Author: kannadanewsnow09

ಕಲಬುರ್ಗಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದಂತ ಯುವಕನನ್ನು ತಲ್ವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನರೋಣದಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ನರೋಣ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದಂತ 26 ವರ್,ದ ಚನ್ನವೀರ ಹೀರಾ ಎಂಬಾತನನ್ನು ತಲ್ವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/breaking-fir-filed-against-6-people-on-suspicion-of-murdering-pregnant-woman-over-caste-barrier-to-falling-in-love-on-instagram/ https://kannadanewsnow.com/kannada/minister-madhu-bangarappa-condoles-the-death-of-former-minister-begane-ramayya/

Read More

ನವದೆಹಲಿ: ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಪ್ರಾಥಮಿಕ ಅಫಿಡವಿಟ್ ಸಲ್ಲಿಸಿದ್ದು, ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿದೆ. ಕೇಂದ್ರವು ಕಾಯ್ದೆಯ ಯಾವುದೇ ನಿಬಂಧನೆಗಳ ಮೇಲೆ ತಡೆಯಾಜ್ಞೆಯನ್ನು ವಿರೋಧಿಸುತ್ತದೆ, ಸಾಂವಿಧಾನಿಕ ನ್ಯಾಯಾಲಯಗಳು ಶಾಸನಬದ್ಧ ನಿಬಂಧನೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ತಡೆಹಿಡಿಯುವುದಿಲ್ಲ ಮತ್ತು ಅಂತಿಮವಾಗಿ ಈ ವಿಷಯವನ್ನು ನಿರ್ಧರಿಸುತ್ತವೆ ಎಂಬುದು ಕಾನೂನಿನಲ್ಲಿ ಇತ್ಯರ್ಥಪಡಿಸಿದ ನಿಲುವು ಎಂದು ಹೇಳುತ್ತದೆ. ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರವು ಸುಪ್ರೀಂ ಕೋರ್ಟ್ ಅನ್ನು ಕೋರಿತು. ಅದರ ಸಾಂವಿಧಾನಿಕತೆಯ ಊಹೆ ಇರುವುದರಿಂದ ಕಾನೂನಿನ ಮೇಲೆ ಅಡೆತಡೆ ಇರಲು ಸಾಧ್ಯವಿಲ್ಲ ಎಂದು ಹೇಳಿದೆ. 1,332 ಪುಟಗಳ ಪ್ರಾಥಮಿಕ ಪ್ರತಿ ಅಫಿಡವಿಟ್‌ನಲ್ಲಿ, ಸರ್ಕಾರವು ವಿವಾದಾತ್ಮಕ ಕಾನೂನನ್ನು ಸಮರ್ಥಿಸಿಕೊಂಡಿದ್ದು, 2013 ರ ನಂತರ “ಆಘಾತಕಾರಿಯಾಗಿ” 20 ಲಕ್ಷ ಹೆಕ್ಟೇರ್‌ಗೂ ಹೆಚ್ಚು (ನಿಖರವಾಗಿ 20,92,072.536) ವಕ್ಫ್ ಭೂಮಿ ಹೆಚ್ಚುವರಿಯಾಗಿದೆ ಎಂದು ಹೇಳಿದೆ. https://twitter.com/ANI/status/1915696393752371365 ಮೊಘಲ್ ಯುಗ, ಸ್ವಾತಂತ್ರ್ಯ ಪೂರ್ವ…

Read More

ಮಂಡ್ಯ: “ನಾಡಿನ ವಿವಿಧ ಸಂಸ್ಕೃತಿ ಒಳಗೊಂಡಂತೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಮಿತಿಯು ನೀಲನಕ್ಷೆ ರೂಪಿಸುತ್ತಿದ್ದು, ವಾರದಲ್ಲಿ ಸಿದ್ಧವಾಗಲಿದೆ. ದಸರಾಗೆ ಕಾರ್ಯಕ್ರಮ ನಡೆಸುವ ಉದ್ದೇಶವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಮಂಡ್ಯ ಜಿಲ್ಲೆ ಕೆಆರ್ ಎಸ್ ನಲ್ಲಿ “ಕಾವೇರಿ ಆರತಿ” ನಡೆಸುವ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆ ಸೇರಿಸಿ ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿಗೆ ಸಲಹೆ ನೀಡಿದ್ದೇನೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ” ಎಂದು ತಿಳಿಸಿದರು. “ಕೊಡಗಿನಿಂದ ಹಿಡಿದು, ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಜನರು ಈ ತಾಯಿಗೆ ನಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಾವೇರಿ ನೀರು ಬಳಸುವ ತಮಿಳುನಾಡಿನ ಜನರೂ ಕೂಡ ಬಂದು ಕಾವೇರಿ ತಾಯಿಗೆ ಪೂಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ…

Read More

ನವದೆಹಲಿ: ಷೇರು ಹೂಡಿಕೆದಾರರಿಗೆ ಬಿಗ್ ಶಾಕ್ ಎನ್ನುವಂತೆ ನಿಫ್ಟಿ 24,000, ಸೆನ್ಸೆಕ್ಸ್ 670 ಅಂಕ ಕುಸಿತಗೊಂಡಿದೆ. ಇದರ ನಡುವೆಯೂ ಐಟಿ ಷೇರುಗಳು ಉತ್ತಮವಾಗಿವೆ ಸ್ಥಿರತೆಯೊಂದಿಗೆ ಸಾಗಿದ್ದಾವೆ ಎಂಬುದಾಗಿ ತಿಳಿದು ಬಂದಿದೆ. ಸೆನ್ಸೆಕ್ಸ್ 589 ಅಂಕ ಕುಸಿತ ನಿಫ್ಟಿ 24,000 ಮಟ್ಟವನ್ನು ಕಾಯ್ದುಕೊಂಡಿದೆ. ಅದಾನಿ ಪೋರ್ಟ್ಸ್ ಶೇ.4ರಷ್ಟು ಕುಸಿತಗೊಂಡು ಭಾರೀ ನಷ್ಟವನ್ನೇ ಉಂಟು ಮಾಡಿದೆ. ಏಪ್ರಿಲ್ 25 ರಂದು ಸತತ ಎರಡನೇ ವಹಿವಾಟಿನಲ್ಲಿ ನಿಫ್ಟಿ 24,000 ಕ್ಕೆ ಇಳಿದ ಭಾರತೀಯ ಷೇರು ಸೂಚ್ಯಂಕಗಳು ಕುಸಿತ ಕಂಡವು. ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 588.90 ಅಂಕಗಳು ಅಥವಾ 0.74 ಪ್ರತಿಶತದಷ್ಟು ಕುಸಿದು 79,212.53 ಕ್ಕೆ ತಲುಪಿತು, ಮತ್ತು ನಿಫ್ಟಿ 207.35 ಅಂಕಗಳು ಅಥವಾ 0.86 ಪ್ರತಿಶತದಷ್ಟು ಕುಸಿದು 24,039.35 ಕ್ಕೆ ತಲುಪಿತು. ಸುಮಾರು 682 ಷೇರುಗಳು ಮುನ್ನಡೆ ಸಾಧಿಸಿದವು, 3138 ಷೇರುಗಳು ಕುಸಿದವು ಮತ್ತು 115 ಷೇರುಗಳು ಬದಲಾಗಲಿಲ್ಲ. ಐಟಿ ಹೊರತುಪಡಿಸಿ, ಇತರ ಎಲ್ಲಾ ಸೂಚ್ಯಂಕಗಳು ಮಾಧ್ಯಮ, ಲೋಹ, ಪಿಎಸ್‌ಯು, ಟೆಲಿಕಾಂ, ವಿದ್ಯುತ್, ತೈಲ ಮತ್ತು…

Read More

ವಿಜಯಪುರ: ಜಿಲ್ಲೆಯಲ್ಲಿ ಮಾಜಿ ಕಾರ್ಪೊರೇಟರ್ ಒಬ್ಬರ ಪುತ್ರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಇಂದು ನಡೆದಿದೆ. ವಿಜಯಪುರದಲ್ಲಿ ಮಾಜಿ ಕಾರ್ಪೊರೇಟರ್ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಲೆಗೆ ಗುಂಡು ಹಾರಿಸಿಕೊಂಡು ಅಶನಾಮ್ ಪ್ರಕಾಶ್(22) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದಂತ ಅಶನಾಮ್ ಪ್ರಕಾಶ್ ವಿಜಯಪುರದ ಮಾಜಿ ಕಾರ್ಪೊರೇಟರ್ ಪ್ರಕಾಶ್ ಮಿರ್ಜಿ ಅವರ ಪುತ್ರರಾಗಿದ್ದಾರೆ. ವಿಜಯಪುರ ನಗರದ ಶಿಕಾರಿಖಾನೆ ಏರಿಯಾದ ಮನೆಯಲ್ಲಿ ಈ ಘಟನೆ ನಡೆದಿದೆ. https://kannadanewsnow.com/kannada/hc-stays-bescom-prepaid-meter-charges/ https://kannadanewsnow.com/kannada/minister-madhu-bangarappa-condoles-the-death-of-former-minister-begane-ramayya/

Read More

ಬೆಂಗಳೂರು: ಬೆಸ್ಕಾಂ ಪ್ರೀಪೇಯ್ಡ್ ಮೀಟರ್ ಶುಲ್ಕಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಬೆಸ್ಕಾಂನಿಂದ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಕಡ್ಡಾಯ ವಿಚಾರವಾಗಿ ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎಂಬುವರಿಂದ ರಿಟ್ ಅರ್ಜಿ ಸಲ್ಲಿಸಿದ್ದರು. 2000 ರೂಪಾಯಿ ಇದ್ದ ಮೀಟರ್ ಈಗ 8910 ರೂ ಕೊಡಬೇಕಾಗಿದೆ. ಬೇರೆ ರಾಜ್ಯಗಳಲ್ಲಿ 900 ರೂ ಗಳಿಗೆ ಪ್ರೀಪೆಯ್ಡ್ ಮೀಟರ್ ನೀಡಲಾಗುತ್ತಿದೆ. ಕೆಇಆರ್ ಸಿ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲವೆಂದಿತ್ತು. ಆದರೇ ಬೆಸ್ಕಾಂ ಸುತ್ತೋಲೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದೆ ಎಂಬುದಾಗಿ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಈ ವೇಳೆ ದುಬಾರಿ ಪ್ರೀಪೆಯ್ಡ್ ವಿದ್ಯುತ್ ಮೀಟರ್ ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ನಿಮ್ಮಿಂದ ಯಾರು ಫ್ರೀ ವಿದ್ಯುತ್ ಕೇಳಿದ್ದರು ಎಂಬುದಾಗಿ ಹೈಕೋರ್ಟ್ ಪ್ರಶ್ನೆ ಮಾಡಿತು. ಬಡವರಿಂದ ಇಷ್ಟು ಹಣ ಕಿತ್ತರೆ ಎಲ್ಲಿಗೆ ಹೋಗಬೇಕು ಎಂಬುದಾಗಿ ಪ್ರಶ್ನಿಸಿತು. ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೇ ಬಡವರೇನು ಮಾಡಬೇಕು. ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ಬೆಸ್ಕಾಂ ಪ್ರೀಪೇಯ್ಡ್…

Read More

ನವದೆಹಲಿ: ಎರಡು ದಿನಗಳ ಹಿಂದೆ ಪಾಕಿಸ್ತಾನ ಗಡಿಯನ್ನು ಅಕಸ್ಮಾತ್ ಪ್ರವೇಶಿಸಿದ್ದಂತ ಭಾರತೀಯ ಯೋಧ ಪಿ.ಕೆ ಸಾಹು ಅನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದರು. ಅವರನ್ನು ಬಿಡುಗಡೆಗೆ ಪಾಕಿಸ್ತಾನ ನಕಾರ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ ಪಾಕ್ ನೊಳಗೆ ಪ್ರವೇಶವನ್ನು ಭಾರತೀಯ ಯೋಧ ಪಿ.ಕೆ ಸಾಹು ಮಾಡಿದ್ದರು. ಈ ವೇಳೆ ಪಾಕ್ ಯೋಧರು ಅವರನ್ನು ವಶಕ್ಕೆ ಪೆಡದಿದ್ದರು. ಪಾಕ್ ಪ್ರದೇಶದ ಹೊಲದಲ್ಲಿ ಕೆಲಸ ಮಾಡ್ತಿದ್ದಂತ ರೈತರೊಂದಿಗೆ ಗೊತ್ತಿಲ್ಲದೇ ಬಿಎಸ್ಎಫ್ ಯೋಧ ಸಾಹು ಪಾಕ್ ನೊಳಗೆ ಪ್ರವೇಶಿಸಿದ್ದರು. ಅವರನ್ನು ಬಂಧಿಸಿದ್ದಂತ ಪಾಕಿಸ್ತಾನ, ಯೋಧನ ಪೋಟೋಕೂಡ ಬಿಡುಗಡೆ ಮಾಡಿತ್ತು. ನಿನ್ನೆ ರೇಂಜರ್ ಗಳು ಬಾರದ ಕಾರಣ ನಿನ್ನೆ ಧ್ವಜ ಸಭೆ ನಡೆದಿರಲಿಲ್ಲ. ಇದೀಗ ಅವರನ್ನು ಬಿಡುಗಡೆಗೆ ಪಾಕ್ ನಿರಾಕರಿಸಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಅವರನ್ನು ಮರಳಿ ಕರೆತರುವಂತೆ ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Read More

ನವದೆಹಲಿ: ವಕ್ಫ್ ಕಾನೂನಿಗೆ ತಂದ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ, ಧರ್ಮ ಮತ್ತು ಆಸ್ತಿಯ ಆಧಾರದ ಮೇಲೆ ಸವಾಲುಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವಾಗ ನಿಬಂಧನೆಗಳ ಯಾವುದೇ ಮಧ್ಯಂತರ ವಿರಾಮದ ವಿರುದ್ಧ ಶುಕ್ರವಾರ ವಾದಿಸಿತು. ಈ ತಿಂಗಳ ಆರಂಭದಲ್ಲಿ, ಸುಪ್ರೀಂ ಕೋರ್ಟ್ ವಕ್ಫ್ ಕಾಯ್ದೆ, 2025 ರ ಮೂರು ನಿಬಂಧನೆಗಳಿಗೆ ಮಧ್ಯಂತರ ವಿರಾಮ ನೀಡಿತು. ‘ಬಳಕೆದಾರರಿಂದ ವಕ್ಫ್’ ತೆಗೆದುಹಾಕುವುದು, ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸುವುದು. ವಿವಾದಿತ ಸರ್ಕಾರಿ ಭೂಮಿಯಲ್ಲಿ ವಕ್ಫ್ನ ಸ್ಥಾನಮಾನವನ್ನು ನಿರ್ಧರಿಸುವಾಗ ಕಲೆಕ್ಟರ್ನ ಅಧಿಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ನ ಮಧ್ಯಂತರ ತಡೆಯಾಜ್ಞೆಯ ಒಂದು ದಿನದ ನಂತರ, ಕೇಂದ್ರವು ವಕ್ಫ್ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಅಥವಾ ಅದಕ್ಕೆ ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

Read More

ಮೈಸೂರು/ ಮಂಡ್ಯ: “ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ಮೈಸೂರಿನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಬಿಡದಿ ಟೌನ್ ಶಿಪ್ ಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು” ಎಂದು ನೆನಪಿಸಿದರು. “ನಾನು ಈಗ ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡಲು ತಯಾರಿಲ್ಲ. ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ…

Read More

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಖಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ. ಕರ್ನಾಟಕ ಮೂಲದ ಡಾ.ಕಸ್ತೂರಿರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು ಎಂದಿದ್ದಾರೆ. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ. ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದಿದ್ದಾರೆ. https://twitter.com/siddaramaiah/status/1915693260649173279 https://kannadanewsnow.com/kannada/breaking-fir-filed-against-6-people-on-suspicion-of-murdering-pregnant-woman-over-caste-barrier-to-falling-in-love-on-instagram/ https://kannadanewsnow.com/kannada/minister-madhu-bangarappa-condoles-the-death-of-former-minister-begane-ramayya/

Read More