Author: kannadanewsnow09

ಬೆಂಗಳೂರು: ನಗರದ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಪ್ರಾಂಶುಪಾಲರು ಸೇರಿದಂತೆ ಇತರೆ ಉಪನ್ಯಾಸಕರ ವಿರುದ್ಧ ಮೃತ ವಿದ್ಯಾರ್ಥಿನಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಆಕ್ಸ್ ಫರ್ಡ್ ಕಾಲೇಜಿನ 6 ಲೆಕ್ಟರರ್ಸ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಂತ ಯಶಸ್ವಿನಿ ಉಪನ್ಯಾಸಕರ ಕಿರುಕುಳಕ್ಕೆ ಬೇಸತ್ತು ಜನವರಿ.8ರಂದು ಚಂದಾಪುರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಮತ್ತೊಂದೆಡೆ ಯಶಸ್ವಿನಿ ತಾಯಿ ಪೊಲೀಸರಿಗೆ ಪ್ರಾಂಶುಪಾಲರು ಸೇರಿದಂತೆ ಕಿರುಕುಳ ನೀಡಿದ್ದ ಉಪನ್ಯಾಸಕರ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಬೆನ್ನಲ್ಲೇ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಆರು ಲೆಕ್ಚರರ್ಸ್ ಕೆಲಸದಿಂದ ಆಡಳಿತ ಮಂಡಳಿಯು ವಜಾಗೊಳಿಸಲಾಗಿದೆ. ಒಎಂಆರ್ ವಿಭಾಗದ ಲೆಕ್ಟರರ್ಸ್ ಗಳಾದಂತ ಡಾ.ಆನಿಮೋಲ್, ಡಾ.ಶಬಾನಾ, ಡಾ.ಪೈಕಾ, ಡಾ.ಸಿಂಧು, ಡಾ.ಸುಶ್ಮಿನಿ, ಡಾ.ಆಲ್ಬಾ…

Read More

ಬೆಂಗಳೂರು:  ದಿ: 13.01.2026 (ಮಂಗಳವಾರ) ಬೆಳಿಗ್ಗೆ 10:00 ಗಂಟೆಯಿAದ ಮದ್ಯಾಹ್ನ 02:00 ಗಂಟೆಯವರೆಗೆ “66/11ಕೆ.ವಿ ಬಾಣಸವಾಡಿಯ ಉಪಕೇಂದ್ರ“ ದ 66ಕೆ.ವಿ ಲೈನನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಚ್ಆರ್ಬಿಆರ್ ಲೇಔಟ್ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಸರ್ವೀಸ್ ರೋಡ್, ಕಮ್ಮನಹಳ್ಳಿ ಮೇನ್ ರೋಡ್, ಸಿಎಂಆರ್ ರೋಡ್, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಆರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್ಕ್ಲೇವ್, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್ಶಿಪ್, ಬಾಲಾಜಿ ಲೇಔಟ್, ಜಿಎನ್ಆರ್ ಗಾರ್ಡನ್, ಚೆಲೆಕರೆ, ಚೆಲೆಕರೆ ವಿಲೇಜ್, ಸಮುದ್ರಿಕಾ ಎನ್ಕ್ಲೇವ್, 100 ಅಡಿ ರಸ್ತೆ, 80 ಅಡಿ ರಸ್ತೆ, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಅಮರ್ ಏಜೆನ್ಸಿ ಲೇಔಟ್, ಪಿ & ಟಿ ಲೇಔಟ್, ಪಪ್ಪಯ್ಯ ಲೇಔಟ್, ಕೊಕನಟ್ ಗ್ರೋವ್ ಲೇಔಟ್, ಆಶೀರ್ವಾದ್…

Read More

ಧಾರವಾಡ: ರಾಜ್ಯದಲ್ಲೊಂದು ಶಾಲಾ ಮಕ್ಕಳ ಪೋಷಕರು ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಇಬ್ಬರು ಮಕ್ಕಳನ್ನು ಅಪಹರಣ ಮಾಡಿರುವಂತ ಶಂಕೆ ವ್ಯಕ್ತವಾಗಿದೆ. ಧಾರವಾಡದ ಕಮಲಾಪುರ ಬಡಾವಣೆಯಲ್ಲಿ ಮಕ್ಕಳಿಬ್ಬರನ್ನು ಅಪಹರಣ ಮಾಡಿರುವಂತ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಇಬ್ಬರು ಮಕ್ಕಳನ್ನು ಅಪಹರಣ ಮಾಡಿರೋದಾಗಿ ಹೇಳಲಾಗುತ್ತಿದೆ. 3ನೇ ತರಗತಿಯ ತನ್ವೀರ್(9) ಹಾಗೂ ಲಕ್ಷ್ಮೀ ಕರಿಯಪ್ಪನವರ್(9) ಅಪಹರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಬೈಕ್ ಮೇಲೆ ಕೂರಿಸಿಕೊಂಡು ವ್ಯಕ್ತಿ ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಇದಾಗಿದೆ. https://kannadanewsnow.com/kannada/shikhar-dhawan-gets-engaged-to-longtime-girlfriend-sophie-shine/

Read More

ಭಾರತ ಕ್ರಿಕೆಟಿಗ ಶಿಖರ್ ಧವನ್ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಧವನ್ ಇನ್ಸ್ಟಾಗ್ರಾಮ್ ನಲ್ಲಿ ‘ಹಂಚಿಕೊಂಡ ನಗುಗಳಿಂದ ಹಂಚಿಕೊಂಡ ಕನಸುಗಳವರೆಗೆ… ನಾವು ಶಾಶ್ವತವಾಗಿ ಒಟ್ಟಿಗೆ ಇರುವುದನ್ನು ಆರಿಸಿಕೊಳ್ಳುತ್ತಿರುವಾಗ ನಮ್ಮ ನಿಶ್ಚಿತಾರ್ಥಕ್ಕಾಗಿ ಪ್ರೀತಿ, ಆಶೀರ್ವಾದ ಮತ್ತು ಪ್ರತಿಯೊಂದು ಶುಭ ಹಾರೈಕೆಗೆ ಕೃತಜ್ಞರಾಗಿರುತ್ತೇನೆ’ ಎಂಬ ಶೀರ್ಷಿಕೆಯೊಂದಿಗೆ ರೋಮ್ಯಾಂಟಿಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ‘ಶಿಖರ್ ಮತ್ತು ಸೋಫಿ’ ಎಂದು ಸಹಿ ಮಾಡಲಾಗಿದ್ದು, ಅವರ ನಿಶ್ಚಿತಾರ್ಥದ ಹೆಸರನ್ನು ಸೂಚಿಸುತ್ತದೆ. https://kannadanewsnow.com/kannada/ksrtc-bus-advance-ticket-booking-now-available-at-bangalore-one-and-karnataka-one-centers/

Read More

ಬೆಂಗಳೂರು: ಯುವಸಮೂಹವನ್ನು ಆಕರ್ಷಿಸುವ ವಿಶಿಷ್ಟ ವಿನ್ಯಾಸದೊಂದಿಗೆ ರಿಯಲ್‌ಮೀ ತನ್ನ ಬಹುನಿರೀಕ್ಷೆಯ 16 ಪ್ರೊ ಸರಣಿ ಬಿಡುಗಡೆ ಮಾಡಿದೆ. ಬಿಡುಗಡೆಗೊಳಿಸಿ ಮಾತನಾಡಿದ ರಿಯಲ್‌ಮಿ ಇಂಡಿಯಾ ಪ್ರಾಡಕ್ಟ್‌ ಸ್ಟಾಟರ್ಜಿ ಮ್ಯಾನೇಜರ್‌ ದೇವೇಂದರ್ ಸಿಂಗ್ ಮಾತನಾಡಿ, ರಿಯಲ್‌ಮಿ ಇಂಡಿಯಾ ಇದರೊಂದಿಗೆ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ತನ್ನ ಮಾನದಂಡವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ರಿಯಲ್‌ ಮಿ 16 ಪ್ರೊ+ ಮತ್ತು ಎಲ್ಲ ಅಗತ್ಯಗಳನ್ನು ಪೂರೈಸುವ ರಿಯಲ್‌ ಮಿ 16 ಪ್ರೊ ಮಾದರಿಗಳನ್ನು ಒಳಗೊಂಡಿರುವ ಈ ಸರಣಿ, ಪರ್ಫಾರ್ಮೆನ್ಸ್‌ ಮತ್ತು ಡಿಸೈನ್‌ ಅಲ್ಲಿ ಮಾಸ್ಟರ್‌ಕ್ರಾಫ್ಟ್ ಶ್ರೇಷ್ಠತೆಯನ್ನು ಹೊಂದಿದೆ. ಜೊತೆಗೆ, ಪೋರ್ಟ್ರೇಟ್ ಇಮೇಜಿಂಗ್ ಮಾನದಂಡಗಳನ್ನು ಮರುನಿರ್ವಹಿಸುವ ಕ್ರಾಂತಿಕಾರಿ ಕೇಂದ್ರೀಕರಣದೊಂದಿಗೆ ಗಮನ ಸೆಳೆಯುತ್ತದೆ. 200MP ಪೋರ್ಟ್ರೇಟ್ ಮಾಸ್ಟರ್: ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ 200MP ಪೋರ್ಟ್ರೇಟ್ ಮಾಸ್ಟರ್ ಆಗಿ ರಿಯಲ್‌ ಮಿ 16 ಪ್ರೊ ಸರಣಿ ಹೊರಹೊಮ್ಮಿದೆ. 200MP ಲೂಮಾಕಲರ್ ಕ್ಯಾಮೆರಾ ಹಾಗೂ 3.5× ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಹೊಂದಿರುವ ರಿಯಲ್‌ ಮಿ 16 ಪ್ರೊ+, “ಸ್ನ್ಯಾಪ್‌ ಯುವರ್‌ ವೈಬ್‌ ಅಟ್‌ ಎವೆರಿ ಜೂಮ್”…

Read More

ಚಿತ್ರದುರ್ಗ : ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಇದುವರೆಗೂ 1 ಲಕ್ಷದ 10 ಸಾವಿರ ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ವ್ಯಯಿಸಿದೆ. ಹೊಳಲ್ಕೆರೆ ತಾಲೂಕಿಗೆ 293 ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡುವ ಮೂಲಕ ಜನತೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು. ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಳಿಗೆ ಹಣ ನೀಡುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಜೆಟ್ ನಲ್ಲಿ 1.36 ಲಕ್ಷ ಕೋಟಿ ರೂ.ಹಣವನ್ನು ಮೀಸಲಿಡುವ ಮುಲಕ ಅಭಿವೃದ್ಧಿ ಗ್ಯಾರಂಟಿಯನ್ನು ಸಹ ನೀಡುತ್ತಿದೆ ಎಂದರು. ಕರ್ನಾಟಕದಲ್ಲಿ ಜಾರಿಗೆ ಬಂದ ಐದು ಗ್ಯಾರಂಟಿ ಯೋಜನೆಗಳು ರಾಜ್ಯಮಟ್ಟಕ್ಕೆ ಸೀಮಿತವಾಗದೆ, ಇಡೀ ದೇಶದ ರಾಜಕೀಯ–ಆಡಳಿತ ಚರ್ಚೆಯ ದಿಕ್ಕನ್ನೇ ಬದಲಿಸಿವೆ. ಬಡತನ ನಿವಾರಣೆ, ಮಹಿಳಾ ಸಬಲೀಕರಣ…

Read More

ಶಿವಮೊಗ್ಗ : ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸಲು ಕಾಲಕಾಲಕ್ಕೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ. ಎಷ್ಟೆ ತಿಳಿದುಕೊಂಡಿದ್ದರೂ ಇನ್ನಷ್ಟು ತಿಳಿದುಕೊಳ್ಳಬೇಕಾದ ವಿಷಯ ಇರುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಶಿವಮೊಗ್ಗದ ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಿದ್ದಂತ ಮಹಿಳಾ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅನುಷ್ಟಾನಕ್ಕೆ ಬಂದ ಮೇಲೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಶಕ್ತರಾಗಲು ಸಾಧ್ಯವಾಗಿದೆ. ಜೊತೆಗೆ ದೈನಂದಿನ ವ್ಯವಹಾರದ ಬಗ್ಗೆ ಅರಿವು ಹೊಂದುವಂತೆ ಆಗಿದೆ. ಮಹಿಳೆಯರಿಗೆ ಇಂತಹ ಕಾರ್ಯಗಾರ ಮೂಲಕ ಇನ್ನಷ್ಟು ಅರಿವು ಮೂಡಿಸುತ್ತಿರೋದು ಶ್ಲಾಘನೀಯವೇ ಸರಿ ಎಂದರು. ಧರ್ಮಸ್ಥಳ ಸಂಘವು ಮಹಿಳೆಯರ ಜೀವನಶೈಲಿಯನ್ನೇ ಬದಲಾಯಿಸಿದೆ. ಹಿಂದೆ ನೀವು ಕಷ್ಟಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ. ಗಂಡನಿoದ ಆಗುತ್ತಿದ್ದ ಶೋಷಣೆ ಸಹ ತಪ್ಪಿದೆ. ಬಹಳಷ್ಟು ಕುಟುಂಬ ನಿರಾಳವಾಗಿ ಬದುಕೋದಕ್ಕೆ ಮದ್ಯವರ್ಜನ ಶಿಬಿರ ಕಾರಣವಾಗಿದೆ. ಪ್ರತಿವರ್ಷ 13 ಸಾವಿರ ಕೋಟಿ ರೂ.…

Read More

ಈ ತಿಂಗಳ ಅಂತ್ಯದಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿರುವ ವಾಲ್ಮಾರ್ಟ್ ಸಿಇಒ ಡೌಗ್ ಮೆಕ್‌ಮಿಲನ್, ಅತ್ಯಂತ ಆಕರ್ಷಕ ಸಂಬಳದಾರರಲ್ಲಿ ಒಬ್ಬರು. ಅವರು ಪ್ರತಿ 30 ನಿಮಿಷಕ್ಕೆ ಸರಿಸುಮಾರು 1.4 ಲಕ್ಷ ರೂ. ಗಳಿಸುತ್ತಾರೆ. ವಾಲ್ಮಾರ್ಟ್‌ನ $905 ಬಿಲಿಯನ್ ಸಾಮ್ರಾಜ್ಯದ ಹಿಂದಿನ ವ್ಯಕ್ತಿ ಫಾರ್ಚೂನ್ ಪ್ರಕಾರ, $1.5 ಮಿಲಿಯನ್ (ಸುಮಾರು ರೂ.13.5 ಕೋಟಿ) ಸಂಬಳ, $20.4 ಮಿಲಿಯನ್ (ಸುಮಾರು ರೂ.184 ಕೋಟಿ) ಸ್ಟಾಕ್ ಪ್ರಶಸ್ತಿಗಳು ಮತ್ತು $4.4 ಮಿಲಿಯನ್ (ಸುಮಾರು ರೂ.40 ಕೋಟಿ) ಬೋನಸ್‌ಗಳಾಗಿ ಒಟ್ಟು $27.5 ಮಿಲಿಯನ್ (ಸುಮಾರು ರೂ.248 ಕೋಟಿ) ಗಳಿಸಿದ್ದಾರೆ. ವೇತನ ವ್ಯತ್ಯಾಸವು ದಿಗ್ಭ್ರಮೆಗೊಳಿಸುವಂತಿದೆ. 1984 ರಲ್ಲಿ ಡೌಗ್ ಮೆಕ್‌ಮಿಲನ್ ವಾಲ್ಮಾರ್ಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಕಂಪನಿಯ ಗೋದಾಮುಗಳಲ್ಲಿ ಟ್ರೇಲರ್‌ಗಳನ್ನು ಇಳಿಸುವ ಮೂಲಕ ಗಂಟೆಗೆ $6.50 (ಸುಮಾರು ರೂ.585) ಗಳಿಸಿದರು. ಇಂದು, ಸಿಇಒ ಆಗಿ, ಅವರು ಗಂಟೆಗೆ ಸರಿಸುಮಾರು ರೂ. 2.8 ಲಕ್ಷ ಮತ್ತು ನಿಮಿಷಕ್ಕೆ ರೂ. 4,700 ಗಳಿಸುತ್ತಾರೆ, ಇದು ಅವರ ಆರಂಭಿಕ ಸಂಬಳಕ್ಕಿಂತ ಸುಮಾರು 481 ಪಟ್ಟು…

Read More

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಬಟ್ಟೆಯ ಬಗ್ಗೆ ಅಶ್ಲೀಲವಾಗಿ ವೇಶ್ಯೆ ಎಂಬುದಾಗಿ ಕಾಮೆಂಟ್ ಮಾಡಲಾಗಿತ್ತು. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರು ಬೇಸರ ವ್ಯಕ್ತ ಪಡಿಸಿದ್ದರು. ಈ ಬೆನ್ನಲ್ಲೇ ಅಶ್ಲೀಲ ಕಾಮೆಂಟ್ ಮಾಡಿದಂತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕಿ ನಯನಾ ಮೋಟಮ್ಮ ಅವರು ಉಡುಪಿ ವಿಚಾರವಾಗಿ ಇನ್ಟಾಗ್ರಾಂನಲ್ಲಿ ಹಾಕಿದ್ದಂತ ಪೋಸ್ಟ್ ಗೆ ಅವಹೇಳನಕಾರಿಯಾಗಿ ಅಶ್ಲೀಲ ಕಾಮೆಂಟ್ ಮಾಡಲಾಗಿತ್ತು. ಶಾಸಕಿಯ ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಿದ್ದಂತ ಆರೋಪಿಯೊಬ್ಬ ವೇಶ್ಯ ಎನ್ನುವಂತ ಪದ ಕೂಡ ಬಳಸಿದ್ದನು. ಈ ಹಿನ್ನಲೆಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಪಿಎ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read More

ಬೆಂಗಳೂರು: ನಟ ಯಶ್ ಅಭಿನಯದ ಟ್ಯಾಕ್ಸಿಕ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಈ ಟೀಸರ್ ನಲ್ಲಿ ಅಶ್ಲೀಲ ಕಂಟೆಂಟ್ ಇದೆ ಎಂಬುದಾಗಿ ರಾಜ್ಯ ಮಹಿಳಾ ಆಯೋಗಕ್ಕೆ ಎಎಪಿಯಿಂದ ದೂರು ನೀಡಲಾಗಿದೆ. ಇಂದು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತೆರಳಿದಂತ ಅಮ್ ಆದ್ಮಿ ಪಕ್ಷದ ಮುಖಂಡರು, ಇತ್ತೀಚೆಗೆ ಬಿಡುಗಡೆಯಾಗಿರುವ ಟಾಕ್ಸಿಕ್ ಚಲನಚಿತ್ರದ ಟೀಸರ್ ಅನ್ನು ಕೂಡಲೆ ರದ್ದುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಇಂದು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಈ ಟೀಸರ್ ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ ಎಂದು ಆಕ್ರೋಶ…

Read More