Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು: ಹದಿಹರೆಯದ ವಯಸ್ಸು ಎಂದರೆ ಕನಸುಗಳ ಬೆನ್ನತ್ತಿ ಹೋಗುವ ಕಾಲ. ಆದರೆ ಆ ವಯಸ್ಸಿನಲ್ಲೇ ಅಕ್ಷರಗಳನ್ನೇ ತನ್ನ ಉಸಿರಾಗಿಸಿಕೊಂಡು, ಜಾಗತಿಕ ಮಟ್ಟದ ದಾಖಲೆಗಳನ್ನು ಬರೆಯುತ್ತಾ ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಹೊಳೆಯುತ್ತಿರುವ ಅಪರೂಪದ ಪ್ರತಿಭೆ ಅಮನ ಜೆ. ಕುಮಾರ್. ಇತ್ತೀಚೆಗಷ್ಟೇ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನಲ್ಲಿ 12ನೇ ತರಗತಿ ಮುಗಿಸಿರುವ ಅಮನ, ಈಗ ತನ್ನ 5ನೇ ಕೃತಿ “ದಿ ಮಿಸ್ಟಿಕಲ್ ವೇವ್ಸ್” (The Mystical Waves) ಮೂಲಕ ಮತ್ತೆ ಸಾಹಿತ್ಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ​ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕೃತರು ಹಾಗೂ ಪ್ರಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಅಮನಳ ಈ 5ನೇ ಕೃತಿಯನ್ನು ಲೋಕಾರ್ಪಣೆಗೊಳಿಸಿ ಯುವ ಕವಯಿತ್ರಿಗೆ ಶುಭ ಹಾರೈಸಿದ್ದಾರೆ. ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಬಾನು ಮುಷ್ಟಾಕ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಈ ಕೃತಿಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ​ಪದಗಳ ಸಾಗರದಲ್ಲಿ ಕಾವ್ಯದ ನವಿಲುಗರಿ:…

Read More

ಬೆಳ್ತಂಗಡಿ : ಧರ್ಮಸ್ಥಳದ ಪ್ರತಿಷ್ಠಿತ ಗ್ರಾಮೋದ್ಯೋಗ ಸಂಸ್ಥೆಯಾಗಿರುವ, ಬೆಳ್ತಂಗಡಿಯಲ್ಲಿರುವ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್‌ ಸಂಸ್ಥೆಯಲ್ಲಿ ರಿಲಯನ್ಸ್‌ ಜಿಯೊದ ಹೊಸ ಮೊಬೈಲ್‌ ಟವರ್‌ ಅನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯ ಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಇದರೊಂದಿಗೆ ಈ ಪ್ರದೇಶದಲ್ಲಿ ರಿಲಯನ್ಸ್‌ ಜಿಯೊ ತನ್ನ ನೆಟ್‌ ವರ್ಕ್‌ ಅನ್ನು ಬಲಪಡಿಸಿದೆ. ಹೊಸದಾಗಿ ಉದ್ಘಾಟಿಸಲಾದ ಜಿಯೊ ಮೊಬೈಲ್‌ ಟವರ್‌ನಿಂದಾಗಿ ಈ ಕೈಗಾರಿಕಾ ಪಾರ್ಕ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕವು ಗಮನಾರ್ಹವಾಗಿ ವೃದ್ಧಿಸಲಿದೆ. ಇದು ಉದ್ಯಮಿಗಳು, ಮಹಿಳಾ ಸ್ವಸಹಾಯ ಗುಂಪುಗಳು, ಉದ್ಯೋಗಿಗಳು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಮತ್ತು ಸಂದರ್ಶಕರಿಗೆ ಪ್ರಯೋಜನಕಾರಿಯಾಗಲಿದೆ. ಉದ್ಯಮಗಳಿಗೆ ತಡೆರಹಿತ ಸಂವಹನ, ಡಿಜಿಟಲ್ ಸೌಕರ್ಯ, ಆನ್‌ಲೈನ್ ಕಲಿಕೆ, ವ್ಯಾಪಾರ ಕಾರ್ಯಾಚರಣೆಗಳು ಮತ್ತು ಸುಧಾರಿತ ಗ್ರಾಹಕ ಸೇವೆಗೆ ಸಹಕರಿಸಲಿದೆ. ಸಿರಿ ಮಾತೃಶ್ರೀ ಕೈಗಾರಿಕಾ ಉದ್ಯಾನವನವು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಭಾಗವಾಗಿದೆ. ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀರೇಂದ್ರ…

Read More

ಬೆಂಗಳೂರು: ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್ 4ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಅವರೊಂದಿಗೆ ಸಭೆ ನಡೆಸಿದ ಸಚಿವರು, ಚೀತಾಗಳಿಗಾಗಿಯೇ ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರತ್ಯೇಕವಾಗಿ ಸಿದ್ಧಪಡಿಸಿರುವ ಆವರಣದಲ್ಲಿ ಈ ಚಿತಾಗಳನ್ನು ಬಿಡಲಾಗುವುದು ಎಂದರು. ವನ್ಯಜೀವಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಏ.18ರ ಮಧ್ಯರಾತ್ರಿ ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಈ ಹೊಸ ಅತಿಥಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಬರಮಾಡಿಕೊಂಡಿದ್ದರು. ಈ ಚೀತಾಗಳು ಬನ್ನೇರುಘಟ್ಟ ಪರಿಸರ, ವಾತಾವರಣ, ಹವಾಮಾನಕ್ಕೆ ಹೊಂದಿಕೊಳ್ಳಲು ಪ್ರತ್ಯೇಕವಾಗಿ ಇಡಲಾಗಿತ್ತು. ಮತ್ತು ಇವುಗಳ ಆರೋಗ್ಯದ ಬಗ್ಗೆ ಸತತ ನಿಗಾ ಇಡಲಾಗಿತ್ತು. ಪ್ರಸ್ತುತ ಚಿತಾಗಳು ಸಂಪೂರ್ಣ ಆರೋಗ್ಯವಾಗಿದೆ ಎಂಬ ಮಾಹಿತಿ ಪಡೆದ ಸಚಿವರು, ಜೂನ್…

Read More

ಬೆಂಗಳೂರು: ಸಾಮಾಜಿಕ ಜಾಲತಾಣ ‘ಸ್ನ್ಯಾಪ್‌ಚಾಟ್’ (Snapchat) ಮೂಲಕ ಪರಿಚಯವಾಗಿ, ಪ್ರೇಮ ವಿವಾಹವಾಗಿದ್ದ ದಂಪತಿಗಳ ನಡುವೆ ಮದುವೆಯಾದ ಎರಡೇ ತಿಂಗಳಿಗೆ ಬಿರುಕು ಮೂಡಿದೆ. ಸಣ್ಣಪುಟ್ಟ ಕೌಟುಂಬಿಕ ಗಲಾಟೆಯ ಕಾರಣಕ್ಕೆ ಪತಿ ತನ್ನನ್ನು ತಿರಸ್ಕರಿಸಿದ್ದಾನೆ ಎಂದು ನೊಂದ ಪತ್ನಿಯೊಬ್ಬರು ತನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ​ಮೂಲತಃ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಹಾಗೂ ನರ್ಸಿಂಗ್ ವೃತ್ತಿ ಮಾಡಿಕೊಂಡಿದ್ದ ಮಹಿಳೆಯ ನಡುವೆ ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಹಾಗೂ ಚೇತನ್ ನಡುವಿನ ಸ್ನೇಹ ದಿನಕಳೆದಂತೆ ಗಾಢವಾಗಿ ಪ್ರೀತಿಗೆ ತಿರುಗಿತ್ತು. ಎರಡು ತಿಂಗಳ ಹಿಂದಷ್ಟೇ ಇವರಿಬ್ಬರು ಸಪ್ತಪದಿ ತುಳಿದಿದ್ದರು. ​ಹೆಂಡತಿ ಬೇಡ ಎಂದ ಪತಿ: ಕಾರಣವೇನು? ​ಮದುವೆಯಾದ ಮಹಿಳೆಗೆ ತಂದೆ-ತಾಯಿ ಇರಲಿಲ್ಲ ಎನ್ನಲಾಗಿದೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆರಂಭವಾಗಿದೆ. “ಮನೆಯಲ್ಲಿ ತಂದೆ-ತಾಯಿಗೆ ಪತ್ನಿ ಸರಿಯಾಗಿ ಗೌರವ ನೀಡುತ್ತಿಲ್ಲ” ಎಂಬ…

Read More

ನವದೆಹಲಿ: ದೇಶದಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರುಕಟ್ಟೆಗಳು ವೇಗವಾಗಿ ಬೆಳೆಯುತ್ತಿರುವ ಬೆನ್ನಲ್ಲೇ, ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಅಪಾಯಕಾರಿ ವಿದ್ಯಮಾನವೊಂದಕ್ಕೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) ಬ್ರೇಕ್ ಹಾಕಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ನಿಬಂಧನೆಗಳ ಅಡಿಯಲ್ಲಿ, ಡಿಜಿಟಲ್ ವೇದಿಕೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳು, ಸ್ಫೋಟಕ ವಸ್ತುಗಳು ಮತ್ತು ಅವುಗಳ ಪೂರ್ವಗಾಮಿಗಳ (ಪ್ರಿಕ್ಯೂಸರ್ಸ್) ಅನಧಿಕೃತ ಆನ್‌ಲೈನ್ ಮಾರಾಟ ಹಾಗೂ ಜಾಹೀರಾತುಗಳ ವಿರುದ್ಧ ಸಿಸಿಪಿಎ ಈಗ ಕಠಿಣ ನಿಯಂತ್ರಕ ಕ್ರಮವನ್ನು ಕೈಗೊಂಡಿದೆ. ​ಗ್ರಾಹಕರ ಸುರಕ್ಷತೆ, ಸಾರ್ವಜನಿಕ ಭದ್ರತೆ ಮತ್ತು ಜವಾಬ್ದಾರಿಯುತ ಇ-ಕಾಮರ್ಸ್ ಪದ್ಧತಿಗಳನ್ನು ಬಲಪಡಿಸುವುದು ಈ ಜಾಗೃತಿ ಮತ್ತು ನಿಯಂತ್ರಣ ಕ್ರಮದ ಮುಖ್ಯ ಗುರಿಯಾಗಿದೆ. ​ರಾಡಾರ್‌ನಲ್ಲಿ ಪ್ರಮುಖ ಇ-ಕಾಮರ್ಸ್ ವೇದಿಕೆಗಳು ​ಸಮರ್ಪಕ ಸುರಕ್ಷತಾ ಕ್ರಮಗಳು ಮತ್ತು ಕಟ್ಟುನಿಟ್ಟಾದ ಪರಿಶೀಲನಾ ಕಾರ್ಯವಿಧಾನಗಳಿಲ್ಲದೆ ಅಪಾಯಕಾರಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮುಕ್ತವಾಗಿ ಮಾರಾಟಕ್ಕೆ ಇಟ್ಟಿರುವುದನ್ನು ಪತ್ತೆಹಚ್ಚಿದ ಸಿಸಿಪಿಎ, ಕೆಳಗಿನ ಪ್ರಮುಖ ಡಿಜಿಟಲ್ ವೇದಿಕೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ: ​ಇಂಡಿಯಾಮಾರ್ಟ್ (IndiaMART) ​ಜಸ್ಟ್ ಡಯಲ್ (Justdial)…

Read More

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಚಿತ್ರರಂಗದಲ್ಲಿ ನಿಷೇಧ ಹೇರಲಾಗಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಈ ಕುರಿತು ಪ್ರಮುಖ ಸ್ಪಷ್ಟನೆ ನೀಡಿದೆ. ನಟನ ವಿರುದ್ಧ ಹೇರಿರುವುದು ಬ್ಯಾನ್ ಅಲ್ಲ, ಅದು ಕೇವಲ ‘ಅಸಹಕಾರ’ (ನಾನ್-ಕೋಆಪರೇಷನ್) ಮಾತ್ರ ಎಂದು ಎಫ್‌ಡಬ್ಲುಐಸಿಇ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ. ​ಬಹಳ ನಿರೀಕ್ಷೆ ಮೂಡಿಸಿದ್ದ ‘ಡಾನ್ 3’ (Don 3) ಚಿತ್ರದ ವಿವಾದದ ಬಳಿಕ ರಣವೀರ್ ಸಿಂಗ್ ವಿರುದ್ಧ FWICE ಅಸಹಕಾರ ನಿರ್ಣಯ ಘೋಷಿಸಿತ್ತು. ಇದಾದ ಬೆನ್ನಲ್ಲೇ ನಟನನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್ ಪಂಡಿತ್, “ಯಾರನ್ನೂ ಬ್ಯಾನ್ ಮಾಡಲು ನಾವು ಕೋರ್ಟ್ ಅಲ್ಲ. ನಮ್ಮ ಸಂಘಟನೆಯ 30 ವಿಭಾಗಗಳ ಸದಸ್ಯರು ರಣವೀರ್ ಸಿಂಗ್ ಜೊತೆ ಕೆಲಸ ಮಾಡಬಾರದು ಎಂದು ಮಾತ್ರ ಸೂಚನೆ ನೀಡಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ. ​ವಿವಾದಕ್ಕೆ ಕಾರಣವೇನು? ​ಎಫ್‌ಡಬ್ಲುಐಸಿಇ…

Read More

ಶಿವಮೊಗ್ಗ: ಇಲ್ಲಿನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್, 26 ವರ್ಷ ಅವರು ಮಂಗಳವಾರದಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾಗಿದ್ದು, ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 26ರಂದು ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಈರಣ್ಣ ಅವರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಸಂತಾಪ: ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕೆಎಸ್ಆರ್‌ಪಿ 8ನೇ ಪಡೆಯ ಕಮಾಂಡೆಂಟ್ ಆದ ಎಸ್. ಯುವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕಮಾಂಡೆಂಟ್ ಕೋರಿದ್ದಾರೆ.

Read More

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುಪಿಐ (UPI) ಪಾವತಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಕಿರಾಣಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಬಿಲ್‌ಗಳ ಪಾವತಿಯವರೆಗೆ ಎಲ್ಲದಕ್ಕೂ ನಾವು ಮೊಬೈಲ್ ಮೂಲಕವೇ ಹಣ ವರ್ಗಾವಣೆ ಮಾಡುತ್ತೇವೆ. ಆದರೆ, ಕೆಲವೊಮ್ಮೆ ನಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಟ್ರಾನ್ಸಾಕ್ಷನ್ ವಿಫಲವಾಗುತ್ತದೆ (Transaction Failed). ಇದು ಸಹಜವಾಗಿಯೇ ನಮಗೆ ಗೊಂದಲ ಉಂಟುಮಾಡುತ್ತದೆ. ​ಆದರೆ ನೆನಪಿಡಿ, ಪೇಮೆಂಟ್ ಫೇಲ್ ಆಗಲು ಹಣದ ಕೊರತೆಯೊಂದೇ ಕಾರಣವಾಗಿರುವುದಿಲ್ಲ. ಇದರ ಹಿಂದೆ ಹಲವು ತಾಂತ್ರಿಕ ಮತ್ತು ಭದ್ರತಾ ಕಾರಣಗಳಿರುತ್ತವೆ. ಯುಪಿಐ ಪಾವತಿಗಳು ಏಕೆ ವಿಫಲವಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ: ​೧. ನೆಟ್‌ವರ್ಕ್ ಅಥವಾ ಸರ್ವರ್ ಸಮಸ್ಯೆ (Network or Server Disruption) ​ಒಂದು ಯುಪಿಐ ವಹಿವಾಟು ಯಶಸ್ವಿಯಾಗಬೇಕಾದರೆ ನಿಮ್ಮ ಬ್ಯಾಂಕ್, ಹಣ ಪಡೆಯುವವರ ಬ್ಯಾಂಕ್ ಮತ್ತು ಯುಪಿಐ ನೆಟ್‌ವರ್ಕ್—ಈ ಮೂರೂ ವ್ಯವಸ್ಥೆಗಳು ಏಕಕಾಲದಲ್ಲಿ ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ. ​ಸರ್ವರ್ ಓವರ್‌ಲೋಡ್: ಅತಿ ಹೆಚ್ಚು ಜನ ಒಂದೇ ಸಮಯದಲ್ಲಿ ಯುಪಿಐ…

Read More

ಗುವಾಹಟಿ: ತೀವ್ರ ರಾಜಕೀಯ ಚರ್ಚೆ ಹಾಗೂ ವಿರೋಧದ ನಡುವೆಯೂ ಅಸ್ಸಾಂ ವಿಧಾನಸಭೆಯು ಬುಧವಾರ (ಮೇ 27) ಮಹತ್ವದ ‘ಏಕರೂಪ ನಾಗರಿಕ ಸಂಹಿತೆ’ (UCC) ವಿಧೇಯಕವನ್ನು ಅಂಗೀಕರಿಸಿದೆ. ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (BJP) ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬಲವಾಗಿ ಬೆಂಬಲಿಸಿದರೆ, ಮುಖ್ಯ ಪ್ರತಿಪಕ್ಷವಾದ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ​ಉತ್ತರಾಖಂಡ ಮತ್ತು ಗುಜರಾತ್ ಬಳಿಕ ದೇಶದಲ್ಲೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತಿರುವ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಈಗ ಅಸ್ಸಾಂ ಪಾತ್ರವಾಗಿದೆ. ​ಮಸೂದೆಯ ಮುಖ್ಯ ಉದ್ದೇಶಗಳೇನು? ​ರಾಜ್ಯದಲ್ಲಿನ ಎಲ್ಲಾ ನಾಗರಿಕರಿಗೂ ಧರ್ಮ ಬೇಧವಿಲ್ಲದೆ ಒಂದೇ ರೀತಿಯ ನಾಗರಿಕ ಕಾನೂನನ್ನು ಅನ್ವಯಿಸುವುದು ಈ ಮಸೂದೆಯ ಪ್ರಮುಖ ಆಶಯವಾಗಿದೆ. ಮುಖ್ಯವಾಗಿ ಕೆಳಗಿನ ವಿಷಯಗಳನ್ನು ಇದು ನಿಯಂತ್ರಿಸುತ್ತದೆ ಮತ್ತು ನಿಯಮಬದ್ಧಗೊಳಿಸುತ್ತದೆ: ​ವಿವಾಹ ಮತ್ತು ವಿಚ್ಛೇದನ (ಬಾಲ್ಯ ವಿವಾಹ ಹಾಗೂ ಬಹುಪತ್ನಿತ್ವಕ್ಕೆ ನಿಷೇಧ) ​ಆಸ್ತಿ ಉತ್ತರಾಧಿಕಾರ ಮತ್ತು ಹಕ್ಕುಗಳು ​ಸಹಜೀವನ (ಲೈವ್-ಇನ್ ರಿಲೇಶನ್‌ಶಿಪ್‌) ಸಂಬಂಧಗಳ ಕಡ್ಡಾಯ ನೋಂದಣಿ…

Read More

ಬೆಂಗಳೂರು: ಪಕ್ಷದ ಶಿಸ್ತು ಮತ್ತು ಜವಾಬ್ದಾರಿಯ ವಿಷಯದಲ್ಲಿ ಕಠಿಣ ನಿಲುವು ತಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಭೆಗೆ ಗೈರುಹಾಜರಾದ ಪದಾಧಿಕಾರಿಗಳಿಗೆ ತಕ್ಷಣವೇ ‘ಗೇಟ್ ಪಾಸ್’ ನೀಡುವ ಮೂಲಕ ಬೃಹತ್ ಶಾಕ್ ನೀಡಿದ್ದಾರೆ. ​ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಲಾ ಅವರ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ ಈ ನಾಯಕರನ್ನು ಪಕ್ಷದ ಹುದ್ದೆಗಳಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೈಬಿಡಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ​ಹುದ್ದೆ ಕಳೆದುಕೊಂಡ ಪ್ರಮುಖ ನಾಯಕರು ಯಾರು? ​ಪಕ್ಷ ಸಂಘಟನೆಯ ಅತ್ಯಂತ ಪ್ರಮುಖ ಸಭೆಯನ್ನು ಅಲಕ್ಷಿಸಿ ಗೈರಾದ ಹಿನ್ನೆಲೆಯಲ್ಲಿ ಮೂವರು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ 29 ಪ್ರಧಾನ ಕಾರ್ಯದರ್ಶಿಗಳು ತಮ್ಮ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವು ಪ್ರಮುಖ ಮುಖಗಳೂ ಸೇರಿವೆ: ​ನಿಕೇತ್ ರಾಜ್ ಮೌರ್ಯ (ಕೆಪಿಸಿಸಿ ವಕ್ತಾರ) ​ಭಾವನಾ ರಾಮಣ್ಣ (ಖ್ಯಾತ ನಟಿ ಹಾಗೂ ಕೆಪಿಸಿಸಿ ಪದಾಧಿಕಾರಿ) ​ಶಿವಮೂರ್ತಿ ನಾಯಕ್ ​ಎಂ.ಸಿ. ವೇಣುಗೋಪಾಲ್ ​ಷಣ್ಮುಖ…

Read More