Author: kannadanewsnow09

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಇಇಡಿಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ 7ನೇ ವೇತನ ಶ್ರೇಣಿ ಹಾಗೂ ವೇತನವನ್ನು ಇಇಡಿಎಸ್ ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆವಿ ತ್ರಿಲೋಕ ಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದು, ವಿಷಯದನ್ವಯ ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಇದುವರೆಗೆ ಒಟ್ಟು 18 ಸೇವೆಗಳನ್ನು ನೌಕರರಿಗೆ ಕಡ್ಡಾಯಗೊಳಿಸಿದ್ದರೂ ಸಹ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆ /ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಇ.ಇ.ಡಿ.ಎಸ್ ತಂತ್ರಾಂಶದ ಮೂಲಕ ರಜೆ ಅನುಮತಿ ಸಲ್ಲಿಸದೆ ಇರುವುದು ಇ.ಇ.ಡಿ.ಎಸ್ ವರದಿಗಳಲ್ಲಿ ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಮುಂದೆ ಶಾಲಾ/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗಳು (ಬೋದಕ/ಬೋದಕೇತರ) ರಜೆಗೆ ತೆರಳುವ ಮುಂಚಿತವಾಗಿ ಇ.ಇ.ಡಿ.ಎಸ್. ತಂತ್ರಾಂಶದ ಮೂಲಕವೇ ಎಲ್ಲಾ ರೀತಿಯ ರಜಾ ಸೌಲಭ್ಯಗಳಾದ [C.L/R.H/E.L/H.P.L /ಇತರೆ] ರಜಾ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಇ.ಇ.ಡಿ.ಎಸ್ ತಂತ್ರಾಂಶದ ಮೂಲಕವೇ…

Read More

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು, ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಮಂಜೂರಾತಿ ಪತ್ರ ದೊರೆಯಲಿದೆ. ಇದರ ಜೊತೆಗೆ ಜೊತೆಗೆ ಅಕ್ರಮವಾಗಿ ಬಗರ್ ಹುಕುಂ ಜಮೀನು ಮಂಜೂರಾತಿ ಪಡೆದವರಿಗೂ ಸರ್ಕಾರ ಬಿಗ್ ಶಾಕ್ ನೀಡಿದೆ. ಅದೇ ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಂಡಿದ್ರೆ ಖಾತೆಯಾಗಲ್ವಂತೆ. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿರುವಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಬಗರ್‌ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ದೂರು ಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮವಾಗಿ ಮಂಜೂರಾದ ಪ್ರಕರಣಗಳಲ್ಲಿ ಖಾತೆ ಆಗುವುದಿಲ್ಲ. ಕ್ರಮಬದ್ಧವಾಗಿ ಇರುವ ಪ್ರಕರಣಗಳಲ್ಲಿ ಖಾತೆ ಮಾಡಿಕೊಡಲಾಗುತ್ತದೆ ಎಂದಿದ್ದಾರೆ. ಶೀಘ್ರವೇ ಅದನ್ನು ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ಆದರೇ ಅಕ್ರಮವಾಗಿ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿ ಪಡೆದವರಿಗೆ ಖಾತೆ ಮಾಡಿಕೊಡುವುದಿಲ್ಲ ಅಂತ ಹೇಳುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. https://twitter.com/KarnatakaVarthe/status/1902658313965449711 https://kannadanewsnow.com/kannada/karnataka-govt-finalises-3-locations-for-construction-of-2nd-international-airport-in-bengaluru/ https://kannadanewsnow.com/kannada/not-only-minister-rajanna-but-his-son-mlc-rajendra-also-honey-trapped/

Read More

ಬೆಂಗಳೂರು: ನಗರದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಖಚಿತವಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೀಗ ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೂರು ಸ್ಥಳಗಳನ್ನು ಕೂಡ ಫೈನಲ್ ಮಾಡಿರುವುದಾಗಿ ತಿಳಿದು ಬಂದಿದೆ. ಹೌದು ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮೂರು ಸ್ಥಳಗಳನ್ನು ಗುರುತಿಸಿ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಐದಾರೂ ಸ್ಥಳಗಳ ಬಗ್ಗೆ ಚರ್ಚೆ ನಡೆಸಲಾದ್ರೂ, ಐಡೆಕ್ ಸಂಸ್ಥೆ ನೀಡಿರುವಂತ ವರದಿಗೆ ಅನುಗುಣವಾಗಿ ಮೂರು ಸ್ಥಳಗಳನ್ನು ಫೈನಲ್ ಮಾಡಿ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕಳಿಸಿದೆ ಎನ್ನಲಾಗುತ್ತಿದೆ. ಅಂದಹಾಗೇ ಐಡೆಕ್ ಸಂಸ್ಥೆಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಎಲ್ಲಾ ಮಾನದಂಡಗಳನ್ನು ಅನುಸರಿಸಿ ಕನಕಪುರದ ಬಳಿಯಲ್ಲಿ ಎರಡು ಸ್ಥಳ ಹಾಗೂ ನೆಲಮಂಗಲದ ಕುಣಿಗಲ್ ನಡುವಿನ ಸೋಲು ಬಳಿಯಲ್ಲಿ ಮತ್ತೊಂದು ಸ್ಥಳ ಸೇರಿದಂತೆ ಮೂರು ಸ್ಥಳಗಳನ್ನು ಶಾರ್ಟ್ ಲೀಸ್ಟ್ ಮಾಡಿತ್ತು. ಈ ಸ್ಥಳಗಳನ್ನೇ ರಾಜ್ಯ ಸರ್ಕಾರ ಫೈನಲ್ ಮಾಡಿ, ಕೇಂದ್ರ…

Read More

ನವದೆಹಲಿ: ಪತ್ನಿ ಅಶ್ಲೀಲ ಚಿತ್ರಗಳನ್ನು ನೋಡುವುದು ಅಥವಾ ಸ್ವ-ಸಂತೋಷದಲ್ಲಿ ತೊಡಗುವುದು ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಬೀತಾಗದ ಹೊರತು ಗಂಡನ ಮೇಲಿನ ಕ್ರೌರ್ಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಆರ್.ಪೂರ್ಣಿಮಾ ಅವರ ನ್ಯಾಯಪೀಠವು ಖಾಸಗಿತನದ ಮೂಲಭೂತ ಹಕ್ಕು ವೈವಾಹಿಕ ಗೌಪ್ಯತೆಯನ್ನು ಒಳಗೊಂಡಿದೆ ಮತ್ತು ವೈವಾಹಿಕ ಗೌಪ್ಯತೆಯ ರೂಪರೇಖೆಗಳು ಮಹಿಳೆಯ ಲೈಂಗಿಕ ಸ್ವಾಯತ್ತತೆಯನ್ನು ಒಳಗೊಂಡಿದೆ ಎಂದು ಹೇಳಿದೆ. ಹೈಕೋರ್ಟ್ನ ಮಧುರೈ ಪೀಠವು ಸ್ವಯಂ-ಸಂತೋಷವು ನಿಷೇಧಿತ ಹಣ್ಣಲ್ಲ ಮತ್ತು ಮದುವೆಯ ನಂತರವೂ ಮಹಿಳೆ ತನ್ನ ವ್ಯಕ್ತಿತ್ವ ಮತ್ತು ತನ್ನ ಮೂಲಭೂತ ಗುರುತನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೈವಾಹಿಕ ಸ್ಥಾನಮಾನದಿಂದ ಒಳಗೊಳ್ಳುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ. ಖಾಸಗಿಯಾಗಿ ಅಶ್ಲೀಲತೆಯನ್ನು ನೋಡುವ ಪ್ರತಿವಾದಿಯ (ಪತ್ನಿ) ಕೃತ್ಯವು ಅರ್ಜಿದಾರರಿಗೆ ಕ್ರೌರ್ಯವಾಗುವುದಿಲ್ಲ. ಇದು ನೋಡುವ ಸಂಗಾತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದು ಇತರ ಸಂಗಾತಿಯನ್ನು ಕ್ರೂರವಾಗಿ ನಡೆಸಿಕೊಳ್ಳುವುದಕ್ಕೆ ಸಮನಾಗುವುದಿಲ್ಲ ಎಂದು ನ್ಯಾಯಾಲಯ…

Read More

ಬೆಂಗಳೂರು: ಕೇವಲ ಸಹಕಾರ ಸಚಿವ ಕೆ.ಎನ್ ರಾಜಣ್ಣನ ಮೇಲೆ ಮಾತ್ರವೇ ಅಲ್ಲದೇ, ಅವರ ಪುತ್ರ ಎಂಎಸ್ಸಿ ರಾಜೇಂದ್ರ ರಾಜಣ್ಣ ಅವರ ಮೇಲೂ ಹನಿಟ್ರ್ಯಾಪ್ ಮಾಡಿರೋ ಗಂಭೀರ ಆರೋಪ ಸದನದಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಸದನದಲ್ಲಿ ಮಾತನಾಡಿದಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ನನ್ನ ವಿರುದ್ಧ ಮಾತ್ರವೇ ಹನಿಟ್ರ್ಯಾಪ್ ಮಾಡೋದಕ್ಕೆ ಯತ್ನಿಸಿದ ಪುರಾವೆಗಳು ಇದ್ದಾವೆ. ಈ ಬಗ್ಗೆ ಲಿಖಿತ ದೂರು ನೀಡುವುದಾಗಿ ಸದನದಲ್ಲಿ ತಿಳಿಸಿದರು. ಇನ್ನೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡೋದಕ್ಕೆ ಪ್ರಯತ್ನಿಸಿರೋದಷ್ಟೇ ಅಲ್ಲ. ಅವರ ಪುತ್ರ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರ ಮೇಲೂ ಈ ಯತ್ನ ನಡೆಸಲಾಗಿದೆ. ಈ ಮಾತನ್ನು ಸ್ವತಹ ಎಂಎಲ್ಸಿ ರಾಜೇಂದ್ರ ರಾಜಣ್ಣ ತಿಳಿಸಿದ್ದಾರೆ. ನನಗೆ ಈ ಸಂಬಂಧ ಹಲವು ವೀಡಿಯೋ ಕಾಲ್, ಮಸೇಜ್ ಗಳು ಬರುತ್ತಿವೆ. ಕಳೆದ ಆರು ತಿಂಗಳಿನಿಂದ ಹನಿಟ್ರ್ಯಾಪ್ ಗೆ ಸಿಲುಕಿಸಲು ಪ್ರಯತ್ನಿಸಲಾಗಿದೆ. ಹನಿಟ್ರ್ಯಾಪ್ ಬಹಳ ದಿನಗಳಿಂದ ನಡೆಯುತ್ತಿದೆ. ನಮ್ಮ ತಂದೆಯವರ ಮೇಲೆ ಮಾತ್ರವಲ್ಲ, ನನ್ನ ಮೇಲೂ ಯತ್ನಿಸಲಾಗಿದೆ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸತತ ಒಂದು ಗಂಟೆಯ ವರೆಗೆ ಸುರಿದಿದೆ. ಮುಂಗಾರು ಪೂರ್ವ ಮಳೆಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜನತೆಗೆ ತಂಪೆರೆದಿದೆ. ಸೊರಬ, ಸಾಗರ, ಉಳವಿ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ. ಇಂದು ಗುಡುಗು ಸಿಡಿಲು ಸಹಿತ ಆಲಿಕಲ್ಲಿನೊಂದಿಗೆ ಭಾರೀ ಮಳೆಯೇ ಸೊರಬ ತಾಲ್ಲೂಕಿನಲ್ಲಿ ಆಗಿದೆ. ಸೊರಬ ತಾಲ್ಲೂಕಿನ ಉಳವಿಯಲ್ಲಿ ಸಂಜೆ 4 ಗಂಟೆಯ ಸುಮಾರಿಗೆ ಆರಂಭಗೊಂಡಂತ ಮಳೆ ಮುಕ್ಕಾಲು ಗಂಟೆಯವರೆಗೆ ಸುರಿಯಿತು. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವ ಪರಿಣಾಮ, ವಿದ್ಯುತ್ ತಂತಿಗಳು ತುಂಡಾಗಿವೆ ಎನ್ನಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗೋದಾಗಿ ಮೆಸ್ಕಾಂ ಮೂಲಗಳಿಂದ ತಿಳಿದು ಬಂದಿದೆ. ವರದಿ: ವಸಂತ ಬಿ ಈಶ್ವರಗೆರೆ https://kannadanewsnow.com/kannada/honeytrap-allegations-state-govt-orders-high-level-probe/ https://kannadanewsnow.com/kannada/centre-approves-mandya-ring-road-project-at-a-cost-of-rs-900-crore/ https://kannadanewsnow.com/kannada/breaking-encounter-between-security-forces-in-bijapur-chhattisgarh-22-naxals-killed-naxal-encounter/

Read More

ನವದೆಹಲಿ: ಮಂಡ್ಯ ನಗರ ವರ್ತುಲ ರಸ್ತೆಯನ್ನು ಅದಷ್ಟು ಬೇಗ ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸಂಸತ್ ಭವನದಲ್ಲಿರುವ ಗಡ್ಕರಿ ಅವರ ನಿವಾಸಕ್ಕೆ ತೆರಳಿ ಭೇಟಿಯಾದ ಕುಮಾರಸ್ವಾಮಿ ಅವರು; ಈಗಾಗಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆಗೆ ಡಿಪಿಆರ್ ಮಾಡಿದೆ. ಆದರೆ ಪ್ರಾಧಿಕಾರದ ಅಂದಾಜು ವೆಚ್ಚ ಯೋಜನೆಗೆ ಸಾಕಾಗುವುದಿಲ್ಲ. ₹900 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಕೊಟ್ಟು ಅನುಷ್ಠಾನಗೊಳಿಸಬೇಕು ಎಂದು ಸಚಿವರು ಮಾಡಿದ ಮನವಿಗೆ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಬಗ್ಗೆ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕುಮಾರಸ್ವಾಮಿ ಅವರು, ಭೂಸ್ವಾಧೀನಕ್ಕೆ ₹550 ಕೋಟಿ ಹಾಗೂ ನಿರ್ಮಾಣ ಕಾರ್ಯಕ್ಕೆ ₹350 ಕೋಟಿ ಬೇಕಾಗುತ್ತದೆ. ಹೀಗಾಗಿ ಯೋಜನೆಗೆ ₹900 ಕೋಟಿ ಅಗತ್ಯವಿದೆ ಎಂಬುದನ್ನು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ವರ್ತುಲ ರಸ್ತೆ ಯೋಜನೆ ಅನುಷ್ಠಾನಗೊಂಡರೆ ಮಂಡ್ಯ ನಗರದ ಬೆಳವಣಿಗೆ, ಅಭಿವೃದ್ಧಿಗೆ ಬಹಳ…

Read More

ಬೆಂಗಳೂರು: ಸಚಿವ ಕೆಎನ್ ರಾಜಣ್ಣ ಅವರು ಸದನದಲ್ಲೇ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಇಂತಹ ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ದೂರು ನೀಡುವುದಾಗಿ ಸ್ಪಷ್ಟನೆ ನೀಡಿದರು. ಈ ಪ್ರಶ್ನೆಗೆ ಉತ್ತಿರಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹನಿಟ್ರ್ಯಾಪ್ ಆರೋಪದ ಬಗ್ಗೆ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಶೀಘ್ರವೇ ತನಿಖೆಗೆ ಆದೇಶಿಸಿವುದಾಗಿ ಘೋಷಿಸಿದರು. ಇಲ್ಲಿಗೆ ಹನಿಟ್ರ್ಯಾಬ್ ಗೆ ಪುಲ್ ಸ್ಟಾಪ್ ಹಾಕಬೇಕು. ಇದು ಸದನದ ಎಲ್ಲಾ ಸದಸ್ಯರ ಮರ್ಯಾದೆಯ ಪ್ರಶ್ನೆಯಾಗಿದೆ. ಜನಪ್ರತಿನಿದಿಗಳ ಗೌರವ, ಘನಟೆಯನ್ನು ಉಳಿಸುವ ಅಗತ್ಯವಿದೆ. ಇದು ಒಬ್ಬರು ಇಬ್ಬರು ಸಚಿವರ ಹನಿಟ್ರ್ಯಾಪ್ ಅಲ್ಲ. ಇದು ಎಲ್ಲರ ಮರ್ಯಾದೆಯ ಪ್ರಶ್ನೆಯಾಗಿದೆ. ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು. https://kannadanewsnow.com/kannada/bruhat-bengaluru-mahanagara-palike-amendment-bill-2025-passed-in-legislative-council/ https://kannadanewsnow.com/kannada/sensex-surges-over-900-points-nifty-gains-over-23100-points/

Read More

ಬೆಂಗಳೂರು: “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025”ಕ್ಕೆ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧೇಯಕವನ್ನು ಗುರುವಾರದಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಂತರ ಮಾತನಾಡಿದರು. “ಬೆಂಗಳೂರು ನಗರದ ಖಾಸಗಿ ಬಡಾವಣೆಗಳಲ್ಲಿ ರಸ್ತೆಗಳನ್ನು ಮಾಡಲಾಗಿದೆ. ಆ ರಸ್ತೆಗಳನ್ನು ನಾವು ಸಹ ಅಭಿವೃದ್ದಿ ಮಾಡಿದ್ದೇವೆ. ನಿವೇಶನಗಳನ್ನು ಮಾಡಿ ಹಂಚಿದ್ದರೂ ಸಹ ಕಂದಾಯ ದಾಖಲೆಗಳಲ್ಲಿ ಇನ್ನೂ ಭೂ ಮಾಲೀಕರ ಹೆಸರು ನಮೂದಾಗಿಯೇ ಇದೆ. ಈ ಭೂ ದಾಖಲೆಗಳನ್ನು ನವೀಕರಣ ಮಾಡಬೇಕಿದೆ. ಖಾಸಗಿ ಬಡಾವಣೆಗಳ ರಸ್ತೆಗಳನ್ನು ಸರ್ಕಾರಿ ರಸ್ತೆಗಳೆಂದು ಘೋಷಣೆ ಮಾಡಬೇಕಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಂತರ ಮಾತನಾಡಿದ ಅವರು, “ಭೂ ಮಾಲೀಕರಲ್ಲಿ ಒಂದಷ್ಟು ಜನ ನಾವು ನಿವೇಶನ ಮಾತ್ರ ಹಂಚಿದ್ದೇವೆ. ರಸ್ತೆ ನೀಡಿಲ್ಲ ಎಂದು ಈಗ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ರಸ್ತೆಗಳನ್ನು ತೆಗೆದು ಮಾರಾಟ ಮಾಡಲು ಪ್ರಯತ್ನ ಮಾಡುವುದು ನಡೆಯುತ್ತಿದೆ. ಸರ್ಕಾರ ಟಿಡಿಆರ್ ನೀಡುತ್ತದೆ ಎಂದು ಈಗ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಅವರ ಬಡಾವಣೆಗಳಿಗೆ ರಸ್ತೆ ಮಾಡಿ ಅದಕ್ಕೆ ಈಗ ಪರಿಹಾರ…

Read More

ನವದೆಹಲಿ: ಯುಎಸ್ ಫೆಡ್ ನಿರ್ಧಾರದಿಂದ ಮಾರುಕಟ್ಟೆಯ ಭಾವನೆಯು ಉತ್ತೇಜಿತಗೊಂಡಿದ್ದರಿಂದ, ದಲಾಲ್ ಸ್ಟ್ರೀಟ್ ಗುರುವಾರ ಬುಲ್ ರನ್ ಅನುಭವಿಸಿದ ನಂತರ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಕಂಡವು. ಆಟೋ ಮತ್ತು ಐಟಿ ವಲಯದ ಷೇರುಗಳ ಲಾಭದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ 1% ಕ್ಕಿಂತ ಹೆಚ್ಚು ಲಾಭ ಗಳಿಸಿದವು. ಬಿಎಸ್ಇ ಸೆನ್ಸೆಕ್ಸ್ 899.01 ಪಾಯಿಂಟ್ಸ್ ಏರಿಕೆ ಕಂಡು 76,348.06 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 283.05 ಪಾಯಿಂಟ್ಸ್ ಏರಿಕೆಗೊಂಡು 23,190.65 ಕ್ಕೆ ತಲುಪಿದೆ. ಪ್ರಗತಿಶೀಲ ಷೇರುಗಳ ನಿರ್ದೇಶಕ ಆದಿತ್ಯ ಗಗ್ಗರ್ ಮಾತನಾಡಿ, ಸೂಚ್ಯಂಕವು ಸಾಪ್ತಾಹಿಕ ಮುಕ್ತಾಯದ ವ್ಯಾಪಾರವನ್ನು ಬಲವಾದ ಆರಂಭದೊಂದಿಗೆ ಪ್ರಾರಂಭಿಸಿತು, ಅದರ ಸಕಾರಾತ್ಮಕ ಆವೇಗವನ್ನು ನಿರ್ಮಿಸಿತು. ಆಟೋ, ಐಟಿ ಮತ್ತು ಎಫ್‌ಎಂಸಿಜಿ ವಲಯಗಳಲ್ಲಿನ ಲಾಭಗಳಿಂದಾಗಿ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಮುಚ್ಚಲ್ಪಟ್ಟವು. ವಹಿವಾಟು ಚಟುವಟಿಕೆಯು ಸೂಚ್ಯಂಕ ಆಧಾರಿತ ಷೇರುಗಳ ಮೇಲೆ ಕೇಂದ್ರೀಕೃತವಾಗಿತ್ತು, ಇದು ಮಿಡ್ ಮತ್ತು ಸ್ಮಾಲ್‌ಕ್ಯಾಪ್ ವಿಭಾಗಗಳಲ್ಲಿ ದುರ್ಬಲ ಕಾರ್ಯಕ್ಷಮತೆಗೆ ಕಾರಣವಾಯಿತು. ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ…

Read More