Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸುತ್ತಿದ್ದಾರೆ ಎಂಬುದಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನನ್ಯಾ ಬಂಗಾರ್ ಮಾತನಾಡಿರುವಂತ ಅವರು ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸಿದ್ರು. ಕ್ರಿಕೆಟ್ ಗೆ ಸಂಬಂಧಪಟ್ಟವರಿಂದಲೇ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ ಎಂಬುದಾಗಿ ಗಂಭೀರ ಆರೋಪಿ ಮಾಡಿದ್ದಾರೆ. ಅಂದಹಾಗೇ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನನ್ಯಾ ಬಂಗಾರ್ ಅವರು ಲಿಂಗ ಬದಲಾವಣೆ ಮೂಲಕ ಹೆಣ್ಣಾಗಿ ಬದಲಾಗಿದ್ದರು. ಇಂತಹ ಅವರಿಗೆ ಕೆಲ ಕ್ರಿಕೆಟಿಗರು ತಮ್ಮ ನಗ್ನ ಪೋಟೋಗಳನ್ನು ಕಳುಹಿಸುತ್ತಿರೋ ಆರೋಪ ಮಾಡಿದ್ದಾರೆ. https://kannadanewsnow.com/kannada/bjp-worker-praveen-commits-suicide-by-posting-video/ https://kannadanewsnow.com/kannada/good-news-cm-great-good-news-for-the-students-of-the-state-vidyasiri-yojana-money-increased-to-rs-2000/
ಬೆಂಗಳೂರು: ವೀಡಿಯೋ ಪೋಸ್ಟ್ ಮಾಡಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಆನೇಕಲ್ ನಲ್ಲಿ ನಡೆದಿದೆ. ಬೆಂಗಳೂರಿನ ಆನೇಕಲ್ ನ ಎಸ್ ವಿ ಎಂ ಸ್ಕೂಲ್ ಬಳಿಯಲ್ಲಿ ವೀಡಿಯೋ ಪೋಸ್ಟ್ ಮಾಡಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ನಾಗರಾಜ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ ವಿ ಎಂ ಸ್ಕೂಲ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಪ್ರವೀಣ್ ಸಾವಿಗೆ ಕಾರಣರಾದವರನ್ನು ಬಂಧಿಸಬೇಕೆಂದು ಮನವಿಯನ್ನು ಹೆಚ್ಚುವರಿ ಎಸ್ ಪಿ ನಾಗರಾಜ್ ಅವರಿಗೆ ಪ್ರವೀಣ್ ಸಹೋದರಿ ಮನವಿ ಮಾಡಿದರು. https://kannadanewsnow.com/kannada/mysore-railway-museum-celebrates-world-heritage-day/ https://kannadanewsnow.com/kannada/attention-parents-applications-invited-for-kendriya-vidyalaya-2nd-class-admission/
ಬೆಂಗಳೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು (ಪಂ.ರಾಜ್) ಇವರ ಅಧ್ಯಕ್ಷತೆಯಲ್ಲಿ 12 ಮಂದಿಯನ್ನು ಒಳಗೊಂಡ ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 199 ಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೆ ಅನುಗುಣವಾಗಿ ಇ-ಸ್ವತ್ತುಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಭವಿಸುವ ಸಮಸ್ಯೆಗಳ ಹಾಗೂ ಸದರಿ ಸಮಸ್ಯೆಗಳ ಪರಿಹಾರದ ಭಾಗವಾಗಿ ಇ-ಸ್ವತ್ತು ಸುಧಾರಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುವ ಹೊಣೆಗಾರಿಕೆಯನ್ನು ಈ ಸಮಿತಿಗೆ ವಹಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರ ನಿಯಮ 28 ಮತ್ತು 30 ಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಮೂನೆ-9, 11ಎ ಮತ್ತು ಕ್ರಮಬದ್ಧವಲ್ಲದ ಆಸ್ತಿಗಳಿಗೆ ನಮೂನೆ-11ಬಿ ಅನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿಯ ಮೂಲಕ ವಿತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು…
ಮೈಸೂರು: ಮೈಸೂರು ರೈಲ್ವೆ ವಸ್ತುಸಂಗ್ರಹಾಲಯವು ನೈಋತ್ಯ ರೈಲ್ವೆ (ಎಸ್ಡಬ್ಲ್ಯೂಆರ್), ಮೈಸೂರು ವಿಭಾಗದ ಅಡಿಯಲ್ಲಿ, ಇಂದು ವಿಶ್ವ ಪರಂಪರೆ ದಿನ 2025 ಅನ್ನು ವಿಪತ್ತು ಮತ್ತು ಸಂಘರ್ಷ-ನಿರೋಧಕ ಪರಂಪರೆ ಸಂರಕ್ಷಣೆಯನ್ನು ಒತ್ತಿಹೇಳುವ ಉತ್ಸಾಹಭರಿತ ಕಾರ್ಯಕ್ರಮದೊಂದಿಗೆ ಆಚರಿಸಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಈ ವರ್ಷದ ಥೀಮ್ “ವಿಪತ್ತು ಮತ್ತು ಸಂಘರ್ಷ-ನಿರೋಧಕ ಪರಂಪರೆ: ಪರಂಪರೆ ಸಂರಕ್ಷಣೆಗೆ ಸಂಬಂಧಿಸಿದ ಕ್ರಿಯೆಗಳು” ಕೇಂದ್ರೀಕರಿಸಿದ ಪೋಸ್ಟರ್ ತಯಾರಿಕೆ, ಚಿತ್ರಕಲೆ ಮತ್ತು ವರ್ಣಚಿತ್ರ ಸ್ಪರ್ಧೆಯಲ್ಲಿ ತೊಡಗಿದರು. ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ), ಮೈಸೂರು ವಿಭಾಗ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸೇರಿದ್ದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ತಮ್ಮ ಭಾಷಣದಲ್ಲಿ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಯುವಜನರ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. “ಈ ಧನಸಂಪತ್ತು ವಿಪತ್ತುಗಳು ಮತ್ತು ಸಂಘರ್ಷಗಳನ್ನು ಎದುರಿಸಿ ಭವಿಷ್ಯದ ಪೀಳಿಗೆಗೆ ಉಳಿಯುವಂತೆ ಯುವ ಪೀಳಿಗೆಯು ಪರಂಪರೆ ಸಂರಕ್ಷಣೆಯ ಚಾಂಪಿಯನ್ಗಳಾಗಬೇಕು,” ಎಂದು ಡಿಆರ್ಎಂ ಮಿತ್ತಲ್ ಹೇಳಿದರು. ಅವರು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಶ್ಲಾಘಿಸಿದರು ಮತ್ತು ಅವರನ್ನು ಪರಂಪರೆ ಜಾಗೃತಿಯ…
ಹುಬ್ಬಳ್ಳಿ: ನೈಋತ್ಯ ರೈಲ್ವೆ ಇಂದು ಗದಗ ರಸ್ತೆಯಲ್ಲಿರುವ ಹುಬ್ಬಳ್ಳಿ ರೈಲು ವಸ್ತುಸಂಗ್ರಹಾಲಯದಲ್ಲಿ ವಿಶೇಷ ಪರಂಪರಾ ನಡಿಗೆಯೊಂದಿಗೆ ವಿಶ್ವ ಪರಂಪರಾ ದಿನವನ್ನು ಆಚರಿಸಿತು. ಈ ಕಾರ್ಯಕ್ರಮಕ್ಕೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕರಾದ ಮುಕುಲ್ ಸರನ್ ಮಾಥುರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ಆಚರಣೆಯ ಅಂಗವಾಗಿ ಮಾಥುರ್ ಅವರು ರೈಲು ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ, ಭಾರತೀಯ ರೈಲ್ವೆಯ ಶ್ರೀಮಂತ ಪರಂಪರೆ ಮತ್ತು ಸಂರಕ್ಷಿತ ಇತಿಹಾಸವನ್ನು ಮೆಚ್ಚಿದರು. ರೈಲ್ವೆ ಪರಂಪರೆಯನ್ನು ಕಾಪಾಡುವಲ್ಲಿ ಮತ್ತು ಪ್ರದರ್ಶಿಸುವಲ್ಲಿ ಕಾರ್ಯಾಗಾರದ ಸಿಬ್ಬಂದಿಯ ಸೃಜನಶೀಲತೆ ಮತ್ತು ಸಮರ್ಪಣೆಯನ್ನು ಅವರು ಶ್ಲಾಘಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಥುರ್, “ರೈಲ್ವೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದ್ದು, ಪರಂಪರೆಯ ಸ್ಮಾರಕಗಳು ಮತ್ತು ಉಪಕರಣಗಳ ಮೂಲಕ ಅದು ಪ್ರತಿನಿಧಿಸಲ್ಪಡುತ್ತದೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಭವಿಷ್ಯದ ಪೀಳಿಗೆಗಾಗಿ ಈ ಪರಂಪರೆಯನ್ನು ನಾವು ಕಾಪಾಡಬೇಕು” ಎಂದು ಹೇಳಿದರು. ಪರಂಪರೆ ಸಂರಕ್ಷಣೆಯಲ್ಲಿ ಸಾರ್ವಜನಿಕ ಆಸಕ್ತಿಯನ್ನು ಉತ್ತೇಜಿಸುವ ಕ್ರಮವಾಗಿ, ವಸ್ತುಸಂಗ್ರಹಾಲಯಕ್ಕೆ ಇಡೀ ದಿನ ಉಚಿತ ಪ್ರವೇಶವನ್ನು ನೀಡಲಾಗಿತ್ತು. ಇದು ಅನೇಕ ಸಂದರ್ಶಕರು ಮತ್ತು…
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೆಇಇ ಮೇನ್ 2025 ಸೆಷನ್ 2 ರ ಅಂತಿಮ ಕೀ ಉತ್ತರಗಳನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಏಪ್ರಿಲ್ 2 ಮತ್ತು ಏಪ್ರಿಲ್ 9 ರ ನಡುವೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ಅಧಿಕೃತ ವೆಬ್ಸೈಟ್ – jeemain.nta.nic.in ಮೂಲಕ ಕೀ ಉತ್ತರಗಳನ್ನು ಪ್ರವೇಶಿಸಬಹುದು. ಅಲ್ಲದೇ ನಾಳೆ ಜೆಇಇ ಮೇನ್ 2025 ಸೆಷನ್ 2ರ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ. ಇತ್ತೀಚಿನ ನವೀಕರಣದ ಪ್ರಕಾರ, ಜೆಇಇ ಮೇನ್ ಸೆಷನ್ 2 ಫಲಿತಾಂಶವನ್ನು ಏಪ್ರಿಲ್ 19 ರೊಳಗೆ ಪ್ರಕಟಿಸಲಾಗುವುದು ಎಂದು ಎನ್ಟಿಎ ತನ್ನ ಅಧಿಕೃತ ಹ್ಯಾಂಡಲ್ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಫಲಿತಾಂಶಗಳು ಹೊರಬಂದ ನಂತರ, ಅಭ್ಯರ್ಥಿಗಳು ತಮ್ಮ ಸ್ಕೋರ್ ಕಾರ್ಡ್ಗಳು, ಅಖಿಲ ಭಾರತ ಶ್ರೇಯಾಂಕಗಳು (ಎಐಆರ್), ವರ್ಗವಾರು ಕಟ್-ಆಫ್ ಮತ್ತು ಎರಡೂ ಸೆಷನ್ಗಳಿಗೆ ಟಾಪರ್ಗಳ ಪಟ್ಟಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. https://twitter.com/NTA_Exams/status/1913097332104613960 ಅಂತಿಮ ಉತ್ತರ ಕೀಲಿಯು ವಿದ್ಯಾರ್ಥಿಗಳಿಗೆ ತಮ್ಮ ನಿರೀಕ್ಷಿತ ಅಂಕಗಳನ್ನು ಲೆಕ್ಕಹಾಕಲು ಸಹಾಯ ಮಾಡುವಲ್ಲಿ…
ಬೆಂಗಳೂರು: ಸಿಇಟಿ ಪರೀಕ್ಷೆಯ ವೇಳೆಯಲ್ಲಿ ಮಾರ್ಗಸೂಚಿ ಹೊರತಾಗಿಯೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದಂತ ಅಭ್ಯರ್ಥಿಯೊಬ್ಬರಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಜನಿವಾರ ತೆಗೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯು ವಿವಾದಕ್ಕೂ ಕಾರಣವಾಗಿ ಬ್ರಾಹ್ಮಣ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಸಿಬ್ಬಂದಿಯ ಪರವಾಗಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ಅಭ್ಯರ್ಥಿಗೆ ಜನಿವಾರ ತೆಗೆಯಬೇಕು ಎಂಬುದಾಗಿ ಹೇಳಿದ್ದು ತಪ್ಪು. ಇದನ್ನು ಕೆಇಎ ಒಪ್ಪುವುದಿಲ್ಲ. ಇಂತಹ ಯಾವುದೇ ಮಾರ್ಗಸೂಚಿಯನ್ನು ಕೆಇಎ ನೀಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆದ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತೇನೆ. ನಾನೇ ಈ ಘಟನೆಯ ಸಂಬಂಧ ಕ್ಷಮೆ ಕೇಳ್ತೀನಿ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಜೊತೆಗೆ ಮಾರ್ಗಸೂಚಿಯಲ್ಲೂ ಪ್ರಕಟ ಮಾಡುವುದಾಗಿ ತಿಳಿಸಿದರು. ನಾವು ಯಾವುದೇ ಜಾತಿ, ಧರ್ಮದ ವಿರುದ್ಧ ಮಾರ್ಗಸೂಚಿ ಪ್ರಕಟಿಸಿಲ್ಲ. ಈಗ ತಪ್ಪು ಆಗಿದೆ. ಮುಂದೆ ಇಂತಹ ತಪ್ಪು ಆಗದಂತೆ…
ಮಾಸ್ಕೋ: ಎರಡು ದಶಕಗಳಿಗೂ ಹೆಚ್ಚು ಕಾಲ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದ್ದ ತಾಲಿಬಾನ್ ಮೇಲಿನ ನಿಷೇಧವನ್ನು ರಷ್ಯಾ ಗುರುವಾರ ರದ್ದುಗೊಳಿಸಿದೆ. ಇದು ಅಫ್ಘಾನಿಸ್ತಾನದ ನಾಯಕತ್ವದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಮಾಸ್ಕೋಗೆ ದಾರಿ ಮಾಡಿಕೊಡುತ್ತದೆ. 20 ವರ್ಷಗಳ ಯುದ್ಧದ ನಂತರ ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಅಸ್ತವ್ಯಸ್ತವಾಗಿ ಹಿಂದೆ ಸರಿಯುತ್ತಿದ್ದಂತೆ ಆಗಸ್ಟ್ 2021 ರಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಸರ್ಕಾರವನ್ನು ಪ್ರಸ್ತುತ ಯಾವುದೇ ದೇಶವು ಗುರುತಿಸುವುದಿಲ್ಲ. ಆದರೆ ಕಳೆದ ವರ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಂತೆ ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಮಿತ್ರರಾಷ್ಟ್ರವಾಗಿದೆ ಎಂದು ಹೇಳಲಾದ ಚಳುವಳಿಯೊಂದಿಗೆ ರಷ್ಯಾ ಕ್ರಮೇಣ ಸಂಬಂಧಗಳನ್ನು ನಿರ್ಮಿಸುತ್ತಿದೆ. 2003 ರಲ್ಲಿ ರಷ್ಯಾ ತಾಲಿಬಾನ್ ಅನ್ನು ಭಯೋತ್ಪಾದಕ ಚಳುವಳಿ ಎಂದು ನಿಷೇಧಿಸಿತು. ಸುಪ್ರೀಂ ಕೋರ್ಟ್ ಗುರುವಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧವನ್ನು ತೆಗೆದುಹಾಕಿದೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ. ಅಫ್ಘಾನಿಸ್ತಾನದಿಂದ ಮಧ್ಯಪ್ರಾಚ್ಯದವರೆಗಿನ ಹಲವಾರು ದೇಶಗಳಲ್ಲಿ ನೆಲೆಗೊಂಡಿರುವ ಇಸ್ಲಾಮಿ ಉಗ್ರಗಾಮಿ ಗುಂಪುಗಳಿಂದ ಪ್ರಮುಖ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿರುವ ಕಾರಣ ತಾಲಿಬಾನ್ ಜೊತೆ ಕೆಲಸ…
ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ದಾಖಲಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಹರ್ಷವರ್ದಿನಿ ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಏಪ್ರಿಲ್ 21 ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಯ ದಿನಾಂಕದೊಳಗೆ ಆಕ್ಷೇಪಣೆಗಳ ಹೇಳಿಕೆಯನ್ನು ತಪ್ಪದೆ ಸಲ್ಲಿಸುವಂತೆ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಡಿಆರ್ಐಗೆ ಸೂಚಿಸಿದರು. ವಿಚಾರಣೆಯಲ್ಲಿ, ಡಿಆರ್ಐ ಪರ ವಕೀಲರು ಆಕ್ಷೇಪಣೆಗಳ ಹೇಳಿಕೆಯನ್ನು ಸಲ್ಲಿಸಲು ಸ್ವಲ್ಪ ಸಮಯ ಕೋರಿದರು. ತನಿಖಾ ಅಧಿಕಾರಿಯ ಸಹಿಯನ್ನು ಪಡೆಯಲು ಸಾಧ್ಯವಾಗದ ಕಾರಣ ಆಕ್ಷೇಪಣೆಗಳ ಹೇಳಿಕೆಯನ್ನು ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ರ ನಿಬಂಧನೆಗಳನ್ನು ಪಾಲಿಸದ ಕಾರಣ ಚಿನ್ನ ವಶಪಡಿಸಿಕೊಳ್ಳುವಿಕೆ ಮತ್ತು ಅರ್ಜಿದಾರರ ಬಂಧನವು ದುರ್ಬಲವಾಗಿದೆ ಎಂದು ರನ್ಯಾ ರಾವ್ ಪರವಾಗಿ ಹಾಜರಾದ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿದರು. ಸಾಕ್ಷಿಗಳ ವಶಪಡಿಸಿಕೊಳ್ಳುವಿಕೆ, ಬಂಧನ ಮತ್ತು ಸಹಿಯ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಲಾದ…
ಮಂಗಳೂರು: ನಗರದಲ್ಲಿ ನಡೆದಿದ್ದಂತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಕೃತ್ಯ ನಡೆದ 24 ಗಂಟೆಯಲ್ಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಸಂಬಂಧ ರಾತ್ರಿ 1.30ರ ಸುಮಾರಿಗೆ 112ಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಈ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದಂತ ಉಳ್ಳಾಲ ಠಾಣೆಯ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಅಂತ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್(38), ಮಣಿ, ಕುಂಪಲದ ಮಿಥುನ್ (30) ಎಂಬುದಾಗಿ ಗುರುತಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ. https://kannadanewsnow.com/kannada/cabinet-to-take-final-decision-on-caste-census-report-on-may-2-siddaramaiah/ https://kannadanewsnow.com/kannada/good-news-good-news-for-women-in-the-state-aadhaar-card-no-longer-required-for-free-travel-by-bus/














