Subscribe to Updates
Get the latest creative news from FooBar about art, design and business.
Author: kannadanewsnow05
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮಹಾಶಿವರಾತ್ರಿಯಂದು ಶಿವನ ಆರಾಧನೆ ಮಾಡುವಾಗ ತಪ್ಪದೆ ಬಳಸುವ ವಸ್ತುಗಳಲ್ಲೊಂದು ಬಿಲ್ವೆಪತ್ರೆ. ಶಿವನ ಪೂಜೆಯಲ್ಲಿ ಇದಕ್ಕೆ ತುಂಬಾನೇ ಮಹತ್ವದ ಸ್ಥಾನವಿದೆ. ನೀವು ಸಿವನಿಗೆ ಬಿಲ್ವೆಪತ್ರೆ ಅರ್ಪಿಸುವಾಗ ಕೆಲವೊಂದು ನಿಯಮಗಳಿವೆ ಅದರಂತೆ ಅರ್ಪಿಸಿದರೆ ನಿಮ್ಮೆಲ್ಲಾ ಕಷ್ಟ ದೂರಾಗಿ ಇಷ್ಟಾರ್ಥ ನೆರವೇರುವುದು. ಬಿಲ್ವಪತ್ರೆ ಶಿವನಿಗೆ ಏಕಿಷ್ಟು ಪ್ರಿಯ? ಪೌರಾಣಿಕ ಕತೆ ಪ್ರಕಾರ ಬಿಲ್ವ ಪತ್ರೆ ಮರವು ಪಾರ್ವತಿ ದೇವಿಯ ಬೆವರಿನಿಂದ ಹುಟ್ಟಿಕೊಂಡಿತು. ಬಿಲ್ವಪತ್ರೆಯಲ್ಲಿ ಪಾರ್ವತಿ ದೇವಿ ನೆಲೆಸಿರುತ್ತಾಳೆ, ಗಿರಿಜೆಯಾಗಿ ಈ ಮರದ ಬೇರುಗಳಲ್ಕಿ, ಮಹೇಶ್ವರಿಯಾಗಿ ಈ ಮರದ ಕಾಂಡದಲ್ಲಿ, ದಾಕ್ಷಾಯಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಇದರ ಎಲೆಗಳಲ್ಲಿ, ಕಾತ್ಯಾಯನಿಯಾಗಿ ಈ ಮರದ ಹಣ್ಣುಗಳಲ್ಲಿ, ಗೌರಿಯಾಗಿ ಬಿಲ್ವಪತ್ರೆ ಹೂಗಳಲ್ಲಿ ನೆಲೆಸಿರುತ್ತಾಲೆ. ಪಾರ್ವತಿಯ ಎಲ್ಲಾ ಸ್ವರೂಪಗಳು ಈ ಮರದ ರೂಪದಲ್ಲಿ ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಅಚ್ಚುಮೆಚ್ಚು ಎಂದು ಕರೆಯಲಾಗುವುದು. ಬಿಲ್ವಪತ್ರೆ ಮರ ಸ್ವರ್ಗದಲ್ಲಿರುವ ಕಲ್ಪ ವೃಕ್ಷಕ್ಕೆ ಸಮ ಎಂದು ಹೇಳಲಾಗುವುದು.…
ಕೋಲಾರ : ಕಾರು ದ್ವಿಚಕ್ರ ವಾಹನ ನಡುವೆ ಭೀಕರವಾದ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಧುರಂಗಪಲ್ಲಿ ಗ್ರಾಮದಲ್ಲಿ ನಡೆದಿದೆ. https://kannadanewsnow.com/kannada/pakistan-pm-shehbaz-sharif-compares-kashmir-to-war-torn-palestine/ ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ತಾಲೂಕಿನ ಮದರಂಕಪಲ್ಲಿ ಕ್ರಾಸ್ ನಲ್ಲಿ ಜಿಡಿಮಾಕಲಹಳ್ಳಿಯ ಶಂಕರ (40) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ರಾಯಲ್ ಪಾಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/by-doing-this-technique-without-the-help-of-any-mantra-the-one-you-like-will-be-captured-in-a-jiffy/
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನೀವು ಇಷ್ಟಪಟ್ಟ ವ್ಯಕ್ತಿ ನಿಮ್ಮ ಜೊತೆಯಲ್ಲಿ ಇರುತ್ತಾರೆ ನಿಮ್ಮಿಂದ ಏನಾದರೂ ಕೆಲವೊಂದಿಷ್ಟು ಸಮಸ್ಯೆಗಳಿಗೆ ಒಳಗಾಗಿ ದೂರವಾಗಿದ್ದರೆ ಈ ತಂತ್ರವನ್ನು ನೀವು ಮಾಡುವ ಮೂಲಕ ಅವರನ್ನ ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅನೇಕ ವರ್ಷಗಳು ಪ್ರೀತಿಯನ್ನ ಮಾಡಿ ನಿಮ್ಮ ಜೊತೆ ಇದ್ದು ನಿಮ್ಮನ್ನು ಮದುವೆ ಆಗುತ್ತೇನೆ ಅಂತ ಹೇಳಿ ನಿಮಗೆ ಏನಾದರೂ ಮೋಸ ಅನ್ನ ಮಾಡಿದರೆ ಈ ತಂತ್ರವನ್ನು ಮಾಡುವ ಮೂಲಕ ನೀವು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಅವರಾಗಿಯ ನಿಮ್ಮ ಹತ್ತಿರ ಬರಬೇಕು ನಿಮ್ಮನ್ನು ಮದುವೆಯಾಗಬೇಕು ನಿಮ್ಮನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಬೇಕು ಎಂದರೆ ಈ ತಂತ್ರವನ್ನು ಮಾಡುವುದು ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಬಹುದು.ಈ ತಂತ್ರವನ್ನು ನೀವು ಮಾಡಬೇಕಾದರೆ ಏಕಾಗ್ರತೆ ನಿಷ್ಠೆ ಮತ್ತು ಶ್ರದ್ಧೆಯಿಂದ ಮಾತ್ರ ಮಾಡಲು ಸಾಧ್ಯ. ಒಂದು ವೀಳ್ಯದೆಲೆ ಮತ್ತು ಗರಿಕೆಯ ಮೂಲಕ ಮಾಡುವಂತಹ ತಂತ್ರ ಇದ್ದಾಗಿದೆ. ವೀಳ್ಯದೆಲೆಯ ಮೇಲೆ ನೀವು…
ಮಾರಿಷಸ್ : ಪೂರ್ವ ಆಫ್ರಿಕಾದ ಮಾರಿಷಸ್ನ ಹಿಂದೂ ಸಮುದಾಯವು ಪವಿತ್ರವೆಂದು ಪರಿಗಣಿಸುವ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಮುಂಚಿತವಾಗಿ ಯಾತ್ರಿಕರು ಗ್ರ್ಯಾಂಡ್ ಬೇಸಿನ್ ಸರೋವರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಡೆದ ಅಗ್ನಿ ದುರಂತದಲ್ಲಿ 6 ಜನರು ಸಾವನ್ನಪ್ಪಿದ್ದು, 7 ಜನರು ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. https://kannadanewsnow.com/kannada/intensified-hot-wind-in-the-state-guidelines-published-by-the-state-health-department/ ಪೂರ್ವ ಆಫ್ರಿಕಾದ ಮಾರೀಷಸ್ ನಲ್ಲಿ ಕೂಡ ಶಿವರಾತ್ರಿ ಅಂಗವಾಗಿ ಅಲ್ಲಿನ ಹಿಂದೂ ಸಮುದಾಯದ ಜನರು ಶಿವರಾತ್ರಿ ಪವಿತ್ರ ದಿನವೆಂದು ಪ್ರತಿ ವರ್ಷ ಆಚರಣೆ ಮಾಡುತ್ತಾರೆ. ಇದೆ ವೇಳೆ ದೇವರ ವಿಗ್ರಹವು ವಿದ್ಯುತ್ ತಂತಿಗೆ ಸ್ಪರ್ಶಿಸಿದಾಗ ಬೆಂಕಿ ಕಾಣಿಸಿಕೊಂಡಿತ್ತು. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. https://kannadanewsnow.com/kannada/breaking-%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%aa%e0%b3%86%e0%b2%a3%e0%b2%82%e0%b2%ac%e0%b3%82%e0%b2%b0%e0%b3%81-%e0%b2%ac%e0%b3%80%e0%b2%9a%e0%b3%8d-%e0%b2%a8/ ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಆ ಬೆಂಕಿಯನ್ನು ನಂದಿಸಲು ಹರ ಸಾಹಸ ಪಟ್ಟಿವೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು…
ಮಂಗಳೂರು : ಮಂಗಳೂರಿನ ಪೆಣಂಬೂರು ಬೀಚ್ ನಲ್ಲಿ ಸಮುದ್ರದ ದಡದಲ್ಲಿ ಮೂವರು ಯುವಕರು ಆಟವಾಡಲು ತೆರಳಿದ್ದಾಗ ಅಲೆಗಳ ರಭಸಕ್ಕೆ ಮೂವರು ಯುವಕರು ಸಮುದ್ರ ಪಾಲಾಗಿರುವ ಘಟನೆ ನಡೆದಿದೆ. https://kannadanewsnow.com/kannada/us-election-2024-nikki-haley-wins-republican-primary-in-washington-dc/ ಸಮುದ್ರ ತೀರದಲ್ಲಿ ಲೈಫ್ ಗಾರ್ಡ್ ಎಚ್ಚರಿಕೆಯ ಹೊರತಾಗಿಯೂ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಮೂವರು ಯುವಕರು ನಾಪತ್ತೆಯಾಗಿದ್ದು, ಆಲೆಗಳಲ್ಲಿ ಕೊಚ್ಚಿ ಹೋದ ಯುವಕರನ್ನು ಮಿಲನ್(20), ಲಿಖಿತ್(18) ಹಾಗೂ ನಾಗರಾಜ್ (24) ಎಂದು ಗುರುತಿಸಲಾಗಿದೆ. https://kannadanewsnow.com/kannada/breaking-rameswaram-cafe-bomb-blast-state-govt-transfers-case-to-nia-for-investigation/ ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಪಣಂಬೂರು ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರೂ ನೀರು ಪಾಲಾಗಿದ್ದಾರೆ. ನಾಪತ್ತೆಯಾದ ಯುವಕರಿಗಾಗಿ ಮುಳುಗತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. https://kannadanewsnow.com/kannada/state-bjp-finalises-names-of-probables-for-more-than-15-constituencies-leaders-at-core-committee-meeting/ ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ನಾಗರಾಜ್ ಬೈಕಂಪಾಡಿಯ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಬಿಜೆಪಿಯಿಂದ 15ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭಾವ್ಯರ ಹೆಸರು ಫೈನಲ್ : ಕೋರ್ ಕಮಿಟಿ ಸಭೆಯಲ್ಲಿ ನಾಯಕರ ಒಪ್ಪಿಗೆ
ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೂ, ಆದರೆ ರಾಜ್ಯದ ಅಭ್ಯರ್ಥಿಗಳ ಹೆಸರನ್ನು ಇನ್ನೂ ಘೋಷಿಸಿಲ್ಲ. ಹೀಗಾಗಿ ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ಗೆ ಒಪ್ಪಿಗೆ ಸಿಕ್ಕಿದೆ. ರಾಜ್ಯ ಬಿಜೆಪಿಯಿಂದ 15ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭಾವ್ಯರ ಹೆಸರುಗಳು ಫೈನಲ್ ಆಗಿದೆ. https://kannadanewsnow.com/kannada/rameswaram-cafe-brookfield-outlet-bangalore-resumed-on-the-8th/ ಗೊಂದಲ ಇರುವ ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿ ಆಯ್ಕೆ ಕ್ಲಿಷ್ಟಕರ ಇರುವ 10+ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ. ಗೊಂದಲ ಇರುವ ಕ್ಷೇತ್ರಗಳ ಸಂಭಾವ್ಯರ ಪಟ್ಟಿಯನ್ನೂ ಹೈಕಮಾಂಡ್ಗೆ ಕಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಈ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೂ ಕನಿಷ್ಠ 3 ಹೆಸರುಗಳಿರುವ ಪಟ್ಟಿಯನ್ನು ಕಳಿಸಲು ನಿರ್ಧಾರ ಮಾಡಲಾಗಿದೆ. https://kannadanewsnow.com/kannada/bjp-national-president-jp-nadda-state-tour-for-two-days-from-today-participate-in-various-events/ ಗೊಂದಲ ಇಲ್ಲದ, ಗೆಲ್ಲುವ ಗ್ಯಾರಂಟಿ ಇರುವ, ಸರ್ವ ಸಮ್ಮತ ಸಂಭಾವ್ಯರ 15+ ಹೆಸರುಗಳಿಗೆ ಕೋರ್ ಕಮಿಟಿ ಸಹಮತ ಸೂಚಿಸಿದೆ. ಒಂದೆರಡು ದಿನಗಳಲ್ಲಿ ಹೈಕಮಾಂಡ್ಗೆ 15+ ಶಾರ್ಟ್ ಲಿಸ್ಟ್…
ಬೆಂಗಳೂರು : ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸುಗಮ ಸಂಚಾರದ ಉದ್ದೇಶದಿಂದ ಈಗಿನ ವೈಟ್ಫೀಲ್ಡ್ ನಿಲ್ದಾಣದಿಂದ ಮೆಟ್ರೋ ಮಾರ್ಗವನ್ನು 588 ಮೀ.ನಷ್ಟು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮುಂದಾಗಿದೆ. https://kannadanewsnow.com/kannada/three-new-metro-feeder-buses-ply-in-bangalore-from-today-metro-feeder-bus/ ಪೂರ್ವದ ವೈಟ್ಫೀಲ್ಡ್ -ಪಶ್ಚಿಮದ ಚಲ್ಲಘಟ್ಟದವರೆಗೆ 43.49 ಕಿ.ಮೀ. ಇರುವ ನೇರಳೆ ಮಾರ್ಗ ವೈಟ್ಫೀಲ್ಡ್ನ ಬೆಳತ್ತೂರು ಕಾಲೋನಿವರೆಗೆ ಕೊಂಚ ವಿಸ್ತರಣೆ ಆಗಲಿದೆ. ಮಾರ್ಗ ವಿಸ್ತರಣೆ ಆಗುತ್ತಿದೆ ವಿನಃ ಹೊಸದಾಗಿ ಕೊನೆಯ ಹಂತದಲ್ಲಿ ಯಾವುದೇ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಇದರಿಂದ ನೇರವಾಗಿ ಯಾವುದೇ ಪ್ರಯೋಜನವಿಲ್ಲ. https://kannadanewsnow.com/kannada/readers-note-how-to-take-advantage-of-pradhan-mantri-surya-ghar-heres-the-complete-information/ ಈ ಸಂಬಂಧ ಕಾಮಗಾರಿ ನಡೆಸಲು ಈಚೆಗಷ್ಟೇ 48.62 ಕೋಟಿ ಟೆಂಡರನ್ನು ಎಂ.ವೆಂಕಟರಾವ್ ಇನ್ಫ್ರಾ ಪ್ರೊಜೆಕ್ಟ್ ಪ್ರೈ.ಲಿ. ಕಂಪನಿಗೆ ನೀಡಲಾಗಿದ್ದು, ಶೀಘ್ರವೇ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ. ಆದರೆ, ರೈಲುಗಳು ನಿಲ್ದಾಣದಿಂದ ಮುಂದಕ್ಕೆ ಹೋಗಿ ಹಿಂದಿರುಗಿ ಬರಲು (ರಿವರ್ಸ್ ಬರಲು) ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೇರಳೆ ಮಾರ್ಗ ವೈಟ್ಫೀಲ್ಡ್ನ ಬೆಳತ್ತೂರು ಕಾಲೋನಿವರೆಗೆ ಕೊಂಚ ವಿಸ್ತರಣೆ ಆಗಲಿದೆ. https://kannadanewsnow.com/kannada/lok-sabha-elections-2019-sumalatha-ambareesh-confident-of-100-sure-of-alliance-ticket/ ಅಲ್ಲದೆ ವೈಟ್ಫೀಲ್ಡ್ ಡಿಪೋದ 3ನೇ ಲೈನನ್ನು…
ಮಂಡ್ಯ : ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದರೆ ಮಾತ್ರ ಹೋಗುತ್ತೇನೆ. ಕರ್ನಾಟಕದ ಅಭ್ಯರ್ಥಿ ಪಟ್ಟಿ ಯಾವಾಗ ಬರುವುದೋ ಆಗಲೇ ನಮ್ಮದೂ ಬರಲಿದೆ.ಹಾಗಾಗಿ ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸದಿಂದ ನುಡಿದರು. https://kannadanewsnow.com/kannada/department-of-posts-invites-applications-for-55000-posts-heres-the-complete-information/ ತಾಲೂಕಿನ ಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ತಯಾರಿ ಬಗ್ಗೆ ಯಾವುದೇ ನಿರ್ದಿಷ್ಟ ಯೋಜನೆ ರೂಪಿಸಿಕೊಂಡಿಲ್ಲ. ಈ ಬಾರಿ ಒಂದು ರಾಜಕೀಯ ಪಕ್ಷದ ಚಿಹ್ನೆಯಡಿ ನಾನು ಸ್ಪರ್ಧಿಸುತ್ತಿದ್ದೇನೆ. ಈ ವಿಚಾರದಲ್ಲಿ ಪಕ್ಷ, ಪಕ್ಷದ ನಾಯಕರು ಏನು ಹೇಳುತ್ತಾರೆ ನೋಡಬೇಕು. ಈ ಬಾರಿ ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಎಲ್ಲವೂ ವಿಭಿನ್ನವಾಗಿರಲಿದೆ ಎಂದರು. https://kannadanewsnow.com/kannada/tumakuru-in-a-tragic-incident-a-farmer-died-while-trying-to-douse-the-fire-that-engulfed-a-coconut-sapling/ ನಟ ಯಶ್ ಈ ಬಾರಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸೋಲ್ಲ ಎಂಬ ವಿಚಾರದ ಬಗ್ಗೆ ಕೇಳಿದಾಗ, ರಾಜಕಾರಣ ಗಲೀಜು ಎಂದು ಹೇಳಿದ್ದಾರೆ. ಟೀಕೆ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಈಗ ಸ್ಟಾರ್ ಇಂಡಿಯಾ. ಪ್ರಚಾರಕ್ಕೆ…
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಮಾರ್ಗೋನಹಳ್ಳಿ ಗ್ರಾಮದ ರೈತ ಸಿದ್ದಯ್ಯ(90) ತೆಂಗಿನ ಸಸಿಗೆ ತಗುಲಿದ್ದ ಬೆಂಕಿ ನಂದಿಸುವಾಗ ಆಕಸ್ಮಿಕವಾಗಿ ಬೆಂಕಿ ಅವಪಘಡಕ್ಕೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. https://kannadanewsnow.com/kannada/cafe-blast-being-politicized-and-tarnishing-the-state-dk-shivakumar-lashes-out-at-bjp/ ಸಿದ್ದಯ್ಯ ಭಾನುವಾರ ಸಂಜೆ ದೊಡ್ಡಮಾರ್ಗೋನಹಳ್ಳಿ ಹೊರ ವಲಯದ ತೋಟಕ್ಕೆ ತೆರಳಿದ್ದಾರೆ. ಬದುವಿನಲ್ಲಿದ್ದ ಹುಲ್ಲಿಗೆ ಬೆಂಕಿ ಹಾಕಿದ್ದಾರೆ. ಬೆಂಕಿ ಕ್ರಮೇಣ ಬದುವಿನ ಪಕ್ಕದಲ್ಲಿದ್ದ ತೆಂಗಿನ ಸಸಿಗೆ ಆವರಿಸಿದೆ. ನಂದಿಸುವಾಗ ಸಿದ್ದಯ್ಯ ಅವರಿಗೂ ಬೆಂಕಿಯ ಜ್ವಾಲೆ ರಾಚಿದೆ ಎಂದು ಪೊಲೀಸರು ಶಂಕಿಸಿದ್ದಾರೆ. https://kannadanewsnow.com/kannada/thinking-of-job-based-education-in-degree-colleges-minister-mc-sudhakar/ ಅಕ್ಕಪಕ್ಕದ ತೋಟದವರು ಸಿದ್ದಯ್ಯ ಬೆಂಕಿಯಲ್ಲಿ ಬಿದ್ದಿರುವುದನ್ನು ಕಂಡು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಸಂಗಮೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಘಟನೆ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಕರೀಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. https://kannadanewsnow.com/kannada/shocking-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%b2%e0%b3%8d%e0%b2%b2%e0%b2%bf-3-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%ae%e0%b2%97%e0%b3%81%e0%b2%b5/ ಕರಿಬೀರನ ಹೊಸಹಳ್ಳಿಯ ಮರಿಯಪ್ಪ(65), ಮುನಿಯಮ್ಮ(60), ಭಾರತಿ(40) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ.ಮಧ್ಯಾಹ್ನ ತೋಟದ ಬಳಿ ಊಟ ಮಾಡಿ ಕೈ ತೊಳೆಯಲು ಹೋದ ಮಗಳು ಭಾರತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಬಳಿಕ ಆಕೆಯನ್ನ ರಕ್ಷಣೆ ಮಾಡಲು ಹೋದ ಮರಿಯಪ್ಪ ಹಾಗೂ ಮುನಿಯಮ್ಮ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. https://kannadanewsnow.com/kannada/these-are-hair-packs-that-are-also-useful-for-men-there-will-be-no-side-effect/ ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದು, ಮೃತ ದೇಹಗಳನ್ನ ಹೊರತೆಗೆದು ನಂತರ ಹೊಸಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಹೊಸಕೋಟೆ ವ್ಯಾಪ್ತಿಯ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.