Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕಳೆದ 20 ವರ್ಷಗಳಿಂದ ಕರ್ನಾಟಕ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಗಣೇಶ್, ಕ್ರೈಂ ಗಣೇಶ್ ಎಂಬುದಾಗಿಯೇ ಖ್ಯಾತರಾಗಿದ್ದಂತ ಪತ್ರಕರ್ತರು. ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ನಗರದ ಜೈನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧರಾಗಿದ್ದಾರೆ. ಈ ಮೂಲಕ ಕ್ರೈಂ ಗಣೇಶ್ ಎಂದೇ ಖ್ಯಾತರಾಗಿದ್ದಂತ ಪತ್ರಕರ್ತ ಗಣೇಶ್ ಇನ್ನಿಲ್ಲವಾಗಿದ್ದಾರೆ. ಕ್ರೈಂ ಗಣೇಶ್, ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ ದಂಪತಿ ಪುತ್ರರಾಗಿದ್ದರು. ಅವರು ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ. ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಸಂಜೆ 5ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ. ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್ ಎಂದು ಪರಿಚಿತರಾಗಿದ್ದ ಗಣೇಶ್ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಸ್ತೂರಿ, ನ್ಯೂಸ್ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್ ಅವರು…
ಬೆಂಗಳೂರು: ಕನ್ನಡದ ಮೊದಲ ಉಪಗ್ರಹ ವಾಹಿನಿ ಉದಯ ಟಿವಿಯ ಅಧ್ಯಕ್ಷರು, ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿದ್ದಂತ ಸೆಲ್ವಂ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉದಯ ಟಿವಿಯ ಅಧ್ಯಕ್ಷ ಸೆಲ್ವಂ(84) ಇನ್ನಿಲ್ಲವಾಗಿದ್ದಾರೆ. ಹಲವು ಕನ್ನಡ ಸಿನಿಮಾಗಳ ನಿರ್ಮಾಪಕರಾಗಿ, ಕನ್ನಡದ ಮೊಟ್ಟ ಮೊದಲ ಉಪಗ್ರಹ ವಾಹಿನಿ ಉದಯ ಟಿವಿ ಅಧ್ಯಕ್ಷರಾಗಿದ್ದಂತವರು ಸೆಲ್ವಂ ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೇ ಚಿಕಿತ್ಸೆ ಫಲಿಸದೇ ಸೆಲ್ವಂ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಕನ್ನಡಮ್ಮನ ಸೇವೆ ಮಾಡುತ್ತಾರೆ ನನ್ನಂತಹ ನೂರಾರು ಮಂದಿಗೆ ಅನ್ನದಾತರಾಗಿದ್ದ ಸೆಲ್ವಂ ಸರ್ ಇನ್ನಿಲ್ಲವಾಗಿದ್ದಾರೆ. ಮಾತೃಭಾಷೆ ಎಂದಕೂಡಲೇ ಅದೇನದು ಮಾತೃಭಾಷೆ.. ತಾಯ್ನುಡಿ ಎಂದು ನಮ್ಮನ್ನು ತಿದ್ದುವ ಮೇಷ್ಟ್ರಾಗಿದ್ದಂತವರು ಸೆಲ್ವಂ. ಟೀವಿ ಪರದೆಯ ಬಣ್ಣಗಳ ವೈವಿಧ್ಯಮಯ ಚಿತ್ತಾರವನ್ನು ವಿವರಿಸುವ ತಂತ್ರಜ್ಞ, ವೀಕ್ಷಕರು ನಾಡಿಮಿಡಿತ ಹೇಗಿರುತ್ತದೆ ಎಂದು ತಿಳಿ ಹೇಳುವ ವ್ಯವಹಾರ ಜ್ಞಾನಿಯಾಗಿದ್ದರು. ಯಾವ ಸುದ್ದಿ ಎಷ್ಟು ಮುಖ್ಯ ಅದಕ್ಕೆ ಯಾವ ಪ್ರಾಧಾನ್ಯತೆ ಕೊಡಬೇಕೆಂದು ಹೇಳುತ್ತಿದ್ದ ಪತ್ರಕರ್ತ,…
ಬೆಂಗಳೂರು: 2009ರ ಬಿಜೆಪಿಯ ಅವಧಿಯಿಂದಲೂ ಕೆ ಎಸ್ ಆರ್ ಟಿ ಸಿಯ ಬಸ್ಸುಗಳಿಗೆ ಆಯುಧ ಪೂಜೆ ಮಾಡೋದಕ್ಕೆ ರೂ.30 ನೀಡಲಾಗುತ್ತಿತ್ತು. ಅದನ್ನು ರೂ.50, ಆನಂತ್ರ 100, ಈಗ ರೂ.250ಕ್ಕೆ ಹೆಚ್ಚಿಸಿದ್ದು ಕಾಂಗ್ರೆಸ್ ಸರ್ಕಾರ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ಅವರಿಗೆ ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪವಾದರೂ ಮಾಹಿತಿ ಸಂಗ್ರಹಿಸಿ ಟ್ಟೀಟ್ ಮಾಡಲು ಯಾರಾದರೂ ಪ್ರಜ್ಞಾವಂತರು ಸಲಹೆ ನೀಡಿದರೆ ಒಳ್ಳೆಯದು ಅನ್ನಿಸುತ್ತೆ. ಇಲ್ಲವೆಂದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳುವ ಹಠಕ್ಕೆ ಬಿದ್ದ ಆಗಿದೆ ಅವರ ಪರಿಸ್ಥಿತಿ ಎಂದಿದ್ದಾರೆ. ಪ್ರತಿ ಬಾರಿಯೂ ಅವರಿಗೆ ತಿಳುವಳಿಕೆ ನೀಡಿ ತಮ್ಮ ಬಿ.ಜೆ.ಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಳ್ಳಿದ ಪ್ರತಿಯೊಂದು ಅಂಶವನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾಗ್ಯೂ ಸ್ವಲ್ಪ ಕೂಡ ಅರಿವಿಲ್ಲದೆ ಟ್ಟೀಟ್ ಮಾಡಿ ತಮ್ಮ ಮಾರ್ಯಾದೆಯನ್ನು ಈ ರೀತಿ ಹರಾಜು ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ. ಬಿ.ಜೆ.ಪಿ ಅವಧಿಯಿಂದ…
ನಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ಆ ಸಮಸ್ಯೆಯ ಬಗ್ಗೆ ಹೊರಗೆ ಯಾರಿಗೂ ಹೇಳಲೂ ಆಗದ ಹಾಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ದೇವರನ್ನು ಬಿಟ್ಟು ಬೇರೆ ಯಾರೂ ಇದನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಹಂತಕ್ಕೆ ನಾವು ತಲುಪುತ್ತೇವೆ. ಆ ಹಂತವನ್ನು ತಲುಪಿದ ನಂತರ, ವಾರಾಹಿ ಅಮ್ಮನ ಬಗ್ಗೆ ಯೋಚಿಸಿ ಮತ್ತು ಮೂರು ದಿನಗಳವರೆಗೆ ಪ್ರತಿದಿನ ಈ ಒಂದು ವಿಷಯವನ್ನು ಬರೆಯಿರಿ, ವಾರಾಹಿ ಅಮ್ಮನವರು ನಿಮ್ಮ ಪರಿಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ನೀಡುತ್ತಾರೆ. ಅಂತಹ ಆರಾಧನೆಯ ಬಗ್ಗೆ ನಾವು ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ ನೋಡಲಿದ್ದೇವೆ . ವಾರಾಹಿ ದೇವಿಯನ್ನು ಪೂಜಿಸಿದರೆ ನಮಗೆ ಹಲವಾರು ಲಾಭಗಳು ಸಿಗುತ್ತವೆ. ಜೀವನದಲ್ಲಿ ಶತ್ರುಗಳ ಕಾಟ, ಸಾಲದ ಬಾಧೆಯಿಂದ ನರಳುತ್ತಿರುವವರು ವಾರಾಹಿ ಅಮ್ಮನವರಿಗೆ ಮನಃಪೂರ್ವಕವಾಗಿ ಅರ್ಪಿಸಿದರೆ ಕ್ರಮೇಣ ಕಷ್ಟಗಳೆಲ್ಲ ಮಾಯವಾದಂತೆ ಅನಿಸುತ್ತದೆ. ಅಂತಹ ವಾರಾಹಿ ಅಮ್ಮನವರನ್ನು ಆಲೋಚಿಸಿ ಮಾಡಬಹುದಾದ ಸರಳ ಪರಿಹಾರವನ್ನು ನೋಡೋಣ. ಈ ಪರಿಹಾರವನ್ನು ಯಾವುದೇ ದಿನದಲ್ಲಿ ಮಾಡಬಹುದು. ನೀವು ಯಾವಾಗ ಬೇಕಾದರೂ ಮಾಡಬಹುದು. ನಮಗೆ ಬೇಕಾಗಿರುವುದು…
ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕೆ ಎಸ್ ಆರ್ ಟಿಸಿಯಿಂದ ಸಾರಿಗೆ ಬಸ್ಸುಗಳನ್ನು ಆಯುಧ ಪೂಜೆಯಂದು ಪೂಜಿಸಲು ರೂ.100 ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಅನೇಕರು ಪ್ರಶ್ನಿಸಿದ್ದರು. ಅಲ್ಲದೇ ಹೆಚ್ಚಳಕ್ಕೂ ಒತ್ತಾಯಿಸಿದ್ದರು. ಈಗ ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಯುಧ ಪೂಜೆಗೆ ರೂ.100 ನೀಡುತ್ತಿರುವುದನ್ನು ರೂ.250 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವನ್ನು ಹೊರಡಿಸಿದ್ದು, ಪ್ರತಿ ವರ್ಷವು ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಚರಣೆಯಲ್ಲಿರುವ ಆಯುಧ ಪೂಜೆಯ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟು ಪೂಜೆ ಮಾಡುವುದು ಸಂಪುದಾಯವಿದ್ದು ಉಲ್ಲೇಖಿತ ಪತ್ರ 2 ರಲ್ಲಿ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ರೂ. 100/- (ನೂರು ರೂಪಾಯಿಗಳು ಮಾತ್ರ) ರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ ಮತ್ತು ಯಂತ್ರೋಪಕರಣಗಳ ಪೂಜೆ ಮಾಡುವಂತೆ…
ಬೆಂಗಳೂರು: ಸಿಲಿಕಾನ್ ಸಿಟಿಯ ನಗರ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವಂತ ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ನಲ್ಲಿ ಭಾರೀ ಹಗರಣ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಆಲಮ್ ಪಾಷಾ ಎಂಬುವರು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಜಿ.ಎ ಬಾವ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಕುರಿತಂತೆ ಆಲಮ್ ಪಾಷಾ ಎಂಬುವರು ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಬೆಂಗಳೂರು ನಗರ ಕಬ್ಬನ್ ಪೇಟೆ ಮುಖ್ಯರಸ್ತೆ, ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ಸರ್ಕಾರದ ವಕ್ಸ್ ಬೋರ್ಡ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದರ ಅಧ್ಯಕ್ಷರು ಮತ್ತು ಅಡಳಿತಾಧಿಕಾರಿಯಾಗಿ ಜಿ.ಎ. ಬಾವಾ, ನಿವೃತ್ತ ಡಿ,ಸಿ,ಪಿ ಸುಮಾರು 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಜಂಟಿ ಕಾರ್ಯಧರ್ಶಿಯಾಗಿ ಸೈಯದ್ ರಶೀರ್ ಅಹಮ್ಮದ್…
ನಮ್ಮ ಬೆರಳಿನಲ್ಲಿರುವ ಉಗುರು ಬಹಳ ಶಕ್ತಿಶಾಲಿಯಾದ ನಮ್ಮ ದೇಹದ ಒಂದು ಅಂಶ ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಏಕೆಂದರೆ ಕೇವಲ ಉಗುರಿನಿಂದ ಸಾಕಷ್ಟು ರೀತಿಯ ಮಾಟ-ಮಂತ್ರ ಪ್ರಯೋಗಗಳನ್ನು ಮಾಡಬಹುದು. ಹಾಗಾದರೆ ಉಗುರಿನಲ್ಲಿ ಯಾವ ರೀತಿಯ ಶಕ್ತಿ ಇದೆ ಹಾಗೂ ಇದರಿಂದ ಯಾವ ರೀತಿ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ…
ಶಿವಮೊಗ್ಗ: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ನಡೆಸುತ್ತಿರುವಂತ ಅನಿರ್ಧಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಯ ಪಿಡಿಓ, ಕಾರ್ಯದರ್ಶಿಗಳು, ನೀರುಗಂಟಿಗಳು ಸೇರಿದಂತೆ ವಿವಿಧ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಬೇಡಿಕೆಗಳೇನು? ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಮತ್ತು ಪಿಡಿಒಗಳ ಒಕ್ಕೂಟ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಮಟ್ಟದಲ್ಲಿ ನೂರಿತ ತಜ್ಞರ ಸಮಿತಿಯನ್ನು ರಚಿಸಿ, ವಿವಿಧ ರಾಜ್ಯಗಳ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಆಶಯಗಳನ್ನು ಈಡೇರಿಸುವಂತೆ ತಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕು. ಸಂವಿಧಾನದ ಪ್ರಕರಣ 243ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993…
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪ್ರಾಸಿಕ್ಯೂಷನ್ ದೂರು (ಪಿಸಿ) ದಾಖಲಿಸಿದೆ. ಸತ್ಯನಾರಾಯಣ ವರ್ಮಾ, ಎಟಕರಿ ಸತ್ಯನಾರಾಯಣ, ಜೆ.ಜಿ.ಪದ್ಮನಾಭ, ನಾಗೇಶ್ವರ ರಾವ್, ನೆಕ್ಕಂಟಿ ನಾಗರಾಜ್ ಮತ್ತು ವಿಜಯ್ ಕುಮಾರ್ ಗೌಡ ಸೇರಿದಂತೆ ಇತರ 24 ಜನರ ಸಹಾಯದಿಂದ ಈ ಹಗರಣದ ಮಾಸ್ಟರ್ ಮೈಂಡ್ ಎಂದು ಶಾಸಕ ಮತ್ತು ಪರಿಶಿಷ್ಟ ಪಂಗಡದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹೆಸರಿಸಲಾಗಿದೆ. ಇಂದು ಈ ಸಂಬಂಧ ಬೆಂಗಳೂರಿನ ನ್ಯಾಯಾಲಯಕ್ಕೆ ಇಡಿಯಿಂದ ತನಿಖಾ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಕರ್ನಾಟಕ ಪೊಲೀಸರು ಮತ್ತು ಸಿಬಿಐ ದಾಖಲಿಸಿದ ಎಫ್ಐಆರ್ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿತು, ಇದು ನಿಗಮದ ಖಾತೆಗಳಿಂದ ಸುಮಾರು 89.62 ಕೋಟಿ ರೂ.ಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ನಕಲಿ ಖಾತೆಗಳಿಗೆ ತಿರುಗಿಸಲಾಗಿದೆ. ನಂತರ ಶೆಲ್ ಸಂಸ್ಥೆಗಳ ಮೂಲಕ ಲಾಂಡರಿಂಗ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ಮೇ 2024 ರಲ್ಲಿ ನಿಗಮದ…
ಶಿವಮೊಗ್ಗ : ಜಿಲ್ಲೆಯ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಯು.ಯು.ಸಿ.ಎಂ.ಎಸ್. ಪೋರ್ಟಲ್ ಮೂಲಕ ಅ.30 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಪ್ರವೇಶಾತಿಗೆ ಸಂಬಂಧಿಸಿದ ಸೂಚನೆಗಳು: ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ನಾತಕೋತ್ತರ/ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಯು.ಯು.ಸಿ.ಎಂ.ಎಸ್. (ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ) ಪೋರ್ಟಲ್ ಮೂಲಕ ಮಾಡಲಾಗುವುದು. ಯು.ಯು.ಸಿ.ಎಂ.ಎಸ್.ಗೆ ಸಂಬAಧಿಸಿದ ಎಲ್ಲಾ ಮಾಹಿತಿಯು https://uucms.karnataka.gov.in/Login/Index ನಲ್ಲಿ ಲಭ್ಯವಿರುತ್ತದೆ. ವಿಶ್ವವಿದ್ಯಾಲಯದ ಆವರಣ, ಶಂಕರಘಟ್ಟ., ಸ್ನಾತಕೋತ್ತರ ಕೇಂದ್ರ ಕಡೂರು ಹಾಗೂ ಚಿಕ್ಕಮಗಳೂರು, ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಲಭ್ಯವಿರುವಂತೆ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು https://uucms.karnataka.gov.in/Login/Index ನಲ್ಲಿ ಲಭ್ಯವಿರುವ ಯುಯುಸಿಎಂಎಸ್ ಪೋರ್ಟಲ್ ಮೂಲಕ ಅರ್ಜಿಸಲ್ಲಿಸುವುದು. ಹಾಗೂ ಅರ್ಜಿ ಮತ್ತು ಸಂಬAಧಪಟ್ಟ ದಾಖಲೆಗಳನ್ನು (ಹಾರ್ಡ್ ಕಾಪಿ) ಸಂಬAಧಿಸಿದ ಸ್ನಾತಕೋತ್ತರ ವಿಭಾಗಗಳಿಗೆ ಕಡ್ಡಾಯವಾಗಿ ಸಲ್ಲಿಸುವುದು. ವಿಶ್ವವಿದ್ಯಾಲಯದ ಸಂಯೋಜಿತ…