Author: kannadanewsnow09

ಬೆಂಗಳೂರು: ಆರ್ಮಿ ಗ್ರೂಪ್-ಸಿ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆಯಲ್ಲಿ ಕಳ್ಳಾಟ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ 18 ಪರೀಕ್ಷಾರ್ಥಿಗಳನ್ನು ವಶಕ್ಕೆ ಪಡೆದಿರುವಂತ ಪೊಲೀಸರು, ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಬೆಂಗಳೂರಲ್ಲಿ ಆರ್ಮಿ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆ ವೇಳೆ ಕಳ್ಳಾಟ ಆರೋಪ ಕೇಳಿ ಬಂದಿತ್ತು. ಹೀಗಾಗಿ 18 ಪರೀಕ್ಷಾರ್ಥಿಗಳನ್ನು ಬೆಂಗಳೂರಿನ ಹಲಸೂರು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಿನ್ನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಈ ಆರ್ಮಿ ಗ್ರೂಪ್-ಸಿ ಹುದ್ದೆ ಪರೀಕ್ಷೆಯಲ್ಲಿ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಿದಂತ ಆರೋಪ ಕೇಳಿ ಬಂದಿತ್ತು. ಮೂರು ಮೊಬೈಲ್ ಹಾಗೂ ಎಲೆಕ್ಟ್ರಿಕ್ ಡಿವೈಸ್ ಗಳನ್ನು ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/horrific-accident-between-lorry-and-bike-mother-and-daughter-die-on-the-spot/ https://kannadanewsnow.com/kannada/derogatory-banner-against-prime-minister-put-up-in-front-of-vidhan-soudha-fir-filed/

Read More

ಬಾಗಲಕೋಟೆ: ಜಿಲ್ಲೆಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೊರಗಾವಿಯಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ತಾಯಿ ಮಂಜುಳಾ ದಳವಾಯಿ(28), ಪುತ್ರಿ ವೇದಾ(1) ಸಾವನ್ನಪ್ಪಿದ್ದಾರೆ. https://kannadanewsnow.com/kannada/highway-road-blockade-in-gejjalagere-mandya-more-than-80-farmer-leaders-arrested/ https://kannadanewsnow.com/kannada/these-are-the-top-10-companies-with-the-highest-revenue-in-the-world-do-you-know-what-rank-reliance-holds/

Read More

ಬೆಂಗಳೂರು: ವಿಧಾನಸೌಧದ ಮುಂದೆಯೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಹೀಗೆ ಫ್ಲೇಕ್ಸ್ ಅಳವಡಿಸಿದವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರಧಾನಿ ಕುರಿತು ಅವಹೇಳನಕಾರಿಯಾಗಿ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಬ್ಯಾನರ್ ಅಳವಡಿಸಿದ ಅಪರಿಚಿತರ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದರು. ಅಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ದೂರು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಬಿಜೆಪಿ ಮುಖಂಡರ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಆ ಬಳಿಕ ತನಿಖೆ ಆರಂಭಿಸಲಿರುವಂತ ವಿಧಾನಸೌಧ ಠಾಣೆಯ ಪೊಲೀಸರು, ಬ್ಯಾನರ್ ಅಳವಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ವಹಿಸಲಿದ್ದಾರೆ ಎನ್ನಲಾಗುತ್ತಿದೆ.

Read More

ಮಂಡ್ಯ : ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಸೋಮವಾರ ಬೆಂಗಳೂರು – ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ತಡೆ ನಡೆಸುತ್ತಿದ್ದ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮದ ಗ್ರಾ.ಪಂ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಧರಣಿ ಪ್ರತಿಭಟನೆಯು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಸ್ಥರು ಮೈಸೂರು – ಬೆಂಗಳೂರು ಸರ್ವಿಸ್ ರಸ್ತೆಯಲ್ಲಿ ಸಂಚಾರ ತಡೆ ಮಾಡಿ ಪ್ರತಿಭಟನೆಯನ್ನು ನಡೆಸುತ್ತಿದರು. ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ಗ್ರಾಮಸ್ಥರು ಆಗಮಿಸಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೂ ಮೊದಲು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿರವರು…

Read More

ಬೆಂಗಳೂರು: ವಿಜ್ಞಾನ ಮತ್ತು ಮುಂಚೂಣಿಯ ತಂತ್ರಜ್ಞಾನಗಳಿಂದ ನೈಜ-ಜಗತ್ತಿನ ಫಲಿತಾಂಶಗಳನ್ನು ಚುರುಕುಗೊಳಿಸಲು ಸಂಶೋಧಕರು, ಸಂಸ್ಥಾಪಕರು ಮತ್ತು ಉದ್ಯಮ ವಲಯವನ್ನು ಒಂದೇ ವೇದಿಕೆಯಲ್ಲಿ ತರುವ ಹೊಸ ಆವಿಷ್ಕಾರ ಹಾಗೂ ಉದ್ಯಮ ವೇದಿಕೆಯಾದ ಏಟ್ರಿಯಾ ವಿಶ್ವವಿದ್ಯಾಲಯದ ಏಟ್ರಿಯಾ ಬಿಯಾಂಡರ್ ಲ್ಯಾಬ್‌ಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಈ ಪ್ರಯೋಗಾಲಯವು ಸ್ವಯಂಚಾಲಿತ ಲಾಜಿಸ್ಟಿಕ್ಸ್ ವಿಮಾನ, ಗ್ರೀನ್ ಹೈಡ್ರೋಜನ್ ಮತ್ತು ಬಯೋಮೆಡಿಕಲ್ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ 9 ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಉದ್ಘಾಟನೆಯ ಬಳಿಕ, ಕರ್ನಾಟಕವು ಡೀಪ್‌ಟೆಕ್ ಮತ್ತು ವಿಜ್ಞಾನ ಆಧಾರಿತ ಆವಿಷ್ಕಾರದ ಮುಂದಿನ ಹಂತವನ್ನು ಹೇಗೆ ಮುನ್ನಡೆಸಬಹುದು ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಸಚಿವರು ಭಾಗವಹಿಸಿದರು. ಇದೇ ವೇಳೆ ಪ್ರಬಲವಾದ ಸಂಶೋಧನೆ ಹಾಗೂ ಅಭಿವೃದ್ಧಿ ಇಕೋ ಸಿಸ್ಟಂ ಅನ್ನು ನಿರ್ಮಿಸುವುದು, ಎಐ ಮತ್ತು ಜೈವಿಕ ತಂತ್ರಜ್ಞಾನದ ಸಮ್ಮಿಲನ ಹಾಗೂ ಸಾಗರ ಮತ್ತು ನೀಲಿ ಆರ್ಥಿಕ ತಂತ್ರಜ್ಞಾನಗಳಲ್ಲಿನ ಉದಯೋನ್ಮುಖ ಅವಕಾಶಗಳ…

Read More

ಶಿವಮೊಗ್ಗ: ಸಾಗರದ ಐತಿಹಾಸಿಕ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ಜಾತ್ರೆ 9 ದಿನಗಳ ಕಾಲ ನಡೆಯುತ್ತಿದ್ದು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಕುಟುಂಬ ಸಮೇತ ತಾಯಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಆ ಬಳಿಕ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಈ ಜಾತ್ರೆಯಲ್ಲಿ ಊರಿಗೆ ಊರೇ ಪಾಲ್ಗೊಂಡಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಬಂದು ಹೋಗುತ್ತಿದ್ದು ಅತ್ಯಂತ ವ್ಯವಸ್ಥಿತವಾಗಿ ಜಾತ್ರೆಯನ್ನು ಕಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದರು. ಇದೇ ಮೊದಲ ಬಾರಿಗೆ ನಾನು ಸಾಗರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ. ಈ ಜಾತ್ರೆ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು ತಾಯಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಭಾಗ್ಯ ನನಗೆ ಲಭ್ಯವಾಗಿದೆ ಎಂದ ಅವರು, ಜಾತ್ರೆಯನ್ನು ಮುನ್ನಡೆಸುವಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ರಾಜ್ಯ…

Read More

ಬೆಂಗಳೂರು : ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಬಿಎ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಇಂದು 5 ನಗರ ಪಾಲಿಕೆಗಳ ಕರಡು ನಗರ ಪಾಲಿಕೆ ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಕುರಿತು ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮ್ಯಾಪ್ ಗಡಿಗಳ ನವೀಕರಣಕ್ಕೆ ಸೂಚನೆ: ಅಧಿಸೂಚನಾ ವಾರ್ಡ್ ವಿವರಣೆಗಳಿಗೆ ಅನುಗುಣವಾಗಿ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸುವ ಸಲುವಾಗಿ, ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ಮೂಲಕ ಪರಿಶೀಲನೆ ಕೈಗೊಳ್ಳುವಂತೆ ಐಟಿ ವಿಭಾಗದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಚುನಾವಣಾ ವಿಭಾಗ ರಚನೆ: ಪ್ರತಿ ನಗರ ಪಾಲಿಕೆಯಲ್ಲಿ ಒಬ್ಬ ತಹಶೀಲ್ದಾರ್, ಒಬ್ಬ ಮ್ಯಾನೇಜರ್, ಒಬ್ಬ FDA, ಒಬ್ಬ SDA ಹಾಗೂ ಒಬ್ಬ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಚುನಾವಣಾ ವಿಭಾಗವನ್ನು ರಚಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು. ನೋಡಲ್ ಅಧಿಕಾರಿ…

Read More

ಲಕ್ಷ್ಮೀ ಸರಸ್ವತಿ ಮತ್ತು ಗಂಗೆ :- ವಿಷ್ಣುವಿಗೆ ಆಪ್ತರಾದ ಲಕ್ಷ್ಮಿ- ಸರಸ್ವತಿ- ಗಂಗೆಯರಲ್ಲಿ ಒಮ್ಮೆ ವಾಗ್ವಾದ ಬಂದಿತು. ವಿಷ್ಣು ಯಾವಾಗಲೂ ಗಂಗೆಯ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ದೇವಿ ಸರಸ್ವತಿಗೆ ಅಸಮಧಾನವಾಗಿ ಗಂಗೆ ಜೊತೆ ಒರಟಾಗಿ ವರ್ತಿಸಿದಳು. ಗಮನಿಸಿದ ಲಕ್ಷ್ಮಿ, ನಾರಾಯಣನಿಗೆ ಎಲ್ಲರೂ ಸಮಾನರು ಗಂಗೆ ಹೆಚ್ಚು ನೀನು ಕಡಿಮೆ ಅಂತ ಇಲ್ಲ ಎಂದು ಸಮಾಧಾನ ಹೇಳಿದಳು. ಆದರೆ ಸರಸ್ವತಿಗೆ ಸರಿ ಎನಿಸಲಿಲ್ಲ ನನ್ನನ್ನು ಸಮಾಧಾನ ಪಡಿಸಲು, ಲಕ್ಷ್ಮಿ ಈ ರೀತಿ ಮಾತನಾಡುತ್ತಿದ್ದಾಳೆ, ಇವಳೂ ಸಹ ಗಂಗೆ ಪರ ಎಂದು ತಪ್ಪು ತಿಳಿದು, ನೀನೇನು ನನ್ನನ್ನು ಸಮಾಧಾನ ಪಡಿಸುವುದು ಬೇಡ ನನಗೆ ಎಲ್ಲಾ ಗೊತ್ತಿದೆ ಎಂದು, ಕೋಪದಿಂದ ‘ಲಕ್ಷ್ಮಿಗೆ’ ನೀನು ಒಂದು ನದಿಯಾಗಿ- ಮುಂದೆ ಗಿಡವಾಗು ಎಂದು ಸರಸ್ವತಿ ಶಾಪ ಕೊಟ್ಟಳು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ…

Read More

ಬೆಂಗಳೂರು: ಗುಂತಕಲ್ ವಿಭಾಗದ ಗೂತ್ತಿ–ಧರ್ಮಾವರಂ ನಡುವೆ ಧರ್ಮಾವರಂ ಹಂತ-3ರ ಯಾರ್ಡ್ ಆಧುನೀಕರಣ ಹಾಗೂ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಿಂದ 22ರವರೆಗೆ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ. ರದ್ದು: ರೈಲು ಸಂಖ್ಯೆ 77213 ಗುಂತಕಲ್–ಹಿಂದೂಪುರ ಡೆಮು ಫೆಬ್ರವರಿ 16 ರಿಂದ 22 ರವರೆಗೆ ಮತ್ತು ರೈಲು ಸಂಖ್ಯೆ 77214 ಹಿಂದೂಪುರ–ಗುಂತಕಲ್ ಡೆಮು ರೈಲು ಫೆಬ್ರವರಿ 17 ರಿಂದ 23, 2026 ರವರೆಗೆ ರದ್ದುಗೊಳ್ಳಲಿವೆ. ಭಾಗಶಃ ರದ್ದು: ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು–ಅನಂತಪುರ ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದವರೆಗೆ ಮಾತ್ರ ಸಂಚರಿಸಲಿದೆ. ಅದೇ ರೀತಿ, ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66560 ಅನಂತಪುರ–ಕೆಎಸ್ಆರ್ ಬೆಂಗಳೂರು ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

Read More

ಬೆಂಗಳೂರು: ಮೇಕ್‌ಮೈಟ್ರಿಪ್ ವಿಶ್ವಾದ್ಯಂತ 560 ಕ್ಕೂ ಹೆಚ್ಚು ಹೋಟೆಲ್‌ಗಳೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಪಾಲುದಾರಿಕೆಯು ತನ್ನ ನೇರ ಅಂತಾರಾಷ್ಟ್ರೀಯ ಹೋಟೆಲ್ಗಳಲ್ಲಿ ತನ್ನ ಅಸ್ಥಿತ್ವ ವಿಸ್ತರಿಸುವ ಮೇಕ್‌ಮೈಟ್ರಿಪ್‌ನ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಅಂತಾರಾಷ್ಟ್ರೀಯ ಹೋಟೆಲ್‌ಗಳನ್ನು ಬುಕ್ ಮಾಡುವ ಭಾರತೀಯ ಪ್ರಯಾಣಿಕರಿಗೆ ಈ ವೇದಿಕೆಯು ಹೆಚ್ಚು ಜನಪ್ರಿಯ ತಾಣವಾಗಿದೆ. ಕಳೆದ ವರ್ಷದಲ್ಲಿ, ಮೇಕ್‌ಮೈಟ್ರಿಪ್ 192 ದೇಶಗಳಲ್ಲಿ 4,350 ಕ್ಕೂ ಹೆಚ್ಚು ನಗರಗಳಲ್ಲಿ 77,900 ಕ್ಕೂ ಹೆಚ್ಚು ವಿಶಿಷ್ಟ ಹೋಟೆಲ್‌ಗಳನ್ನು ಮಾರಾಟ ಮಾಡಿದೆ. 2024 ಕ್ಕೆ ಹೋಲಿಸಿದರೆ 2025 ರಲ್ಲಿ ಮಾರಾಟವಾದ ವಿಶಿಷ್ಟ ಹೋಟೆಲ್‌ಗಳ ಸಂಖ್ಯೆ 17% ರಷ್ಟು ಹೆಚ್ಚಾಗಿದೆ. ಗಮನಾರ್ಹವಾಗಿ, ಈ ಬುಕಿಂಗ್‌ಗಳಲ್ಲಿ ಸುಮಾರು ಮೂರನೇ ಒಂದು ಭಾಗವು ಪ್ರೀಮಿಯಂ ಹೋಟೆಲ್ ವರ್ಗದಲ್ಲಿದ್ದು, ಸರಾಸರಿ ಕೊಠಡಿ-ರಾತ್ರಿ ದರ ₹15,000 ಮೀರಿದೆ. ಈ ಘೋಷಣೆಯೊಂದಿಗೆ, ಭಾರತೀಯ ಪ್ರಯಾಣಿಕರು ಅನಂತರಾ ಹೋಟೆಲ್ಸ್ & ರೆಸಾರ್ಟ್ಸ್, ಎಲೆವಾನಾ ಕಲೆಕ್ಷನ್, ದಿ ವೋಲ್ಸೆಲಿ ಹೋಟೆಲ್ಸ್, ಟಿವೋಲಿ ಹೋಟೆಲ್ಸ್ & ರೆಸಾರ್ಟ್ಸ್, ಮೈನರ್ ರಿಸರ್ವ್ ಕಲೆಕ್ಷನ್, ಎನ್ಎಚ್ ಕಲೆಕ್ಷನ್ ಹೋಟೆಲ್ಸ್ &…

Read More