Author: kannadanewsnow09

ಬೆಂಗಳೂರು: ಆನ್ ಲೈನ್ ವಂಚಕರು ಜನರನ್ನು ವಂಚಿಸೋದಕ್ಕೆ ವಿವಿಧ ದಾರಿಗಳನ್ನು ಹಿಡಿಯುತ್ತಿದ್ದಾರೆ. ಈಗ ಹೊಸದೊಂದು ದಾರಿ ಕಂಡುಕೊಂಡಿರುವಂತ ವಂಚಕರು, ನಿಮ್ಮ ಮೊಬೈಲ್ ಗಳಿಗೆ ಮೆಸೇಜ್ ಕಳಿಸ್ತಾ ಇದ್ದಾರೆ. ಒಂದು ವೇಳೆ ನೀವು ಓಪನ್ ಮಾಡಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಸೈಬರ್ ವಂಚಕರ ಪಾಲಾಗೇ ಬಿಡುತ್ತೆ. ಅದು ಹೇಗೆ.? ಪೊಲೀಸರ ಎಚ್ಚರಿಕೆ ಏನು ಅಂತ ಮುಂದೆ ಓದಿ. ಆನ್ ಲೈನ್ ವಂಚನೆ ಬಗ್ಗೆ ಕರ್ನಾಟಕ ಪೊಲೀಸರು ಮಹತ್ವದ ಮಾಹಿತಿಯನ್ನು ಜನರಿಗಾಗಿ ಬಿಡುಗಡೆ ಮಾಡಿದ್ದಾರೆ. ಆ ಪತ್ರಿಕಾ ಪ್ರಕಟಣೆಯಲ್ಲಿ ವಂಚಕರು RAT(Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, What’sApp ಅಥವಾ text message ಮುಖಾಂತರ ಬ್ಯಾಂಕ್‌ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದು, ಅದನ್ನು ಓಪನ್ ಮಾಡಿದಲೆ ಸಾರ್ವಜನಿಕರಿಗೆ ಬರುವ ಎಲ್ಲಾ Text message ಗಳು ವಂಚಕರ ಮೊಬೈಲ್ ಗಳಿಗೆ Automatically, Message forwarding ಆಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನೂ…

Read More

ಬೆಂಗಳೂರು: ನಿಮ್ಮ ಜಮೀನಿನಲ್ಲಿ ಇರುವಂತ ಯಾವುದೇ ರೀತಿಯ ಮರಗಳನ್ನು ಕಡಿಯೋದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯೋದು ಕಡ್ಡಾಯ. ಒಂದು ವೇಳೆ ಅನುಮತಿ ಪಡೆಯದೇ ಕಡಿತಲೆ ಮಾಡಿದರೇ ನಿಮ್ಮ ವಿರುದ್ಧ ಅರಣ್ಯ ಕಾಯ್ದೆಯ ಅನುಸಾರ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಹಾಗಾದ್ರೇ ನಿಮ್ಮ ಜಮೀನಿನಲ್ಲಿ ಇರುವ ಮರಗಳನ್ನು ಕಡಿಯಲು ಅನುಮತಿ ಪಡೆಯೋದು ಹೇಗೆ? ನಿಯಮಗಳು ಏನು ಅಂತ ಮುಂದಿದೆ ಓದಿ. ಮರಗಳನ್ನು ಕಡಿಯುವುದರ ಬಗ್ಗೆ ನಿರ್ಬಂಧ ಮತ್ತು ಮರಗಳ ಸಂರಕ್ಷಣೆಯ ಹೊಣೆಗಾರಿಕೆ 8. ಮರಗಳನ್ನು ಕಡಿಯುವುದರ ಮೇಲೆ ನಿರ್ಬಂಧ (1) ಗೊತ್ತುಪಡಿಸಿದ ದಿನದಂದು ಮತ್ತು ಆ ದಿನದಿಂದ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ರೂಢಿ, ಆಚರಣೆ, ಕರಾರು ಅಥವಾ ಕಾನೂನು ಏನೇ ಇದ್ದರೂ, ಯಾರೇ ವ್ಯಕ್ತಿಯು, ಮರಗಳ ಅಧಿಕಾರಿಯ ಪೂರ್ವ ಅನುಮತಿ ಪಡೆದ ಹೊರತು, ತನ್ನ ಮಾಲೀಕತ್ವದಲ್ಲಿ ಅಥವಾ ಅಧಿಭೋಗದಲ್ಲಿ ಅಥವಾ ಅನ್ಯಥಾ ಇರುವ ಯಾವುದೇ ಜಮೀನಿನಲ್ಲಿ ಯಾವುದೇ ಮರವನ್ನು ಕಡಿಯತಕ್ಕದ್ದಲ್ಲ ಅಥವಾ ಕಡಿಯುವಂತೆ ಮಾಡತಕ್ಕದ್ದಲ್ಲ: [ಪರಂತು, ಮರ ಕಡಿಯುವುದರಲ್ಲಿ, ರಬ್ಬರ್ ಅಥವಾ ಚಹ ಸಾಗುವಳಿಗೆ…

Read More

ಶಿವಮೊಗ್ಗ: ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರೇ ಆಧಾರ. ನಾವು ಈಗಾಗಲೇ 14,499 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಪ್ರಥಮ ಬಾರಿಗೆ ನಮ್ಮ ಸರ್ಕಾರ 51000 ಅತಿಥಿ ಶಿಕ್ಷಕರನ್ನುನೇಮಿಸಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಇನ್ನೂ 10,800 ಹೊಸ ಶಿಕ್ಷಕರನ್ನು ಹಾಗೂ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದರು. ಈ ನಿಟ್ಟಿನಲ್ಲಿ ಸಂವಿಧಾನದ ಮಹತ್ವವನ್ನು ಅರಿತ ನಮ್ಮ ಸರ್ಕಾರವು ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರತಿದಿನ ಶಾಲೆಯಲ್ಲಿ ‘ಸಂವಿಧಾನದ ಪೀಠಿಕೆ’ಯನ್ನು ಓದುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಬೆಳಸುವುದು ನಮ್ಮ ಉದ್ದೇಶ ಹಾಗೂ ಇದು ಅವಶ್ಯಕತೆಯೂ ಹೌದು ಎಂದರು. ಕರ್ನಾಟಕದ ಮತ್ತು ಭಾರತದ ಭೂಪಟದಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದ್ದು ರಾಷ್ಟ್ರಕವಿ ಕುವೆಂಪು ಅವರು…

Read More

ಅಮೇರಿಕಾ: ಮೈನೆಯಲ್ಲಿ ಸಂಭವಿಸಿದ ಹಿಮಬಿರುಗಾಳಿಯಲ್ಲಿ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಸೋಮವಾರ ತಿಳಿಸಿದೆ ಎಂದು ಎಪಿ ವರದಿ ಮಾಡಿದೆ. ಎಫ್‌ಎಎ ಪ್ರಕಾರ, ಮೈನೆನ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವ್ಯವಹಾರ ಜೆಟ್ ಹಿಮಬಿರುಗಾಳಿಗೆ ಸಿಲುಕಿ ಏಳು ಜನರು ಸಾವನ್ನಪ್ಪಿದರು ಮತ್ತು ಒಬ್ಬ ಸಿಬ್ಬಂದಿ ಗಂಭೀರ ಗಾಯಗಳೊಂದಿಗೆ ಬದುಕುಳಿದರು. ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಬೊಂಬಾರ್ಡಿಯರ್ ಚಾಲೆಂಜರ್ 600 ಭಾನುವಾರ ರಾತ್ರಿ ಟೇಕ್ ಆಫ್ ಆಗುವಾಗ ನ್ಯೂ ಇಂಗ್ಲೆಂಡ್ ಮತ್ತು ದೇಶದ ಹೆಚ್ಚಿನ ಭಾಗವು ಚಳಿಗಾಲದ ಬಿರುಗಾಳಿಯಿಂದ ಬಳಲುತ್ತಿದ್ದಾಗ ಅಪಘಾತಕ್ಕೀಡಾಯಿತು. ಬೋಸ್ಟನ್‌ನಿಂದ ಸುಮಾರು 200 ಮೈಲುಗಳಷ್ಟು ಉತ್ತರದಲ್ಲಿರುವ ವಿಮಾನ ನಿಲ್ದಾಣವು ಅಪಘಾತದ ನಂತರ ಸ್ಥಗಿತಗೊಂಡಿತು. ಆ ಸಮಯದಲ್ಲಿ ಹಿಮಪಾತವು ಭಾರೀ ಪ್ರಮಾಣದಲ್ಲಿತ್ತು. ಭಾನುವಾರ ಬ್ಯಾಂಗೋರ್ ಚಳಿಗಾಲದ ಬಿರುಗಾಳಿಯ ಎಚ್ಚರಿಕೆಯನ್ನು ಹೊಂದಿತ್ತು. ಅಪಘಾತದ ಸಮಯದಲ್ಲಿ ಜೆರೆಮಿ ಬ್ರಾಕ್ NBC ಅಂಗಸಂಸ್ಥೆ WCSH ಗೆ ತಿಳಿಸಿದರು…

Read More

ಆಯುರ್ವೇದ ಮತ್ತು ನೈಸರ್ಗಿಕ ಪದಾರ್ಥಗಳಾದ ಶುಂಠಿ, ಅರಿಶಿನ, ಜೇನುತುಪ್ಪ, ಮತ್ತು ತುಳಸಿಯನ್ನು ಬಳಸಿ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸುವ ಸುರಕ್ಷಿತ, ಅಗ್ಗದ ವಿಧಾನಗಳಾಗಿವೆ. ಹಾಗಾದರೆ ಜಗತ್ತಿನ ಶಕ್ತಿಶಾಲಿ ಮನೆ ಮದ್ದುಗಳ ಬಗ್ಗೆ ಮಾಹಿತಿ ಮುಂದಿದೆ ಓದಿ.. ಕೆಮ್ಮು-ಕಫಕ್ಕೆ ಶುಂಠಿ-ಜೇನುತುಪ್ಪ, ಅಜೀರ್ಣಕ್ಕೆ ಜೀರಿಗೆ ನೀರು, ಮತ್ತು ತಲೆನೋವಿಗೆ ಲವಂಗದ ಎಣ್ಣೆ ಮಸಾಜ್ ಮುಂತಾದ ಪರಿಹಾರಗಳು ತಕ್ಷಣದ ಆರಾಮ ನೀಡುತ್ತವೆ. ಇವು ದೇಹದ ಕಲ್ಮಶಗಳನ್ನು ನಿವಾರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಪ್ರಮುಖ ಮನೆಮದ್ದುಗಳು ಮತ್ತು ಅವುಗಳ ಉಪಯೋಗಗಳನ್ನು ನಾವು ನೀಡಿದ್ದೇವೆ. ಗಮನಿಸಿ: ಈ ಮನೆಮದ್ದುಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಹಾರವಾಗಿದ್ದು, ದೀರ್ಘಕಾಲದ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಸಸ್ಯ ಬೇರು ಎಲೆಗಳಿಂದ ಔಷಧ ಪಂಚಭೂತ ತತ್ವಗಳ ಆಧಾರ ಸಹಿತ ವಾತ ಪಿತ್ತ ಕಫ ದೋಷಗಳ ಸರಿಪಡಿಸುತ ರೋಗ ತಡೆಗಟ್ಟುವ ಚಿಕಿತ್ಸೆಯ ತತ್ವ ಜೀವನ ಶೈಲಿ ಸರಿಪಡಿಸಿ ಗುಣಪಡಿಸಿ ಮಕ್ಕಳ ಸಮಸ್ಯೆ ಪ್ರೀತಿಯಿಂದ ಪರಿಹರಿಸಿ ಇಂದಿನ ಯಾಂತ್ರಿಕ ಜೀವನ ಶೈಲಿಗೆ ಸಹಕರಿಸಿ ಸರ್ವತೋಮುಖ ಅಭಿವೃದ್ಧಿಗೆ ಉಪಕಾರಿ ನಮ್ಮ ದೇಹದೊಳಗಣ…

Read More

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದಂತ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದರು. ಈ ಬಂಧನದ ಬಳಿಕ ಪೌರಾಯುಕ್ತೆ ಅಮೃತಾ ಗೌಡ ಮೊದಲ ಪ್ರತಿಕ್ರಿಯೆ ಏನಾಗಿತ್ತು ಅಂತ ಮುಂದಿದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಘಟನೆಯಿಂದಾಗಿ ನಮ್ಮ ಮನೆಯವರು ಬಹಳ ಹೆದರಿದ್ದರು. ಬೆದರಿಕೆ ಪತ್ರ ಬಂದಾಗ ನಾನು ನೀಡಿದ್ದೇನೆ. ಪೊಲೀಸರ ತನಿಖೆಗೆ ನಾನು ಸಹಕಾರ ನೀಡಿದ್ದೇನೆ ಎಂಬುದಾಗಿ ಮೊದಲ ಪ್ರತಿಕ್ರಿಯೆ ನೀಡಿದರು. ಅಂದಹಾಗೇ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ ಬಂಧಿಸಲಾಗಿದೆ. 3 ಜಿಲ್ಲೆಯ ಪೊಲೀಸರ ತಂಡದಿಂದ ರಾಜೀವ್ ಗೌಡ ಬಂಧಿಸಲಾಗಿದೆ. ಕಳೆದ ಎರಡು ದಿನಗಳಿಂದ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಯ ಪೊಲೀಸರಿಂದ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು. ಮಂಗಳೂರಿನಿಂದ ಎಸ್ಕೇಪ್ ರಾಜೀವ್ ಗೌಡ ಆಗಿದ್ದರು. ರಾಜೀವ್ ಗೌಡ ಬಂಧನಕ್ಕೆ ಕೇಂದ್ರ ವಲಯದ ಐಜಿಪಿ ಲಾಬೂರಾಮ್ ವಿಶೇಷ ತಂಡ ರಚಿಸಿದ್ದರು. ಜನವರಿ.12ರಂದು ಪೌರಾಯುಕ್ತೆ ಅಮೃತಾ ಗೌಡಗೆ ಕರೆ ಮಾಡಿ…

Read More

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ಮೇಡಕ್‌ನಲ್ಲಿ ಕೇವಲ 22 ರೂ. ಸಾಲದ ಆರೋಪದ ಮೇಲೆ ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಮೇಡಕ್ ಪೊಲೀಸರು ಮಂಗಳವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಇಬ್ಬರು ಪುರುಷರು ದಿನಗೂಲಿ ಕೆಲಸಕ್ಕಾಗಿ ಮೇಡಕ್‌ಗೆ ವಲಸೆ ಬಂದಿದ್ದರು. ಒಂದು ದಿನದ ಕೆಲಸದ ನಂತರ, ಅವರು ಸಂಜೆ ತಮ್ಮ ಸಂಪಾದನೆಯೊಂದಿಗೆ ಮದ್ಯವನ್ನು ಕುಡಿಯುತ್ತಿದ್ದರು. ಮೊಹಮ್ಮದ್ ಸಿರಾಜ್ ಮತ್ತು ಮಹೇಶ್ ಮತ್ತು ಇನ್ನೊಬ್ಬ ವ್ಯಕ್ತಿ ರವಿಕುಮಾರ್ ಒಂದೇ ಕೊಠಡಿಯನ್ನು ಹಂಚಿಕೊಂಡು ದಿನಗೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದರು. ಕಳೆದ ಗುರುವಾರ ಸಂಕ್ರಾಂತಿ ದಿನದಂದು, ಅವರು ಮದ್ಯವನ್ನು ಖರೀದಿಸಿ, ಮರದ ಕೆಳಗೆ ಕುಳಿತು ಕುಡಿಯಲು ಪ್ರಾರಂಭಿಸಿದರು. ನಂತರ ಮಹೇಶ್ ಸಿರಾಜ್‌ನ ಹಳೆಯ 22 ರೂ. ಸಾಲವನ್ನು ಮರುಪಾವತಿಸುವಂತೆ ಒತ್ತಾಯಿಸಿದಾಗ ತೀವ್ರ ವಾಗ್ವಾದ ನಡೆಯಿತು. ಕುಡಿತದ ಕೋಪದಲ್ಲಿ, ಮಹೇಶ್ ಸಿರಾಜ್‌ನ ತಲೆಯನ್ನು ಹಿಡಿದು ಮರಕ್ಕೆ ಹೊಡೆದನು. ನಂತರ ಅವನು ಹತ್ತಿರದ ಕಲ್ಲನ್ನು ತಂದು ಅವನ ತಲೆಗೆ ಬಲವಂತವಾಗಿ…

Read More

ಕೊಪ್ಪಳ: ನಿನ್ನೆ ಜನಸಂಪರ್ಕ ಸಭೆಯ ವೇಳೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮೇಲೆ ಕಲ್ಲೆಸೆತ ಮಾಡಲಾಗಿತ್ತು. ಈ ಘಟನೆ ಸಂಬಂಧ ಬಸವರಾಜ ಮಡಿವಾಳರ ವಿರುದ್ಧ ಪ್ರಕರಣ ದಾಖಲಾಗಿದೆ. ನಿನ್ನೆ ಕೊಪ್ಪಳದ ಬೆಣಕಲ್ ಗ್ರಾಮದಲ್ಲಿ ಬಸವರಾಜ ರಾಯರೆಡ್ಡಿ ಅವರು ಜನಸಂಪರ್ಕ ಸಭೆ ನಡೆಸುತ್ತಿದ್ದಂತ ಸಂದರ್ಭದಲ್ಲಿ ಅವರ ಮೇಲೆ ಕಲ್ಲೆಸೆತ ಉಂಟಾಗಿತ್ತು. ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕು ಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಬೆಣಕಲ್ ಪಿಡಿಓ ಚನ್ನಬಸಪ್ಪ ದೂರಿನ ಅನ್ವಯ ಕೊಪ್ಪಳದ ಕುಕನೂರು ಠಾಣೆಯಲ್ಲಿ ಬಸವರಾಜ ಮಡಿವಾಳರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/nationwide-bank-employee-strike-tomorrow-disruptions-in-banking-services-possible/

Read More

ನವದೆಹಲಿ: ಐದು ದಿನಗಳ ಕೆಲಸದ ವಾರವನ್ನು ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಲು ಜನವರಿ 27 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಿರ್ಧರಿಸಿರುವುದರಿಂದ ಮಂಗಳವಾರ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜನವರಿ 23 ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆಯು ಸಕಾರಾತ್ಮಕ ಫಲಿತಾಂಶವನ್ನು ನೀಡದ ನಂತರ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಪ್ರತಿನಿಧಿಸುವ ಒಂಬತ್ತು ಒಕ್ಕೂಟಗಳ ಒಕ್ಕೂಟವಾದ UFBU ಮುಷ್ಕರಕ್ಕೆ ಕರೆ ನೀಡಿದೆ. ಜನವರಿ 25 (ಭಾನುವಾರ) ಮತ್ತು ಜನವರಿ 26 (ಗಣರಾಜ್ಯೋತ್ಸವ) ರಂದು ಬ್ಯಾಂಕುಗಳು ಮುಚ್ಚಲ್ಪಟ್ಟಿರುವುದರಿಂದ, ಮಂಗಳವಾರದ ಮುಷ್ಕರವು ಸತತ ಮೂರು ದಿನಗಳವರೆಗೆ ಶಾಖಾ ಮಟ್ಟದ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಸಂಧಾನ ಪ್ರಕ್ರಿಯೆಯ ಸಮಯದಲ್ಲಿ ವಿವರವಾದ ಚರ್ಚೆಗಳ ಹೊರತಾಗಿಯೂ, ನಮ್ಮ ಬೇಡಿಕೆಯ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಆದ್ದರಿಂದ, ನಾವು ಮುಷ್ಕರವನ್ನು ಮುಂದುವರಿಸಲು ಒತ್ತಾಯಿಸಲಾಗಿದೆ ಎಂದು UFBU ನ ಘಟಕವಾದ ಅಖಿಲ ಭಾರತ…

Read More

ಬೆಂಗಳೂರು: ಸಂವಿಧಾನದ ಮುಖ್ಯಸ್ಥರಾದ ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ನಾಳೆ (ಜ.27) ಬೆಳಿಗ್ಗೆ 10.30 ಗಂಟೆಗೆ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಬಿಜೆಪಿ ಮತ್ತು ಜೆಡಿಎಸ್, ಪ್ರತಿಪಕ್ಷದವರೆಲ್ಲ ಸೇರಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಂಟಿ ಅಧಿವೇಶನವನ್ನು ಮುಗಿಸಿ ವಾಪಸ್ ಹೋಗುವ ಸಂದರ್ಭದಲ್ಲಿ ವಿಧಾನಸೌಧದ ಅಸೆಂಬ್ಲಿ ಸಭಾಂಗಣದಲ್ಲಿ ಮಾನ್ಯ ರಾಜ್ಯಪಾಲರಿಗೆ ಬೆರಳು ತೋರಿಸಿ, ಎಚ್ಚರಿಕೆ ಸಂದೇಶ ನೀಡಿ ಅಪಮಾನ ಮಾಡಿದ್ದಾರೆ. ಅಲ್ಲದೇ ಅಗೌರವವನ್ನು ತೋರಿಸಿದ್ದಾರೆ. ಅವರಿಗೆ ಧಿಕ್ಕಾರ ಕೂಗಿದ್ದಾರೆ ಎಂದು ಟೀಕಿಸಿದರು. ಈ ಹಿನ್ನೆಲೆಯಲ್ಲಿ ಬಿ.ಕೆ.ಹರಿಪ್ರಸಾದ್, ಎಸ್.ರವಿ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು. ಕರ್ನಾಟಕದಲ್ಲಿ ಪೌರಾಯುಕ್ತೆ ಅಮೃತಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ಹೀಯಾಳಿಸಿದ, ಅವರ ಗೌರವಕ್ಕೆ ಕುಂದು ಬರುವ ರೀತಿ ಅಪಮಾನ ಮಾಡಿದ ಕಾಂಗ್ರೆಸ್ಸಿನ ನಾಯಕ ರಾಜೀವ್ ಗೌಡರನ್ನು 15 ದಿನಗಳಿಂದ ಬಂಧಿಸಿಲ್ಲ.…

Read More