Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಹಿಂದೆ ನಾನು ಆರ್ ಎಸ್ ಎಸ್ ಅನ್ನು ಟೀಕೆ ಮಾಡಿದ್ದೇನೆ. ಇಲ್ಲ ಅಂತ ಹೇಳಲ್ಲ. ಕಾಂಗ್ರೆಸ್ ನವರು ನೀವೇನು ಮಾಡಿದ್ದೀರಾ? ರಾಜ್ಯದಲ್ಲಿ 136 ಸೀಟು ಕೊಟ್ಟಿದ್ದಾರೆ. ಜನರ ಸಮಸ್ಯೆ ಕೇಳ್ತಿಲ್ಲ. ಕಲಬುರ್ಗಿಯಲ್ಲಿ ಜನ ಬೀದಿಯಲ್ಲಿ ಇದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಏನು ಮಾಡಿದ್ದೀರಪ್ಪ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಅಪ್ಪ ಏನು ಹೇಳಿದ್ದರು? ನಮ್ಮ ಹೊಲದಲ್ಲಿ 40 ಎಕರೆ ಬೆಳೆ ನಷ್ಟ ಆಗಿದೆ ಅಂತ ರೈತರು ಹೋಗಿ ಕೇಳಿದರೆ ನಾನು ಎಲ್ಲಿ ಹೋಗಲಿ ಅಂತ ಹೇಳಿದ್ದರು. ನಿಮ್ಮಿಂದ ನಾನು ಯಾವ ರೀತಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಅಂತ ಕಲಿಯಬೇಕಾ? ಪ್ರಿಯಾಂಕ್ ಖರ್ಗೆ ಮಾತಾಡಬೇಕಾದ್ರೆ ಹದ್ದುಬಸ್ತಿನಲ್ಲಿ ಮಾತಾಡಿ. ನನ್ನ ಬಗ್ಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ನೀವು ಎಂದು ಪ್ರಿಯಾಂಕ ಖರ್ಗೆಗೆ ಸಚಿವರು ಎಚ್ಚರಿಕೆ ನೀಡಿದರು. ಅಧಿಕಾರಕೋಸ್ಕರ ನಾವು ಯಾರ ಬಳಿಗೂ ಹೋಗೊಲ್ಲ. ಕಾಂಗ್ರೆಸ್ ಅವರು ಅಧಿಕಾರ ಹಿಡಿಯಲು ಬೇಕಾದಾಗ ನಮ್ಮ…
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ಈ ಬಗ್ಗೆ ವಿಷಯ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷನಾಗಿದ್ದೇನೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು. ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ಎಂಬ ಬಗ್ಗೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು ಕೇಂದ್ರ ಸಚಿವರು. ಸಮನ್ವಯ ಸಮಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಿಜೆಪಿ…
ಮೈಸೂರು: ಸಂಸದ ಯದುವೀರ್ ಒಡೆಯರ್ ಅವರ ತಾತ ಮದನ್ ಗೋಪಾಲ್ ರಾಜ್ ಅರಸ್(93) ವಿಧಿವಶರಾಗಿದ್ದಾರೆ. ಮೈಸೂರಿನ ಲಕ್ಷ್ಮೀಪುರಂನಲ್ಲಿ ಇರುವಂತ ನಿವಾಸದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಂತ ಸಂಸದ ಯದುವೀರ್ ಒಡೆಯರ್ ತಾತ ಮದನ್ ಗೋಪಾಲ್ ರಾಜ್ ಅರಸ್ ಅವರು ನಿಧನರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಇರುವಂತ ಅರಸು ರುದ್ರಭೂಮಿಯಲ್ಲಿ ಮದನ್ ಗೋಪಾಲ್ ರಾಜ್ ಅರಸ ಅಂತ್ಯಕ್ರಿಯೆ ನೆರವೇರಿಸಲಾಗಿದೆ. https://kannadanewsnow.com/kannada/muhurat-fixed-for-bangalores-historic-and-famous-peanut-festival-this-time-the-festival-has-been-extended-to-5-days/ https://kannadanewsnow.com/kannada/shivamogga-mescom-online-services-suspended-for-2-days-from-tomorrow-electricity-bill-payments-also-suspended/
ಶಿವಮೊಗ್ಗ : ಮೆಸ್ಕಾಂ ಮಾಹಿತಿ ತಂತ್ರಜ್ಞಾನ(ಐಟಿ) ವ್ಯವಸ್ಥೆಯ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು, ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು ನಗರ ಪ್ರದೇಶಗಳಲ್ಲಿ ಮೆಸ್ಕಾಂ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸಸಂಪರ್ಕ ಇತ್ಯಾದಿ ಸೇವೆಗಳು ಅ.24 ರಾತ್ರಿ 08.00 ಗಂಟೆಯಿಂದ ಅ.25 ರ ಮಧ್ಯಾಹ್ನ 01.00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ನಗರ ಪ್ರದೇಶದ ಗ್ರಾಹಕರು ಬಿಲ್ ಪಾವತಿಗಾಗಿ ಹೆಚ್ಚಾಗಿ ಬಳಸುವ ಮೆಸ್ಕಾಂನ ಜಾಲತಾಣ (www.mescom.org.in) ಮೆಸ್ಕಾಂನ ಮೊಬೈಲ್ ಆಪ್ (ನನ್ನಮೆಸ್ಕಾಂ), ಕರ್ನಾಟಕ ಒನ್ ಕೌಂಟರ್ಗಳು, ಅಂಚೆ ಕಛೇರಿಯ ಕೌಂಟರ್ಗಳು ಹಾಗೂ ಇತರೆ ಬಿ,ಬಿ.ಪಿ.ಎಸ್.ನ ಚಾನಲ್ಗಳಲ್ಲಿ ಮೇಲೆ ತಿಳಿಸಿದ ಸಮಯದಲ್ಲಿ, ನಗರಪ್ರದೇಶದ ಗ್ರಾಹಕರಿಗೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ, ಅಡಚಣೆಗಾಗಿ ವಿಷಾದಿಸುತ್ತಾ ಗ್ರಾಹಕರು ಸಹಕಾರ ನೀಡಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. https://kannadanewsnow.com/kannada/muhurat-fixed-for-bangalores-historic-and-famous-peanut-festival-this-time-the-festival-has-been-extended-to-5-days/ https://kannadanewsnow.com/kannada/bjp-prepares-for-gba-elections-coordinator-team-appointed-under-vijayendras-leadership/
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿಜೆಪಿ ಸಿದ್ಧಗೊಂಡಿದೆ. ಇದಕ್ಕೆ ಪೂರಕ ಎನ್ನುವಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸಂಯೋಜಕರ ತಂಡವನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಈ ಕೆಳಕಂಡಂತೆ ನನ್ನ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿರುವುದಾಗಿ ತಿಳಿಸಿದ್ದಾರೆ. ಹೀಗಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ಪಟ್ಟಿ ಬಿವೈ ವಿಜಯೇಂದ್ರ ಆರ್.ಅಶೋಕ್ ಛಲವಾದಿ ನಾರಾಯಣಸ್ವಾಮಿ ಡಿ.ವಿ ಸದಾನಂದಗೌಡ ಎಸ್ ಸುರೇಶ್ ಕುಮಾರ್ ಕುಮಾರಿ ಶೋಭಾ ಕರಂದ್ಲಾಜೆ ಪಿ.ಸಿ ಮೋಹನ್ ಡಾ.ಸಿಎನ್ ಮಂಜುನಾಥ್ ತೇಜಸ್ವಿ ಸೂರ್ಯ ಡಾ.ಕೆ ಸುಧಾಕರ್ ಎನ್ ಎಸ್ ನಂದೀಶ್ ರೆಡ್ಡಿ. ಹೀಗಿದೆ ಸಂಘಟನಾತ್ಮಕ ಜಿಲ್ಲೆಯ ಪ್ರಮುಖರ ಪಟ್ಟಿ ಬೆಂಗಳೂರು ದಕ್ಷಿಣ-ಸಿ.ಕೆ ರಾಮಮೂರ್ತಿ ಬೆಂಗಳೂರು ಉತ್ತರ-ಎಸ್ ಹರೀಶ್ ಬೆಂಗಳೂರು ಕೇಂದ್ರ-ಎಆರ್ ಸಪ್ತಗಿರಿ…
ಮಧ್ಯಪ್ರದೇಶ: ಮಧ್ಯಪ್ರದೇಶದಾದ್ಯಂತ ಕನಿಷ್ಠ 122 ಮಕ್ಕಳು ಕಣ್ಣಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 14 ಮಕ್ಕಳು “ಕಾರ್ಬೈಡ್ ಬಂದೂಕುಗಳು” ಅಥವಾ “ದೇಸಿ ಪಟಾಕಿ ಬಂದೂಕುಗಳು” ಎಂದು ಕರೆಯಲ್ಪಡುವ ಅಪಘಾತಗಳಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 18 ರಂದು ರಾಜ್ಯಾದ್ಯಂತ ನಿಷೇಧ ಹೇರಿದ್ದರೂ ಸ್ಥಳೀಯ ಮಾರುಕಟ್ಟೆಗಳು ಈ ಕಚ್ಚಾ, ತಾತ್ಕಾಲಿಕ ಸಾಧನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿವೆ ಎಂದು ಹೇಳಲಾಗುತ್ತದೆ. 150-200 ರೂ.ಗಳಿಗೆ ಮಾರಾಟವಾಗುವ ಈ ಮನೆಯಲ್ಲಿ ತಯಾರಿಸಿದ ಗ್ಯಾಜೆಟ್ಗಳು ಆಟಿಕೆಗಳನ್ನು ಹೋಲುತ್ತವೆ. ಆದರೆ ಸ್ಫೋಟಕ ಸಾಧನಗಳಂತೆ ಕಾರ್ಯನಿರ್ವಹಿಸುತ್ತವೆ, ಆಗಾಗ್ಗೆ ಗಂಭೀರ ಗಾಯಗಳಿಗೆ ಕಾರಣವಾಗುತ್ತವೆ. https://twitter.com/PTI_News/status/1980998883787591897 ಈ ಸ್ಫೋಟಕ ಸಾಧನಗಳ ಅಕ್ರಮ ಮಾರಾಟಕ್ಕಾಗಿ ವಿದಿಶಾ ಪೊಲೀಸರು ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಆರ್ಕೆ ಮಿಶ್ರಾ, “ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಬೈಡ್ ಬಂದೂಕುಗಳನ್ನು ಮಾರಾಟ ಮಾಡುವ ಅಥವಾ ಪ್ರಚಾರ ಮಾಡುವವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದರು. ಭೋಪಾಲ್, ಇಂದೋರ್, ಜಬಲ್ಪುರ್ ಮತ್ತು ಗ್ವಾಲಿಯರ್ನ ಆಸ್ಪತ್ರೆಗಳು ಈ ಸ್ಫೋಟಕ ಸಾಧನಗಳಿಂದ ಕಣ್ಣಿನ ಗಾಯಗಳಿಂದ ಬಳಲುತ್ತಿರುವ…
ಬೆಂಗಳೂರು: ರಾಜ್ಯದಲ್ಲಿ ಹತ್ತಿ ಬೆಳೆಯುವಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಬೆಲೆಯನ್ನು 45,000ಕ್ಕೆ ನಿಗದಿ ಪಡಿಸಿರುವುದೇ ಕಾರಣ. ಈ ಬೆಲೆಯನ್ನು ರೂ.60,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದರಲ್ಲಿ ನಮಸ್ಕಾರಗಳು, ಉಗ್ರೇಶ್, ಜೆ.ಡಿ.ಎಸ್ ಮುಖಂಡರು, ಸಿರಾ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆ ಇವರು ಸಲ್ಲಿಸಿರುವ ಸಯಂವರ ಮನವಿಯನ್ನು ಇದರೊಂದಿಗೆ ಲಗತಿ ನಮ್ಮ ಅವಗಾಹನೆಗಾಗಿ ರವಾನಿಸಲಾಗಿದೆ ಎಂದಿದ್ದಾರೆ. ಸಿರಾ ಹಾಗೂ ಅಕಪಕದ ಪಾವಗಡ, ಮಧುಗಿರಿ, ಹಿರಿಯೂರು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕುಗಳಲ್ಲಿನ ರೈತರಿಗೆ ಹತ್ತಿ ಮತ್ತು ಹತ್ತಿ ಬೀಜದ ಬೆಲೆ ಕಳೆದ ವರ್ಷ ರೂ. 50,000/-ಗಳು ನಿಗಧಿಯಾಗಿದ್ದು ಈ ವರ್ಷ ರೂ. 45,000/- ಗಳಿಗೆ ನಿಗಧಿಯಾಗಿದೆ. ದಿನಗೂಲಿ ಕಾರ್ಮಿಕರ ವೇತನ, ರಸಗೊಬದ್ಧ, ಕೀಟನಾಶಕ ಮತ್ತು ಕೃಷಿ ವಸ್ತುಗಳ ಬೆಳೆಗಳು ರೈತರ ಬದುಕಿಗೆ…
ಬೆಂಗಳೂರು: ನಗರದಲ್ಲಿ ವೈದ್ಯ ಪತ್ನಿ ಕೃತಿಕಾಳನ್ನು ಅನೆಸ್ತೇಶಿಯಾ ನೀಡಿ ಹತ್ಯೆಗೈದಿದ್ದಂತ ಕಿಲ್ಲರ್ ಡಾಕ್ಟರ್ ಮಹೇಂದ್ರಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಕಿಲ್ಲರ್ ಡಾಕ್ಟರ್ ಮಹೇಂದ್ರ ಜೈಲುಪಾಲಾಗಿದ್ದಾರೆ. ವೈದ್ಯೆ ಪತ್ನಿ ಕೃತಿಕಾಗೆ ಇಂಜೆಕ್ಷನ್ ನೀಡಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಿಕಾ ಪತ್ನಿ ಆರೋಪಿ ಡಾ.ಮಹೇಂದ್ರ ಅವರನ್ನು ಬೆಂಗಳೂರಿನ 29ನೇ ಎಸಿಎಂಎಂ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, ಆರೋಪಿ ಡಾ.ಮಹೇಂದ್ರಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಹೀಗಾಗಿ ಪತ್ನಿ ಕೃತಿಕಾಗೆ ಇಂಜೆಕ್ಷನ್ ನೀಡಿ ಹತ್ಯೆಗೈದ ಪತಿ ಡಾ.ಮಹೇಂದ್ರ ಜೈಲುಪಾಲಾಗಿದ್ದಾರೆ. https://kannadanewsnow.com/kannada/kerala-declared-as-indias-first-state-to-be-free-from-extreme-poverty/ https://kannadanewsnow.com/kannada/it-is-necessary-to-teach-the-youth-who-are-addicted-to-mobile-phones-about-the-history-of-great-personalities-minister-shivraj-tangadagi/
ಕೇರಳ: ನವೆಂಬರ್ 1, 2025 ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯವನ್ನು ತೀವ್ರ ಬಡತನ ಮುಕ್ತ ರಾಜ್ಯವೆಂದು ಅಧಿಕೃತವಾಗಿ ಘೋಷಿಸುವ ಮೂಲಕ ಕೇರಳ ಇತಿಹಾಸ ಸೃಷ್ಟಿಸಲಿದೆ. ಈ ಘೋಷಣೆಯು ಕೇರಳಕ್ಕೆ ಒಂದು ಹೆಗ್ಗುರುತು ಸಾಮಾಜಿಕ ಸಾಧನೆಯಾಗಿದ್ದು, ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದ ಮೊದಲ ಭಾರತೀಯ ರಾಜ್ಯವಾಗಲಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ. ಪ್ರಮುಖ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಮತ್ತು ಕಮಲ್ ಹಾಸನ್ ಅವರು ವಿಶೇಷ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬುಧವಾರ ತಿರುವನಂತಪುರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಸ್ವ-ಸರ್ಕಾರ ಸಚಿವ ಎಂ.ಬಿ. ರಾಜೇಶ್ ಅವರ ಪ್ರಕಾರ, ಈ ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ತೀವ್ರ ಬಡತನವನ್ನು ಕೊನೆಗೊಳಿಸುವ ನಾಲ್ಕು ವರ್ಷಗಳ ಧ್ಯೇಯ ಪ್ರಸ್ತುತ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಸರ್ಕಾರದ ಮೊದಲ ಸಚಿವ ಸಂಪುಟ ನಿರ್ಧಾರಗಳಲ್ಲಿ ಒಂದಾಗಿ 2021 ರಲ್ಲಿ ಪ್ರಾರಂಭಿಸಲಾದ ತೀವ್ರ…
ಬೆಂಗಳೂರು: ಯುವ ಪೀಳಿಗೆ ಇಂದು ಮೊಬೈಲ್ ಗೀಳಿಗೆ ಬಿದ್ದಿದ್ದು, ಇವರಿಗೆ ಓದಿನ ರುಚಿ ಹತ್ತಿಸುವ ಮೂಲಕ ನಾಡಿನ ಇತಿಹಾಸ ಪುರುಷರ ಬಗ್ಗೆ ತಿಳಿಸುವ ಅಗತ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು. ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆಗೆ ಮೊಬೈಲ್ ಒಂದೇ ದುನಿಯಾ ಜೀವನ ಆಗಿ ಬಿಟ್ಟಿದೆ. ನಿಜಕ್ಕೂ ಇದು ದುರದೃಷ್ಟಕರ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೆ, ಒಬ್ಬರನ್ನೊಬ್ಬರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಇತಿಹಾಸದ ವಾಸ್ತವ ಸ್ಥಿತಿಯನ್ನು ತಿಳಿಸುವ ಮೂಲಕ ಓದಿನ ರುಚಿ ಹತ್ತಿಸುವ ಕೆಲಸ ಆಗಬೇಕಿದೆ. ಮಹನೀಯರ ಜಯಂತಿಗಳನ್ನ ಆಚರಣೆ ಮಾಡುವ ಮೂಲಕ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಚೆನ್ನಮ್ಮ…














