Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಳೆಯಿಂದಾಗಿ ರಸ್ತೆ ಗುಂಡಿಗಳದ್ದೇ ಬೆಂಗಳೂರಲ್ಲಿ ಕಾರುಬಾರಾಗಿದೆ. ಈ ಕಾರಣಕ್ಕೆ ಕೆಲ ಐಟಿ ಬಿಟಿ ಕಂಪನಿಗಳು ಬೆಂಗಳೂರು ತೊರೆಯುತ್ತಿರುವುದಾಗಿಯೂ ಹೇಳಲಾಗುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ಸಿಟಿ ರೌಂಡ್ ಮಾಡಲಾಗಿದ್ದಾರೆ. ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿಗಳು 03.00 ಗಂಟೆಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ಹೊರಡಲಿದ್ದಾರೆ ಎಂಬುದಾಗಿ ತಿಳಿಸಿದೆ. ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಭರದಿಂದ ಮುಚ್ಚವ ಕೆಲಸವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳು ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಮುಚ್ಚುವ ಕೆಲ ನಡೆಯುತ್ತಿದೆ. ಇದರ ನಡುವೆ ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ಧರಾಮಯ್ಯ ಬೆಂಗಳೂರು ಸಿಟಿ ರೌಡ್ ನಡೆಸಲಿದ್ದಾರೆ. ರಸ್ತೆ ಗುಂಡಿ ಮುಚ್ಚಿರೋದು ಸೇರಿದಂತೆ ನಗರದ ವಿವಿಧ ಸಮಸ್ಯೆಗಳ ಬಗ್ಗೆ ವೀಕ್ಷಣೆ ಮಾಡಲಿದ್ದಾರೆ. https://kannadanewsnow.com/kannada/10-common-computer-problems-fix-them-easily-like-this/ https://kannadanewsnow.com/kannada/shocking-one-and-a-half-month-old-baby-dies-after-suffocating-while-breastfeeding/
ಕೆಎನ್ಎನ್ ಟೆಕ್ಟ್ ಡೆಸ್ಕ್: ಕಂಪ್ಯೂಟರ್ ಪರದೆಗಳಿಂದ ಹಿಡಿದು ಬ್ಯಾಟರಿ ಖಾಲಿಯಾಗುವವರೆಗೆ, ನಾವೆಲ್ಲರೂ ಬಹುಶಃ ಕಂಪ್ಯೂಟರ್ ಸಮಸ್ಯೆಗಳನ್ನು ಎದುರಿಸಿದ್ದೇವೆ. ಇದು ಆಶ್ಚರ್ಯವೇನಿಲ್ಲ, ಅವು ಎಷ್ಟೇ ವಿಶ್ವಾಸಾರ್ಹವಾಗಿದ್ದರೂ, ಕಂಪ್ಯೂಟರ್ಗಳು ಸರಿಯಾಗಿ ನಿರ್ವಹಿಸದಿದ್ದರೆ ದೋಷಗಳು ಮತ್ತು ಅಸಮರ್ಪಕ ಕಾರ್ಯಗಳಿಗೆ ಹೆಚ್ಚು ಒಳಗಾಗುತ್ತವೆ. ನೀವು ಎದುರಿಸುವ 10 ಸಾಮಾನ್ಯ ಕಂಪ್ಯೂಟರ್ ಸಮಸ್ಯೆಗಳು ಇಲ್ಲಿವೆ. ಜೊತೆಗೆ ಅವುಗಳನ್ನು ಕಂಪ್ಯೂಟರ್ ತಜ್ಞರ ಅಗತ್ಯವಿಲ್ಲದೆಯೇ ಪರಿಹರಿಸಲು 10 ಸುಲಭ ಮಾರ್ಗಗಳನ್ನು ಮುಂದೆ ಓದಿ. 1. ಕಂಪ್ಯೂಟರ್ ಸ್ಕ್ಲೀನ್ ನಮಗೆಲ್ಲರಿಗೂ ಈ ಸಮಸ್ಯೆ ತಿಳಿದಿದೆ: ಒಂದು ಕ್ಷಣ ನಿಮ್ಮ ಕಂಪ್ಯೂಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಮತ್ತು ಮುಂದಿನ ಕ್ಷಣ ಅದು ಸಂಪೂರ್ಣವಾಗಿ ಹೆಪ್ಪುಗಟ್ಟಿರುತ್ತದೆ. ಇನ್ನೂ ಕೆಟ್ಟದಾಗಿ, ನೀವು ಇನ್ನೂ ಉಳಿಸದ ಯಾವುದನ್ನಾದರೂ ಕೆಲಸ ಮಾಡುವಾಗ ಇದು ಹೆಚ್ಚಾಗಿ ಸಂಭವಿಸುತ್ತದೆ. 2. ಬಿಸಿಯಾಗುವುದು ನೀವು ಅನುಭವಿಸಬಹುದಾದ ಸಮಸ್ಯೆ ಇದು: ನಿಮ್ಮ ಕಂಪ್ಯೂಟರ್ ಸ್ಪರ್ಶಕ್ಕೆ ಬಿಸಿಯಾಗಿರುತ್ತದೆ. ಕಾರಣ? ನೀವು ನಿಮ್ಮ ಸಾಧನವನ್ನು ಕಳಪೆ ವಾತಾಯನ ಹೊಂದಿರುವ ಮೇಲ್ಮೈಯಲ್ಲಿ ಆಸರೆಯಾಗಿರಿಸುತ್ತಿದ್ದೀರಿ, ನೀವು ಅದನ್ನು ಬಿಸಿಲಿನ ಕೋಣೆಯಲ್ಲಿ ಬಳಸುತ್ತಿದ್ದೀರಿ ಅಥವಾ…
ನವದೆಹಲಿ: ಕಳೆದ ಮೂರು ತಿಂಗಳಲ್ಲಿ ಆಕ್ಸೆಂಚರ್ ತನ್ನ ಜಾಗತಿಕ ಕಾರ್ಯಪಡೆಯನ್ನು 11,000 ಕ್ಕೂ ಹೆಚ್ಚು ಕಡಿಮೆ ಮಾಡಿದೆ ಮತ್ತು ಕೃತಕ ಬುದ್ಧಿಮತ್ತೆಯ ಯುಗಕ್ಕೆ ಉದ್ಯೋಗಿಗಳನ್ನು ಮರು ತರಬೇತಿ ನೀಡಲು ಸಾಧ್ಯವಾಗದಿದ್ದರೆ ಮತ್ತಷ್ಟು ಉದ್ಯೋಗ ಕಡಿತವಾಗಬಹುದು ಎಂದು ಸೂಚಿಸಿದೆ. ಐಟಿ ಸಲಹಾ ದೈತ್ಯ ಗುರುವಾರ $865 ಮಿಲಿಯನ್ ಪುನರ್ರಚನೆ ಕಾರ್ಯಕ್ರಮವನ್ನು ವಿವರಿಸಿದೆ, ಜೊತೆಗೆ ಸಲಹಾ ಯೋಜನೆಗಳಿಗೆ ದುರ್ಬಲ ಕಾರ್ಪೊರೇಟ್ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು US ಫೆಡರಲ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ನಮ್ಮ ಅನುಭವದ ಆಧಾರದ ಮೇಲೆ ಮರುಕೌಶಲ್ಯವು ನಮಗೆ ಅಗತ್ಯವಿರುವ ಕೌಶಲ್ಯಗಳಿಗೆ ಕಾರ್ಯಸಾಧ್ಯವಾದ ಮಾರ್ಗವಲ್ಲದ ಸಂಕುಚಿತ ಸಮಯದ ಜನರಿಂದ ನಾವು ನಿರ್ಗಮಿಸುತ್ತಿದ್ದೇವೆ” ಎಂದು ಮುಖ್ಯ ಕಾರ್ಯನಿರ್ವಾಹಕ ಜೂಲಿ ಸ್ವೀಟ್ ವಿಶ್ಲೇಷಕರಿಗೆ ಕಾನ್ಫರೆನ್ಸ್ ಕರೆಯಲ್ಲಿ ತಿಳಿಸಿದರು. ಕಂಪನಿಯು ಆಗಸ್ಟ್ ಅಂತ್ಯದಲ್ಲಿ 779,000 ಜನರನ್ನು ನೇಮಿಸಿಕೊಂಡಿದೆ, ಇದು ಮೂರು ತಿಂಗಳ ಹಿಂದಿನ 791,000 ಜನರಿಂದ ಕಡಿಮೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪುನರ್ರಚನೆ, ಬೇರ್ಪಡಿಕೆ ಮತ್ತು ಇತರ ವೆಚ್ಚಗಳಿಂದ ಎಷ್ಟು ಉದ್ಯೋಗಗಳು ನೇರವಾಗಿ ಪರಿಣಾಮ ಬೀರಿವೆ ಎಂಬುದನ್ನು ಆಕ್ಸೆಂಚರ್…
ಶಿವಮೊಗ್ಗ: ಸಾಗರದ ಕಲ್ಮನೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಮಾವಿನಕುಳಿ, ಉಪಾಧ್ಯಕ್ಷರಾಗಿ ಪ್ರಕಾಶ್ ಗೊರಮನೆ ಆಯ್ಕೆಯಾಗಿದ್ದಾರೆ. ಇಂದು ಸಾಗರದ ಕಲಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಲ್ಮನೆ ಸೊಸೈಟಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಯಪ್ರಕಾಶ್ ಮಾವಿನಕುಳಿ, ಉಪಾಧ್ಯಕ್ಷರಾಗಿ ಪ್ರಕಾಶ ಗೊರಮನೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರುಗಳಾಗಿ ಜಯಕುಮಾರ್, ಮಧುರ, ಅಮೃತ, ಎಂ ಡಿ ರಾಮಚಂದ್ರ, ರಾಮಚಂದ್ರಗೌಡ್ರು, ರಾಮಚಂದ್ರ ಮಾವಿನಸರ, ವಿ ಡಿ ರವೀಂದ್ರ, ಸುರೇಶ್ ಎಂ ಹೊಸೂರು, ಪ್ರಸನ್ನ ಸಿ, ಆರ್ ಎಸ್ ಗಿರಿ, ರಾಮದಾಸ, ನರಿ ಮಂಜಪ್ಪ, ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ನಾಗರಾಜ್ ಕಲ್ಮನೆ, ಸೋಮಶೇಖರ್, ಎಂ ಜಿ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು https://kannadanewsnow.com/kannada/power-outage-in-these-areas-of-dharwad-district-on-september-28/ https://kannadanewsnow.com/kannada/please-mention-idigars-during-caste-survey-former-soraba-taluk-president-k-ajjappa-appeals/ https://kannadanewsnow.com/kannada/health-sanjeevini-implementation-sagar-taluk-government-employees-association-president-santosh-kumar-thanks-cm-dcm/
ಧಾರವಾಡ: 110/11ಕೆವಿ ಲಕ್ಕಮ್ಮನಹಳ್ಳಿವಿದ್ಯುತ್ ವಿತರಣಾಕೇಂದ್ರದಲ್ಲಿ ಸೆಪ್ಟೆಂಬರ 28, 2025 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ವಿದ್ಯುತ್ ವಿತರಣಾ ಕೇಂದ್ರದ ಸರಬರಾಜು ಆಗುವ ಎಲ್ಲಾ 11ಕೆವ್ಹಿ ಮಾರ್ಗಗಳಲ್ಲಿ ಸೆಪ್ಟೆಂಬರ 28, ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟೋಲನಾಕಾ, ಮಾಳಮಡ್ಡಿ, ನಗರಕರಕಾಲೋನಿ, ಬಾಗಲಕೋಟ ಪೆಟ್ರೋಲಪಂಪ್, ಲಕ್ಷ್ಮೀನಗರ, ಗಾಂಧಿನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣನಗರ, ಗಿರಿನಗರ, ಕಕ್ಕಯ್ಯಾನಗರ, ಗುರುದೇವನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ, ವಾಯ್. ಎಸ್. ಕಾಲೋನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ದಾನೇಶ್ವರಿನಗರ, ಸನ್ಮತಿಮಾರ್ಗ, ಸ್ಟೇಶನ್ರೋಡ್, ನುಗ್ಗಿಕೇರಿ, ವಿವೇಕಾನಂದನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ, ಗಾರ್ಡನಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತನಗರ, ಲಕ್ಷ್ಮೀಸಿಂಗನಕೇರಿ, ಪಿ.ಬಿ ರಸ್ತೆ, ಮೂಗಬಸವೇಶ್ವರ, ಹೊಸಯೆಲ್ಲಾಪುರ, ಜೈಕೆಫೆಸರ್ಕಲ್, ನುಚ್ಚಂಬ್ಲಿಭಾವಿ, ದುಂಡಿಓಣಿ, ಯಲಿಗಾರಓಣಿ, ಭೂಸಪ್ಪಚೌಕ್, ಶಿವಾನಂದನಗರ, ಚಪ್ಪರ್ಬಂದ್ಕಾಲೋನಿ, ರಾಮನಗರ,…
ಮಂಡ್ಯ : ತೀವ್ರ ವಿರೋಧದ ನಡುವೆಯೂ ಕೆ.ಆರ್.ಎಸ್ ಬೃಂದಾವನದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸಂಜೆ 7.15ಕ್ಕೆ ಚಾಲನೆ ನೀಡಿದರು. ವೇದ ಬ್ರಹ್ಮ ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚಿನ ವೈದಿಕರ ತಂಡ ಮಂತ್ರ ಘೋಷಗಳನ್ನು ಮೊಳಗಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಾಡಿನ ಪ್ರಸಿದ್ಧ ಮಠಗಳಾದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಜಿಲ್ಲಾಧಿಕಾರಿ ಕುಮಾರ, ಸಿಇಒ ಕೆ.ಆರ್.ನಂದಿನಿ, ಮನೋಹರ್ ಪ್ರಸಾತ್ ಮುಂತಾದವರು ಪಾಲ್ಗೊಂಡಿದ್ದರು. ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿ ಕಾವೇರಿ ಆರತಿಗೆ ಚಾಲನೆ ನೀಡಿದರು. ಬಳಿಕ ಶಿಲಾಫಲಕವನ್ನು ಸಚಿವರು ಅನಾವರಣಗೊಳಿಸಿದರು. ಇನ್ನು…
ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಸಂಸ್ಸೆ, ಅರಳಿಕೊಪ್ಪ, ವಗ್ಗಡೆ ಕಾನೂರು, ಗುಬ್ಬಿಗಾ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಸೆರೆಗೆ ಸಚಿವ ಈಶ್ವರ ಖಂಡ್ರೆ ಸೂಚನೆಯಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಇತ್ತೀಚೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡ ಅವರು ಸಂಸ್ಸೆ ಗ್ರಾಮಸ್ಥರ ನಿಯೋಗದೊಂದಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಬೆಳೆಹಾನಿ ಮತ್ತು ಪಂಪ್ ಸೆಟ್ ನಾಶ ಮಾಡುತ್ತಿರುವ ಪುಂಡಾನೆ ಸೆರೆಗೆ ಮನವಿ ಮಾಡಿದ್ದರು. ಅರಣ್ಯ ಸಿಬ್ಬಂದಿಗೆ ಈ ಆನೆಯನ್ನು ಕಾಡಿಗೆ ಮರಳಿಸಲು ಹಲವು ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಹಗಲು ಹೊತ್ತಿನಲ್ಲೇ ಕಾಡಿನಂಚಿನ ಗ್ರಾಮದ ಮನೆಗಳ ಬಳಿ ಕಾಣಿಸಿಕೊಳ್ಳುತ್ತಿರುವ ಈ ಆನೆಯಿಂದ ಜನರು ಭಯಭೀತರಾಗಿದ್ದು, ಪುಂಡಾನೆ ಸೆರೆಗೆ ತಕ್ಷಣವೇ ಕ್ರಮ ವಹಿಸುವಂತೆ ಅರಣ್ಯ ಸಚಿವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಇಂದು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್…
ಶಿವಮೊಗ್ಗ: ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕವಾಗಿ ಜಾತಿ ಸಮೀಕ್ಷೆಗೆ ಮುಂದಾಗಿದ್ದು, ಜಿಲ್ಲೆಯ ಬಹುಸಂಖ್ಯಾತ ಸಮಾಜವಾದ ಈಡಿಗ ಮತ್ತು ದೀವರು ಕಲಂ 9ರಲ್ಲಿ ಈಡಿಗ ಎಂದು, ಕಲಂ 10ರಲ್ಲಿ ದೀವರು ಎಂದೂ ನಮೂದಿಸುವಂತೆ ಸೊರಬ ತಾಲ್ಲೂಕು ಆರ್ಯ ಈಡಿಗ (ದೀವರು) ಸಮಾಜದ ಮಾಜಿ ಅಧ್ಯಕ್ಷ ಕೆ.ಅಜ್ಜಪ್ಪ ಮನವಿ ಮಾಡಿದರು. ಈಗಾಗಲೇ ರಾಜ್ಯ ಮಟ್ಟದಲ್ಲಿ ಆರ್ಯ ಈಡಿಗ ಸಮಾಜದೊಂದಿಗೆ ದೀವರು ಸೇರಿಕೊಂಡಿದ್ದು, ಸಂಘಗಳಿಗೆ ಈಡಿಗ ಸಂಘದ ಹೆಸರಿನಲ್ಲಿ ಆಸ್ತಿ ಇದೆ. ತಪ್ಪಾಗಿ ಜಾತಿ ನಮೂಸಿದರೆ ಮುಂದಿನ ದಿನಗಳಲ್ಲಿ ಕಾನೂನಿನ ತೊಡಕು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯ ಜಾತಿ ಕಲಂನಲ್ಲಿ ಈಡಿಗ ಎಂತಲೂ, ಉಪಜಾತಿ ಕಲಂನಲ್ಲಿ ದೀವರು ಎಂದು ನಮೂಸುವಲ್ಲಿ ಜಾಗ್ರತೆ ವಹಿಸಿ ಎಂದು ತಿಳಿಸಿದರು. ಭೌಗೋಳಿಕವಾಗಿ ದೀವರು ಜನಾಂಗಕ್ಕೆ ಮಹತ್ವವಿದೆ. ಯಾವುದೇ ಕಾರಣಕ್ಕೂ ದೀವರು ಸಂಸ್ಕೃತಿ ಅಳಿಯುವುದಿಲ್ಲ. ಈ ಹಿಂದಿನ ಸಮೀಕ್ಷೆಯಲ್ಲಿ ಹಾಲಕ್ಷತ್ರೀಯ ಎಂದು ನಮೂದಿಸಿ ಗೊಂದಲ ಉಂಟಾಗಿತ್ತು. ಅಂತಹ ತಪ್ಪು ಮತ್ತೆ ಈಗ ಆಗಬರಾದು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೀವರು ಈಡಿಗ ಜನಾಂಗದೊಂದಿಗೆ ಒಗ್ಗಟ್ಟಾಗಿಯೇ…
ಮಂಡ್ಯ : ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದರು. ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾವೇರಿ ನದಿಗೆ “ಕಾವೇರಿ ಆರತಿ” ಮಾಡುವ ಕಾರ್ಯಕ್ರಮವು ಐದು ದಿನಗಳ ಕಾಲ ಕೆಆರ್ ಎಸ್ ನ ಬೃಂದಾವನ ಉದ್ಯಾನವನದಲ್ಲಿ ನಡೆಯುತ್ತಿದೆ. ಕಾವೇರಿ ಆರತಿ ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರರಾಜ್ಯದ ನಾನಾ ಭಾಗಗಳಿಂದ ಆಗಮಿಸಿ “ಕಾವೇರಿ ಆರತಿ”ಯನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಹಂಚಲು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲಾಡು ಮಾಡಿಸಿದ್ದಾರೆ. ಪ್ರತಿನಿತ್ಯ ಲಾಡು ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. “ಕಾವೇರಿ ಆರತಿ” ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ತಾಯಿ ಪ್ರಸಾದವಾಗಿ ಲಾಡನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕಾವೇರಿ ಕನ್ನಡ ನಾಡಿನ ಜೀವನದಿ. ಕೇರಳ,…
ಬೆಂಗಳೂರು: ನಗರದ ಜನರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ನಂತ್ರ ಎಲ್ಲಾ ಮಾಹಿತಿ ಒಂದೆಡೆಗೆ ಲಭ್ಯವಾಗುವಂತೆ ಬೆಂಗಳೂರು ಸಿಟಿ ದಿಶಾಂಕ್ ಆಪ್ ಬಿಡುಗಡೆ ಮಾಡಲಾಗಿದೆ. ಈ ಆಪ್ ನಿಮ್ಮ ಮೊಬೈಲ್ ನಲ್ಲಿ ಹಾಕಿಕೊಂಡರೇ ಜಿಬಿಎ ಸಂಪೂರ್ಣ ಮಾಹಿತಿ ನಿಮ್ಮ ಅಂಗೈನಲ್ಲೇ ಲಭ್ಯವಾಗಲಿದೆ. ಈ ಕುರಿತಂತೆ ಜಿಬಿಎ ಮಾಹಿತಿ ತಂತ್ರಜ್ಞಾನ ವಿಶೇಷ ಆಯುಕ್ತರಾದಂತ ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ತಿಳಿಯಲು ಮೊಬೈಲ್ ತಂತ್ರಾಂಶ ʼಬೆಂಗಳೂರು ಸಿಟಿ ದಿಶಾಂಕ್ʼ ಬಿಡುಗಡೆ ಮಾಡಲಾಗಿದೆ. ಇದು ಜಿಐಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 5 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್ಗಳ (ಹಳೆಯ 198 ವಾರ್ಡ್) ಅಧಿಕೃತ ಗಡಿಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ “ಬೆಂಗಳೂರು ಸಿಟಿ ದಿಶಾಂಕ್” ಮೊಬೈಲ್ ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದು ಜಿ.ಐ.ಎಸ್ ಮೊಬೈಲ್ ಅಪ್ಲಿಕೇಶನ್…







