Author: kannadanewsnow09

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಡಿಸೆಂಬರ್.31ರಂದು ರಾತ್ರಿ 11ರಿಂದ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಕುರಿತಂತೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಅವರು ಹೊಸ ವರ್ಷಾಚರಣೆ ನಿಮಿತ್ತ ಬೆಂಗಳಊರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದಾಗಿ ತಿಳಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್.31ರಂದು ರಾತ್ರಿ 11ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದಿದ್ದಾರೆ. https://twitter.com/KarnatakaVarthe/status/1873714126117347463 https://kannadanewsnow.com/kannada/nandihills-bandh-for-new-year-celebrations-guest-house-bookings-cancelled/ https://kannadanewsnow.com/kannada/guidelines-for-new-year-celebrations-released-in-mysuru-adherence-to-these-rules-is-mandatory/ https://kannadanewsnow.com/kannada/bigg-news-here-is-the-complete-list-of-state-general-holiday-days-for-the-year-2025-holiday-list-2025/

Read More

ಮೈಸೂರು: ಡಿಸೆಂಬರ್.31ರ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು, ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯಿಂದ ಹೊಸ ವರ್ಷಾಚರಣೆಯ ವೇಳೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಾಮುಂಡಿ ಬೆಟ್ಟಕ್ಕೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದರು. ಮೈಸೂರಲ್ಲಿ ಹೊಸ ವರ್ಷಾಚರಣೆ ವೇಳೆ ಈ ಮಾರ್ಗಸೂಚಿ, ಈ ನಿಯಮಗಳ ಪಾಲನೆ ಕಡ್ಡಾಯ -ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವಂತಿಲ್ಲ. ಇದರ ತಡೆಗಾಗಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡ ರಚನೆ. -ಮಹಿಳೆಯರ ರಕ್ಷಣೆಗಾಗಿ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಸುರಕ್ಷತಾ ಪಿಂಕ್ ಗರುಡಾ ಅಂದರೆ ಚಾಮುಂಡೆ ಪಡೆ ಗಸ್ತು -ಯಾವುದೇ ಅಹಿತಕರ ಘಟನೆ ನಡೆದ ಕೂಡಲೇ ತಪಾಸಣೆಗೆ ಶ್ವಾನದಳ, ವಿದ್ವಂಸಕ ಕೃತ್ಯ ತಡೆ ತಂಡದಿಂದ ತಪಾಸಣೆಗೆ ರೆಡಿ -ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಕ್ಯಾಮರಾ ಕಣ್ಗಾವಲು -ವೀಲಿಂಗ್, ಡ್ರಾಗ್ ರೇಸ್ ತಡೆಗೆ ಸಂಚಾರ ಪೊಲೀಸರು…

Read More

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವಂತ ನಂದಿನಿ ಗಿರಿಧಾಮವನ್ನು ಹೊಸ ವರ್ಷದಂದು ಬಂದ್ ಮಾಡಲಾಗುತ್ತಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಆದೇಶಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಡಿಸಿ, ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್.31ರ ಸಂಜೆ 6ರಿಂದ ಜನವರಿ 1ರ ಬೆಳಿಗ್ಗೆ 7 ಗಂಟೆಯವರೆಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಂದಿನಿ ಗಿರಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದಿದ್ದಾರೆ. ಇನ್ನೂ ನಂದಿಗಿರಿಧಾಮದ ಮೇಲಿರುವಂತ ಅತಿಥಿ ಗೃಹಗಳ ಬುಕ್ಕಿಂಕ್ ಕೂಡ ರದ್ದುಗೊಳಿಸಲಾಗಿದೆ. ನಂದಿ ಗಿರಿಧಾಮದ ಅತಿಥಿ ಗೃಹಗಳಿಗೆ ಬುಕ್ಕಿಂಗ್ ಅನ್ನು ಜನವರಿ.1ರಂದು ಬೆಳಿಗ್ಗೆ 7ರ ನಂತ್ರವೇ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. https://kannadanewsnow.com/kannada/good-news-for-those-who-were-expecting-to-open-a-new-pu-college-in-the-state-applications-invited/ https://kannadanewsnow.com/kannada/arent-andolana-seers-veerashaiva-lingayats-asked-samaj-leader-rajkumar-patil-telkur/

Read More

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಹೊಸದಾಗಿ ಪಿಯು ಕಾಲೇಜು ತೆರೆಯಲು ಇಚ್ಚೆ ಇದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಪದವಿ ಪೂರ್ವದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿಯಮಗಳು 2024ರ ನಿಯಮ 5 ರನ್ವಯ 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟಕಂಪನಿ/ non-profit motive limited-liability partnership ರವರುಗಳು ಅರ್ಜಿಗಳನ್ನು ಆನ್-ಲೈನ್ (online)ಮೂಲಕ “ಅರ್ಜಿ ನಮೂನೆ” (Form-1 ಮತ್ತು Form-lll) ರಲ್ಲಿ ದಿನಾಂಕ:30-12-2024 ಸಂಜೆ 05:00 ರಿಂದ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಇಲಾಖೆಯ ವೆಬ್‌ಸೈಟ್ https://pue.karnataka.gov.in/ ಇಲ್ಲಿಗೆ ಭೇಟಿ ನೀಡಿ ಪಡೆಯಬಹುದಾಗಿದೆ. 2023-24 ಮತ್ತು 2024-25ನೇ ಶೈಕ್ಷಣಿಕ…

Read More

ಕಲಬುರಗಿ: ಕೊಲೆ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಾಂಚಾಳ್ ಅವರ ಡೆತ್ ನೋಟನಲ್ಲಿ ವಿರಶೈವ ಲಿಂಗಾಯತ ಸಮಾಜದ ಆದೋಲ ಶ್ರೀಗಳಿಗೆ ಜೀವ ಬೆದರಿಕೆ ಇದೆ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಜೀವ ಬೇದರಿಕೆ ಇರುವ ಆಂದೋಲ ಶ್ರೀಗಳು ವೀರಶೈವ ಲಿಂಗಾಯತ ಸಮಾಜದರು ಇದಾರೋ ಏನು ಇಲವೂ? ಎಂನ್ನೂವುದು ವಿರಶೈವ ಮಹಾಸಭೆ ಉತ್ತರಿಸಬೇಕು ಎಂದು ಮಾಜಿ ಶಾಸಕ ಹಾಗೂ ಸಮಾಜದ ಮುಖಂಡ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ವಿರಶೈವ ಲಿಂಗಾಯತ ಸಮಾಜದ ಮುಖಂಡರಾದ ಚಂದು ಪಾಟೀಲರಿಗೆ ಜೀವ ಬೆದರಿಕೆ ಇರುವ ಕಾರಣ ವಿರಶೈವ ಲಿಂಗಾಯತ ಮಹಾಸಬೆ ಅವರಿಗೆ ಸೂಕ್ತ ಬದ್ರತೆ ನಿಡಲು ಮನವಿ ಮಾಡಿರುವುದು ಸ್ವಾಗತಾರ್ಹ ಧನ್ಯವಾದಗಳು ಇದು ಸಮಾಜದ ಸಂಘಟನೆಯ ಕೆಲಸ ಕೂಡ ಹೌದು, ಆದರೆ ಅವರ ಜೊತೆಗೆ ಬೆದರಿಕೆ ಇರುವ ಆಂದೋಲಾ ಶ್ರೀಗಳಿಗೂ ಭದ್ರತೆ ನೀಡಲು ಮನವಿ ಮಾಡಬೇಕಿತ್ತು ಯಾಕೆ ಮಾಡಿಲ್ಲಾ ತಿಳಿಯುತ್ತಿಲ್ಲಾ ಮಹಾಸಬೆಯವರಿಗೆ ಈ ವಿಷಯ ಗೋತ್ತಿಲ್ವಾ ಅಥವಾ…

Read More

ಬೆಂಗಳೂರು: ದಿನಾಂಕ 01.01.2025 ರಿಂದ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಕೆಲವು ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಆ ಬದಲಾವಣೆಯ ನೂತನ ಟೈಂ ಟೇಬಲ್ ಈ ಕೆಳಗಿನಂತಿದೆ. ಹೊಸ ರೈಲ್ವೆ ವೇಳಾಪಟ್ಟಿ 01.01.2025 ರಿಂದ ಜಾರಿಗೆ ಬಂದಿದ್ದೂ, ಭಾರತೀಯ ರೈಲ್ವೆಯಾದ್ಯಂತ ಮೈಸೂರು ಮತ್ತು ಇತರ ನಿಲ್ದಾಣಗಳಿಂದ ಹೊರಡುವ/ಆಗಮಿಸುವ ಹಲವಾರು ರೈಲುಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕರಿಸಲಾಗಿದೆ. ಎಲ್ಲಾ ಪ್ರಯಾಣಿಕರು ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಈ ಕೆಳಗೆ ನೀಡಿರುವ ‘ವೆಬ್ ಸೈಟ್ ಲಿಂಕ್‌’ನ ಸಹಾಯದಿಂದ ಹೊಸ ರೈಲು ವೇಳಾಪಟ್ಟಿಯನ್ನು ದಯಮಾಡಿ ಪರಿಶೀಲಿಸಲು ವಿನಂತಿಸಲಾಗಿದೆ. 01.01.2025 ರಿಂದ ಮೈಸೂರು ಮತ್ತು ಇತರ ನಿಲ್ದಾಣಗಳಿಗೆ ನಿರ್ಗಮಿಸುವ ಮತ್ತು ಆಗಮಿಸುವ ರೈಲುಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುವ ರೈಲುಗಳ ಪಟ್ಟಿಯನ್ನು ಪ್ರಯಾಣಿಸುವ ಯಾತ್ರಿಕರ ಮಾಹಿತಿಗಾಗಿ ಈ ಕೆಳಗೆ ಪಟ್ಟಿ ಮಾಡಲಾಗಿದೆ. 1. ಮೈಸೂರಿನಿಂದ ಸಾಯಿನಗರ ಶಿರಡಿಗೆ ಹೊರಡುವ ರೈಲು ಸಂಖ್ಯೆ 16217 ದಿನಾಂಕ 06.01.2025 ರಿಂದ ಬೆಳಿಗ್ಗೆ 05:00 ಗಂಟೆಗೆ ಮೈಸೂರಿನಿಂದ ಹೊರಡಲಿದೆ. 2.…

Read More

ಧಾರವಾಡ: ಜಿಲ್ಲೆಯಲ್ಲಿ ಕಬ್ಬು ಕಟಾವು ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಈ ಮಾರಾಮಾರಿಯಲ್ಲಿ ಜಗಳ ಬಿಡಿಸಲು ಹೋದಂತ ಓರ್ವ ಮಹಿಳೆಯನ್ನೇ ಕೊಲೆ ಮಾಡಲಾಗಿದೆ. ಧಾರವಾಡದ ಕಲಘಟಗಿ ತಾಲ್ಲೂಕಿನ ಕರುವಿನಕೊಪ್ಪದಲ್ಲಿ ಕಬ್ಬು ಕಟಾವು ವಿಚಾರಕ್ಕೆ ಎರುಡ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದಂತ ಅನುಸೂಯ(40) ಎಂಬ ಮಹಿಳೆ ಜಗಳ ಬಿಡಿಸೋದಕ್ಕೆ ತೆರಳಿದ್ದಾರೆ. ಆದರೇ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದಲ್ಲದೇ ಸಚಿನ್ ಪಾಟೀಲ್, ಬಸವರಾಜ, ಮೈಲಾರಪ್ಪ ಎಂಬುವರು ಈ ಮಾರಾಮಾರಿಯಲ್ಲಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/murdeshwar-beach-open-for-tourists-for-new-year-dc/ https://kannadanewsnow.com/kannada/bigg-news-here-is-the-complete-list-of-state-general-holiday-days-for-the-year-2025-holiday-list-2025/

Read More

ಬೆಂಗಳೂರು: ವರಾಹಿ ಜ್ಯುವೆಲ್ಲರ್ ಮಾಲಕಿ ವನಿತಾಗೆ ವಂಚನೆ ಆರೋಪದ ಪ್ರಕರಣದಲ್ಲಿ ಆರೋಪಿ ಐಶ್ವರ್ಯ ಹಾಗೂ ಪತಿ ಹರೀಶ್ ಅವರಿಗೆ ಜನವರಿ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಇಂದು ಈ ಪ್ರಕರಣ ಸಂಬಂಧ ಬೆಂಗಳೂರಿನ 4ನೇ ಎಸಿಎಂಎಂ ನ್ಯಾಯಾಲಯವು ವಿಚಾರಣೆ ನಡೆಸಿತು. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ವಂಚಕಿ ಐಶ್ವರ್ಯ ಹಾಗೂ ಅವರ ಪತಿ ಹರೀಶ್ ಗೆ ಜನವರಿ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಅಂದಹಾಗೇ ವರಾಹಿ ಜ್ಯುವೆಲ್ಲರಿ ಮಾಲಕಿ ವನಿತಾ ಅವರು ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಇಂದು ಇಬ್ಬರಿಗೆ ಜನವರಿ.6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. https://kannadanewsnow.com/kannada/217-mothers-died-in-four-months-in-karnataka-report/ https://kannadanewsnow.com/kannada/murdeshwar-beach-open-for-tourists-for-new-year-dc/

Read More

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವಂತ ಮುರುಡೇಶ್ವರ ಬೀಚ್ ಗೆ ಹೊಸ ವರ್ಷದಿಂದ ತೆರೆಯಲಾಗುತ್ತಿದೆ. ಪ್ರವಾಸಿಗರಿಗೆ ವಿಧಿಸಿದ್ದಂತ ನಿರ್ಬಂಧವನ್ನು ತೆರವುಗೊಳಿಸುತ್ತಿರುವುದಾಗಿ ಡಿಸಿ ಲಕ್ಷ್ಮೀ ಪ್ರಿಯಾ ತಿಳಿಸಿದ್ದಾರೆ. ಇಂದು ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹೊಸ ವರ್ಷಕ್ಕೆ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಕಡಿಮೆ ಸ್ಥಳದಲ್ಲಿ ನಾವು ಸ್ವಿಮ್ಮಿಂಗ್ ಜೋನ್ ಮಾಡಿದ್ದೇವೆ. ನಾಳೆಯಿಂದ ಎಷ್ಟು ಜನ ಬರ್ತಾರೆಂದು ನೋಡಿ ವಿಸ್ತರಣೆ ಮಾಡುತ್ತೇವೆ. ಸ್ವಿಮ್ಮಿಂಗ್ ಜೋನ್ ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ ಎಂದರು. ಜಿಲ್ಲೆಗೆ ಬರುವಂತೆ ಪ್ರವಾಸಿಗರ ರಕ್ಷಣೆಯೇ ನಮ್ಮ ಆದ್ಯತೆಯಾಗಿದೆ. ಸದ್ಯ ಕಡಲ ತೀರದಲ್ಲಿ ಸುರಕ್ಷತೆ ಕ್ರಮವನ್ನು ಕೈಗೊಂಡಿದ್ದೇವೆ. ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆಯೂ ತಿಳಿಸಲಾಗಿದೆ ಎಂದರು. ಅಂದಹಾಗೇ ಕಳೆದ 20 ದಿನಗಳಿಂದ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಕಾರಣ ನಾಲ್ವರು ವಿದ್ಯಾರ್ಥಿಗಳು ಸಮುದ್ರಪಾಲಾದ ಘಟನೆ ನಂತ್ರವಾಗಿತ್ತು. ಈಗ ನಾಳೆಯಿಂದ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತಿದೆ. https://kannadanewsnow.com/kannada/217-mothers-died-in-four-months-in-karnataka-report/ https://kannadanewsnow.com/kannada/bigg-news-here-is-the-complete-list-of-state-general-holiday-days-for-the-year-2025-holiday-list-2025/

Read More

ಈ ಇಂಗ್ಲಿಷ್ ತಿಂಗಳ ಕೊನೆಯ ಅಮಾವಾಸ್ಯೆ ನಾಳೆ ಬರಲಿದೆ. ಡಿಸೆಂಬರ್ 30-12-2024 ಸೋಮವಾರದಂದು ಅಮವಾಸಿ. ಈ ದಿನ ಪೂರ್ವಜರ ಪೂಜೆಯನ್ನು ಮಾಡಬೇಕು. ಕುಲದೇವತೆಯ ಪೂಜೆಯನ್ನೂ ಮಾಡಬೇಕು. ಈ ದಿನವನ್ನು ತಪ್ಪಿಸಿಕೊಳ್ಳಬೇಡಿ. ಇದರ ಹೊರತಾಗಿ ಈ ಅಮಾವಾಸ್ಯೆಯಂದು ನಾವು ಮಾಡಬಹುದಾದ ಸರಳ ಪರಿಹಾರವು ನಿಮ್ಮ ಜೀವನದಲ್ಲಿ ವಸಂತವನ್ನು ತರುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ…

Read More