Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಫೆಬ್ರವರಿ.8ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಜನರ ಬಳಿಕೆ ಸರ್ಕಾರ ತೆರಳಿ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸೋದಕ್ಕೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ತಪ್ಪದೇ ಕೆಲ ಸೂಚನೆಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್.ಕೆ.ಹೆಚ್ ಸುತ್ತೋಲೆ ಹೊರಡಿಸಿದ್ದು, ಮುಖ್ಯಮಂತ್ರಿಯವರು ದಿನಾಂಕ 08-02-2024ರಂದು ವಿಧಾನಸೌಧದ ಮುಂಭಾಗದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಸುಸೂತ್ರ ನಿರ್ವಹಣೆಯ ದೃಷ್ಠಿಯಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕೆಳಕಂಡ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದ್ದಾರೆ. ದಿನಾಂಕ 07-02-2024 ಮತ್ತು 08-02-2024ರಂದು ವಿಧಾನಸೌಧ ಪ್ರವೇಶಿಸುವ ಅಧಿಕಾರಿ, ಸಿಬ್ಬಂದಿಗಳು ವಿಧಾನಸೌಧ ಪಶ್ಚಿಮ ದ್ವಾರ ಹಾಗೂ ದಕ್ಷಿಣ ದ್ವಾರದಿಂದ ಮಾತ್ರ ಪ್ರವೇಶಿಸಬೇಕು. ವಾಹನಗಳನ್ನು ವಿಕಾಸಸೌಧದ ತಳಮಹಡಿ-2ರಲ್ಲಿ ಹಾಗೂ ಗೇಟ್ ನಂ.2ರ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ಮಾತ್ರ…
ನವದೆಹಲಿ: ಫೆಬ್ರವರಿ 1, 2024 ರಂದು ಮುಕ್ತಾಯಗೊಂಡ ಜೆಇಇ ಮೇನ್ 2024 ಸೆಷನ್ 1 ರ ಕೀ ಉತ್ತರಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ website-jeemain.nta.ac.in ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಜೆಇಇ ಮೇನ್ಸ್ 2024 ಸೆಷನ್ 1 ಗಾಗಿ ಪರೀಕ್ಷೆಯನ್ನು ಜನವರಿ 24, 27, 29, 30, 31 ಮತ್ತು ಫೆಬ್ರವರಿ 1, 2024 ರಂದು ನಡೆಸಲಾಗಿತ್ತು. ಜನವರಿ 24 ರಂದು ಮಧ್ಯಾಹ್ನ 3 ರಿಂದ 6 ರವರೆಗೆ, ಬಿಇ ಮತ್ತು ಬಿ ಪ್ಲಾನಿಂಗ್ ಪರೀಕ್ಷೆಗಳು ಜನವರಿ 27 ರಿಂದ 31 ರವರೆಗೆ ಮತ್ತು ಫೆಬ್ರವರಿ 1 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ರವರೆಗೆ ಎರಡು ಪಾಳಿಗಳಲ್ಲಿ ನಡೆದವು. ಕೀ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅಂತಿಮ ಉತ್ತರ ಕೀ ಮತ್ತು ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ. ಸಂಸ್ಕರಣಾ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ವಿಲ್ಲೋಮೂರ್ ಪಾರ್ಕ್ನಲ್ಲಿ ಮಂಗಳವಾರ ನಡೆದ ಅಂಡರ್-19 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಉದಯ್ ಸಹರಾನ್ ಅಂಡ್ ಕೋ 245 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ನಿರತರಾಗಿರುವ ಸಚಿನ್ ದಾಸ್ ಅವರು ಟೀಮ್ ಇಂಡಿಯಾದ ಹೋರಾಟವನ್ನು ಪಂದ್ಯದೊಂದಿಗೆ ಮುನ್ನಡೆಸಿದರು. ಅಂಡರ್-19 ವಿಶ್ವಕಪ್ನ ಅಂತಿಮ ಪಂದ್ಯದಲ್ಲಿ ಮೆನ್ ಇನ್ ಬ್ಲೂ ತಂಡವು ಅಗ್ರ ಕ್ರಮಾಂಕದ ಕುಸಿತವನ್ನು ಅನುಭವಿಸಿದ ನಂತರ ಸಚಿನ್ ಮತ್ತು ಸಹರಾನ್ ಭಾರತಕ್ಕಾಗಿ 100 ಕ್ಕೂ ಹೆಚ್ಚು ರನ್ಗಳ ಜೊತೆಯಾಟವನ್ನು ನೀಡಿದರು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು 2 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವಂತೆ ಆಗಿದೆ. ಇದಕ್ಕೂ ಮುನ್ನ ಆರಂಭಿಕ ಆಟಗಾರ ಲುವಾನ್-ಡ್ರೆ ಪ್ರಿಟೋರಿಯಸ್ ಅವರ ನೆರವಿನಿಂದ ದಕ್ಷಿಣ ಆಫ್ರಿಕಾ ಅಲ್ಪಾವಧಿಗೆ ಮೇಲುಗೈ ಸಾಧಿಸಿತು. ಆದರೆ, ಸ್ಪಿನ್ನರ್ ಗಳಾದ ಮುಶೀರ್ ಖಾನ್, ಮುರುಗನ್ ಅಭಿಷೇಕ್ ಮತ್ತು ಪ್ರಿಯಾಂಶು ಮೊಲಿಯಾ ಮಧ್ಯಮ ಓವರ್ ಗಳಲ್ಲಿ ಬಂದು ದಕ್ಷಿಣ ಆಫ್ರಿಕಾವನ್ನು ಕತ್ತು ಹಿಸುಕಿದರು. ಭಾರತವು ಎಂದಿಗೂ ಪೆಡಲ್…
ದಾವಣಗೆರೆ: ಕೆಎಸ್ ಡಿಎಲ್ ಹಗರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದು, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಉಚ್ಚಾಟಿತಗೊಂಡಿದ್ದರು. ಇಂತಹ ಮಾಡಾಳ್ ಪುತ್ರ ಮಲ್ಲಿಕಾರ್ಜುನ ನಾಳೆ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಪುತ್ರ ಮಲ್ಲಿಕಾರ್ಜನ್ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಬಿಜೆಪಿಯ ವಿರುದ್ಧ ಸಿಡಿದೆದ್ದಿದ್ದಂತ ಅವರು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸೋದಕ್ಕೆ ಸಿದ್ಧತೆ ನಡೆಸಿದ್ದರು. ಆಗ ಬಿಜೆಪಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಚಾಟಿಸಿತ್ತು. ಇದರ ನಡುವೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿಯಲ್ಲಿ ಪ್ರಕ್ರಿಯೆ ಪಾಲಿಸಿಲ್ಲ ಎಂದು ತಿಳಿಸಿತ್ತು. https://kannadanewsnow.com/kannada/indians-will-no-longer-need-visas-to-travel-to-iran/ https://kannadanewsnow.com/kannada/another-good-news-for-low-power-users-additional-10-units-free-up-to-58-units-free/
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ, 2020 ರ ಚುನಾವಣೆಯ ಫಲಿತಾಂಶಗಳನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆರೋಪ ಹೊರಿಸಬಹುದು ಎಂದು ಫೆಡರಲ್ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದೆ. ಈ ನಿರ್ಧಾರವು ಟ್ರಂಪ್ ಅವರನ್ನು ಅಭೂತಪೂರ್ವ ಕ್ರಿಮಿನಲ್ ವಿಚಾರಣೆಯನ್ನು ಎದುರಿಸೋದಕ್ಕೆ ಎಡೆಮಾಡಿಕೊಟ್ಟು, ಸಂಕಷ್ಟಕ್ಕೆ ಸಿಲುಕಿಸಿದಂತೆ ಆಗಿದೆ. ಕೊಲಂಬಿಯಾ ಸರ್ಕ್ಯೂಟ್ನ ಯುಎಸ್ ಕೋರ್ಟ್ ಆಫ್ ಅಪೀಲ್ಸ್ನ ಮೂವರು ನ್ಯಾಯಾಧೀಶರ ಸಮಿತಿಯು ಟ್ರಂಪ್ ಅವರ ವಿನಾಯಿತಿಯ ಹಕ್ಕನ್ನು ತಿರಸ್ಕರಿಸಿತು. ಅವರ ವಿರುದ್ಧದ ಆರೋಪಗಳು ಅಧ್ಯಕ್ಷರಾಗಿ ಅವರ ಅಧಿಕೃತ ಜವಾಬ್ದಾರಿಗಳಿಗೆ ಸಂಬಂಧಿಸಿಲ್ಲ ಎಂದು ಹೇಳಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಿಂದ ವಾಗ್ದಂಡನೆಗೊಳಗಾಗಿ ಮತ್ತು ಸೆನೆಟ್ನಿಂದ ಅಧಿಕಾರದಿಂದ ತೆಗೆದುಹಾಕದ ಹೊರತು ಮಾಜಿ ಅಧ್ಯಕ್ಷರನ್ನು ಅವರ ಅಧಿಕೃತ ಕ್ರಮಗಳಿಗಾಗಿ ಕ್ರಿಮಿನಲ್ ಮೊಕದ್ದಮೆಯಿಂದ ರಕ್ಷಿಸಲಾಗುತ್ತದೆ ಎಂದು ಟ್ರಂಪ್ ಅವರ ವಕೀಲರು ವಾದಿಸಿದರು. ಆದಾಗ್ಯೂ, ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿತು, ಅಂತಹ ವಿಶಾಲ ವಿನಾಯಿತಿಯ ಸಂಭಾವ್ಯ ಪರಿಣಾಮಗಳನ್ನು ಎತ್ತಿ ತೋರಿಸಿತು. ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಯಾವುದೇ…
ಬೆಂಗಳೂರು: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ರಾಜ್ಯಪಾಲರ ಅಂಕಿತಕ್ಕೂ ಕಳುಹಿಸಲಾಗಿತ್ತು. ಆದ್ರೇ ಇದನ್ನು ವಾಪಾಸ್ ಕಳುಹಿಸಿದ್ದರು. ರಾಜ್ಯಪಾಲರ ಇಂತಹ ನಡೆಯನ್ನು ಖಂಡಿಸಿ, ನಾಳೆ ರಾಜಭವನಕ್ಕೆ ಕನ್ನಡ ಚಳುವಳಿ ಪಕ್ಷದ ವಾಟಾಶ್ ನಾಗರಾಜ್ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲಾಗುತ್ತಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಕನ್ನಡ ನಾಮಫಲಕ, ಶಾಸನ ಸಭೆಯಲ್ಲಿ ಮಸೂದೆ ಆಗಲೇಬೇಕು. ಮಸೂದೆಗೆ ರಾಜ್ಯಪಾಲರ ಅಂಗೀಕಾರ ನೀಡಬೇಕೆಂದು ಒತ್ತಾಯಿಸಿ ದಿನಾಂಕ 07-02-2024ರ ನಾಳೆ ಮಧ್ಯಾಹ್ನ 12 ಗಂಟೆಗೆ ರಾಜಭವನಕ್ಕೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಾವು ರಾಜಭವನಕ್ಕೆ ಮುತ್ತಿಗೆ ಹಾಕುತ್ತಿರೋದರ ಹಿನ್ನಲೆ ನಾಮಫಲಕ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯ ಮಾಡೋ ಮಸೂದೆಗೆ ಅಂಕಿತ ಹಾಕಬೇಕು ಎಂಬುದಾಗಿದೆ. ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಯಲೇಬೇಕು. ರೈಲ್ವೆ, ಬ್ಯಾಂಕ್ ನಲ್ಲಿ ಕನ್ನಡ ಕಡ್ಡಾಯವಾಗಬೇಕು. ಉದ್ಯೋಗವನ್ನು ಕನ್ನಡಿಗರಿಗೆ ನೀಡಬೇಕು ಎಂದು ತಿಳಿಸಿದ್ದಾರೆ. ಈ ನಾಳಿನ ರಾಜಭವನ…
ಶಿವಮೊಗ್ಗ: ಮಕ್ಕಳು ಆಟ ಆಡಿಕೊಂಡು ಸುಮ್ಮನೆ ಇದ್ರೆ ಸಾಕಪ್ಪ. ಅವರು ಏನೋ ಒಂದು ಆಟ ಆಡ್ತಾ ಇರಲಿ. ನಮ್ಮ ಪಾಡಿಗೆ ನಾವು ಮನೆ ಕೆಲಸ, ಅದು ಇದು ಮಾಡಿಕೊಳ್ಳಬಹುದು ಅನ್ನೋ ಪೋಷಕರೇ ಎಚ್ಚರ. ನೀವು ನಿಮ್ಮ ಮಕ್ಕಳನ್ನು ಜೀವಂತ ಮೀನುಗಳ ಜೊತೆಗೆ ಆಟ ಆಡೋಕೆ ಬಿಡ್ತಾ ಇದ್ದರೇ ಇನ್ನೂ ಎಚ್ಚರ. ಅದು ಯಾಕೆ ಅಂತ ಮುಂದೆ ಸುದ್ದಿ ಓದಿ. ಮಕ್ಕಳೆಂದ್ರೇ ಸಾಕು ಊಟ, ತಿಂಡಿ, ಪಾಠ, ಪ್ರವಚನಕ್ಕಿಂತ ಆಟವೇ ಹೆಚ್ಚು. ತಮ್ಮ ಕೈಗೆ ಸಿಕ್ಕಂತ ವಿವಿಧ ವಸ್ತುಗಳನ್ನು ಹಿಡ್ಕೊಂಡು ಆಟ ಆಡಿದ್ದೇ ಆಡಿದ್ದು. ಇನ್ನೂ ಕೆಲವು ಸಂದರ್ಭದಲ್ಲಿ ಮನೆಯಲ್ಲಿ ಇರೋ ಅಕ್ವೇರಿಯಂನಲ್ಲಿನ ಮೀನುಗಳ ಜೊತೆಗೆ ಆಟ ಆಡೋ ಮಕ್ಕಳು ಇದ್ದಾರೆ. ಹೀಗೆ ಆಟ ಆಡುವಾಗ ಮಕ್ಕಳು ಸುಮ್ಮನೇ ಆಟ ಆಡ್ತಿರುತ್ತಾರೆ ಅಂತ ನೀವು ಬಿಟ್ರೇ, ಕೆಲವೊಮ್ಮೆ ಅಹಿತಕರ ಘಟನೆಗಳೇ ನಡೆಯಬಹುದು. ಹೌದು. ಶಿವಮೊಗ್ಗದಲ್ಲಿ ಹೀಗೆ ಜೀವಂತ ಮಗುವಿನ ಜೊತೆಗೆ ಆಟ ಆಡುತ್ತಿದ್ದಂತ 11 ತಿಂಗಳ ಮಗುವೊಂದು ಜಿಲೇಬಿ ಹೆಸರಿನ ಮೀನೊಂದನ್ನು ನುಂಗಿ…
ಶಿವಮೊಗ್ಗ: ಭಾರತದ ಸಂವಿಧಾನವನ್ನು ಬಹಳ ಅಸ್ಥೆಯಿಂದ ಅಂಬೇಡ್ಕರ್ ಮತ್ತು ಹಲವರು ರಚಿಸಿದ್ದಾರೆ. ಸಂವಿಧಾನ ಇವತ್ತು ಅಪಾಯದ ಅಂಚಿನಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ಕಾಲಾಳುಗಳು ಆಗಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ವಕೀಲರು ಮತ್ತು ಸಮಾಜ ಸೇವಕರಾದ ಸುದೀರ್ ಕುಮಾರ್ ಮುರೊಳ್ಳಿ ಅಭಿಪ್ರಾಯ ಪಟ್ಟರು. ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಎಜುಕೇಷನಲ್ ಟ್ರಸ್ಟ್ ಮತ್ತು ಡಿಜಿಟಲ್ ಮಿಡಿಯಾ ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಏರ್ಪಡಿಸಲಾದ ಭಾರತದ ಸಂವಿಧಾನ ಮತ್ತು ವಿದ್ಯಾರ್ಥಿಗಳು ಕುರಿತು ಅವರು ಉಪನ್ಯಾಸ ನೀಡಿ ಮಾಡಿದರು. ಸಂವಿಧಾನ ಸಭೆ ಎಲ್ಲ ಸ್ತರದ ಜನರನ್ನು ಒಳಗೊಂಡಿತ್ತು. ಅಂಬೇಡ್ಕರ್ ಕಾಯ್ದೆ, ಗಾಂಧಿ ವಿವೇಕ ಇವರಿಬ್ಬರು ನಮ್ಮ ಆದರ್ಶ ಆಗಬೇಕು ಎಂದು ಕಾನೂನು ವಿದ್ಯಾರ್ಥಿಗಳು ಮತ್ತು ಇತರೆ ವಿಭಾಗದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಬನಾರಾಸ್ ವಿವಿಯಲ್ಲಿ ಬಂಡಾಯ ನೆನಪಿಸಿದ ಅವರು, ಗಾಂಧಿ ಅಂದು ಆಡಿದ ಮಾತುಗಳನ್ನು ವಿವರವಾಗಿ ವಿವರಿಸಿದರು. ಗಾಂಧಿಯವರು ಭಾರತಕ್ಕೆ ಸ್ವಾತಂತ್ರ್ಯ ಬಂದೆ ಮೇಲೆ ಏನು ಆಗುತ್ತದೆ ಎಂದು ವಿವರವಾಗಿ…
ಬೆಂಗಳೂರು: ರಾಜ್ಯದಲ್ಲಿ ಮಂಗನಕಾಯಿಲೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಇಂದು ಹೊಸದಾಗಿ ಮೂವರಿಗೆ ಮಂಗನಕಾಯಿಲೆ ದೃಢಪಟ್ಟಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಅಂಕಿ ಅಂಶದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ 154 ಜನರನ್ನು ಮಂಗನಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಮೂವರಿಗೆ ಸೋಂಕು ತಗುಲಿರೋದು ದೃಢಪಟ್ಟಿರೋದಾಗಿ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 33 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ ಒಬ್ಬರಿಗೆ ಮಂಗನಕಾಯಿಲೆ ದೃಢಪಟ್ಟಿದೆ. ಚಿಕ್ಕಮಗಳೂರಲ್ಲಿ 8 ಜನರನ್ನು ಕಳೆದ 24 ಗಂಟೆಯಲ್ಲಿ ಮಂಗನಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ದೃಢಪಟ್ಟಿದೆ. https://kannadanewsnow.com/kannada/indians-will-no-longer-need-visas-to-travel-to-iran/ https://kannadanewsnow.com/kannada/another-good-news-for-low-power-users-additional-10-units-free-up-to-58-units-free/
ನವದೆಹಲಿ: 1,643 ಕಿಲೋಮೀಟರ್ ಉದ್ದದ ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲು ಭಾರತ ಆಯ್ಕೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದರು. ಇದು ಪ್ರಸ್ತುತ ಗಡಿಯ ಬಳಿ ವಾಸಿಸುವ ಜನರಿಗೆ ದಾಖಲೆಗಳಿಲ್ಲದೆ ಪರಸ್ಪರರ ಭೂಪ್ರದೇಶಕ್ಕೆ 16 ಕಿಲೋಮೀಟರ್ ಚಲಿಸಲು ಅನುವು ಮಾಡಿಕೊಡುವ ಮುಕ್ತ ಚಲನೆ ಆಡಳಿತವನ್ನು (ಎಫ್ಎಂಆರ್) ಕೊನೆಗೊಳಿಸುವ ಸಾಧ್ಯತೆಯಿದೆ. ಎಕ್ಸ್ ಕುರಿತ ಪೋಸ್ಟ್ನಲ್ಲಿ, ಅಭೇದ್ಯ ಗಡಿಗಳನ್ನು ನಿರ್ಮಿಸುವ ಮೋದಿ ಸರ್ಕಾರದ ಬದ್ಧತೆ, ಇಡೀ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಬೇಲಿಯನ್ನು ನಿರ್ಮಿಸುವ ಯೋಜನೆಗಳನ್ನು ವಿವರಿಸಿದೆ ಮತ್ತು ಹೆಚ್ಚಿನ ಕಣ್ಗಾವಲುಗಾಗಿ ಗಸ್ತು ಟ್ರ್ಯಾಕ್ಗೆ ದಾರಿ ಮಾಡಿಕೊಡುತ್ತದೆ ಎಂದು ಶಾ ಹೇಳಿದರು. “1643 ಕಿಲೋಮೀಟರ್ ಉದ್ದದ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಬೇಲಿ ನಿರ್ಮಿಸಲು ನಿರ್ಧರಿಸಿದೆ. ಉತ್ತಮ ಕಣ್ಗಾವಲಿಗೆ ಅನುಕೂಲವಾಗುವಂತೆ, ಗಡಿಯುದ್ದಕ್ಕೂ ಗಸ್ತು ಟ್ರ್ಯಾಕ್ ಅನ್ನು ಸಹ ಸುಗಮಗೊಳಿಸಲಾಗುವುದು” ಎಂದು ಅವರು ಹೇಳಿದರು. ಮಣಿಪುರದ ಮೋರೆಹ್ನಲ್ಲಿ 10 ಕಿಲೋಮೀಟರ್ ಉದ್ದಕ್ಕೂ ಈಗಾಗಲೇ ಬೇಲಿ ಹಾಕಲಾಗಿದೆ. ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ತಲಾ 1 ಕಿಲೋಮೀಟರ್ಗೆ…