Subscribe to Updates
Get the latest creative news from FooBar about art, design and business.
Author: kannadanewsnow09
ಹಾಸನ: ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಬೈಕಿಗೆ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಶಂಕರೇಗೌಡ(53) ಹಾಗೂ ಶ್ರೀನಿವಾಸಮೂರ್ತಿ(55) ಎಂಬುದಾಗಿ ಗುರುತಿಸಲಾಗಿದೆ. ಈ ಸಂಬಂಧ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/cancellation-control-and-rescheduling-of-these-trains-from-the-mysore-division/ https://kannadanewsnow.com/kannada/dharmasthala-case-burude-chinnayya-2-phone-sujata-bhatt-a-mobile-sit-seize/
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಚಿನ್ನಯ್ಯಗೆ ಸೇರಿದಂತ ಒಂದು ಕೀ ಪ್ಯಾಡ್, ಮತ್ತೊಂದು ಆಂಡ್ರ್ಯಾಯ್ಡ್ ಪೋನ್ ಅನ್ನು ಎಸ್ಐಟಿ ಸೀಜ್ ಮಾಡಿದೆ. ಅಲ್ಲದೇ ಸುಜಾತ ಭಟ್ ಬಳಿಯಲ್ಲಿದ್ದಂತ ಒಂದು ಪೋನ್ ಕೂಡ ವಶಕ್ಕೆ ಎಸ್ಐಟಿ ಪಡಿದಿರುವುದಾಗಿ ತಿಳಿದು ಬಂದಿದೆ. ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ, ಸುಜಾತ ಪೋನ್ ನಲ್ಲಿ ಬುರುಡೆ ಸೀಕ್ರೇಟ್ ರಿವೀಲ್ ಮಾಡೋದಕ್ಕೆ ಎಸ್ಐಟಿ ಇಬ್ಬರ ಬಳಿಯಲ್ಲಿದ್ದಂತ ಪೋನ್ ಗಳನ್ನು ಸೀಜ್ ಮಾಡಿದೆ. ಚಿನ್ನಯ್ಯ ಅವರ ಒಂದು ಕೀ ಪ್ಯಾಡ್ ಪೋನ್, ಒಂದು ಆಂಡ್ರಾಯ್ಡ್ ಪೋನ್ ಹಾಗೂ ಸುಜಾತ ಭಟ್ ಒಂದು ಪೋನ್ ಎಸ್ಐಟಿ ಸೀಜ್ ಮಾಡಿದೆ. ಇಬ್ಬರಿಂದ ಸೀಜ್ ಮಾಡಿರುವಂತ ಪೋನ್ ಗಳಿಂದ ಕಾಲ್ ಲೀಸ್ಟ್ ರಿಟ್ರೀವ್ ಮಾಡೋದಕ್ಕೆ ಎಸ್ಐಟಿ ಮುಂದಾಗಿದೆ. ಪೋನ್ ರೆಕಾರ್ಡ್ ನಲ್ಲಿ ಮಹತ್ವದ ಮಾಹಿತಿ ಇರೋ ಬಗ್ಗೆಯೂ ಹುಡುಕಾಟ ನಡೆಸಿದೆ. https://kannadanewsnow.com/kannada/cancellation-control-and-rescheduling-of-these-trains-from-the-mysore-division/ https://kannadanewsnow.com/kannada/bengaluru-woman-sexually-assaulted-by-man-who-came-to-steal/
ಮೈಸೂರು: ಮೈಸೂರು ನೈರುತ್ಯ ರೈಲ್ವೆ ವಿಭಾಗದಿಂದ ಈ ರೈಲು ಸೇವೆಗಳ ರದ್ದು, ನಿಯಂತ್ರಣ ಹಾಗೂ ಮರುನಿಗದಿ ಮಾಡಲಾಗಿದೆ. ಸೊಮಲಾಪುರಂ– ರಾಯದುರ್ಗ ರೈಲು ನಿಲ್ದಾಣಗಳ ನಡುವೆ ಬದನಹಲ್ಲುಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣ ನಿರ್ಮಾಣ ಕಾರ್ಯಕ್ಕಾಗಿ ಕಟ್ ಹಾಗೂ ಕನೆಕ್ಷನ್ ಕೆಲಸಗಳನ್ನು ನಡೆಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಕೆಳಗಿನ ರೈಲು ಸೇವೆಗಳು ಎರಡು ದಿನಗಳ ಕಾಲ ರದ್ದುಗೊಳ್ಳುತ್ತವೆ, ನಿಯಂತ್ರಣಕ್ಕೊಳಪಡುತ್ತವೆ ಮತ್ತು ಮರುನಿಗದಿಗೊಳ್ಳುತ್ತವೆ. ರದ್ದುಪಡಿಸಲಾದ ರೈಲುಗಳು ರೈಲು ಸಂಖ್ಯೆ 57415 ಗುಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ. ರೈಲು ಸಂಖ್ಯೆ 57416 ಚಿಕ್ಕಜಾಜೂರು – ಗುಂತಕಲ್ ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ. ನಿಯಂತ್ರಿತ ಮತ್ತು ಮರುನಿಗದಿಪಡಿಸಲಾದ ರೈಲುಗಳು ರೈಲು ಸಂಖ್ಯೆ 57405 ತಿರುಪತಿ – ಕದಿರಿದೇವರಪಳ್ಳಿ ಪ್ಯಾಸೆಂಜರ್ ದಿನಾಂಕ 01.09.2025 ಮತ್ತು 08.09.2025 ರಂದು ಮಾರ್ಗಮಧ್ಯದಲ್ಲಿ 60 ನಿಮಿಷ ನಿಯಂತ್ರಿಸಲಾಗುವುದು. ರೈಲು ಸಂಖ್ಯೆ 57406 ಕದಿರಿದೇವರಪಳ್ಳಿ – ತಿರುಪತಿ ಪ್ಯಾಸೆಂಜರ್…
ಬೆಂಗಳೂರು: ನಗರದ ಜನರು ಬೆಚ್ಚಿ ಬೀಳುವಂತ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲು ಬಂದವನಿಂದಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದವನಿಂದಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆಗಸ್ಟ್.29, 2025ರಂದು ನಡೆದಿದ್ದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್.29ರ ರಾತ್ರಿ 3.38ರ ಸುಮಾರಿಗೆ ಪಿಜಿಗೆ ನುಗ್ಗಿದವನಿಂದ ಈ ಕೃತ್ಯ ಎಸಗಲಾಗಿದೆ. ಪಿಜಿಗೆ ನುಗ್ಗಿದಂತವನು ಕೊಠಡಿಯಲ್ಲಿ ಮಲಗಿದ್ದಂತ ಯುವತಿ ಮೈ ಕೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ 2500 ರೂಪಾಯಿ ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. https://kannadanewsnow.com/kannada/the-greatness-of-karnataka-built-beyond-caste-and-religion-belongs-to-the-arasu-community-dcm-dk-shivakumars-praise/ https://kannadanewsnow.com/kannada/from-september-2-greater-bengaluru-administration-government-order-to-form-five-municipalities/
ಬೆಂಗಳೂರು: ದಿನೇ ದಿನೇ ಬೆಂಗಳೂರು ವಿಸ್ತಾರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಎಂಬುದಾಗಿ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿತ್ತು. ಈ ಬೆನ್ನಲ್ಲೇ ಐದು ಪಾಲಿಕೆಗಳಾಗಿ ವಿಂಗಡಣೆ ಮಾಡಿ, ಆಡಳಿತ ನಡೆಸೋದಕ್ಕೆ ಆದೇಶಿಸಿದೆ. ಸೆಪ್ಟೆಂಬರ್.2ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿಗೊಳ್ಳಲಿದೆ. ರಾಜ್ಯ ಸರ್ಕಾರದಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ರಚನೆ ಮಾಡಲಾಗಿತ್ತು. ಈ ಪ್ರಾಧಿಕಾರದ ಆಡಳಿತ ಸೆಪ್ಟೆಂಬರ್.2ರಿಂದ ಜಾರಿಯಾಗಲಿದೆ. ಹೀಗಾಗಿ ಇನ್ಮುಂದೆ ಬಿಬಿಎಂಪಿ ಬದಲಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ನಡೆಸಲಿದೆ. ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಯನ್ನಾಗಿ ಬೆಂಗಳೂರನ್ನು ವಿಂಗಡಿಸಲಾಗಿದೆ. ಐದು ಪಾಲಿಕೆಗಳ ಕಚೇರಿ ಎಲ್ಲೆಲ್ಲಿ ಬರಲಿವೆ ಎನ್ನುವ ಮಾಹಿತಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಆ ಐದು ಪಾಲಿಕೆಗೆ ಆಡಳಿತವನ್ನು ವಿಕೇಂದ್ರೀಕರಿಸಿ, ಅಧಿಕಾರಿ, ಸಿಬ್ಬಂದಿ ಹಂಚಿಕೆ ಮಾಡಿ ಆದೇಶಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ…
ಬೆಂಗಳೂರು : “ಮನುಷ್ಯ ಧರ್ಮವನ್ನು ಮೂಲವಾಗಿಟ್ಟುಕೊಂಡು ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್ ನ ಸುವರ್ಣ ಮಹೋತ್ಸವದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಈ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ದೊಡ್ಡದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಅವರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ, ವಾಣಿವಿಲಾಸ ಸಾಗರ ಅಣೆಕಟ್ಟು, ಜೆ.ಸಿ. ಎಂಜಿನಿಯರ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ ಹೀಗೆ ಹಲವಾರು ಜನೋಪಕಾರಿ ಕೆಲಸಗಳಿಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರು ಅರಸರು” ಎಂದು ಕೊಂಡಾಡಿದರು. “ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರಿನ ಒಡೆಯರು. ಇವರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ…
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗಲಿಂದ ಪ್ರಾರಂಭವಾಗಲಿದೆ ಎನ್ನುವಂತ ದಿನಾಂಕವನ್ನು ನಟ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗ ಪ್ರಾರಂಭವಾಗಲಿದೆ ಎನ್ನುವಂತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಕನ್ನಡದ ಬಿಗ್ ಬಾಸ್ ಸೀಸನ್ 12 ಮೊದಲ ಪ್ರೊಮೋ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿತ್ತು. ಇದಕ್ಕೆ ನಟ ಸುದೀಪ್ ತೆರೆ ಎಳೆದಿದ್ದಾರೆ. ಸೆಪ್ಟೆಂಬರ್.28ಕ್ಕೆ ಪ್ರಾರಂಭ ಆಗಲಿದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಇಂದು ಮೈಸೂರಲ್ಲಿ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ಅವರು ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗ ಪ್ರಾರಂಭವಗಲಿದೆ ಎನ್ನುವ ಮಾಹಿತಿಯನ್ನು ರಿವೀಲ್ ಮಾಡಿದರು. ಸೆಪ್ಟೆಂಬರ್.28ಕ್ಕೆ ಕಿರುತೆರೆಯ ಖ್ಯಾತ ಬಿಗ್ ಬಾಸ್ ಸೀಸನ್ 12 ಆರಂಭಗೊಳ್ಳಲಿದೆ. ಈ ಬಾರಿಯೂ ಅವರೇ ನಿರೂಪಣೆ ಮಾಡಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. https://kannadanewsnow.com/kannada/indian-origin-microsoft-techie-found-dead-at-work-family-warns-against-overwork/…
ದಾವಣಗೆರೆ: ರಾಜ್ಯಾಧ್ಯಂತ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸಿಸ್ಟಮ್ ಬಳಕೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ನಿಯಮ ಮೀರಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಡಿಜೆ ಬಳಸಿದ್ದಕ್ಕೆ, ಜಪ್ತಿ ಮಾಡಿರುವಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಹಿನ್ನಲೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಜಪ್ತಿ ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನ ಬಸವನಾಳ ಗೊಲ್ಲರಹಟ್ಟಿಯಲ್ಲಿ ಡಿಜೆ ಜಪ್ತಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಾಧ್ಯಂತ ಗಣೇಶ ಮೆರವಣಿಗೆ ವೇಳೆ ಜಿಡೆ ಸೌಂಡ್ ಸಿಸ್ಟಮ್ ಬಳಕೆ ನಿಷೇಧಿಸಲಾಗಿತ್ತು. ಡಿಸಿ ಜಿ.ಎಂ ಗಂಗಾಧರಸ್ವಾಮಿ ಆದೇಶಿಸಿದ್ದರು. ಈ ನಿಯಮ ಉಲ್ಲಂಘಿಸಿದ್ದರಿಂದ ಡಿಜೆ ಸಿಸ್ಟಮ್ ಜಪ್ತಿ ಮಾಡಲಾಗಿದೆ. ಇನ್ನೂ ಡಿಜೆಟಿ ಸಿಸ್ಟಂ ಮಾಲೀಕ, ಗಣೇಶ ಉತ್ಸವ ಸಮಿತಿಯವರು ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಡಿಜೆ ಸೌಂಡ್ ಸಿಸ್ಟಮ್ ಬಳಸಿ ಗ್ರಾಮಸ್ಥರಿಗೆ ತೊಂದರೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. https://kannadanewsnow.com/kannada/indian-origin-microsoft-techie-found-dead-at-work-family-warns-against-overwork/ https://kannadanewsnow.com/kannada/controversy-over-banu-mushtaqs-selection-to-inaugurate-mysore-dasara-cm-siddaramaiah-gives-this-clarification/
ಮೈಕ್ರೋಸಾಫ್ಟ್ ಕಾರ್ಪ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಕ್ಯಾಲಿಫೋರ್ನಿಯಾದ ಕಂಪನಿಯ ಮೌಂಟೇನ್ ವ್ಯೂ ಕ್ಯಾಂಪಸ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಭಾರತದ ಇಂದೋರ್ನ 35 ವರ್ಷದ ಪ್ರತೀಕ್ ಪಾಂಡೆ ಎಂದು ಗುರುತಿಸಲಾಗಿದ್ದು, ಆಗಸ್ಟ್ 19 ರ ಸಂಜೆ ಕಚೇರಿಗೆ ಪ್ರವೇಶಿಸಿದಾಗ ಆಗಸ್ಟ್ 20 ರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದರು. ಅಧಿಕಾರಿಗಳು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ “ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ನಡವಳಿಕೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ” ಎಂದು ವರದಿ ಮಾಡಿದ್ದಾರೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಪ್ರಕರಣವನ್ನು ಕ್ರಿಮಿನಲ್ ತನಿಖೆಯಾಗಿ ಪರಿಗಣಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲಸದ ಒತ್ತಡದ ಬಗ್ಗೆ ಕುಟುಂಬವು ಕಳವಳ ವ್ಯಕ್ತಪಡಿಸುತ್ತದೆ ಸಂಬಂಧಿಗಳು ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ತೀವ್ರ ಕೆಲಸದ ಬೇಡಿಕೆಗಳಿಂದ ರಕ್ಷಿಸಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪಾಲೊ ಆಲ್ಟೊ ಡೈಲಿ ಪೋಸ್ಟ್ನೊಂದಿಗೆ ಮಾತನಾಡಿದ ಪಾಂಡೆ ಅವರ ಚಿಕ್ಕಪ್ಪ ಮನೋಜ್ ಪಾಂಡೆ, “ಪ್ರತಿಕ್ ತುಂಬಾ ಸಂತೋಷದಾಯಕ, ಕಠಿಣ ಪರಿಶ್ರಮಿ…
ಮೈಸೂರು : ದಸರಾ ನಾಡ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಆದ್ದರಿಂದ ಇದನ್ನು ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಇಂದು ಅವರು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮೈಸೂರು ದಸರಾ ಉದ್ಘಾಟಕರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯಲ್ಲಿ ನನಗೆ ಅಧಿಕಾರ ನೀಡಲಾಗಿತ್ತು. ನಾನು ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಲಾಯಿತು. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ ಎಂದರು. ದಸರಾ ನಾಡ ಹಬ್ಬ, ಸಾಂಸ್ಕೃತಿಕ ಆಚರಣೆಯಾಗಿದೆ. ನಾಡ ಹಬ್ಬವನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕೆಂದು ಇಲ್ಲ. ನಾಡ ಹಬ್ಬ ಎಲ್ಲರಿಗೂ ಹಬ್ಬವೇ. ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನರಿಗೆ ಹಬ್ಬ. ಮಹಾರಾಜರ ಆಡಳಿತ ಇಲ್ಲದಿರುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಇದೊಂದು ಧರ್ಮಾತೀತ, ಜಾತ್ಯಾತೀತ ಹಬ್ಬ. ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ಪಡೆದ…








