Author: kannadanewsnow09

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮುಡಾ ಪ್ರಕರಣದ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಹೊಸ ತಿರುವು ಎನ್ನುವಂತೆ ತನ್ನ ಕೇಸ್ ತಾನೇ ನಾಳೆ ದೂರುದಾರ ಸ್ನೇಹಮಯಿ ಕೃಷ್ಣ ವಾದಿಸಲಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಸ್ನೇಹಮಯಿ ಕೃಷ್ಣ ಅವರು, ಮುಡಾ ಪ್ರಕರಣದಲ್ಲಿ 1ನೇ ಆರೋಪಿ ಸಿದ್ದರಾಮಯ್ಯ, 2ನೇ ಆರೋಪಿ ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ, 4ನೇ ಆರೋಪಿ ದೇವರಾಜುರವರನ್ನು ಆದಷ್ಟು ಬೇಗ ನಿರಪರಾಧಿಗಳು ಎಂದು ಬಿಂಬಿಸುವ ಸಲುವಾಗಿ ಅಸ್ಪಷ್ಟವಾದ ಮತ್ತು ಸುಳ್ಳಿನಿಂದ ಕೂಡಿದ ವರದಿಯನ್ನು ಸಲ್ಲಿಸಿರುವ ಲೋಕಾಯುಕ್ತ ಅಧಿಕಾರಿಗಳು ನಾಳೆ ಮಾನ್ಯ ನ್ಯಾಯಾಲಯಕ್ಕೆ ಯಾವ ರೀತಿಯಲ್ಲಿ ಸ್ಪಷ್ಟೀಕರಣ ಕೊಡುತ್ತಾರೆ ? ಎಂಬ ಕುತೂಹಲದಿಂದ ನಾಳೆ ನಾನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದೇನೆ ಎಂದಿದ್ದಾರೆ. ನನ್ನ ತಕರಾರು ಅರ್ಜಿಯಲ್ಲಿನ ಮತ್ತು ನನ್ನ ಮನವಿಯಲ್ಲಿನ ಅಂಶಗಳನ್ನು ಆಧರಿಸಿ ಮಾನ್ಯ ನ್ಯಾಯಾಲಯ ಕೇಳಿರುವ ವಿಚಾರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಷ್ಟೀಕರಣ ಕೊಟ್ಟರೆ, ಹಾಲಿ ಆರೋಪಿಗಳು ಅಪರಾಧ ಕೃತ್ಯ ಎಸಗಿದ್ದಾರೆ…

Read More

ನವದೆಹಲಿ: 2022 ರಲ್ಲಿ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ಕಂಪನಿಯನ್ನು ವಹಿಸಿಕೊಂಡಾಗ ಕಂಪನಿಯ ಮಾಜಿ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಿಂದ ತೆಗೆದುಹಾಕಿ ಅದನ್ನು ಎಕ್ಸ್ ಎಂದು ಮರುನಾಮಕರಣ ಮಾಡಿದಾಗ ಟ್ವಿಟರ್ನ ಅಪ್ರತಿಮ ಪಕ್ಷಿ ಲೋಗೋವನ್ನು ಹರಾಜಿನಲ್ಲಿ ಸುಮಾರು 35,000 ಡಾಲರ್ಗೆ ಮಾರಾಟ ಮಾಡಲಾಗಿದೆ. ಬ್ಯಾಸ್ಕೆಟ್ ಬಾಲ್ ಆಟಗಾರ ಲ್ಯಾರಿ ಬರ್ಡ್ ಅವರ ನಂತರ ಲಾಂಛನವನ್ನು ‘ಲ್ಯಾರಿ’ ಎಂದು ಕರೆಯಲಾಗುತ್ತದೆ. ಅಪರೂಪದ ಮತ್ತು ಸಂಗ್ರಹಿಸಬಹುದಾದ ವಸ್ತುಗಳನ್ನು ವ್ಯವಹರಿಸುವ ಆರ್ಆರ್ ಹರಾಜಿನಲ್ಲಿ 12 ಅಡಿ 9 ಅಡಿ ಅಳತೆಯ 254 ಕೆಜಿ ಚಿಹ್ನೆ 34,375 ಡಾಲರ್ಗೆ ಮಾರಾಟವಾಗಿದೆ. ಮಸ್ಕ್ ಅಧಿಕಾರ ವಹಿಸಿಕೊಳ್ಳುವ ಮೊದಲು ಟ್ವಿಟರ್ ಪ್ರಧಾನ ಕಚೇರಿಯನ್ನು ಅಲಂಕರಿಸಿದ್ದ ಲೋಗೋ 560 ಪೌಂಡ್ (254-ಕಿಲೋಗ್ರಾಂ) ತೂಕವಿದ್ದು, 12 ಅಡಿ 9 ಅಡಿ (3.7 ಮೀಟರ್ ನಿಂದ 2.7 ಮೀಟರ್) ಅಳತೆ ಹೊಂದಿದೆ. ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿಯ ಮುಖ್ಯ ಕಟ್ಟಡವು ಪ್ರಮುಖ ಬದಲಾವಣೆಗಳಿಗೆ ಒಳಗಾಗಿದ್ದು, ಅದರ ಗೋಡೆಗಳು ಕಪ್ಪು ಬಣ್ಣ ಮತ್ತು ಎಕ್ಸ್-ಥೀಮ್ ಕಾನ್ಫರೆನ್ಸ್…

Read More

ರಾಯಚೂರು: ರಾಯಚೂರು: ಇಲ್ಲಿನ ರಾಯರ ಮಠಕ್ಕೆ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಬರೋಬ್ಬರಿ 3.48 ಕೋಟಿ ನಗದು, 1 ಕೆಜಿ ಬೆಳ್ಳಿ, 32 ಗ್ರಾಂ ಚಿನ್ನ ಹುಂಡಿಯಲ್ಲಿ ದೊರೆತಿದೆ. ಮಾರ್ಚ್ ನಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭವೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಹೀಗಾಗಿ ರಾಯರ ಮಠಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ರಾಜ್ಯ, ಹೊರ ರಾಜ್ಯ, ವಿದೇಶದಿಂದಲೂ ಭಕ್ತ ಸಾಗರ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಹೀಗಾಗಿ ನಗದು, ಚಿನ್ನಾಭರಣವನ್ನು ಕಾಣಿಕೆಯಾಗಿ ಹುಂಡಿಗೆ ಸಮರ್ಪಿಸಿದ್ದಾರೆ. ಇಂತಹ ಕಾಣಿಕೆ ಹುಂಡಿಯನ್ನು ಏಣಿಕೆ ಮಾಡಲಾಗಿದೆ. ಈ ವೇಳೆಯಲ್ಲಿ 3,48,69,621 ರೂ. ನಗದು, 32 ಗ್ರಾಂ ಚಿನ್ನ ಮತ್ತು 1.24 ಕೆಜಿ ಬೆಳ್ಳಿ ದೇಣಿಗೆಯಾಗಿ ಸಂಗ್ರಹವಾಗಿದೆ. https://kannadanewsnow.com/kannada/home-health-scheme-to-be-implemented-across-the-state-from-april-minister-dinesh-gundu-rao/ https://kannadanewsnow.com/kannada/alert-google-pay-phone-pay-will-not-work-for-these-phone-numbers-from-april-1st-check-if-your-number-is-available/

Read More

ಬೆಳಗಾವಿ : ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಇಂದು ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಸಚಿವರು ಮಾತನಾಡುತ್ತಿದ್ದರು. ಆರೋಗ್ಯ ಸೇವೆಗಳನ್ನ ಬಡ ವರ್ಗದ ಜನರ ಬಳಿಗೆ ತರುವಲ್ಲಿ ಉಚಿತ ಆರೋಗ್ಯ ತಪಾಸಣಾ ಮೇಳಗಳು ಯಶಸ್ವಿಯಾಗುತ್ತಿವೆ. ದೊಡ್ಡ ಮಟ್ಟದ ಆರೋಗ್ಯ ಮೇಳಗಳನ್ನು ಗ್ರಾಮೀಣ ಪ್ತದೇಶದ ಜನರಿಗೆ ಅನುಕೂಲಪಡಿಸಲು ತಾಲೂಕುಗಳಲ್ಲಿ ನಡೆಸಲಾಗುತ್ತಿದೆ. ಕೊಳ್ಳೆಗಾಲ, ಮಾನ್ವಿ ಬಳಿಕ ಇದೀಗ ಸವದತ್ತಿಯಲ್ಲೂ ಆರೋಗ್ಯ ಮೇಳ ಯಶಸ್ವಿಯಾಗಿದೆ ಎಂದರು.‌ ಇದೇ ವೇಳೆ ಸವದತ್ತಿ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನ 46 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌ ಬೆಳಗಾವಿ ಜಿಲ್ಲೆಯ ರಾಮದುರ್ಗಾ ಹಾಗೂ ಕಿತ್ತೂರು ತಾಲೂಕು ಅಸ್ಪತ್ರೆಗಳಿಗೂ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾಸ್ಪತ್ರೆಯನ್ನ ಗೋಕಾಕ್ ನಲ್ಲಿ ನಿರ್ಮಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…

Read More

ಬೆಂಗಳೂರು: ರಿಕವರಿ ಮಾಡಿದಂತ ಚಿನ್ನವನ್ನು ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅನ್ನು ಅಮಾನುತುಗೊಳಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಆದೇಶಿಸಿದ್ದಾರೆ. 2020ರಲ್ಲಿ ಪಿಎಸ್ಐ ಸಂತೋಷ್ ಅವರು ಹಲಸೂರು ಗೇಟ್ ಠಾಣೆಯ ಪಿಎಸ್ಐ ಆಗಿದ್ದರು. ಈ ವೇಳೆ ಪ್ರಕರಣವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ. ಹೀಗಾಗಿ 950 ಗ್ರಾಂ ಚಿನ್ನದ ಗಟ್ಟಿ ಕೊಡು, ಪೋಟೋ ತೆಗೆಸಿ ವಾಪಾಸ್ ಕೊಡುತ್ತೇನೆ ಎಂಬುದಾಗಿ ಹೇಳಿದ್ದರು. ಚಿನ್ನದ ಅಂಗಡಿ ಮಾಲೀಕ ಪಿಎಸ್ಐ ಸಂತೋಷ್ ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿ ನೀಡಿದ್ದರು. ಬಳಿಕ ಚಿನ್ನದ ಅಂಗಡಿ ಮಾಲೀಕ ಚಿನ್ನವನ್ನು ಪಿಎಸ್ಐ ಸಂತೋಷ್ ಕೇಳಿದಾಗ ಹಣ ನೀಡುವುದಾಗಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದರು. ಆದರೇ ಆ ಸೈಟ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ…

Read More

ಬುಧವಾರ ರಾತ್ರಿ ಕರ್ಪೂರದ ಜೊತೆಗೆ ಈ ಪದಾರ್ಥವನ್ನು ಸುಡುವವರಿಗೆ ಜೀವನದಲ್ಲಿ ಎಲ್ಲಾ ಸಾಲದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸ್ವಂತ ಮನೆಯನ್ನು ಸಹ ಖರೀದಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನವನ್ನು ಪೂರ್ಣವಾಗಿ ಬದುಕಲು ಬಯಸುತ್ತಾರೆ. ಅಂತಹ ಸಾರ್ಥಕ ಜೀವನ ನಡೆಸಬಯಸುವವರು ಋಣಮುಕ್ತ ಜೀವನ ನಡೆಸಬೇಕು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ…

Read More

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಈ ವಾರ 39,311.54 ಕೋಟಿ ರೂ.ಗಳಷ್ಟು ಶ್ರೀಮಂತರಾದರು. ಅವರ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳವು ಅದೇ ಪ್ರಮಾಣದಲ್ಲಿ ಏರಿಕೆಯಾಯಿತು. ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳಲ್ಲಿ (120 ಗಂಟೆಗಳು) ಕಂಪನಿಯ ಮಾರುಕಟ್ಟೆ ಬಂಡವಾಳವು 17,27,339.74 ಕೋಟಿ ರೂ.ಗಳಿಗೆ ಏರಿತು. ಅಂಬಾನಿ ನೇತೃತ್ವದ ಸಂಸ್ಥೆಯು ಅತ್ಯಂತ ಮೌಲ್ಯಯುತ ದೇಶೀಯ ಸಂಸ್ಥೆಯಾಗಿ ಉಳಿದಿದೆ, ನಂತರ HDFC ಬ್ಯಾಂಕ್, ಟಾಟಾ ಗ್ರೂಪ್‌ನ TCS ಮತ್ತು ಬಿಲಿಯನೇರ್ ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ ಇವೆ. ಈ ವಾರ, BSE ಮಾನದಂಡದ ಸೂಚಕವು 3,076.6 ಪಾಯಿಂಟ್‌ಗಳು ಅಥವಾ ಶೇಕಡಾ 4.16 ರಷ್ಟು ಏರಿಕೆಯಾಗಿದೆ ಮತ್ತು NSE ನಿಫ್ಟಿ 953.2 ಪಾಯಿಂಟ್‌ಗಳು ಅಥವಾ ಶೇಕಡಾ 4.25 ರಷ್ಟು ಜಿಗಿದಿದೆ. ಶುಕ್ರವಾರ ಸಂಸ್ಥೆಯ ಷೇರು ಬೆಲೆ 1,277.50 ಕ್ಕೆ ಮುಕ್ತಾಯವಾಯಿತು. ರಿಲಯನ್ಸ್ ಸೇರಿದಂತೆ ಟಾಪ್ -10 ಅತಿ ಹೆಚ್ಚು ಮೌಲ್ಯಯುತ ಒಂಬತ್ತು ಕಂಪನಿಗಳ ಮಾರುಕಟ್ಟೆ ಮೌಲ್ಯವು ಈ ವಾರ 3,06,243.74 ಕೋಟಿ…

Read More

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸಂಚಲನ ಸೃಷ್ಠಿಸಿದ ಬೆನ್ನಲ್ಲೇ, ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ದಿಢೀರ್ ಬೆಳವಣಿಗೆ ಎನ್ನುವಂತೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಕರ್ನಾಟಕ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವಂತ ಸಭಾಪತಿ ಬಸವರಾಜ ಹೊರಟ್ಟಿ ಅವರು, ದಿನಾಂಕ 01-04-2025ರಂದು ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ವೈಯಕ್ತಿಕ ಕಾರಣಗಳಿಂದ ಸದರಿ ರಾಜೀನಾಮೆಯನ್ನು ದಿನಾಂಕ 31-03-2025ರೊಳಗೆ ಸ್ವೀಕರಿಸಿ ಅಂತ ತಿಳಿಸಿದ್ದಾರೆ. ದಿನಾಂಕ 01-04-2025ರಿಂದ ಅನ್ವಯವಾಗುವಂತೆ ಕ್ರಮ ಕೈಗೊಂಡು, ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸುವಂತೆ ಉಪ ಸಭಾಪತಿ ಪ್ರಾಣೇಶ್ ಅವರಿಗೆ ಬರೆದಿರುವಂತ ರಾಜೀನಾಮೆ ಪತ್ರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೋರಿದ್ದಾರೆ. https://kannadanewsnow.com/kannada/illegal-collection-and-sale-of-annabhagya-rice-busted-in-the-state/ https://kannadanewsnow.com/kannada/ipl-2025-tournament-in-bengaluru-bmtc-to-arrange-additional-buses/

Read More

ಹಾವೇರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ದಾಸ್ತಾನು ಮಾಡಿದ್ದಲ್ಲೇ, ಕಾಳ ಸಂಜೆಯಲ್ಲೇ ನ್ಯಾಯಬೇಲೆ ಅಂಗಡಿ ಸಮೀಪವೇ ಮಾರಾಟ ಮಾಡುತ್ತಿರುವಂತ ದೊಡ್ಡ ದಂಧೆಯೇ ಪತ್ತೆಯಾಗಿದೆ. ಈ ದಂಧೆಯ ಬಗ್ಗೆ ವರದಿ ಮಾಡಲು ತೆರಳಿದಂತ ಮಾಧ್ಯಮದವರಿಗೆ ಧಮ್ಕಿ ಹಾಕಿರೋದಾಗಿಯೂ ತಿಳಿದು ಬಂದಿದೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಕ್ಕಿಪೇಟೆಯಲ್ಲಿ ಅನ್ನಭಾಗ್ಯ ಅಕ್ರಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದಲ್ಲದೇ, ನ್ಯಾಯಬೆಲೆ ಅಂಗಡಿ ಸಮೀಪವೇ ಕಾಳಸಂಜೆಯಲ್ಲಿ ಮಾರಾಟ ಮಾಡುತ್ತಿರುವಂತ ಜಾಲವೊಂದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದಂತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ವೇಳೆಯಲ್ಲಿ ಸ್ಥಳಕ್ಕೆ ಬಂದಂತ ವ್ಯಕ್ತಿಯೊಬ್ಬರು ಮಾಧ್ಯಮದವರ ಮೇಲೆಯೇ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಅಕ್ಕಿ ದಂಧೆಕೋರ ಕಿಂಗ್ ಪಿನ್ ಸಚಿನ್ ಕಬ್ಬೂರ್ ಎಂಬಾತ ಐಶಾರಾಮಿ ಆಡಿ ಕಾರಿನಲ್ಲಿ ಸ್ಥಳಕ್ಕೆ ಬಂದು ಧಮ್ಕಿ ಹಾಕಿದ್ದಲ್ಲ, ವರದಿ ಮಾಡುತ್ತಿದ್ದಂತ ಮಾಧ್ಯಮದವರ ಮೇಲೆಯೇ ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವವಿಖ್ಯಾತ ನಂದಿ ಗಿರಿಧಾಮವನ್ನು ನವೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ನಾಳೆಯಿಂದ ಒಂದು ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಸಂಬಂಧ ಆದೇಶ ಹೊರಡಿಸಿರುವಂತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಅವರು, ನಂದಿ ಗಿರಿಧಾಮದಲ್ಲಿ ರಸ್ತೆ ಡಾಂಬಾರೀಕರಣ ಕಾಮಗಾರಿ ಸೇರಿದಂತೆ ಇತರೆ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾರ್ಚ್.24ರ ನಾಳೆಯಿಂದ ಏಪ್ರಿಲ್ 25ರವರೆಗೆ ಒಂದು ತಿಂಗಳವರೆಗೆ ಬಂದ್ ಮಾಡಲಾಗುತ್ತಿದೆ ಎಂದಿದ್ದಾರೆ. ಪ್ರವಾಸಿಗರ ಹಿತದೃಷ್ಠಿಯಿಂದ ವೀಕೆಂಡ್ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಮಾತ್ರವೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಇನ್ನುಳಿದಂತೆ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರದಂದು ವಾಹನಗಳ ಸಂಚಾರವನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ವಾರಾಂತ್ಯದ ದಿನವಾದಂತ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 8 ಗಂಟೆ ವರೆಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದಂತೆ ವಾರದ 5 ದಿನಗಳು ಸಂಚಾರಕ್ಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಮಾರ್ಚ್ 24ರ ನಾಳೆಯಿಂದ ಏಪ್ರಿಲ್ 25ರ ವರೆಗೂ 1…

Read More