Author: kannadanewsnow09

ಬೆಂಗಳೂರು: ಕೆಸೆಟ್ ಪರೀಕ್ಷೆ 2023, 2024, 2025ರಲ್ಲಿ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುಡ್ ನ್ಯೂಸ್ ನೀಡಿದೆ. ಅದೇ ಒಂದು ಬಾರಿಗೆ ದಾಖಲಾತಿ ಪರಿಶೀಲನೆಗೆ ಅವಕಾಶ ನೀಡಿದ್ದು, ಸ್ಥಳದಲ್ಲೇ ಪ್ರಮಾಣ ಪತ್ರ ವಿತರಿಸೋದಕ್ಕೆ ನಿರ್ಧರಿಸಲಾಗಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, KSET: 2023, 2024 ಮತ್ತು 2025ರ ಕೆ-ಸೆಟ್ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅನೇಕರು ನಾನಾ ಕಾರಾಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಂತಹವರ ಅನುಕೂಲಕ್ಕೆ ಡಿ.10 ಮತ್ತು 11ರಂದು ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ. ಡಿ.10, 11ರಂದು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ KEA ವೆಬ್ ಸೈಟ್ ನೋಡಿ ಎಂಬುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. https://twitter.com/KEA_karnataka/status/1997287196609724726 https://kannadanewsnow.com/kannada/deadly-shooting-in-south-africa-11-people-including-three-children-killed/ https://kannadanewsnow.com/kannada/breaking-no-need-to-answer-calls-and-emails-after-work-new-bill-introduced-in-parliament/

Read More

ದಕ್ಷಿಣ ಆಫ್ರಿಕಾ: ಇಲ್ಲಿನ ರಾಜಧಾನಿ ಪ್ರಿಟೋರಿಯಾದಲ್ಲಿರುವ ಹಾಸ್ಟೆಲ್‌ಗೆ ಶನಿವಾರ ಬಂದೂಕುಧಾರಿಗಳು ನುಗ್ಗಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳವೊಂದರಲ್ಲಿ ಮೂರು ವರ್ಷದ ಮಗು ಸೇರಿದಂತೆ 11 ಜನರನ್ನು ಕೊಂದಿದ್ದಾರೆ. ಅಪರಾಧದಿಂದ ಬಳಲುತ್ತಿರುವ 63 ಮಿಲಿಯನ್ ಜನರ ದೇಶವನ್ನು ಬೆಚ್ಚಿಬೀಳಿಸಿದ ಸಾಮೂಹಿಕ ಗುಂಡಿನ ದಾಳಿಯ ಸರಣಿಯಲ್ಲಿ ಈ ದಾಳಿ ಇತ್ತೀಚಿನದು, ಇದು ವಿಶ್ವದ ಅತಿ ಹೆಚ್ಚು ಕೊಲೆ ದರಗಳಲ್ಲಿ ಒಂದಾಗಿದೆ. “ಒಟ್ಟು 25 ಜನರಿಗೆ ಗುಂಡು ಹಾರಿಸಲಾಗಿದೆ ಎಂದು ನಾನು ದೃಢೀಕರಿಸಬಲ್ಲೆ” ಎಂದು ಪೊಲೀಸ್ ವಕ್ತಾರೆ ಅಥ್ಲೆಂಡಾ ಮಾಥೆ ಹೇಳಿದರು, 14 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ಪ್ರಿಟೋರಿಯಾದಿಂದ ಪಶ್ಚಿಮಕ್ಕೆ 18 ಕಿಲೋಮೀಟರ್ (11 ಮೈಲುಗಳು) ದೂರದಲ್ಲಿರುವ ಸೌಲ್ಸ್‌ವಿಲ್ಲೆ ಪಟ್ಟಣದಲ್ಲಿ ಘಟನಾ ಸ್ಥಳದಲ್ಲಿ ಹತ್ತು ಮಂದಿ ಸಾವನ್ನಪ್ಪಿದರು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಅವರು ಹೇಳಿದರು. ಬೆಳಿಗ್ಗೆ 4:30 ರ ಸುಮಾರಿಗೆ (0230 GMT) ಹಾಸ್ಟೆಲ್‌ನೊಳಗೆ ಮೂವರು ಬಂದೂಕುಧಾರಿಗಳು “ಅಕ್ರಮ ಶೆಬೀನ್” ಎಂದು ಮ್ಯಾಥೆ ವಿವರಿಸಿದ ಸ್ಥಳಕ್ಕೆ ಪ್ರವೇಶಿಸಿ ಮದ್ಯಪಾನ ಮಾಡುತ್ತಿದ್ದ…

Read More

ಬೆಂಗಳೂರು: ಇಂಡಿಗೊ ವಿಮಾನಗಳ ಸಂಚಾರ ರದ್ದಾಗಿರುವ ಕಾರಣ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ‌ ಪ್ರವೇಶಕ್ಕೆ ಡಿ.8ರವರೆಗೆ ದಿನಾಂಕ ವಿಸ್ತರಿಸಿದೆ. ಈ ಸಂಬಂಧ ಅನೇಕ ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣ ಈ ತೀರ್ಮಾನ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಛಾಯ್ಸ್ ದಾಖಲಿಸಲು ಡಿ.8ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ. ಛಾಯ್ಸ್-1 & 2 ದಾಖಲಿಸಿದವರು ಡಿ.8ರಂದು 12.30ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಡಿ.8ರಂದು ಮಧ್ಯಾಹ್ನ 2.30ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಬೇಕು. ಮೂಲ ದಾಖಲೆ ಸಲ್ಲಿಸಿದ ನಂತರ ಡಿ.8ರೊಳಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. https://kannadanewsnow.com/kannada/nita-ambani-felicitates-national-award-winning-desi-artists-bollywood-stars-also-attend/ https://kannadanewsnow.com/kannada/breaking-no-need-to-answer-calls-and-emails-after-work-new-bill-introduced-in-parliament/

Read More

ಮುಂಬೈ : ಸ್ವದೇಶ್ ನಿಂದ ಆರಂಭವಾದಂಥ ಪ್ರತಿಷ್ಠಿತ ಮಳಿಗೆ ಇರೋಸ್ (Eros) ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅದರ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಕಲಾವಿದರು ಹಾಗೂ ಕುಶಲಕರ್ಮಿಗಳನ್ನು ಸನ್ಮಾನಿಸಿದರು. ಭಾರತದ ವೈವಿಧ್ಯಮಯ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಮುಂದುವರಿಸಿಕೊಂಡು ಬಂದಂಥ ಕಲಾವಿದರು ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳು ಈ ಕಾರ್ಯಕ್ರಮಕ್ಕೆ ಕಳೆ ತಂದಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ತಾರಾ ಬಳಗವೇ ತುಂಬಿಹೋಗಿತ್ತು. ಆದ್ದರಿಂದ ಒಂದಿಷ್ಟು ಗ್ಲ್ಯಾಮರ್ ಕೂಡ ಸೇರ್ಪಡೆಯಾಯಿತು. ಮಾಧ್ಯಮಗಳ ಸಮ್ಮುಖದಲ್ಲಿ ನೀತಾ ಅಂಬಾನಿ ಅವರು ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳನ್ನು ಗೌರವಿಸಿದರು. ಮತ್ತು “ಇವರೆಲ್ಲ ಭಾರತ ದೇಶದ ಹೆಮ್ಮೆ ಹಾಗೂ ಈ ರಾತ್ರಿಯಲ್ಲಿನ ನಿಜವಾದ ತಾರೆಗಳು,” ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು. “ನಾವು ನಿಮ್ಮನ್ನೆಲ್ಲ ಸ್ವದೇಶ್ ಗೆ ಸ್ವಾಗತಿಸುತ್ತೇವೆ. ನಮ್ಮ ಕಲಾವಿದರು- ಕುಶಲಕರ್ಮಿಗಳನ್ನು ಗೌರವಿಸುವ ಮೂಲಕ ಹಬ್ಬದ ಋತುವಿನ ಆರಂಭವನ್ನು ಈ ದಿನ ಸಂಭ್ರಮಿಸುತ್ತಾ ಇದ್ದೇವೆ. ಅವರು ಭಾರತದ ಹೆಮ್ಮೆ ಹಾಗೂ ಈ ರಾತ್ರಿಯ…

Read More

ಬೆಂಗಳೂರು : ಟ್ರೆಂಡ್ಸ್ ಬ್ರ್ಯಾಂಡ್ ಇದೀಗ ಪಾರ್ಟಿ ಫ್ಯಾಷನ್‌ಗೆ ಹೊಸ ರೂಪ ನೀಡಿದೆ. ಬೆಂಗಳೂರು ಮೂಲದ ಏಜೆನ್ಸಿ ಫ್ಯಾಂಟಮ್ ಐಡಿಯಾಸ್ ನೊಂದಿಗೆ ಟ್ರೆಂಡ್ಸ್ ತನ್ನ ಇತ್ತೀಚಿನ ಅಭಿಯಾನ “ಟ್ರೆಂಡ್ಸ್ ಪಾರ್ಟಿ ಕ್ರ್ಯಾಶರ್ಸ್ – ಫ್ಯಾಷನ್ ದಟ್ ಗೆಟ್ಸ್ ಯು” ಪರಿಚಯಿಸಿದೆ. ಜೆನ್ ಜೀ ಸೆನ್ಸೇಷನ್ ಮತ್ತು ಬ್ರಾಂಡ್‌ನ ಹೊಸ ರಾಯಭಾರಿ ಅನೀತ್ ಪಡ್ಡಾ ಅವರು ಈ ಅಭಿಯಾನದ ಭಾಗವಾಗಿದ್ದಾರೆ. ಟ್ರೆಂಡ್ಸ್, ಭಾರತದ ಅತಿದೊಡ್ಡ ಫ್ಯಾಷನ್ ತಾಣವಾಗಿದ್ದು, ಅದರ ಎಲ್ಲಾ ಸ್ವರೂಪಗಳಲ್ಲಿ 1000 ಕ್ಕೂ ಹೆಚ್ಚು ನಗರಗಳಲ್ಲಿ 2000 ಕ್ಕೂ ಹೆಚ್ಚು ಮಳಿಗೆಗಳ ಬಲವಾದ ಜಾಲವನ್ನು ಹೊಂದಿದೆ. ಇದು 100 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉಡುಪು ಮತ್ತು ಪರಿಕರಗಳ ಬ್ರಾಂಡ್‌ಗಳನ್ನು ಹೊಂದಿದೆ ಮತ್ತು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ 20 ಸ್ವಂತ ಬ್ರಾಂಡ್‌ಗಳನ್ನು ಹೊಂದಿದೆ. ಡಿಸೆಂಬರ್ ಪಾರ್ಟಿ ಋತುವಿನಲ್ಲಿ ಬಿಡುಗಡೆಯಾದ ಅಭಿಯಾನವು (ಮದುವೆ, ಕ್ರಿಸ್‌ಮಸ್, ಹೊಸ ವರ್ಷ ಮತ್ತು ಅಂತಹ ಇತರ ಶುಭಸಮಾರಂಭಗಳು) ಹಿಂದೆಂದೂ ನೋಡದ ಬ್ರ್ಯಾಂಡ್‌ನ ವಿಶೇಷ…

Read More

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿಋತಿ(ರಾಕ್ಷಸ)- ನೈಋುತ್ಯ. ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಧಿಪತಿ. ಇವನು…

Read More

ನವದೆಹಲಿ: ಎರೋಸ್ ನಲ್ಲಿರುವಂತ ಸ್ವದೇಶ್ ಫ್ಲ್ಯಾಗ್ ಶಿಪ್ ಅಂಗಡಿಯಲ್ಲಿ ಸ್ವದೇಶಿ ಉತ್ಪನ್ನಗಳ ಕುರಿತು ವಿಶೇಷ ಆಚರಣೆ ನಡೆಸಲಾಗುತ್ತಿದೆ. ಈ ವೇಳೆಯಲ್ಲಿ ನೀತಾ ಅಂಬಾನಿಯವರು ನವಿಲು ನೀಲಿ ಬನಾರಸಿ ಸೀರೆಯುಟ್ಟು ಗಮನ ಸೆಳೆದರು. ನೀತಾ ಅಂಬಾನಿ ಭಾರತದ ಕಲಾವಿದರು ಮತ್ತು ಕುಶಲಕರ್ಮಿಗಳ ಗೌರವಾರ್ಥವಾಗಿ ಈರೋಸ್‌ನಲ್ಲಿರುವ ಸ್ವದೇಶ್ ಫ್ಲ್ಯಾಗ್‌ಶಿಪ್ ಅಂಗಡಿಯಲ್ಲಿ ವಿಶೇಷ ಆಚರಣೆಯನ್ನು ಆಯೋಜಿಸಿದ್ದರು. ಅವರು ಸ್ವದೇಶ್‌ನ ನವಿಲು ನೀಲಿ ಬನಾರಸಿ ಸೀರೆಯನ್ನು ಧರಿಸಿದ್ದರು. ಇದು ಸಂಕೀರ್ಣವಾದ ಮೀನಾ ಲಕ್ಷಣಗಳು ಮತ್ತು ಸಾಂಪ್ರದಾಯಿಕ ಕಧುವಾ ನೇಯ್ಗೆ ತಂತ್ರವನ್ನು ಒಳಗೊಂಡಿತ್ತು. ಅವರ ಕಸ್ಟಮ್ ಮನೀಶ್ ಮಲ್ಹೋತ್ರಾ ಬ್ಲೌಸ್ ಪೋಲ್ಕಿ ಬಾರ್ಡರ್, ಕೈಯಿಂದ ಚಿತ್ರಿಸಿದ ದೇವತೆ ಗುಂಡಿಗಳು ಮತ್ತು ಅವರ ವೈಯಕ್ತಿಕ ಸಂಗ್ರಹದಿಂದ ವಿಂಟೇಜ್ ಸ್ಪಿನೆಲ್ ಟಸೆಲ್ ಅನ್ನು ಹೊಂದಿತ್ತು. ಅವರು 100 ವರ್ಷಗಳಿಗಿಂತ ಹಳೆಯದಾದ ಪ್ರಾಚೀನ ಕುಂದನ್ ಪೋಲ್ಕಿ ಕಿವಿಯೋಲೆಗಳು, ಸ್ವದೇಶ್‌ನಿಂದ ಕರಕುಶಲ ಜಾಡೌ ಪಕ್ಷಿ ಉಂಗುರ ಮತ್ತು ಅವರ ತಾಯಿಯ ಪರಂಪರೆಯ ಹಾತ್ ಫೂಲ್ – ಅಮೂಲ್ಯವಾದ ಕುಟುಂಬ ವಸ್ತುಗಳನ್ನು ಧರಿಸಿ, ಎಲ್ಲರ ನೋಟವನ್ನು…

Read More

ಬೆಂಗಳೂರು: ಹೈಕೋರ್ಟ್ ಆದೇಶದ ಪ್ರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ನ 3ನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ. ಅಕ್ಟೋಬರ್‌ 24ರಂದು ಕೆಇಎ ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶ ವನ್ನು ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ಗಂಟೆಯೊಳಗೆ ಇ-ಮೇಲ್ ( keauthority-ka@nic.in ) ಮೂಲಕ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ. ಡಿ. 8ರಂದು ಬೆಳಿಗ್ಗೆ‌ 11ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು‌ ಹಂಚಿಕೆಯಾದವರು ಡಿ.10ರೊಳಗೆ ಶುಲ್ಕ ಪಾವತಿಸಬೇಕು (ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸುವ ಮೂಲಕ). ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು, ಡಿ.11ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಇಚ್ಚೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಸಂಬಂಧಪಟ್ಟ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಡಿ.7ರ ನಾಳೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ದಿನಾಂಕ 07.12.2025 ರ ಭಾನುವಾರದಂದು ತುರ್ತು ಕೆಲಸದ ನಿಮಿತ್ತ ಎಫ್-7 ಮಂಗಳಬೀಸು, ಚಂದ್ರಮಾವಿನಕೊಪ್, ಇಂಡಸ್ಟ್ರಿಯಲ್ ಏರಿಯಾ, ಕೆ.ಎ.ಐ.ಡಿ.ಬಿ ಇಂಡಸ್ಟ್ರಿಯಲ್ ವಸಾಹತು, ಅಗ್ರಹಾರ, ಹೆರಿಗೆ ಆಸ್ಪತ್ರೆ ಸುತ್ತ ಮುತ್ತ ಬೆಳಲಮಕ್ಕಿ, ಬಸವನಹೊಳೆ, ಜಂಬುಗಾರು ತ್ಯಾಗರ್ತಿ ಕ್ರಾಸ್ ಹಾಗೂ ಗ್ರಾಮೀಣ ಭಾಗದ ಎಫ್-18 ಬಳಸಗೋಡು ಪೀಡರ್‌ ವ್ಯಾಪ್ತಿಯ ವಾಲ, ಬಳಸಗೋಡು, ಎಳವರಸೆ, ಜೋಗಿನಗದ್ದೆ ಹಾಗೂ ಪುರ್ಲೇಮಕ್ಕಿ ಪ್ರದೇಶಗಳಿಗೆ ಬೆಳಗ್ಗೆ 10:00 ಘಂಟೆಯಿಂದ ಸಂಜೆ 5:00 ಘಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದಿದೆ. https://kannadanewsnow.com/kannada/aviation-ministry-orders-uniform-ticket-prices-for-all-airlines/ https://kannadanewsnow.com/kannada/breaking-no-need-to-answer-calls-and-emails-after-work-new-bill-introduced-in-parliament/

Read More

ನವದೆಹಲಿ: ವಿಮಾನಗಳ ಹಾರಾಟ ರದ್ದು ಹಿನ್ನಲೆಯಲ್ಲಿ ಟಿಕೆಟ್ ದರವನ್ನು ಏರ್ ಲೈನ್ಸ್ ಕಂಪನಿಗಳು ಹೆಚ್ಚಳ ಮಾಡಿದ್ದವು. ಇವುಗಳಿಗೆ ಶಾಕ್ ಎನ್ನುವಂತೆ ಎಲ್ಲಾ ಐರ್ ಲೈನ್ಸ್ ಗಳಿಗೆ ಏಕರೂಪದ ದರವನ್ನು ನಿಗದಿಗೊಳಿಸಿ ವಿಮಾನಯಾನ ಸಚಿವಾಲಯ ಆದೇಶಿಸಿದೆ. ಹೌದು ವಿಮಾನಗಳ ಹಾರಾಟ ರದ್ದು ಹಿನ್ನಲೆಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿರೋ ಏರ್ ಲೈನ್ಸ್ ಗಳಿಗೆ ವಿಮಾನಯಾನ ಸಚಿವಾಲಯ ಶಾಕ್ ನೀಡಿದೆ. ಏಕರೂಪದ ದರ ನಿಗದಿಗೊಳಿಸಿ ವಿಮಾನಯಾನ ಸಚಿವಾಲಯ ಆದೇಶ ಮಾಡಿದೆ. ಎಲ್ಲಾ ಏರ್ ಲೈನ್ಸ್ ಗಳಿಗೆ ಅನ್ವಯವಾಗುವಂತೆ ಏಕರೂಪದ ದರವನ್ನು ನಿಗದಿಗೊಳಿಸಲಾಗಿದೆ. ಹೀಗಾಗಿ ವಿಮಾನ ರದ್ದುಗೊಂಡು, ಟಿಕೆಟ್ ದರ ಏರಿಕೆಯ ಶಾಕ್ ನಲ್ಲಿ ಇದ್ದಂತ ಪ್ರಯಾಣಿಕರಿಗೆ ವಿಮಾನಯಾನ ಸಚಿವಾಲಯವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. https://kannadanewsnow.com/kannada/i-will-not-be-a-minister-in-dk-shivakumars-cabinet-if-he-becomes-cm-former-minister-kn-rajanna/ https://kannadanewsnow.com/kannada/breaking-no-need-to-answer-calls-and-emails-after-work-new-bill-introduced-in-parliament/

Read More