Subscribe to Updates
Get the latest creative news from FooBar about art, design and business.
Author: kannadanewsnow09
ಗಾಂಜಾ ನಿಷೇಧಕ್ಕೆ ಪ್ರತಿಭಟಿಸಿದ ಹಾಲಪ್ಪ, ಓಸಿ, ಮಟ್ಕಾ ನಿಲ್ಲಿಸಿ ಎಂದಿಲ್ಲವೇಕೆ?: ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನೆ
ಶಿವಮೊಗ್ಗ : ಗಾಂಜಾ ನಿಷೇದಿಸುವಂತೆ ವೀರಾವೇಶದ ಪ್ರತಿಭಟನೆ ಮಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರತಿಭಟನೆಯಲ್ಲಿ ಓಸಿ ಮಟ್ಕಾ ನಿಲ್ಲಿಸಿ ಎಂದು ಏಕೆ ಹೇಳಿಲ್ಲ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಪ್ರಶ್ನೆ ಮಾಡಿದ್ದಾರೆ. ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಓಸಿ ದಂಧೆ ಮಾಡುವ ಕಿಂಗ್ಪಿನ್ ಆಡಿಸಿ ಇಡೀ ಕುಟುಂಬ ಹಾಳು ಮಾಡುವವರ ಬಗ್ಗೆ ಮಾತನಾಡುವುದಿಲ್ಲ. ಮೊದಲು ಅದರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಸವಾಲು ಹಾಕಿದರು. ಸಾಗರ ತಾಲ್ಲೂಕಿನಲ್ಲಿ ಓಸಿ ಮಟ್ಕಾ, ಗಾಂಜಾ ಇಸ್ಪೀಟ್ ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇನೆ. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿ, ಅಂತಹವರನ್ನು ರೌಡಿಲೀಸ್ಟ್ಗೆ ಸೇರಿಸುವುದರ ಜೊತೆಗೆ ಗಡಿಪಾರು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯವರ ಪ್ರತಿಭಟನೆ ಹುರುಳಿಲ್ಲದ್ದು, ಹೊಸನಗರದಲ್ಲಿ ನಮ್ಮ ಪಕ್ಷದ ಮಾಧವ ಶೆಟ್ಟಿ ಎಂಬುವವರಿಗೆ ಜೀವ ಹೋಗುವಂತೆ ಹೊಡೆದಿದ್ದಾರೆ. ಹಾಲಪ್ಪ ಎಲ್.ಬಿ.ಕಾಲೇಜು ಗಲಾಟೆಯಲ್ಲಿ ಬ್ರಾಹ್ಮಣ ಮತ್ತು ಲಿಂಗಾಯಿತ ಮುಖಂಡರಿಗೆ ಹೊಡೆದ…
ಶಿವಮೊಗ್ಗ: ನಾನು ಮಾರಿಕಾಂಬಾ ದೇವಿ ಅಮ್ಮನ ದುಡ್ಡು ಹೊಡೆದು ತಿನ್ನುವುದಿಲ್ಲ. ನಾನು ದುಡ್ಡು ತಿಂದಿದ್ದೇನೆ ಎಂದು ಹೇಳಿದವನು ನರಕಕ್ಕೆ ಹೋಗುತ್ತಾನೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ. ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ ಮಾರಿಜಾತ್ರೆಯಲ್ಲಿ ಅಡ್ಜೆಸ್ಟ್ಮೆಂಟ್ ಮಾಡಿಕೊಂಡು ಅಮ್ಯೂಸ್ಮೆಂಟ್ ಪಾರ್ಕ್ 52 ಲಕ್ಷ ರೂ.ಗೆ ಹರತಾಳು ಹಾಲಪ್ಪ ಕೊಟ್ಟಿದ್ದಾರೆ. ಹರಾಜು ಹಿಡಿದವರು ಹಾಲಪ್ಪ ಶಿಷ್ಟ ಗೌತಮ ಮತ್ತು ಸಂಗಡಿಗರು. ಈ ಬಾರಿ ಅಮ್ಯೂಸ್ಮೆಂಟ್ ಪಾರ್ಕ್ 1.34 ಕೋಟಿ ರೂ.ಗೆ ಹರಾಜು ಆಗಿದೆ. ಬಿ.ಎಚ್.ಲಿಂಗರಾಜ್, ಗೌತಮ್ ಸೇರಿ ಹಾಲಪ್ಪ ಶಿಷ್ಯರೇ ಹರಾಜು ಹಿಡಿದಿದ್ದಾರೆ. ಹಾಗಾದರೆ ಒಂದಕ್ಕೆ ಮೂರರಷ್ಟು ಹೆಚ್ಚಿನ ಹಣಕ್ಕೆ ಹರಾಜು ಹೇಗೆ ಹೋಗಿದೆ ಎಂದರು. ವಿವಿಧೆಡೆಯಿಂದ ಮಾರಿಕಾಂಬ ಕಮಿಟಿಗೆ ಬಂದ ಹಣವನ್ನು ದೇವಸ್ಥಾನದ ಅಭಿವೃದ್ದಿಗೆ ನಾವು ಉಪಯೋಗಿಸುತ್ತಿದ್ದೇವೆ. ಬೇಳೂರು ಯಾವತ್ತೂ ಅಮ್ಮನ ದುಡ್ಡು ಹೊಡೆದು ತಿನ್ನುವುದಿಲ್ಲ. ನಾನು ದುಡ್ಡು ತಿಂದಿದ್ದೇನೆ ಎಂದು ಹೇಳಿದವನು ನರಕಕ್ಕೆ ಹೋಗುತ್ತಾನೆ ಎಂದು ಗುಡುಗಿದರು. ಕಳೆದ ಬಾರಿ ಹಾಲಪ್ಪ ಹಣ ಹೊಡೆದು ತಿಂದಿದ್ದಾರೆ. ಮಾತೆತ್ತಿದರೇ…
ಬೆಂಗಳೂರು: ನಾಳೆಯಿಂದ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯಲಿದೆ. ಇಂತಹ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಬೆಂಗಳೂರು ನಿನ್ನೆ ತಮಿಳುನಾಡಿನಲ್ಲಿ ಅಧಿವೇಶನ ಉದ್ದೇಶಿಸಿ ಮಾತನಾಡೋದಕ್ಕೆ ಅಲ್ಲಿನ ರಾಜ್ಯಪಾಲರು ವಿರೋಧ ವ್ಯಕ್ತ ಪಡಿಸಿದ್ದರು. ಈ ಬೆನ್ನಲ್ಲೇ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡೋದಕ್ಕೆ ನಿರಾಕರಿಸಿರುವುದಾಗಿ ತಿಳಿದು ಬಂದಿದೆ. ಗರ್ವರನ್ ನಿರಾಕರಿಸಿದ ಹಿನ್ನಲೆಯಲ್ಲಿ ಇಂದು ಸಂಜೆ 5.45ಕ್ಕೆ ರಾಜಭವನಕ್ಕೆ ಕಾಂಗ್ರೆಸ್ ನಿಯೋದ ತೆರಳಿ ಮನವೊಲಿಸೋದಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಉನ್ನತಮಟ್ಟದ ನಿಯೋಗ ತೆರಳೋದಕ್ಕೆ ನಿರ್ಧರಿಸಿದೆ. https://kannadanewsnow.com/kannada/dont-tarnish-the-sanctity-of-the-cooperative-sector-dont-cause-trouble-through-corruption-mla-gopalakrishna-belurs-advice/ https://kannadanewsnow.com/kannada/guidelines-issued-for-renewal-of-fc-non-marine-registration-of-vehicles-in-the-state-compliance-with-these-rules-is-mandatory/
ಶಿವಮೊಗ್ಗ : ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಅದರ ಪಾವಿತ್ರ್ಯತೆ ಹಾಳು ಮಾಡಬಾರದು. ಸಹಕಾರಿ ಸಂಸ್ಥೆಯಲ್ಲಿದ್ದು ರೈತರಿಗೆ, ಜನಸಾಮಾನ್ಯರಿಗೆ ಉಪಕಾರ ಮಾಡಬೇಕೆ ವಿನಃ, ಭ್ರಷ್ಟಾಚಾರ ನಡೆಸಿ ಉಪದ್ರವ ಕೊಡಬೇಡಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪವಿತ್ರ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಹಣ ಮಾಡುವ ಉದ್ದೇಶವಿದ್ದರೇ ಸಹಕಾರ ಸಂಘಕ್ಕೆ ಬರಬೇಡಿ. ಸೇವೆ ಮಾಡುವ ಮನಸ್ಸಿದ್ದವರಿಗೆ ಸಹಕಾರಿ ಕ್ಷೇತ್ರ ಅತ್ಯಂತ ಪೂರಕವಾಗಿರುತ್ತದೆ. ವೈಯಕ್ತಿಕ ಪ್ರತಿಷ್ಟೆಯನ್ನು ಬದಿಗಿಟ್ಟು ಕೆಲಸ ಮಾಡಿದಾಗ ಮಾತ್ರ ಸಹಕಾರ ಕ್ಷೇತ್ರದ ಮೂಲಕ ಸಮೂಹಕ್ಕೆ ಒಂದಷ್ಟು ಕೊಡುಗೆಯನ್ನು ನೀಡಲು ಸಾಧ್ಯವಿದೆ. ತಾಲ್ಲೂಕಿನಲ್ಲಿ ಕಲ್ಮನೆ ಹೊರತುಪಡಿಸಿ…
ಯಾದಗಿರಿ: ಮರಕ್ಕೆ ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಯಾದಗಿರಿಯ ವಡಗೇರ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಡಗೇರ ನಿವಾಸಿ 9ನೇ ತರಗತಿ ವಿದ್ಯಾರ್ಥಿ ಪವನ್(13) ಆತ್ಮಹತ್ಯೆ ಮಾಡಿಕೊಂಡಾತನಾಗಿದ್ದಾನೆ. ಶಾಲೆಯ ಸಮಯದಲ್ಲೇ ಪವನ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/this-time-karnatakas-statue-will-participate-in-the-republic-day-parade-in-delhi-unveiling-the-wealth-of-grains/ https://kannadanewsnow.com/kannada/guidelines-issued-for-renewal-of-fc-non-marine-registration-of-vehicles-in-the-state-compliance-with-these-rules-is-mandatory/
ಬೆಂಗಳೂರು: ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಿರಲ್ಲ ಎನ್ನಲಾಗಿತ್ತು. ಆದರೇ ಇದೀಗ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ತಚಿತ್ರ ಭಾಗಿಯಾಗುವುದಾಗಿ ತಿಳಿದು ಬಂದಿದೆ. ಕರ್ನಾಟಕ ವಾರ್ತಾ ಇಲಾಖೆಯಿಂದ ಸಿದ್ಧಪಡಿಸಿದಂತ ಸಿರಿಧಾನ್ಯಗಳ ಸಂಪತ್ತು ಅನಾವರಣಗೊಳ್ಳಲಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಿರಿಧಾನ್ಯಗಳ ಸಂಪತ್ತು ಟ್ಯಾಬ್ಲೋ ಅನಾವರಣಗೊಳ್ಳಲಿದೆ. ಮಿಲೆಟ್ಸ್ ಟು ಮೈಕ್ರೋಚಿಪ್ ಪರಿಕಲ್ಪನೆಯಲ್ಲಿ ತಯಾರಾಗಿರುವ ಸ್ತಬ್ಧಚಿತ್ರ ಇದಾಗಿದೆ. ಕರ್ನಾಟಕದ ಬೆಳಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಬಗ್ಗೆ ಟ್ಯಾಬ್ಲೋ ಇದಾಗಿದೆ. ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಕುರಿತು ಟ್ಯಾಬ್ಲೋ ಮಾಹಿತಿ ನೀಡಲಿದೆ. ಗಣರಾಜ್ಯೋತ್ಸವ ದಿನ ದೆಹಲಿಯ ಕರ್ತವ್ಯ ಪಥದಲ್ಲಿ ಟ್ಯಾಬ್ಲೋ ಸಾಗಲಿದೆ. https://kannadanewsnow.com/kannada/shidlaghatta-municipal-council-threat-case-congress-party-recommends-rajiv-gowdas-suspension/ https://kannadanewsnow.com/kannada/guidelines-issued-for-renewal-of-fc-non-marine-registration-of-vehicles-in-the-state-compliance-with-these-rules-is-mandatory/
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ದಲಿತ ಸಮುದಾಯದ ಸಚಿವರನ್ನು ಸಂಪುಟದಿಂದ ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದು, ಇದೀಗ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಗುರಿಯಾಗಿಸಿ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲು ಭಾರಿ ಹುನ್ನಾರ ನಡೆಸಿದ್ದಾರೆ ಎಂದು ಅತಿ ಹಿಂದುಳಿದ ಸಣ್ಣ ಜಾತಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹನುಮೇಶ್ ಗುಂಡೂರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣದಿಂದ ಕೆ.ಎನ್. ರಾಜಣ್ಣ ಹಾಗೂ ಭ್ರಷ್ಟಚಾರ ಆರೋಪ ಹೊರಿಸಿ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಏಳು ಮಂದಿ ದಲಿತ ಸಚಿವರಿದ್ದರು. ಇದೀಗ ಸಂಖ್ಯಾಬಲ ಐದಕ್ಕೆ ಕುಸಿದಿದೆ. ಈ ಸರ್ಕಾರದಲ್ಲಿ ದಲಿತರನ್ನೇ ಗುರಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಷಡ್ಯಂತ್ರಗಳಿಗೆ ಅವಕಾಶ ನೀಡುವುದಿಲ್ಲ, ಹಾಗೇನಾದರೂ ಆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ನಡೆಯುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಬಲ ಖಾತೆಯನ್ನು ಕಸಿದು ಬೇರೆಯವರಿಗೆ ದೊರಕಿಸುವ ಷಡ್ಯಂತ್ರವೂ ನಡೆಯುತ್ತಿದೆ.…
ಬೆಂಗಳೂರು: ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿ, ನಿಂದಿಸಿದ್ದರು. ಈ ಆಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಅಮಾನತಿಗೆ ಕೈ ಪಕ್ಷವು ಅಮಾನತಿಗೆ ಶಿಫಾರಸ್ಸು ಮಾಡಿದೆ. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕೈ ಮುಖಂಡ ನಿಂದನೆ ಪ್ರಕರಣದಲ್ಲಿ ರಾಜೀವ್ ಗೌಡ ಅವರನ್ನು ಅಮಾನತುಗೊಳಿಸುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶಿಫಾರಸ್ಸು ಮಾಡಿದ್ದಾರೆ. ಆರೋಪಿ ರಾಜೀವ್ ಗೌಡಗೆ ಈ ಹಿಂದೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಲಾಗಿತ್ತು. ಕೆಪಿಸಿಸಿ ನೀಡಿದ್ದಂತ ಶೋಕಾಸ್ ನೋಟಿಸ್ ಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಉತ್ತರ ನೀಡದೇ ತಲೆಮರೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಜೀವ್ ಗೌಡ ಅವರನ್ನು ಅಮಾನತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡುವಂತೆ ಶಿಸ್ತು ಸಮಿತಿಯ ಅಧ್ಯಕ್ಷರಿಗೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಶಿಸ್ತು ಸಮಿತಿಯ ಅಧ್ಯಕ್ಷರಾದಂತ ರೆಹಮಾನ್ ಖಾನ್ ಅವರಿಗೆ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಪತ್ರ ಬರೆದು ಕೋರಿದ್ದಾರೆ.…
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಾರ್ ಮಾಲಿಕರೊಬ್ಬರನ್ನು, ಮತ್ತೊಂದು ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಂತ ಸಿಬ್ಬಂದಿಗಳೇ ಭೀಕರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವಂತ ಪೇಜ್-3 ಬಾರ್ ನಲ್ಲಿ ಮಾಲೀಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. 43 ವರ್ಷದ ತೇಜು ಹತ್ಯೆಯಾದಂತ ಬಾರ್ ಮಾಲೀಕರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯು ತಿಳಿದು ಬರಬೇಕಿದೆ. https://kannadanewsnow.com/kannada/deepinder-goyal-resigns-as-eternal-ceo/ https://kannadanewsnow.com/kannada/nirman-2-software-of-the-state-urban-development-authority-has-been-discontinued/
ನವದೆಹಲಿ: ಎಟರ್ನಲ್ನ ಸ್ಥಾಪಕ ಮತ್ತು ಗ್ರೂಪ್ ಸಿಇಒ ದೀಪಿಂದರ್ ಗೋಯಲ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಮತ್ತು ಬ್ಲಿಂಕಿಟ್ನ ಸಿಇಒ ಅಲ್ಬಿಂದರ್ ದಿಂಡ್ಸಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿಯು ಜನವರಿ 21 ರಂದು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಇಂದು, ನಾನು ಗ್ರೂಪ್ ಸಿಇಒ ಪಾತ್ರದಿಂದ ಹಿಂದೆ ಸರಿಯಲಿದ್ದೇನೆ ಮತ್ತು ಷೇರುದಾರರ ಅನುಮೋದನೆಗೆ ಒಳಪಟ್ಟು, ಉಪಾಧ್ಯಕ್ಷರಾಗಿ ನಿರ್ದೇಶಕರ ಮಂಡಳಿಯಲ್ಲಿ ಉಳಿಯುತ್ತೇನೆ. ಅಲ್ಬಿಂದರ್ ದಿಂಡ್ಸಾ (ಆಲ್ಬಿ) ಎಟರ್ನಲ್ನ ಹೊಸ ಗ್ರೂಪ್ ಸಿಇಒ ಆಗಿರುತ್ತಾರೆ ಎಂದು ಗೋಯಲ್ ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಗೋಯಲ್ ವಿಭಿನ್ನ ವಿಚಾರಗಳನ್ನು ಅನ್ವೇಷಿಸುತ್ತಿರುವಾಗ ಈ ನಿರ್ಧಾರ ಬಂದಿದೆ. ಇತ್ತೀಚೆಗೆ, ಗಮನಾರ್ಹವಾಗಿ ಹೆಚ್ಚಿನ ಅಪಾಯದ ಪರಿಶೋಧನೆ ಮತ್ತು ಪ್ರಯೋಗಗಳನ್ನು ಒಳಗೊಂಡಿರುವ ಹೊಸ ವಿಚಾರಗಳ ಗುಂಪಿಗೆ ನಾನು ಆಕರ್ಷಿತನಾಗಿದ್ದೇನೆ. ಎಟರ್ನಲ್ನಂತಹ ಸಾರ್ವಜನಿಕ ಕಂಪನಿಯ ಹೊರಗೆ ಉತ್ತಮವಾಗಿ ಅನುಸರಿಸಬಹುದಾದ ವಿಚಾರಗಳು ಇವು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಗೋಯಲ್ 2008 ರಲ್ಲಿ ಪಂಕಜ್ ಚಡ್ಡಾ ಅವರೊಂದಿಗೆ ಸೇರಿ ಜೊಮಾಟೊವನ್ನು ಸ್ಥಾಪಿಸಿದರು, ಇದನ್ನು…














