Author: kannadanewsnow05

ಹಾಸನ : ಪ್ರಪಂಚದ ಆಗು-ಹೋಗುಗಳ ಬಗ್ಗೆ ಸ್ಪೋಟಕ ಭವಿಷ್ಯ ನುಡಿಯುವುದರಲ್ಲಿ ಕೋಡಿಶ್ರೀಗಳು ಯಾವಾಗಲು ಮುಂದು ಇದೀಗ ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದು, ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ಸಂಸದ ವಿ ಸೋಮಣ್ಣ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಭವಿಷ್ಯ ನುಡಿದಿದ್ದು, ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ ಎಂದು ಹೇಳಿದ್ದಾರೆ. ಅದರ ಜೊತೆಗೆ ರಾಜಕೀಯದಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಸೋಳೆಯಾ ಮಗನುಟ್ಟಿ, ಆಳುವನು ಮುನಿಪುರವ. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಗೂಡಾರ್ಥವಾಗಿ ಹೇಳಿದ್ದು, ಇದರ ಅರ್ಥ ಮುಂದಿನ ದಿನಗಳಲ್ಲಿ ಹೇಳುವುದಾಗಿ ಕುತೂಹಲ ಹುಟ್ಟಿಸಿದ್ದಾರೆ. ಸಿಎಂ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಾರಿ ಮಳೆ ಹೆಚ್ಚಾಗುವುದರಿಂದ ಜಲಸ್ಫೋಟ…

Read More

ಚಾಮರಾಜನಗರ : ನಿನ್ನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ಹೂತು ಹಾಕಿದ್ದ ಶವದ ಮುಂಗೈ ಹೊರಬಂದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಳೆ ಹಂಪಾಪುರ ಬಳಿ ಹೂತಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಬ್ಬರು ಮಕ್ಕಳ ತಾಯಿಯನ್ನು ಪ್ರಿಯಕರ ಮಾದೇಶ ಕೊಂದುಹಾಕಿ ಹೂತು ಹಾಕಿದ್ದ ಎನ್ನಲಾಗಿದೆ. ಹೌದು ಪ್ರಿಯಕರ ಮಾದೇಶ ಮಹಿಳೆಯನ್ನು ಕೊಂದು 2 ಅಡಿ ಮಣ್ಣಲ್ಲಿ ಹೂತಿದ್ದ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ ಗ್ರಾಮದಲ್ಲಿ ಮೊಳೆ ನಿವಾಸಿ ಸೋನಾಕ್ಷಿ ತಲೆಗೆ ಹೊಡೆದು ಪ್ರಿಯಕರ ಮಾದೇಶ ಕೊಂದಿದ್ದ. ಪ್ರೇಯಸಿ ಸೋನಾಕ್ಷಿ ಕೊಂದು ಪ್ರಿಯಕರ ಮಾದೇಶ ಶವವನ್ನು 2 ಅಡಿ ಗುಂಡಿ ತೋಡಿ ಹೂತಿದ್ದ ಎನ್ನಲಾದೆ. ಎರಡು ಮಕ್ಕಳನ್ನು ಬಿಟ್ಟು ಸೋನಾಕ್ಷಿ ಮಾದೇಶನ ಜೊತೆಗೆ ಬಂದಿದ್ದಳು. ಕೆಲ ದಿನಗಳ ಕಾಲ ಮಾದೇಶನ ಜೊತೆಗೆ ನಂತರ ಮಾದೇಶನಿಗೆ ಕೈಕೊಟ್ಟು ಮತ್ತೊಬ್ಬನ ಜೊತೆಗೆ ಓಡಿಹೋಗಿದ್ದಳು. ಬಳಿಕ ಮೈಸೂರು ಜಿಲ್ಲೆಯ ಟಿ…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ದಾಖಲಿಸಿದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ಇದೀಗ ವಜಾಗೊಳಿಸಿದೆ. ಬೆಂಗಳೂರಿನ 42ನೇ ACJM ಕೋರ್ಟ್ ನ ಜಡ್ಜ್ ಕೆ.ಎನ್ ಶಿವಕುಮಾರ್ ಶಿವಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮುಡಾ ಪ್ರಕರಣ ದಾಖಲಿಸಿದ ಬಳಿಕಟ್ಟಿದೆ ಅಬ್ರಹಾಮ ವಿರುದ್ಧ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅಬ್ರಹಾಂ ದೂರು ದಾಖಲಿಸಿದ್ದರು.ಇದೀಗ ಇಂದು ವಿಚಾರಣೆ ನಡೆಸಿದ ಜಡ್ಜ್ ಕೆ.ಎನ್ ಶಿವಕುಮಾರ್ ಅವರು CM ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿ ಆದೇಶಿಸಿದರು.

Read More

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಇನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣದ ಕುರಿತು ತನಿಖಾಧಿಕಾರಿಗಳು ಎಲ್ಲಾ ಹೇಳಿಕೆಗಳನ್ನು ದಾಖಲಿಸಿದ್ದು, ನ್ಯಾಯಾಲಯ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿತು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತನಿಖಾಧಿಕಾರಿಗಳ ಹೇಳಿಕೆ ದಾಖಲು ಆಗಿದ್ದು, ಇಡೀ ದಿನ ದಾಖಲೆಗಳ ಸಹಿತ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದಾರೆ. ಇದುವರೆಗೂ ಎಲ್ಲಾ ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ರಾಜಕೀಯ ದಾಖಲಿಸಿದೆ. ಎಸ್.ಪಿ.ಪಿ ಜಗದೀಶ್, ಅಶೋಕ್ ನಾಯಕರಿಂದ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ತನಿಖಾಧಿಕಾರಿಯ ಪಾಟಿ ಸವಾಲಿಗೆ ಪ್ರಜ್ವಲ್ ರೇವಣ್ಣ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ಹಾಗಾಗಿ ಇದೀಗ ವಿಚಾರಣೆಯನ್ನು ಜೂನ್ 28ಕ್ಕೆ ನ್ಯಾಯಾಲಯ ಮುಂದೂಡಿದೆ.

Read More

ರಾಯಚೂರು : ಮಾಜಿ ಶಾಸಕರ ಜೇಬಲ್ಲಿದ್ದಂತಹ 70,000 ಹಣದ ಕಂತೆ ಖತರ್ನಾಕ್ ಕಳ್ಳನೊಬ್ಬ ಕದ್ದಿದ್ದಾನೆ. ಸಚಿವ ಎನ್.ಎಸ್ ಬೊಸರಾಜು ಅವರ ಹುಟ್ಟುಹಬ್ಬದ ಹಿನ್ನೆಲೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕೈಚಳಕ ತೋರಿಸಿದ್ದಾನೆ. ಸಚಿವ ಎನ್ಎಸ್ ಬೋಸರಾಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಈ ಒಂದು ಕಾರ್ಯಕ್ರಮ ನಡೆದಿದ್ದು ಲಿಂಗಸುಗೂರು ಕ್ಷೇತ್ರದ ಮಾಜಿ ಶಾಸಕರಾಗಿರುವ ಡಿ ಎಸ್ ಹುಲಗೇರಿಯವರ ಜೇಬು ಕತ್ತರಿಸಿ ಕಳ್ಳನೊಬ್ಬ 70,000 ಹಣದ ಕಂತೆಯನ್ನು ಎಗರಿಸಿದ್ದಾನೆ. ತಕ್ಷಣ ಎಚ್ಚೆತ್ತು ಜೇಬುಗಳ್ಳನಿಗೆ ಧರ್ಮದೇಟು ನೀಡಿದ್ದಾರೆ. ಕಪಾಳ ಮೋಕ್ಷ ಮಾಡಿ ಹಣವನ್ನು ವಾಪಸ್ ಕಿತ್ತುಕೊಂಡಿದ್ದಾರೆ.

Read More

ವಿಜಯಪುರ : ವಿಜಯಪುರದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು, ಹಾಡಹಗಲೇ ಬ್ಲೇಡ್ ನಿಂದ ಕತ್ತಿಗೆ ಹೊಡೆದು ಆಟೋ ಚಾಲಕನ ಹತ್ಯೆಗೆ ಯತ್ನಿಸಲಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಂಬರೀಶ ಕೂಡಗಿ ಹಲ್ಲೆಗೆ ಒಳಗಾದ ಆಟೋ ಚಾಲಕ ಎಂದು ತಿಳಿದುಬಂದಿದೆ. ಅಂಬರೀಷ್ ಆಟೋ ಏರಿದ್ದ ಅಪರಿಚಿತ ವ್ಯಕ್ತಿ ಒಬ್ಬ ಅಂಬರೀಶ್ ಹತ್ಯೆಗೆ ಯತ್ನಿಸಿದ್ದಾನೆ. ಆಟೋ ಚಾಲನೆ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬ್ಲೇಡ್ ಯಿಂದ ಕತ್ತಿಗೆ ಹೊಡೆದು ಅಪರಿಚಿತ ವ್ಯಕ್ತಿ ಸ್ಥಳದಿಂದ ಪರಾರಿ ಯಾಗಿರುವ ಘಟನೆ ವರದಿಯಾಗಿದೆ. ಕೂಡಲೆ ಗಾಯಾಳು ಅಂಬರೀಶ್ ನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹೊನ್ನೆಬಾಗಿ ಗ್ರಾಮದಲ್ಲಿ ಮಾರಾಕಾಸ್ತ್ರಗಳನ್ನ ಹಿಡಿದು ಮಾರಮಾರಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನೇಬಾಗಿ ಎಂಬ ಗ್ರಾಮದಲ್ಲಿ ಶಾಸಕ ಶಿವಗಂಗಾ ಬಸವರಾಜ ಬೆಂಬಲಿಗರ ಮಾರಾಮಾರಿ ನಡೆದಿದೆ. ಎರಡು ದಿನ ಹಿಂದೆ ವಾಹನ ನಿಲ್ಲಿಸುವ ವಿಚಾರಕ್ಕೆ ಜಗಳವಾಗಿತ್ತು. ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ಸಂತೆಯಲ್ಲಿ ಜಗಳವಾಗಿತ್ತು. ಇದೇ ಕಾರಣಕ್ಕೆ ಸ್ವಗ್ರಾಮ ಹೊನ್ನೇಬಾಗಿಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ ಒಂದು ಗುಂಪಿನ ಇರ್ಫಾನ್ ಬೇಗ್ (28), ಇಫ್ತಾರ್ ಅಲಿ, (22) ಮಲಿಕ್ (30), ನೌಶಾದ್ (41) ಸೇರಿದಂತೆ ಐವರಿಗೆ ಗಂಭೀರವಾದ ಗಾಯಗಳಾಗಿವೆ. ಮತ್ತೊಂದು ಗುಂಪಿನ ಸಯ್ಯದ್ ಗನಿ (26), ಸೈಯದ್ ತನ್ವೀರ್ (30), ಸೈಯದ್ ಅಬ್ರಹಾಂ (37) ನ್ಯಾಮತ್ (34) ಸೇರಿದಂತೆ ಐವರಿಗೆ ಗಂಭೀರವಾದ ಗಾಯಗಳಾಗಿವೆ.ತಕ್ಷಣ ಗಾಯಾಳುಗಳನ್ನು ಚೆನ್ನಗಿರಿ ಮತ್ತು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

Read More

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಕೆಲ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತೆ ಅಂತ ವದಂತಿ ಹರಡಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅದಕ್ಕೆ ತೆರೆಯೆಳೆದಿದ್ದಾರೆ. ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೌದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್‌ ನ್ಯೂಸ್‌ ನೀಡಿದ್ದಾರೆ.ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಪರಿಷ್ಕರಣೆ ಅಥವಾ ಕಡಿತಗೊಳಿಸುವಿಕೆ ಇಲ್ಲ. ಕೆಲವು ವದಂತಿಗಳು ಫಲಾನುಭವಿಗಳ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹಬ್ಬಿದ್ದವು, ಆದರೆ ಈ ವದಂತಿ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಪ್ರತಿ ತಿಂಗಳು ಸರಾಸರಿ 10,000 ರಿಂದ 15,000 ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದಾಗಿ ಯೋಜನೆಯ ವ್ಯಾಪ್ತಿಯು ಇನ್ನಷ್ಟು ವಿಸ್ತರಿಸುತ್ತಿದೆ. ಮತ್ತು ಹೆಚ್ಚಿನ ಮಹಿಳೆಯರಿಗೆ ಆರ್ಥಿಕ ಸಹಾಯ ದೊರೆಯುತ್ತಿದೆ. ಈ ಯೋಜನೆಯ ಹಣವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Read More

ಕಲಬುರ್ಗಿ : ರಾಜ್ಯದ 224 ಶಾಸಕರಲ್ಲೇ ಬಿ.ಆರ್ ಪಾಟೀಲ್ ಅತ್ಯಂತ ಭ್ರಷ್ಟ. ತಮ್ಮ ಭ್ರಷ್ಟಾಚಾರ ತಪ್ಪಿಸಿಕೊಳ್ಳಲು ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಹಾಕುತ್ತಿದ್ದಾರೆ ಎಂದು ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಗಂಭೀರವಾಗಿ ಆರೋಪಿಸಿದರು. ಇಂದು ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ 224 ಶಾಸಕರಲ್ಲೇ ಬಿ.ಆರ್ ಪಾಟೀಲ್ ಅತ್ಯಂತ ಭ್ರಷ್ಟ. ತಮ್ಮ ಭ್ರಷ್ಟಾಚಾರ ತಪ್ಪಿಸಿಕೊಳ್ಳಲು ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಹಾಕುತ್ತಿದ್ದಾರೆ. ಅವರು ಹೇಳಿದ ಎಲ್ಲಾ ಗ್ರಾಂಪಂ ಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರೇ ಇದ್ದಾರೆ ಅಲ್ಲದೇ ಶಾಸಕ ಬಿ.ಆರ್ ಲೆಟರ್ ಹೆಡ್ ನಲ್ಲೆ ಮನೆಗಳು ಮಂಜೂರಾಗಿವೆ. ಇಲಾಖೆಯಿಂದ ಮನೆಗಳನ್ನು ಮಂಜೂರು ಮಾಡಿಕೊಂಡು ಬಂದಿದ್ದಾರೆ. ಆದರೆ ಈಗ ಶಾಸಕರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ತಾನು ಮಾತ್ರ ಸರಿ ಎಂದು ಬಿಂಬಿಸೋಕೆ ಈ ರೀತಿ ಮಾಡ್ತಿದ್ದಾರೆ. ಸಚಿವ ಸಂಪುಟ ಬದಲಾವಣೆ ಆಗ್ತಿದೆ ಅದಕ್ಕೆ ಈ ರೀತಿ ಮಾಡುತ್ತಿರಬಹುದು.ಬ್ಲ್ಯಾಕ್ ಮೇಲ್ ಮಾಡಿ ಹುದ್ದೆ ಪಡೆದುಕೊಳ್ಳುವುದಕ್ಕೆ ಮಾಡ್ತಿರಬಹುದು ಈ ಹಿಂದೆಯೂ ಬಿ.ಆರ್ ಪಾಟೀಲ್…

Read More

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಮಿಕ್ಸ್ ಚರ್ ತಯಾರಿಸುವ ಶೆಡ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಗಳೂರಿನ ಅಂದ್ರಳ್ಳಿಯ ಗಣಪತಿ ದೇಗುಲ ರಸ್ತೆಯಲ್ಲಿರುವ ಶೆಡ್ ನಲ್ಲಿ ಮಿಕ್ಸ್ ಚರ್ ತಯಾರಿಸುವ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯಾದ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ಒಂದು ಅಗ್ನಿ ಅವಘಡದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದೆ.ಘಟನೆ ಕುರಿತಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More