Subscribe to Updates
Get the latest creative news from FooBar about art, design and business.
Author: kannadanewsnow09
ಉಕ್ರೇನ್: ಉಕ್ರೇನ್ ಭಾನುವಾರ ರಷ್ಯಾದ ಮೇಲೆ ತನ್ನ ಅತಿದೊಡ್ಡ ಡ್ರೋನ್ ಆಧಾರಿತ ಕಾರ್ಯಾಚರಣೆಯ ದಾಳಿಯನ್ನು ನಡೆಸಿದೆ. ಇದು ತನ್ನ ಗಡಿಯಿಂದ ಸಾವಿರಾರು ಕಿಲೋಮೀಟರ್ (ಮೈಲುಗಳು) ದೂರದಲ್ಲಿರುವ ಪೂರ್ವ ಸೈಬೀರಿಯಾದಲ್ಲಿರುವ ವಾಯುನೆಲೆಯ ಮೇಲೆ ದಾಳಿ ಮಾಡಿತು. ಇರ್ಕುಟ್ಸ್ಕ್ ಪ್ರದೇಶದ ರಷ್ಯಾದ ಗವರ್ನರ್ ದಾಳಿಯನ್ನು ದೃಢಪಡಿಸಿದರು. ಉಕ್ರೇನಿಯನ್ ರಿಮೋಟ್-ಪೈಲಟ್ ವಿಮಾನವು ಸ್ರಿಡ್ನಿ ಗ್ರಾಮದಲ್ಲಿನ ಮಿಲಿಟರಿ ಘಟಕದ ಮೇಲೆ ದಾಳಿ ಮಾಡಿದೆ, ಇದು ಸೈಬೀರಿಯಾದಲ್ಲಿ ಅಂತಹ ಮೊದಲ ದಾಳಿಯಾಗಿದೆ ಎಂದು ಹೇಳಿದರು. ಉಕ್ರೇನ್ನ ಭದ್ರತಾ ಸೇವೆ (SBU) ನಡೆಸಿದ ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆಯು “ರಷ್ಯಾದ ಒಕ್ಕೂಟದ ಹಿಂಭಾಗ” ದಲ್ಲಿರುವ ವಾಯುನೆಲೆಗಳಲ್ಲಿ “40 ಕ್ಕೂ ಹೆಚ್ಚು” ರಷ್ಯಾದ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನಿಯನ್ ಮಾಧ್ಯಮ ಹೇಳಿಕೊಂಡಿದೆ. ಅಧಿಕಾರಿಗಳನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ AFP ವರದಿ ಮಾಡಿದಂತೆ, ಪೂರ್ವ ಸೈಬೀರಿಯನ್ ನಗರವಾದ ಬೆಲಾಯಾ, ಫಿನ್ಲ್ಯಾಂಡ್ ಬಳಿಯ ಆರ್ಕ್ಟಿಕ್ನಲ್ಲಿರುವ ಒಲೆನ್ಯಾ ಮತ್ತು ಮಾಸ್ಕೋದ ಪೂರ್ವಕ್ಕೆ ಇವನೊವೊ ಮತ್ತು ಡಯಾಗಿಲೆವೊದಲ್ಲಿರುವ ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಲಾಗಿದೆ. https://twitter.com/RT_com/status/1929137870054334534? ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ…
ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುತ್ತೇವೆ. ಅವರ ನಟನೆಯ ಥಗ್ ಲೈಫ್ ಬಿಡುಗಡೆಯಾದ್ರೆ ಕರ್ನಾಟಕ ರಣರಂಗ ಆಗಲಿದೆ ಎಂಬುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕ್ಷಮೆಗೆ ಆಗ್ರಹಿಸಿ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದರು. ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿ ಎಂದರು. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ( Corona Virus ) ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಪ್ರಕರಣಗಳ ಸಂಖ್ಯೆ 253ಗೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 257 ಹಾಗೂ ರಾಟ್ ಮೂಲಕ 19 ಸೇರಿದಂತೆ 276 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 17 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಾದ ಒಬ್ಬರು ಸರ್ಕಾರಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತ 250 ಸೋಂಕಿತರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದೆ. ಅಂದಹಾಗೇ ಕರ್ನಾಟಕದಲ್ಲಿ ಇದುವರೆಗೆ 442 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದರೇ, 185 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಕೋವಿಡ್…
ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಲವ್ವಿಡವ್ವಿ. ಜೊತೆಗೆ ಆಕೆಯನ್ನು ಗರ್ಭಿಣಿ ಮಾಡಿದ್ದನು. ಅಲ್ಲದೇ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು. ಈ ವಿಷಯ ಎರಡು ಕಡೆಯ ಮನೆಯವರಿಗೆ ಗೊತ್ತಿಗಿತ್ತು. ಹೀಗಾಗಿ ಇಬ್ಬರು ಮನೆ, ಊರು ಬಿಟ್ಟು ಹೋಗಿದ್ದರು. ಮನೆ, ಊರು ಬಿಟ್ಟೋದಂತ ಅವರಿಗೆ ಇರೋದಕ್ಕೆ ನೆಲೆ ಇಲ್ಲದೇ, ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆದರೇ ಕುಟುಂಬ ನಿರ್ವಣೆಗಾಗಿ ಆ ಪ್ರೇಮಿಗಳು ಇಳಿದಿದ್ದು ಮಾತ್ರ ಸರಗಳ್ಳತನ. ಹೌದು ಹೀಗೆ ಸರಗಳ್ಳತನಕ್ಕೆ ಇಳಿದಿದ್ದಂತ ಇಬ್ಬರು ಪ್ರೇಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂಬುದಾಗಿ ತಿಳಿದು ಬಂದಿದೆ. ಮನೆ ಮಾಡೋದಕ್ಕೆ ಹಣ ವಿಲ್ಲದೇ ಬೈಕ್ ಕದ್ದಿದ್ದಂತ ಗೋವಿಂದರಾಜು, ಅದೇ ಬೈಕಿನಲ್ಲಿ ಸರಗಳ್ಳತನಕ್ಕೆ ಇಳಿದಿದ್ದನು. ಸಿಸಿಟಿವಿಗಳಲ್ಲಿ ದಾಖಲಾಗಿದ್ದಂತ ದೃಶ್ಯ ಆಧರಿಸಿ ಅಶ್ವಿನಿ, ಗೋವಿಂದರಾಜು ಬಂಧಿಸಿದ್ದಾರೆ. ಬಂಧನದ ನಂತ್ರ ವಿಚಾರಣೆ ವೇಳೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ. https://kannadanewsnow.com/kannada/large-scale-drone-attack-due-to-the-conflict-with-ukraine-watch-the-terrifying-video/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/
ರಷ್ಯಾ: ಸೈಬೀರಿಯಾದ ಕಾರ್ಯತಂತ್ರದ ವಾಯುನೆಲೆಯಲ್ಲಿ ಪರಮಾಣು ಸಾಮರ್ಥ್ಯದ ಬಾಂಬರ್ಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ರಷ್ಯಾದ ಪ್ರದೇಶದೊಳಗೆ ಆಳವಾದ ಪ್ರಮುಖ ಡ್ರೋನ್ ದಾಳಿಯನ್ನು ನಡೆಸಿತು. ರಾಯಿಟರ್ಸ್ ಉಲ್ಲೇಖಿಸಿದ ಮೂಲಗಳ ಪ್ರಕಾರ, ದೀರ್ಘ-ಶ್ರೇಣಿಯ ಶತ್ರು ವಿಮಾನಗಳನ್ನು ನಾಶಮಾಡಲು ಈ ದಾಳಿಯನ್ನು “ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆ” ಎಂದು ವಿವರಿಸಲಾಗಿದೆ. ಉಕ್ರೇನಿಯನ್ ಗಡಿಯಿಂದ 4,300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಇರ್ಕುಟ್ಸ್ಕ್ ಒಬ್ಲಾಸ್ಟ್ನಲ್ಲಿರುವ ಬೆಲಾಯಾ ವಾಯುನೆಲೆಯ ಮೇಲೆ ಸಂಘಟಿತ ಡ್ರೋನ್ ದಾಳಿಯಲ್ಲಿ 40 ಕ್ಕೂ ಹೆಚ್ಚು ರಷ್ಯಾದ ಮಿಲಿಟರಿ ವಿಮಾನಗಳು ಹೊಡೆದವು ಎಂದು ಉಕ್ರೇನಿಯನ್ ಭದ್ರತಾ ಮೂಲವೊಂದು ರಾಯಿಟರ್ಸ್ಗೆ ತಿಳಿಸಿದೆ. ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿ, ಉಕ್ರೇನ್ನ ದೇಶೀಯ ಭದ್ರತಾ ಸಂಸ್ಥೆ SBU ಈ ದಾಳಿಯನ್ನು ನಡೆಸಿದೆ ಮತ್ತು ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಲು ಬಳಸುತ್ತಿದ್ದ Tu-95 ಮತ್ತು Tu-22 ಬಾಂಬರ್ಗಳ ಮೇಲೆ ದಾಳಿಗಳನ್ನು ಒಳಗೊಂಡಿದೆ ಎಂದು ಹೇಳಿದರು. ರಷ್ಯಾದಿಂದ ಉಕ್ರೇನ್ ಮೇಲೆ ಬೃಹತ್ ಡ್ರೋನ್ ದಾಳಿ ಮಾಡಲಾಗಿದೆ ಎಂದು SBU ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಸ್ಫೋಟಗಳು…
ಬೆಂಗಳೂರು: ಬೆಸ್ಕಾಂ ( BESCOM ) ಗ್ರಾಹಕರಿಗೆ ವಿದ್ಯುತ್ ಸಂಬಂಧಿತ ದೂರು ದಾಖಲಿಸಲು ಮತ್ತಷ್ಟು ಸುಲಭಗೊಳಿಸಲಾಗಿದೆ. ಇದಕ್ಕಾಗಿ ಜಿಲ್ಲಾವಾರು ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಹೌದು. ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗಳಿಗೂ ವಿಶೇಷ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಜಿಲ್ಲೆಯ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪೋಟೋ, ವೀಡಿಯೋಗಳನ್ನು ವಾಟ್ಸ್ ಅಪ್ ಮೂಲಕ ಸಹಾಯವಾಣಿ ಸಂಖ್ಯೆಗೆ ( WhatsApp Helpline Number ) ಕಳುಹಿಸಿದರೇ, ಕ್ಷಣಾರ್ಧದಲ್ಲಿ ಪರಿಹಾರ ಸಿಗಲಿದೆ. ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ. https://twitter.com/NammaBESCOM/status/1929004896428179901 https://kannadanewsnow.com/kannada/11-month-old-baby-tests-positive-for-covid-19-in-karnataka/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/
ಹುಬ್ಬಳ್ಳಿ: ಧಾರವಾಡದಲ್ಲಿ ಮೊದಲ ಕೋವಿಡ್ -19 ಪ್ರಕರಣ ವರದಿಯಾದ ನಂತರ, ಹುಬ್ಬಳ್ಳಿಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ 11 ತಿಂಗಳ ಮಗುವಿಗೆ ವೈರಸ್ ಪಾಸಿಟಿವ್ ಬಂದಿದೆ. ಬೈರಿದೇವರಕೊಪ್ಪ ನಿವಾಸಿಯಾಗಿರುವ ಮಗು ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ತಿಂಗಳ ಮಗುವಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಆದರೆ ಮಗುವಿಗೆ ಕೋವಿಡ್ ಸೋಂಕಿನ ಲಕ್ಷಣಗಳಿದ್ದಂತ ಕಾರಣ ಕೊರೋನಾ ಪರೀಕ್ಷೆ ಮಾಡಲಾಯಿತು. ಆ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹೇಳಿದರು. ಇದಲ್ಲದೆ, ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಹೊಸ ತಳಿಯು ತೀವ್ರ ಹಾನಿಯನ್ನುಂಟುಮಾಡುವ ಯಾವುದೇ ಮಾರ್ಗವನ್ನು ಹೊಂದಿಲ್ಲ. ಆದರೆ ಅದೇ ಸಮಯದಲ್ಲಿ, ಹರಡುವಿಕೆಯ ಬಗ್ಗೆ ಜಾಗರೂಕರಾಗಿರಬೇಕು. ಪ್ರಸ್ತುತ ಆರೋಗ್ಯ ಇಲಾಖೆಯ ಮಾರ್ಗದರ್ಶನದ ಆಧಾರದ ಮೇಲೆ ವಿಷಯಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಮತ್ತು ವಿಶೇಷವಾಗಿ ಮಕ್ಕಳು ಮಾಸ್ಕ್ ಧರಿಸುವಂತೆ ಅವರು ವಿನಂತಿಸಿದರು. ಶೀತ ಮತ್ತು ಇತರ ಅಲರ್ಜಿಗಳಿಂದ ಬಳಲುತ್ತಿರುವ ಜನರು…
ಬೆಂಗಳೂರು: ಶಿವರಾಜ್ ಕುಮಾರ್ ರೀತಿಯಲ್ಲಿ ಇನ್ಯಾರು ನಟ ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂಬುದಾಗಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ತಮಿಳು ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದಂತ ಅವರು, ಶಿವಣ್ಣ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದರೂ ಅವರೆಲ್ಲ ನಾಡದ್ರೋಹಿಗಳು ಅಂತ ಕೆಂಡಕಾರಿದ್ದಾರೆ. ನಟ ಕಮಲ್ ಹಾಸನ್ ಹೇಳಿಕೆ ನಮ್ಮ ನಾಡಿಗೆ ಅವಮಾನ. ಈ ಘಟನೆಗೆ ಸಾಕ್ಷಿಯಾದಂತ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟಿದ್ದಾರೆ. ಅವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಬೇಕಿತ್ತು ಎಂದರು. ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೇ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂಬುದಾಗಿ ಬೇಸರ ಹೊರ ಹಾಕಿದರು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ. ಹಾಗಿದ್ದರೇ ಕನ್ನಡ ವಿಚಾರಕ್ಕೆ…
ರಾಯಚೂರು: ಜಿಲ್ಲೆಯಲ್ಲಿ ದೇವಸ್ಥಾನದ ಪೂಜೆ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ಮಾರಾಮಾರಿ ನಡೆದಿರುವಂತ ಘಟನೆ ನಡೆದಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ರಾಯಚೂರು ಜಿಲ್ಲೆಯ ವಡವಟ್ಟಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ರಂಗನಾಥ ದೇವಸ್ಥಾನದ ಪೂಜೆ ವಿಚಾರಕ್ಕೆ ವೆಂಕಟೇಶ್, ಸಹೋದರ ತಿಮ್ಮಯ್ಯ ಕಿರಿಕ್ ಮಾಡಿದ್ದಾರೆ ಎಂಬುದಾಗಿ ವೆಂಕಟೇಶ್, ನಾಗರಾಜ್, ಸುಮಿತ್ರಾ ಎಂಬುವರ ಮೇಲೆ ಆರೋಪಿಸಿದ್ದಾರೆ. ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಎರಡು ಕುಟುಂಬದವರು ದೊಣ್ಣೆ, ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಎರಡು ಕುಟಂಬಗಳ ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. https://kannadanewsnow.com/kannada/two-dead-hundreds-arrested-in-france-as-psg-fans-celebrate-champions-league-triumph/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/