Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಗೆ ಇದೀಗ ದೊಡ್ಡ ಮಟ್ಟದ ಸರ್ಜರಿ ಮಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಉಚಿತ ಗ್ಯಾರಂಟಿಗಳ ಹಣ ಅನರ್ಹರ ಪಾಲಾಗುತ್ತಿರುವುದನ್ನು ತಡೆಯಲು ಮತ್ತು ಯೋಜನೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಸರ್ಕಾರ ಕಠಿಣ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಸದ್ಯ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇದರಲ್ಲಿ ನಡೆಯುತ್ತಿರುವ ಹಣದ ದುರುಪಯೋಗವನ್ನು ತಡೆಗಟ್ಟುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ತನಿಖೆಗಳಲ್ಲಿ ಸತ್ತವರ ಹೆಸರಿಗೂ ದುಡ್ಡು ಹೋಗುತ್ತಿರುವುದು, ಹೆಸರೇ ಇಲ್ಲದ ಬ್ಯಾಂಕ್ಗಳಿಗೆ ಹಣ ಪಾವತಿಯಾಗಿರುವುದು ಹಾಗೂ ಕರ್ನಾಟಕದಲ್ಲೇ ಇಲ್ಲದ ಹೊರರಾಜ್ಯದ ಬ್ಯಾಂಕ್ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಜಮೆಯಾಗಿರುವ ಆಘಾತಕಾರಿ ಸತ್ಯಗಳು ಬೆಳಕಿಗೆ ಬಂದಿವೆ. 68 ಸಾವಿರಕ್ಕೂ ಹೆಚ್ಚು ಮೃತ ಮಹಿಳೆಯರ ಖಾತೆಗೆ ಹಣ ಜಮೆ! ಗೃಹಲಕ್ಷ್ಮಿ ಯೋಜನೆಯಡಿ ಜರಡಿ ಹಿಡಿಯಲು ಸರ್ಕಾರ ಮುಂದಾದಾಗ ಸಿಕ್ಕಿರುವ ಅಂಕಿ-ಅಂಶಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಮೃತ ಫಲಾನುಭವಿಗಳು: ಬರೋಬ್ಬರಿ 68,776 ಮೃತ ಮಹಿಳೆಯರ ಬ್ಯಾಂಕ್ ಅಕೌಂಟ್ಗಳಿಗೆ ಇಂದಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗುತ್ತಿದೆ.…
ಬೆಂಗಳೂರು : “ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು, ನಮ್ಮ ಸರ್ಕಾರ ಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ವೈದೇಹಿ ಆಸ್ಪತ್ರೆ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವೆಯಲ್ಲ ಎಂದು ಕೇಳಿದಾಗ, “ಅವರುಗಳಿರುವುದೇ ಟೀಕೆ ಮಾಡಲು. ನಾವು ಏನೇ ಒಳ್ಳೆಯದು ಮಾಡಲು ಮುಂದಾದರೂ ಅದಕ್ಕೆ ಅಡ್ಡಗಾಲು ಹಾಕುವುದಕ್ಕೆ ವಿರೋಧ ಪಕ್ಷಗಳಿರುವುದು. ಅವರ ಕೈಯಲ್ಲಿ ಆಗದಿದ್ದ ಕೆಲಸ ನಾವು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆರಂಭದಲ್ಲಿ ಕೆಲವು ಫಲಾನುಭವಿಗಳು ಬೇರೆಯವರ ದೂರವಾಣಿ ಸಂಖ್ಯೆ ಹಾಗೂ ಇತರೆ ಮಾಹಿತಿ ನೀಡಿದ್ದಾರೆ. ಬೇರೆಯವರ ಖಾತೆಗೆ ಹಣ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಮಾಡುವುದು ಸರ್ಕಾರದ ಉದ್ದೇಶ” ಎಂದು ತಿಳಿಸಿದರು. “ಸರ್ಕಾರವು ಕರ್ನಾಟಕದವರಿಗೆ ಈ…
ಶಿವಮೊಗ್ಗ: ಇಡೀ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಏಜೆಂಟ್ ತರಹ ವರ್ತಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದರ ವಿರುದ್ಧ ಸಾರ್ವಜನಿಕರು ತೀವ್ರವಾಗಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಮಾಜಿಕ ಹೋರಾಟಗಾರರಾದ ತೀ ನಾ ಶ್ರೀನಿವಾಸ್ ಕರೆ ನೀಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಿವೃತ್ತ ನೌಕರರ ಸಂಘದ ಪ್ರಮುಖರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಷ್ಟ್ರೀಕರಣದ ಇತಿಹಾಸ ಮತ್ತು ಇಂದಿನ ಸ್ಥಿತಿ ಹಿಂದೆ ದೇಶದಲ್ಲಿ ನೆಹರೂ ಹಾಗೂ ಇಂದಿರಾ ಗಾಂಧಿಯವರು ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ, ಶ್ರೀಮಂತರ ಮತ್ತು ಖಾಸಗಿಯವರ ಒಡೆತನದಲ್ಲಿದ್ದ ದೊಡ್ಡ ದೊಡ್ಡ ಉದ್ದಿಮೆಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಸಾಮಾನ್ಯ ಜನರಿಗೆ ಉತ್ತಮ ಸೇವೆ ಸಿಗಲಿ ಎಂಬ ಉದ್ದೇಶದಿಂದ ಇಂದಿರಾ ಗಾಂಧಿಯವರು ರಾತ್ರೋರಾತ್ರಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ, ದೇಶದ ಕಟ್ಟಕಡೆಯ…
ಮಂಗಳೂರು : “ಸರ್, ನಮಗೆ ಬರುತ್ತಿರುವ ಅಲ್ಪ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕಳೆದ 15 ವರ್ಷಗಳಿಂದ ಕನಿಷ್ಠ ವೇತನದಲ್ಲೇ ದುಡಿಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕಾಯಂ ಮಾಡಿ ಹಾಗೂ ವೇತನ ಹೆಚ್ಚಳ ಮಾಡಿ,” ಎಂದು ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್ ಒಬ್ಬರು ಆರೋಗ್ಯ ಸಚಿವ ಯು.ಟಿ ಖಾದರ್ ಎದುರು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ. ಆದರೇ ಸಚಿವರು ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂ ಅಸಾಧ್ಯ ಎಂಬುದಾಗಿ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರ ಎದುರು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕೆಲಸ ಮಾಡುತ್ತಿರುವ ಸ್ಟಾಫ್ ನರ್ಸ್ ಒಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನರ್ಸ್ ಅಳಲು – “ನಮಗೂ ವಯಸ್ಸಾಗುತ್ತಿದೆ”: ನಾವು ಕಳೆದ 15 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ. ಕೋವಿಡ್ನಂತಹ ಕಠಿಣ ಸಮಯದಲ್ಲೂ ಪ್ರಾಣದ…
ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜೂನ್ 21 ರಂದು ನಡೆಯಲಿರುವ ನೀಟ್ ಯುಜಿ (NEET UG 2026) ಮರುಪರೀಕ್ಷೆಯ ಅಡ್ಮಿಟ್ ಕಾರ್ಡ್ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರೊಂದಿಗೆ, ರದ್ದಾಗಿದ್ದ ಮೇ 3ರ ಪರೀಕ್ಷೆಯ ಶುಲ್ಕವನ್ನು ಹಿಂಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಖಾತೆ ವಿವರಗಳನ್ನು ಸರಿಪಡಿಸಲು/ದೃಢೀಕರಿಸಲು ಎನ್ಟಿಎ ಹೊಸ ವಿಂಡೋ ಮುಕ್ತಗೊಳಿಸಿದೆ. ಹೊಸ ಮಾರ್ಗಸೂಚಿ ಪ್ರಕಟ; ಧರ್ಮೇಂದ್ರ ಪ್ರಧಾನ್ ಕರೆ: ಮರುಪರೀಕ್ಷೆಗೂ ಮುನ್ನ ಎನ್ಟಿಎ ಹೊಸ ಸುರಕ್ಷತಾ ಕ್ರಮಗಳು ಮತ್ತು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದು, “ಯಾವುದೇ ಆತಂಕಕ್ಕೆ ಒಳಗಾಗದೆ, ಆತ್ಮವಿಶ್ವಾಸದಿಂದ ಇರಿ ಮತ್ತು ನಿಮ್ಮ ಅಧ್ಯಯನದ ಕಡೆಗೆ ಗಮನ ಹರಿಸಿ” ಎಂದು ಮನವಿ ಮಾಡಿದ್ದಾರೆ. https://twitter.com/NTA_Exams/status/2066151568198766823 ವಿವಾದಕ್ಕೆ ಕಾರಣವಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ: ವೈದ್ಯಕೀಯ ಸಂಸ್ಥೆಗಳ ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕಾಗಿ ದೇಶಾದ್ಯಂತ ಜಂಟಿಯಾಗಿ ನಡೆಸಲಾಗುವ ಈ ನೀಟ್ ಪರೀಕ್ಷೆಯು ಆರಂಭದಿಂದಲೂ ತೀವ್ರ ವಿವಾದಕ್ಕೆ ಸಿಲುಕಿದೆ. ಮೇ…
ಶಿವಮೊಗ್ಗ: ಕೃಷಿ ವಲಯದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದ್ದರೂ, ಇಂದಿಗೂ ಎತ್ತುಗಳನ್ನು ಕಟ್ಟಿ ಸಾಂಪ್ರದಾಯಿಕ ಶೈಲಿಯಲ್ಲಿ ನೇಗಿಲು ಹೊಡೆಯುತ್ತಾ, ಒಕ್ಕಲುತನದ ಪ್ರತಿಯೊಂದು ಕೆಲಸವನ್ನೂ ತಾವೇ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸ್ವಗ್ರಾಮದ ಶಾರದಮ್ಮ ಎಂಬ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಆದರೇ ಮಳೆಯಾಶ್ರಿತ ಜಮೀನಿಗೆ ಸರ್ಕಾರದ ಬೋರ್ ವೆಲ್ ಸೌಲಭ್ಯ ಸಿಗದೇ ಇರೋದು ದುರಂತವೇ ಸರಿ. ಹೀಗಾಗಿ ನಮಗೊಂದು ಗಂಗಾ ಕಲ್ಯಾಣ ಬೋರ್ ವೆಲ್ ಕೊಡಿಸಿ ಎಂಬುದಾಗಿ ಕ್ಷೇತ್ರದ ಜನಪ್ರತಿನಿಧಿಯನ್ನು ಭಾವುಕವಾಗಿ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡು ಗ್ರಾಮದ ರೈತ ಮಹಿಳೆ ಶಾರದಮ್ಮ ಪ್ರತಿದಿನ ಎರಡು ಕಿಲೋಮೀಟರ್ ನಡೆದುಕೊಂಡೇ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ಅವರು, ನೀರಾವರಿ ಸೌಲಭ್ಯವಿಲ್ಲದೆ ಎದುರಿಸುತ್ತಿರುವ ಕಷ್ಟಗಳನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. 2 ಎಕರೆ ಜಮೀನಿಗೆ ಇಲ್ಲ ನೀರಾವರಿ ಸೌಲಭ್ಯ: ಶಾರದಮ್ಮ ಅವರಿಗೆ ಒಟ್ಟು ಎರಡು ಎಕರೆ ಕೃಷಿ ಭೂಮಿ ಇದೆ. ಆದರೆ, ಈ ಜಮೀನಿಗೆ ಯಾವುದೇ…
ಬೆಂಗಳೂರು: ಈ ವರ್ಷ ಮಾರುಕಟ್ಟೆಯಲ್ಲಿ ಕಾಣುತ್ತಿರುವಷ್ಟು ನೇರಳೆ ಹಣ್ಣುಗಳನ್ನು ನಾನು ಕಳೆದ ಮೂರು ದಶಕಗಳಲ್ಲಿ ಎಂದೂ ನೋಡಿಲ್ಲ ಎಂಬುದು ಎಲ್ಲರ ಮಾತು. ಹಾಗಾದರೆ ಹಿರಿಯರು ಹೇಳುವ ಆಘಾತಕಾರಿ ಮಾಹಿತಿ ಮುಂದೆ ಓದಿ.. ನೇರಳೆ ಹಣ್ಣುಗಳು ಅಕ್ಷರಶಃ ರಾಶಿ ರಾಶಿಯಾಗಿ ಬಿದ್ದಿವೆ. ಕಳೆದ ವರ್ಷ ತೀರಾ ಕಡಿಮೆ ಫಲ ಬಿಟ್ಟಿದ್ದ ಮರಗಳೂ ಈಗ ನೇರಳೆ ಹಣ್ಣಿನಿಂದ ತುಂಬಿ ನೆಲದ ಮೇಲೆ ಸುರಿಯುತ್ತಿವೆ. ಫಲ ಬಿಟ್ಟಿದ್ದ ಮರಗಳಲ್ಲಂತೂ ಹಣ್ಣಿನ ಸುರಿಮಳೆಯೇ ಆಗಿದೆ. ಇದು ನಿಖರವಾಗಿ ಏನಾಗುತ್ತಿದೆ? ನಮ್ಮ ಹಿರಿಯರು ಯಾವಾಗಲೂ ಹೇಳುತ್ತಿದ್ದರು:”ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು ಹೀಗೆ ರಾಶಿ ರಾಶಿಯಾಗಿ ಬೀಳುತ್ತದೆಯೋ, ಆ ವರ್ಷ ಬರಗಾಲ ಇರುತ್ತದೆ” ಹಿರಿಯರ ಪಾರಂಪರಿಕ ಜ್ಞಾನವು ಸಸ್ಯಶಾಸ್ತ್ರದ ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಸಂಪೂರ್ಣ ಸರಿ ಮತ್ತು ನಿಖರವಾಗಿದೆ. ವಿಜ್ಞಾನದಲ್ಲಿ ಈ ರೋಚಕ ಮತ್ತು ಅಷ್ಟೇ ಆಘಾತಕಾರಿ ಪ್ರಕ್ರಿಯೆಗೆ “ಮಾಸ್ಟಿಂಗ್” (Masting) ಅಥವಾ “ಸ್ಟ್ರೆಸ್ ಫ್ರೂಟಿಂಗ್” (Stress Fruiting) ಎಂದು ಕರೆಯುತ್ತಾರೆ. ಮರಗಳು ತಮ್ಮನ್ನು ತಾವು ಮುಗಿಸಿಕೊಂಡು ಗರಿಷ್ಠ ಹಣ್ಣು…
ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ದಿನಸಿ ಪದಾರ್ಥಗಳ ಬೆಲೆ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ. ನಗರದಲ್ಲಿ ದೈನಂದಿನ ಬಳಕೆಯ ಪ್ರಮುಖ ಅಕ್ಕಿ ತಳಿಗಳಾದ ಸೋನಾ ಸ್ಟೀಮ್ ಮತ್ತು ಬಾಸುಮತಿ ಸೇರಿದಂತೆ ವಿವಿಧ ತರಹದ ಅಕ್ಕಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಸಗಟು ದರಗಳಲ್ಲೇ ಈ ಬದಲಾವಣೆ ಕಂಡುಬಂದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತಷ್ಟು ಹೆಚ್ಚಿನ ಹಣ ತೆರಬೇಕಾಗಿದೆ. ಅಕ್ಕಿ ತಳಿಗಳ ಹಳೆಯ ಮತ್ತು ಪ್ರಸ್ತುತ ದರಗಳ ವಿವರ (ಪ್ರತಿ ಕೆ.ಜಿ.ಗೆ): ಮಾರುಕಟ್ಟೆಯಲ್ಲಿ ಪ್ರಮುಖ ಅಕ್ಕಿ ತಳಿಗಳ ಹಿಂದಿನ ಹಾಗೂ ಪ್ರಸ್ತುತ ದರಗಳ ಹೋಲಿಕೆ ಪಟ್ಟಿ ಈ ಕೆಳಗಿನಂತಿದೆ: ಅಕ್ಕಿ ತಳಿಗಳು ಹಿಂದಿನ ದರ (₹) ಪ್ರಸ್ತುತ ದರ (₹) ಸೋನಾ ಸ್ಟೀಮ್ ರೈಸ್ ₹44 ₹53 ಸೋನಾ ರಾ ರೈಸ್ ₹48 – ₹58 ₹58 – ₹62 ದೋಸಾ ಅಕ್ಕಿ ₹38 ₹40 ಸೇಲಂ ಅಕ್ಕಿ (ಮಲ್ಲಿಗೆ ಇಡ್ಲಿ ಅಕ್ಕಿ) ₹40 ₹43 ಬಾಸುಮತಿ ಅಕ್ಕಿ ₹80…
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮಧುಮೇಹ (Diabetes) ಮತ್ತು ರಕ್ತದೊತ್ತಡದ (High Blood Pressure) ಕಾರಣದಿಂದಾಗಿ ಮೂತ್ರಪಿಂಡದ ಕಾಯಿಲೆಗಳು (Chronic Kidney Disease – CKD) ತೀವ್ರವಾಗಿ ಹೆಚ್ಚುತ್ತಿವೆ. ಕಿಡ್ನಿ ಕಾಯಿಲೆಯನ್ನು ವೈದ್ಯಕೀಯ ಜಗತ್ತಿನಲ್ಲಿ ‘ಸೈಲೆಂಟ್ ಕಿಲ್ಲರ್’ (Silent Killer) ಎಂದು ಕರೆಯಲಾಗುತ್ತದೆ. ಏಕೆಂದರೆ, ಇದು ಆರಂಭಿಕ ಹಂತದಲ್ಲಿ ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ತೋರಿಸದೆ, ಕಿಡ್ನಿಯು ಶೇಕಡಾ 60 ರಿಂದ 70 ರಷ್ಟು ಹಾನಿಗೊಳಗಾದ ನಂತರವೇ ಲಕ್ಷಣಗಳು ಹೊರಬೀಳುತ್ತವೆ. ಆದರೆ, ಕಿಡ್ನಿ ಸಂಪೂರ್ಣವಾಗಿ ಹದಗೆಟ್ಟು ಲಕ್ಷಾಂತರ ರೂಪಾಯಿ ವೆಚ್ಚದ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ (Transplant) ಹಂತ ತಲುಪುವ ಮುನ್ನವೇ, ಕೇವಲ ₹300 ರಿಂದ ₹700 ವೆಚ್ಚದ ಒಂದು ಸರಳ ಪರೀಕ್ಷೆಯ ಮೂಲಕ ಇದನ್ನು 5 ವರ್ಷಗಳ ಮುಂಚಿತವಾಗಿಯೇ ಪತ್ತೆಹಚ್ಚಬಹುದು! ಈ ಕುರಿತು ವೈದ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಲೇಖನದಲ್ಲಿ ಅದರ ಸಂಪೂರ್ಣ ವಿವರ ಇಲ್ಲಿದೆ. ಸಾಂಪ್ರದಾಯಿಕ ‘ಕಿಡ್ನಿ ಫಂಕ್ಷನ್ ಟೆಸ್ಟ್’ (KFT) ಗಿಂತ ಈ ಪರೀಕ್ಷೆ ಹೇಗೆ ಭಿನ್ನ? ಸಾಮಾನ್ಯವಾಗಿ…
ವರ್ಷದ 365 ದಿನಗಳೂ ಸುಲಭವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಏಕೈಕ ಹಣ್ಣು ಎಂದರೆ ಅದು ಬಾಳೆಹಣ್ಣು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಹಣ್ಣು ಕೇವಲ ರುಚಿಕರವಷ್ಟೇ ಅಲ್ಲ, ಪೋಷಕಾಂಶಗಳ ಗಣಿಯಾಗಿದೆ. ಆದರೆ, ನೀವು ಎಂದಾದರೂ ಯೋಚಿಸಿದ್ದೀರಾ? ನಿರಂತರವಾಗಿ 45 ದಿನಗಳ ಕಾಲ ಪ್ರತಿದಿನ ಒಂದು ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಮ್ಮ ದೇಹದಲ್ಲಿ ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎನ್ನುವ ಬಗ್ಗೆ ಮುಂದೆ ಓದಿ… ಆರೋಗ್ಯ ತಜ್ಞರು ಮತ್ತು ಪೌಷ್ಟಿಕಾಂಶ ತಜ್ಞರ ಪ್ರಕಾರ, ಬಾಳೆಹಣ್ಣನ್ನು ದಿನನಿತ್ಯದ ಆಹಾರದ ಭಾಗವಾಗಿಸಿಕೊಳ್ಳುವುದರಿಂದ ದೇಹಕ್ಕೆ ಅದ್ಭುತ ಶಕ್ತಿ ಮತ್ತು ರೋಗನಿರೋಧಕ ಶಕ್ತಿ ದೊರೆಯುತ್ತದೆ. 45 ದಿನಗಳ ಕಾಲ ಈ ಅಭ್ಯಾಸವನ್ನು ಮುಂದುವರಿಸುವುದರಿಂದ ದೇಹದಲ್ಲಿ ಆಗುವ ಪ್ರಮುಖ ಬದಲಾವಣೆಗಳು ಇಲ್ಲಿವೆ: 1. ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶದ ಮಟ್ಟ (ಪ್ರತಿ 100 ಗ್ರಾಂಗೆ): ಯುಎಸ್ಡಿಎ (USDA) ವರದಿಯ ಪ್ರಕಾರ, 100 ಗ್ರಾಂ ಮಾಗಿದ ಬಾಳೆಹಣ್ಣಿನಲ್ಲಿ ಈ ಕೆಳಗಿನ ಪೋಷಕಾಂಶಗಳಿರುತ್ತವೆ: ಕ್ಯಾಲೋರಿಗಳು: 89 ಕೆಸಿಎಲ್ (kcal)…














