Author: kannadanewsnow09

ಬೆಂಗಳೂರು : ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅರಣ್ಯ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಡಿನ ಬೆಂಕಿಗೆ ಅರಣ್ಯ ಸಂಪತ್ತು ನಾಶವಾಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಬೇಕು, ಡ್ರೋನ್ ಸೌಲಭ್ಯ ಇರುವ ಕಡೆ ಕ್ಯಾಮರಾ ಮೂಲಕ ನಿಗಾ ಇಡಬೇಕು, ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನಲ್ಲಿ ಮೇವು ಮತ್ತು ಕುಡಿಯುವ ನೀರಿನ ಕೊರತೆ ಆಗದಂತೆಯೂ ಎಚ್ಚರ ವಹಿಸಲು, ಜಲಗುಂಡಿಗಳಿಗೆ ಸೌರ ಪಂಪ್ ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸಲೂ ಸೂಚಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಡ್ರೋನ್ ಕ್ಯಾಮರಾ ನಿಗಾಕ್ಕೆ ಸೂಚನೆ: ಪ್ರತಿ ವರ್ಷ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಮಾದಪ್ಪನ ಭಕ್ತರು…

Read More

ಬೆಂಗಳೂರು: ನಿನ್ನೆ ಕುಸಿತಗೊಂಡಿದ್ದಂತ ಬಂಗಾರವು ಇಂದು ಮತ್ತೆ ಏರಿಕೆ ಕಂಡಿದೆ. ಆ ಮೂಲಕ ಬಂಗಾರದ ಬೆಲೆಯೇ ಸ್ಪೋಟಗೊಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯು 1 ಲಕ್ಷದ 60 ಸಾವಿರ ರೂಪಾಯಿಗೆ ತಲುಪಿದೆ. ಇಂದು ಎಂಸಿಎಕ್ಸ್ ಚಿನ್ನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಚಿನ್ನದ ವಹಿವಾಟು ಆರಂಭಗೊಂಡಿದೆ. ಬಂಗಾರದ ಬೆಲೆ ದಿಢೀರ್ ಸ್ಪೋಟಗೊಂಡಿದ್ದು, ನಿನ್ನೆ ಕುಸಿತಗೊಂಡಿದ್ದ ಚಿನ್ನ, ಇಂದು ಏರಿಕೆ ಕಂಡು, ಆಭರಣ ಪ್ರಿಯರಿಗೆ ಶಾಕ್ ನೀಡಲಾಗಿದೆ. ಬೆಂಗಳೂರಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯು ರೂ.15,917ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.540 ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,59,300 ತಲುಪಿದೆ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ರೂ.495 ಏರಿಕೆಯಾದ ಪರಿಣಾಮ, ಗ್ರಾಂಗೆ ರೂ.14,640 ತಲುಪಿದೆ. ಇನ್ನೂ 18 ಕ್ಯಾರೆಟ್ ಚಿನ್ನವು 1 ಗ್ರಾಂ ಬೆಲೆ ರೂ.405 ಏರಿಕೆಯಾದ ಪರಿಣಾಮ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.11,978ಕ್ಕೆ…

Read More

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ್ದಂತ ಪೊಲೀಸರು, ಅವರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಪೊಲೀಸ್ ತನಿಖಾ ತಂಡಕ್ಕೆ ಸರ್ಕಾರವು ಭರ್ಜರಿ ಬಹುಮಾನ ಘೋಷಿಸಿದೆ. ಅದೆಷ್ಟೆಂದರೇ ಬರೋಬ್ಬರಿ 25 ಲಕ್ಷವಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವ ಕುರಿತು ವಿವಿಧ ದರ್ಜೆಯ ಅಧಿಕಾರಿಗಳಿಗೆ ಈ ಹಿಂದೆ ನಿಗದಿಪಡಿಸಿದ ಆರ್ಥಿಕ ವಿತ್ತಾಧಿಕಾರವನ್ನು ಭಾಗಶ: ಮಾರ್ಪಡಿಸಿ  ಆರ್ಥಿಕ ವಿತ್ತಾಧಿಕಾರವನ್ನು ಹೆಚ್ಚಿಸಿ ಆದೇಶಿಸಲಾಗಿದೆ ಎಂದಿದೆ. ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ,…

Read More

ಶ್ವಾಸಕೋಶದ ಕ್ಯಾನ್ಸರ್ ವಿಶೇಷವಾಗಿ ಅಪಾಯಕಾರಿ. ಏಕೆಂದರೆ ಹಾನಿಕಾರಕ ಕೋಶಗಳು ದೇಹದಾದ್ಯಂತ ಹರಡುವವರೆಗೆ ಅದರ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ನೀವು ಗುರುತಿಸಬಹುದಾದ ಕೆಲವು ಮುಂಚಿನ ಎಚ್ಚರಿಕೆ ಚಿಹ್ನೆಗಳು ಇವೆ. ಅದು ನಿಮ್ಮ ಬೆರಳುಗಳ ಮೇಲೆ ಚಿಹ್ನೆಗಳು ಕಾಣಿಸುತ್ತವೆಯಂತೆ. ಆ ಬಗ್ಗೆ ಮುಂದೆ ಓದಿ.. ಸಾಮಾನ್ಯ ಸೂಚಕಗಳಲ್ಲಿ ಉಸಿರಾಟದ ತೊಂದರೆ, ಉಬ್ಬಸ ಮತ್ತು ರಕ್ತ ಅಥವಾ ಲೋಳೆಯನ್ನು ಉಂಟುಮಾಡುವ ನಿರಂತರ ಕೆಮ್ಮು ಸೇರಿವೆ. ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಅಥವಾ ಎದೆಯ ಅಸ್ವಸ್ಥತೆಯಂತಹ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದೆ. ಆದರೆ ನಿಮ್ಮ ಬೆರಳ ತುದಿ ಮತ್ತು ಉಗುರುಗಳಲ್ಲಿನ ಗಮನಾರ್ಹ ಬದಲಾವಣೆಗಳು ಕೆಲವೊಮ್ಮೆ ಈ ಗಂಭೀರ ಕಾಯಿಲೆಗೆ ಆರಂಭಿಕ ಎಚ್ಚರಿಕೆಗಳಾಗಿವೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಎಂದರೇನು? ಶ್ವಾಸಕೋಶದ ಕ್ಯಾನ್ಸರ್ ಎಂಬುದು ಶ್ವಾಸಕೋಶದ ಅಂಗಾಂಶಗಳಲ್ಲಿ ಪ್ರಾರಂಭವಾಗುವ ಮಾರಕ ಬೆಳವಣಿಗೆಯಾಗಿದ್ದು, ಸಾಮಾನ್ಯವಾಗಿ ವಾಯುಮಾರ್ಗಗಳನ್ನು ಒಳಗೊಳ್ಳುವ ಜೀವಕೋಶಗಳಲ್ಲಿನ ಡಿಎನ್‌ಎ ಹಾನಿಯಿಂದ ಉಂಟಾಗುತ್ತದೆ, ನಂತರ ಅದು ಅನಿಯಂತ್ರಿತವಾಗಿ ಬೆಳೆದು ಗೆಡ್ಡೆಗಳನ್ನು ರೂಪಿಸುತ್ತದೆ. ಧೂಮಪಾನವು ಪ್ರಮುಖ…

Read More

ನವದೆಹಲಿ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದು, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಡಾಲರ್‌ಗಳು ದುರ್ಬಲಗೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಏರಿಳಿತಗಳೊಂದಿಗೆ ಏರಿಕೆಯ ಆವೇಗವನ್ನು ಮುಂದುವರೆಸಿದ್ದು, ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಚಿತ್ತ ಹರಿಸಲು ಕಾರಣವಾಯಿತು. ಮುಂಬೈನಲ್ಲಿ, 24 ಸಾವಿರ ಚಿನ್ನದ ಬೆಲೆಗಳು 10 ಗ್ರಾಂಗೆ 5,400 ರೂ. ಏರಿಕೆಯಾಗಿ 1,59,710 ರೂ.ಗಳಿಗೆ ತಲುಪಿದ್ದು, 22 ಸಾವಿರ ಚಿನ್ನದ ಬೆಲೆ 10 ಗ್ರಾಂಗೆ 1,46,400 ರೂ.ಗಳಿಗೆ ತಲುಪಿದೆ. ತ್ತೊಂದೆಡೆ, ಬೆಳ್ಳಿ ಕೂಡ 15,000 ರೂ.ಗಳಿಗೆ ಏರಿಕೆಯಾಗಿ ಪ್ರತಿ ಕೆಜಿಗೆ 3,40,000 ರೂ.ಗಳಿಗೆ ತಲುಪಿದೆ. ಮಲ್ಟಿ-ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಫೆಬ್ರವರಿಯಲ್ಲಿ ಅವಧಿ ಮುಗಿದ ಚಿನ್ನದ ಫ್ಯೂಚರ್‌ಗಳು 1.19 ಶೇ. 1.19 ರಷ್ಟು ಹೆಚ್ಚಾಗಿ 10 ಗ್ರಾಂಗೆ 1,58,194 ರೂ.ಗಳಿಗೆ ತಲುಪಿದೆ. ಏತನ್ಮಧ್ಯೆ, ಮಾರ್ಚ್‌ನಲ್ಲಿ ಅವಧಿ ಮುಗಿದ ಬೆಳ್ಳಿ ಫ್ಯೂಚರ್‌ಗಳು 2.59 ಶೇ. ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 3,35,760 ರೂ.ಗಳಿಗೆ ತಲುಪಿದೆ. COMEX ನಲ್ಲಿ, ಚಿನ್ನದ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಹೃದಯ ಭಾಗದಲ್ಲೇ ಆ ರಸ್ತೆ ಇದೆ. ಖಾಸಗಿ ಬಸ್ ನಿಲ್ದಾಣದಿಂದ ಕೂಗಳತೆ ದೂರ ಬೇರೆ. ಹೀಗಿದ್ದರೂ ರಸ್ತೆ ಮಾತ್ರ ಡಾಂಬಾರ್ ಕಂಡಿಲ್ಲ. ಚರಂಡಿಗಳು ನಿರ್ಮಾಣವಾಗಿಲ್ಲ. ಹಾಗಾದರೆ ನಗರಸಭೆಯವರಿಗೆ ಇದು ಕಂಡಿಲ್ಲವ ಎಂಬುದು ರಸ್ತೆಯಲ್ಲಿನ ನಿವಾಸಿಗಳ ಪ್ರಶ್ನೆ. ಹೌದು ಸಾಗರ ಪಟ್ಟಣದ ಹೃದಯ ಭಾಗದಲ್ಲಿ ಡಾಂಬರ್ ಕಾಣದ ರಸ್ತೆಯೊಂದು ಜೋಸೆಫ್ ನಗರದಲ್ಲಿದೆ. ಅಲ್ಲಿನ ಮನೆಗಳು ನಿರ್ಮಾಣಕ್ಕೆ ಮೊದಲೋ ಅಥವಾ ಮನೆಗಳು ನಿರ್ಮಾಣಗೊಂಡ ಕೆಲ ವರ್ಷಗಳ ನಂತರ ರಸ್ತೆಗೆ ಡಾಂಬಾರೀಕರಣ ಮಾಡಿರಬೇಕು. ಅದರ ಹೊರತಾಗಿ ಈವರೆಗೆ ಆಗಿಲ್ಲ. ಜನರು ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಹಾಳಾಗಿದೆ. ಸಾಗರದ ಬಿಹೆಚ್ ರಸ್ತೆಯ ಆಭರಣ ಜ್ಯೂವೆಲ್ಲರಿ ಎದುರು, ಏಥರ್ ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಪಕ್ಕದಲ್ಲೇ ಇರೋ ಈ ರಸ್ತೆ ಮಾತ್ರ ಹಲವು ವರ್ಷಗಳೇ ಕಳೆದರೂ ಟಾರ್ ಕಂಡಿಲ್ಲ. ಡಾಂಬಾರೀಕರಣ ಕಾಣದೇ ಜಲ್ಲಿಕಲ್ಲುಗಳ ಎದ್ದು ಓಡಾಟಕ್ಕೂ ಕಷ್ಟವಾಗಿದೆ. ಚರಂಡಿಗಳು ತುಂಬಿ ಹೋಗಿದ್ದರೇ, ಅಲ್ಲಲ್ಲಿ ನೀರು ಹರಿಯದಂತೆ ಚರಂಡಿಗಳೇ ಬಂದ್ ಆಗಿವೆ. ಎಷ್ಟೋ…

Read More

ಬೆಂಗಳೂರು: ವೇಗಗತಿಯ ಜೀವನ ನಡೆಸುತ್ತಿರುವ ಇಂದಿನ ಯುಗದಲ್ಲಿ ಎಲ್ಲವೂ ಆನ್‌ಲೈನ್‌ಮಯ. ಅದರಲ್ಲೂ ಆಹಾರಕ್ಕಾಗಿ ಕ್ವಿಕ್‌ ಕಾಮರ್ಸ್‌ನನ್ನು ಬೆಂಬಲಿತವಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಸ್ವಿಗ್ಗಿಯಲ್ಲಿ ಆಹಾರ ಆರ್ಡರ್‌ ಮಾಡುವವರ ಸಂಖ್ಯೆಯೂ ಏರುತ್ತಿದೆ. ಹೌದು, ಬೆಂಗಳೂರಿನ ಜನರು ಈ ವರ್ಷದಲ್ಲಿ ಬರೋಬ್ಬರಿ 161 ಲಕ್ಷ ಬಿರಿಯಾನಿಗಳನ್ನು ಆರ್ಡರ್‌ ಮಾಡುವ ಮೂಲಕ ಅತಿಹೆಚ್ಚು ಆರ್ಡರ್‌ ಆಗಿರುವ ಫುಡ್‌ ಬಿರಿಯಾನಿಯಾಗಿದೆ. ಅದರಲ್ಲೂ, 88.8 ಲಕ್ಷ ಚಿಕನ್ ಬಿರಿಯಾನಿಯನ್ನು ಆರ್ಡರ್‌ ಮಾಡಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಬೆಳಗಿನ ಅಚ್ಚುಮೆಚ್ಚಿನ ತಿಂಡಿ ಇಡ್ಲಿ ಆಗಿದ್ದು, ಬರೋಬ್ಬರಿ 54.67 ಲಕ್ಷ ಪ್ಲೇಟ್‌ ಇಡ್ಲಿಗಳನ್ನು ಸಿಲಿಕಾನ್‌ ಸಿಟಿ ಜನರು ಸವಿದಿದ್ದಾರೆ. ಬಿರಿಯಾನಿ ಹೊರತುಪಡಿಸಿದರೆ, ಚಿಕನ್ ಫ್ರೈ ಎರಡನೇ ಅತ್ಯಂತ ಜನಪ್ರಿಯ ಖಾದ್ಯವಾಗಿದ್ದು, 54.1 ಲಕ್ಷ ಆರ್ಡರ್‌ ಸ್ವೀಕೃತವಾಗಿದೆ. ಇದರ ಜೊತೆಗೆ ದಕ್ಷಿಣ ಭಾರತದ ಪ್ರಧಾನ ಆಹಾರಗಳು ಮುಂಚೂಣಿಯಲ್ಲಿವೆ. 53.1 ಲಕ್ಷ ಆರ್ಡರ್‌ಗಳನ್ನು ಪಡೆದ ವೆಜ್ ದೋಸೆ ಮೂರನೇ ಸ್ಥಾನದಲ್ಲಿ ಸ್ಥಿರವಾಗಿ ಉಳಿದಿದೆ, ಊಟದೊಂದಿಗೆ ಸಿಹಿ ತಿನಿಸಿಲ್ಲವೆಂದರೆ, ಊಟ ಅಪರಿಪೂರ್ಣ, ಹೀಗಾಗಿ 7.7 ಲಕ್ಷ ಗುಲಾಬ್ ಜಾಮುನ್…

Read More

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದಂತ ವಿವಿಧ ದರ್ಜೆಯ ಅಧಿಕಾರಿ, ಸಿಬ್ಬಂದಿಗಳಿಗೆ ನಗದು ಬಹುಮಾನಕ್ಕಾಗಿ ಹಣ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವ ಕುರಿತು ವಿವಿಧ ದರ್ಜೆಯ ಅಧಿಕಾರಿಗಳಿಗೆ ಈ ಹಿಂದೆ ನಿಗದಿಪಡಿಸಿದ ಆರ್ಥಿಕ ವಿತ್ತಾಧಿಕಾರವನ್ನು ಭಾಗಶ: ಮಾರ್ಪಡಿಸಿ  ಆರ್ಥಿಕ ವಿತ್ತಾಧಿಕಾರವನ್ನು ಹೆಚ್ಚಿಸಿ ಆದೇಶಿಸಲಾಗಿದೆ ಎಂದಿದೆ. ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಒಟ್ಟು 05 ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಿದ್ಧಪಡಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ಸದರಿ ಪುಕರಣಗಳ ಪೈಕಿ ಸಿ.ಐ.ಡಿ.…

Read More

ಬೆಂಗಳೂರು : ಜನವರಿ 29ರಿಂದ ಫೆಬ್ರವರಿ 06 ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಮಾಧ್ಯಮ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮಾಧ್ಯಮ ಮಿತ್ರರು https://biffes.org/ ವೆಬ್ಸೈಟ್ನಲ್ಲಿ Media Registration ಮೂಲಕ ತಮ್ಮ ಮಾಹಿತಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಮಾಡುವಾಗ ತಮ್ಮ ಹೆಸರು, ಇ-ಮೇಲ್, ವಿಳಾಸ, ಹುಟ್ಟಿದ ದಿನಾಂಕ ಮುಂತಾದ ಮಾಹಿತಿಗಳನ್ನು ದಾಖಲಿಸುವುದರ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಅಥವಾ ಪಾಸ್ಪೋರ್ಟ್ ಸಂಖ್ಯೆ ಸಲ್ಲಿಸುವುದರ (ಈ ದಾಖಲೆಗಳಲ್ಲಿ ಯಾವುದಾದರೂ ಒಂದು) ಜೊತೆಗೆ ಅದರ ಪೋಟೋ ಸಹ ಲಗತ್ತಿಸಬೇಕು. ಜೊತೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೊಟ್ಟಿರುವ ಮಾನ್ಯತೆ ಪತ್ರ ಅಥವಾ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ಐಡಿ ಕಾರ್ಡ್ ಲಗ್ಗತಿಸಿ ಮುಂದಿನ ಐದು ದಿನಗಳ ಒಳಗೆ ದಾಖಲಿಸಿಕೊಳ್ಳಬಹುದಾಗಿದೆ. ಮೀಡಿಯಾ ಪಾಸ್ ಅನುಮೋದನೆಗೊಂಡ ನಂತರ ಪಾಸುಗಳ ವಿತರಣೆ ಬಗ್ಗೆ ಇ-ಮೇಲ್ ಮೂಲಕ ತಿಳಿಸಲಾಗುವುದು. ನಂತರ ತಮ್ಮ ಪಾಸ್ಗಳನ್ನು ನಂದಿನಿ ಲೇಔಟ್ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ…

Read More

ಬೆಂಗಳೂರು : ನಗರದಲ್ಲಿ ಇ-ಖಾತಾಗಾಗಿ ಜಿಬಿಎ ಕಚೇರಿಗೆ ಹೋಗೋ ಅವಶ್ಯಕತೆಯಿಲ್ಲ, ಬ್ರೋಕರ್ ಗಳಿಗೆ ದುಡ್ಡು ಕೊಡೋದು ಬೇಕಿಲ್ಲ. ಜಸ್ಟ್ ಮನೆಯಲ್ಲೇ ಕುಳಿತು ಹೀಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಇ-ಖಾತಾ ಪಡೆಯಿರಿ ಎಂಬುದಾಗಿ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಇ-ಖಾತಾ(eKhata) ಅರ್ಜಿಗಳ ವಿಲೇವಾರಿಯಲ್ಲಿ 99.36% ಸಾಧನೆ ಮುಂದುವರೆದಿದೆ. ನಾಗರಿಕರು ಅರ್ಜಿ ಸಲ್ಲಿಸಿದ ನಂತರ 1–2 ದಿನಗಳೊಳಗೆ ಇ-ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ವತಿಯಿಂದ ಎಲ್ಲಾ ನಾಗರಿಕರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಅರ್ಜಿಯನ್ನು ಈ ಕೆಳಗಿನ ಮಾರ್ಗಗಳ ಮೂಲಕ ಸಲ್ಲಿಸಬಹುದು: • ವೆಬ್‌ಸೈಟ್: https://bbmpeaasthi.karnataka.gov.in • ಬೆಂಗಳೂರು ಒನ್ ಕೇಂದ್ರಗಳು • ಸ್ಥಳೀಯ ಖಾಸಗಿ ಉದ್ಯಮಿಗಳು(LPE) – ನಿಮ್ಮ ಹತ್ತಿರದ LPE ವಿವರಗಳನ್ನು ಮೇಲ್ಕಂಡ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು ದಯವಿಟ್ಟು ಯಾವುದೇ ನಗರ ಪಾಲಿಕೆ ಅಥವಾ GBA ಕಚೇರಿಗಳಿಗೆ ಭೇಟಿ ನೀಡಬೇಡಿ. ಮಧ್ಯವರ್ತಿಗಳಿಗೆ ಲಂಚ ಅಥವಾ…

Read More