ತಾರಕಕ್ಕೇರಿದಾಗ ಮಾರಾಮಾರಿಯೇ ನಡೆದಿದೆ. ಶಾಹುನಗರದ ನಿವಾಸಿಗಳು ಹಾಗೂ ಸೆರಾಮಿಕ್ಸ್ ಸಿಬ್ಬಂದಿಗಳ ನಡುವೆ ಉಂಟಾಗಂತ ಜಗಳದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಸೆರಾಮಿಕ್ಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಥಳದಲ್ಲೇ ಖಾನಾಪುರ ಠಾಣೆಯ ಪೊಲೀಸರು ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ. https://kannadanewsnow.com/kannada/one-passenger-killed-several-injured-in-another-train-accident-in-india/ https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/

Read More

ಒಡಿಶಾ: ಇಲ್ಲಿನ ಚೌಡಾವಾರ್ ಬಳಿಯಲ್ಲಿ ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದಂತ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಒಡಿಶಾದಲ್ಲಿನ ಚೌಡಾವಾರ್ ನಲ್ಲಿ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ 11 ಬೋಗಿಗಳು ಅಪಘಾತಗೊಂಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಗೆ ಕಾಮಾಕ್ಯ ರೈಲು ತೆರಳುತ್ತಿತ್ತು. ಇಂತಹ ರೈಲು ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯಂತೆ 11 ಕೋಚ್ ಗಳು ಹಳಿ ತಪ್ಪಿರುವ ಮಾಹಿತಿ ಇದೆ. ಈ ರೈಲು ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Read More

ಬ್ಯಾಂಕಾಕ್: ಮ್ಯಾನ್ಮಾರ್ ಅಕ್ಷರಶಹಃ ಸ್ಮಶಾನವಾಗಿದೆ. ಪ್ರಬಲ ಭೂಕಂಪನದಿಂದಾಗಿ ಮ್ಯಾನ್ಮಾರ್ ನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 1644ಕ್ಕೆ ಏರಿಕೆಯಾಗಿದೆ. ಭೂಕಂಪ ಪರಿಹಾರ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಮ್ಯಾನ್ಮಾರ್‌ನ ನೆರಳು ರಾಷ್ಟ್ರೀಯ ಏಕತಾ ಸರ್ಕಾರವು ಶನಿವಾರ ಏಕಪಕ್ಷೀಯ ಭಾಗಶಃ ಕದನ ವಿರಾಮವನ್ನು ಘೋಷಿಸಿತು. ಇದು ಆಡಳಿತಾರೂಢ ಮಿಲಿಟರಿಯ ವಿರುದ್ಧದ ಜನಪ್ರಿಯ ಹೋರಾಟವನ್ನು ಸಂಘಟಿಸುತ್ತದೆ. ಈ ದುರಂತದಿಂದ ದೇಶದ ಸಾವಿನ ಸಂಖ್ಯೆ 1,644 ಕ್ಕೆ ಏರಿತು. ಕೆಲವೇ ಗಂಟೆಗಳ ಹಿಂದೆ ಘೋಷಿಸಲಾದ 1,002 ಕ್ಕೆ ಹೋಲಿಸಿದರೆ ಈ ಸಂಖ್ಯೆ ತೀವ್ರ ಏರಿಕೆಯಾಗಿದ್ದು, ವ್ಯಾಪಕ ಪ್ರದೇಶದಲ್ಲಿ ಸಾವುನೋವುಗಳನ್ನು ದೃಢೀಕರಿಸುವಲ್ಲಿನ ತೊಂದರೆ ಮತ್ತು ಶುಕ್ರವಾರದ 7.7 ತೀವ್ರತೆಯ ಭೂಕಂಪದಿಂದ ಸಂಖ್ಯೆಗಳು ಬೆಳೆಯುತ್ತಲೇ ಇರುವ ಸಾಧ್ಯತೆಯನ್ನು ಎತ್ತಿ ತೋರಿಸಿದೆ. ಗಾಯಗೊಂಡವರ ಸಂಖ್ಯೆ 3,408 ಕ್ಕೆ ಏರಿತು, ಆದರೆ ಕಾಣೆಯಾದವರ ಸಂಖ್ಯೆ 139 ಕ್ಕೆ ಏರಿತು. ವಿಶೇಷವಾಗಿ ದೇಶದ ಎರಡನೇ ನಗರವಾದ ಮಂಡಲೆ ಮತ್ತು ರಾಜಧಾನಿ ನೇಪಿಟಾವ್‌ನ ಪ್ರಮುಖ ಪೀಡಿತ ನಗರಗಳಲ್ಲಿ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇತರ ದೇಶಗಳಿಂದ ತಂಡಗಳು ಮತ್ತು…

Read More

ವಿಜಯಪುರ: ನಾನು ಬಿಜೆಪಿ ಪಕ್ಷ ವಿರೋಧಿಯಲ್ಲ. ನಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧಿ. ಉತ್ತರ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಜೆಪಿಯನ್ನು ನನ್ನ ತಾಯಿ ಅಂದುಕೊಂಡಿದ್ದೇನೆ. ಹಾಗೆಯೇ ತಿಳಿದುಕೊಂಡಿದ್ದೇನೆ. ನಾನು ಯಾವತ್ತೂ ಬಿಜೆಪಿ ಪಕ್ಷ ವಿರೋಧಿ ನಡೆ ತೋರಿಲ್ಲ. ಬಿಜೆಪಿ ಪಕ್ಷ ವಿರೋಧಿಯೂ ಅಲ್ಲ. ನಾನು ಬಿಎಸ್ ಯಡಿಯೂರಪ್ಪ ವಿರೋಧಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಸಿದ್ರೇ ಬೇರೆಯೇ ನಿರ್ಧಾರ ಮಾಡಲಾಗುತ್ತದೆ. ಹಿಂದೂ ಪಕ್ಷ ಕಟ್ಟುವಂತೆ ಜನರಿಂದ ಕರೆ ಬರುತ್ತಿದೆ. ಯಡಿಯೂರಪ್ಪ ಕುಟುಂಬ ವಿರೋಧ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಮಾಡೋದು ಯಾರು ಎಂದು ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. https://kannadanewsnow.com/kannada/man-brutally-assaults-wife-her-sister-with-machetes-on-ugadi-festival/ https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/

Read More