Author: kannadanewsnow05

ಬೆಳಗಾವಿ : ಆ ಯುವತಿಗೆ ಮದುವೆಯಾಗಿತ್ತು. ಆದರೂ ಕೂಡ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಈಕೆಯ ಫೋಟೋ ಹಾಕಿದ್ದಾನೆ. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ, ಮನನೊಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಒಂದು ಘಟನೆಯು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಆರತಿ ಕಾಂಬಳೆ (26) ಎಂದು ತಿಳಿದುಬಂದಿದೆ. ಈಕೆ ಮದುವೆಯಾಗಿ ರಾಯಭಾಗ್ ತಾಲೂಕಿನ ಮೊರಬ ಗ್ರಾಮದಲ್ಲಿ ಗಂಡನ ಮನೆಯಲ್ಲಿ ವಾಸಿಸುತ್ತಿದ್ದಳು. ಆರತಿಗೆ ಮದುವೆ ಆಗಿದ್ದರೂ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.ಆರತಿ ಜೊತೆ ಸ್ನೇಹ ಬೆಳೆಸಿದ್ದ ಸಾಗರ ಕಾಂಬಳೆ ತನ್ನ ವಾಟ್ಸ್‌ಆಯಪ್ ಸ್ಟೇಟಸ್‌ನಲ್ಲಿ ಆರತಿಯ ಫೋಟೋ ಹಾಕಿದ್ದಾನೆ. ಸಾಗರ ವಾಟ್ಸಪ್ ಸ್ಟೇಟಸ್‌ನಲ್ಲಿ ಆರತಿ ಫೋಟೋ ಹಾಕಿದ್ದು ಫುಲ್ ವೈರಲ್ ಆಗಿತ್ತು. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ಮನನೊಂದು ಇಂದು ಆರತಿ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ…

Read More

ಮಹಾರಾಷ್ಟ : ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿ ಕೂಟದ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಆದರೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಈ ಒಂದು ಗ್ರಾಮದಲ್ಲಿ ಗ್ರಾಮಸ್ಥರು ಇವಿಎಂ ಮಷೀನ್‌ಗಳ ಮೇಲೆ ಅಪನಂಬಿಕೆ ಹೊಂದಿದ್ದು ಇಂದು ಅವರು ಬ್ಯಾಲೆಟ್ ಪೇಪರ್ ಮತದಾನ ಮಾಡುವ ಮೂಲಕ ಅಣುಕು ಮತದಾನ ನಡೆಸಿದ್ದಾರೆ. ಹೌದು ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಬ್ಯಾಲೆಟ್ ಪೇಪರ್ ಮತದಾನ ನಡೆದಿದ್ದು, ಸೊಲ್ಲಾಪುರ ಜಿಲ್ಲೆಯ ಮರ್ಕಡ್ವಾಡಿಯಲ್ಲಿ ಅಧಿಕೃತ ಮತದಾನ ಪ್ರಕ್ರಿಯೆ ನಡೆದಿದೆ. ಇವಿಎಂ ಮಷಿನ್ ಮೇಲೆ ನಂಬಿಕೆ ಇಲ್ಲದೆ ಬ್ಯಾಲೆಟ್ ಪೇಪರ್ ಮತದಾನ ನಡೆಸಲಾಗಿದೆ. ಮರ್ಕಡ್ವಾಡಿ ಗ್ರಾಮದವರೇ ಈ ಒಂದು ಅಣುಕು ಮತದಾನ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮರ್ಕಡ್ವಾಡಿ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಸಿತ್ತು. ಹಾಗಾಗಿ ಇವಿಎಂ ಮೇಲೆ ಮರ್ಕಡ್ವಾಡಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಬ್ಯಾಲೆಟ್ ಪೇಪರ್ ಮೂಲಕ ಇದೀಗ ಗ್ರಾಮದಲ್ಲಿ…

Read More

ಬೆಂಗಳೂರು : ‘KEA’ ಸೀಟ್ ಬ್ಲಾಕಿಂಗ್ ಹಗರಣದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯ ಪೊಲೀಸರು ಕಿಂಗ್ ಪಿನ್ ಸಮೇತ 10 ಆರೋಪಿಗಳನ್ನು ಬಂಧಿಸಿದ್ದರೆ. ಬಂಧಿತ ಆರೋಪಿಗಳನ್ನು ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್ ಹಾಗೂ ಅವಿನಾಶ್ ಸೇರಿದಂತೆ 10 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಹರ್ಷ ಎನ್ನುವ ಆರೋಪಿ ಕೆಇಎ ಸೀಟ್ ಬ್ಲಾಕಿಂಗ್ ಹಗರಣದ ಕಿಂಗ್ ಪಿನ್ ಎಂದು ತಿಳಿದುಬಂದಿದೆ. ಕೌನ್ಸೆಲಿಂಗ್ ಗೆ ಆಯ್ಕೆಯಾಗಿ ಕಾಲೇಜು ಸೆಲೆಕ್ಟ್ ಮಾಡಿಕೊಳ್ಳದವರ ಸೀಟ್ ಗಳು, ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆದು ಹೋಗದ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಸೀಟ್ ಗಳನ್ನು ಬಂಧಿತ ಆರೋಪಿಗಳು ಬ್ಲಾಕ್ ಮಾಡುತ್ತಿದ್ದರು ಎನ್ನಲಾಗಿದೆ. ಲಕ್ಷಾಂತರ ರೂಪಾಯಿಗೆ ಮ್ಯಾನೇಜ್ಮೆಂಟ್ ಕೋಟಾದ ಅಡಿ ಬೇರೆಯವರಿಗೆ ಡೀಲ್ ಮಾಡಿಕೊಳ್ಳುತ್ತಿದ್ದರು. ಮಧ್ಯವರ್ತಿಗಳ ಸಹಾಯದಿಂದ ಆರೋಪಿಗಳು ಡಿಲೀಟ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸೀಟ್ ಡೀಲಿಂಗ್ ನಲ್ಲಿ ಪ್ರತಿಷ್ಠಿತ ಕಾಲೇಜುಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಗರಣದ…

Read More

ಮಂಗಳೂರು : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಇದೀಗ ಮಂಗಳೂರಿನ ಬಂದರಿನಲ್ಲಿ ಇದಂತಹ ಸುಮಾರು ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೌದು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ, ಮೀನುಗಳಿಗಾಗಿ ಬಲೆ ಬೀಸುವ ದೋಣಿಗಳು ಕೊಚ್ಚಿ ಹೋಗಿದ್ದು, ಮಂಗಳೂರಿನಲ್ಲಿ ಮೀನುಗಾರಿಕೆ ಹಲವು ಬೋಟ್ ಗಳು ಸಹ ಕೊಚ್ಚಿ ಹೋಗಿವೆ. ಅಲ್ಲದೆ ಇನ್ನೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪ ಆದ್ಯಪಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂ ಕುಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಆದ್ಯಪಾಡಿಯ ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದ್ದು, ಮಾನಾ ಶಾಲಿಯಾನ್ ಎಂಬುವರಿಗೆ ಸೇರಿದ ಮನೆಗೆ ಭೂಕುಸಿತದ ಹಾನಿ ಉಂಟಾಗಿದೆ.

Read More

ಹಾಸನ : ಕಿರುತೆರೆ ಖ್ಯಾತ ನಟಿ, ಬ್ರಹ್ಮಗಂಟು ಧಾರಾವಾಹಿಯಿಂದಲೇ ಪ್ರಖ್ಯಾತಿಗಳಿಸಿದ ಶೋಭಿತ ಶಿವಣ್ಣ ಹೈದರಾಬಾದ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಮೃತ ದೇಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ತಲುಪಿದ್ದು, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ಹೈದ್ರಾಬಾದ್ ನಿಂದ ಮೃತದೇಹ ಸ್ಥಳಾಂತರಿಸಲಾಗಿದೆ. ಈ ವೇಳೆ ಮೃತದೇಹವನ್ನು ಕಂಡು ಶೋಭಿತ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಹೇರೂರು ಗ್ರಾಮದಲ್ಲಿ ಶೋಭಿತ ಅಂತ್ಯಸಂಸ್ಕಾರ ನಡೆಯಲಿದೆ. ಹೈದರಾಬಾದ್ ನಲ್ಲಿ ನಟಿ ಶೋಭಿತ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆ ಹಿನ್ನೆಲೆ? ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಟಿ ಶೋಭಿತಾ ಮತ್ತು ಸುಧೀರ್ ಹೈದರಾಬಾದ್ ನಲ್ಲಿ ನೆಲೆಸಿದ್ದರು. ನವೆಂಬರ್ 30ರ ರಾತ್ರಿ ಶೋಭಿತಾ ತಮ್ಮ ಸಹೋದರಿ ಜೊತೆ ಫೋನ್ ನಲ್ಲಿ ಕೆಲ ಕಾಲ ಮಾತನಾಡಿದ್ದಾರೆ. ಈ ವೇಳೆ ಕೂಡ ಕುಟುಂಬಸ್ಥರುಗೆ ಯಾವುದೇ ಅನುಮಾನ ಬರದಂತೆ ಶೋಭಿತಾ ಮಾತನಾಡಿದ್ದಾರೆ.ಇದಾದ ಬಳಿಕ…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ದುರಾದೃಷ್ಟವನ್ನು ದೂರಮಾಡಿ ಅದೃಷ್ಟವನ್ನು ಹೊಂದುವ ಭಾಗ್ಯ ನಿಮ್ಮ ಕೈಯಲ್ಲಿ ಅಡಗಿದೆ ಇನ್ನು ಮುಖ್ಯವಾಗಿ ಜ್ಯೋತಿಷ್ಯದಲ್ಲಿ ಸಾಕಷ್ಟು ವಿಷಯಗಳು ಇದರ ಬಗ್ಗೆ ಚರ್ಚೆಗೆ ಬರುತ್ತವೆ ದೌರ್ಭಾಗ್ಯವನ್ನು ದೂರಮಾಡಿ ಸೌಭಾಗ್ಯವನ್ನು ತರುವ ಸರಳ ವಿಧಾನಗಳು ಇಲ್ಲಿ ತಿಳಿಸಲಾಗುತ್ತದೆ ಅದರಂತೆ ನಾವು ನಡ್ಕೊಂಡ್ರೆ ಸಾಕು ಧನ ಸಂಪತ್ತು ವೃದ್ಧಿಯಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿ ಮನೆಯಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸು ವಂತಾಗುತ್ತದೆ ಮುಖ್ಯವಾಗಿ ಶನಿವಾರ ವನ್ನು ನಾವು ಹನುಮಂತನ ವಾರ ಎಂದು ಪೂಜಿಸಲಾಗುತ್ತದೆ ಶನಿವಾರ ರಾತ್ರಿ ಹನುಮಂತನ ಮೂರ್ತಿ ಅಥವಾ ಶಿವಲಿಂಗದ ಮುಂದೆ ದೀಪವನ್ನು ಹಚ್ಚಿನೋಡಿ ಆಗ ನೋಡಿ ಅದರ ಚಮತ್ಕಾರ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ ಪ್ರತಿದಿನ ರಾತ್ರಿ ಈಶ್ವರನ ಮುಂದೆ ದೀಪವನ್ನು ಹಚ್ಚುವುದರಿಂದ ಮಹಾಲಕ್ಷ್ಮಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನಿಲ್ಲುತ್ತಾಳೆ ಅಂತ ಹೇಳುತ್ತಾರೆ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ…

Read More

ದಕ್ಷಿಣಕನ್ನಡ : ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಅಬ್ಬರ ಕರ್ನಾಟಕದ ಮೇಲು ಭಾರಿ ಪರಿಣಾಮ ಬೀರಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಆಗಿದ್ದ ಪರಿಣಾಮ, ಜಿಲ್ಲೆಯ ಬಜಪೆ ಸಮೀಪ ಭೂಕುಸಿತ ಉಂಟಾಗಿದೆ. ಹೌದು ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಬಜಪೆ ಸಮೀಪದ ಆದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಭೂಕಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಆದ್ಯಪಾಡಿಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಕೆಲ ಭಾಗದ ಆದ್ಯಪಾಡಿ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ.ಉಮಾನಾಥ ಸಾಲಿಯಾನ್ ಎಂಬುವವರಿಗೆ ಸೇರಿದ ಮನೆಗೂ ಹಾನಿ ಉಂಟಾಗಿದ್ದು, ಮನೆ ಮುಂಭಾಗದ ಅಂಗಳದಲ್ಲಿ ಮಣ್ಣು ಕೆಸರು ಸಂಪೂರ್ಣವಾಗಿ ತುಂಬಿಕೊಂಡಿದೆ.

Read More

ಕೊಪ್ಪಳ : ಮನೆಯಲ್ಲಿ ಗ್ಯಾಸ್ ಗೀಸರ್ ಸ್ಫೋಟಗೊಂಡು ಮನೆಯಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಂಗಾವತಿ ನಗರದ ಸಾರಿಗೆ ಬಸ್ ಡಿಪೋ ಸಮೀಪದ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಕವಿತಾ, ಪ್ರೀತಿ, ಶೋಭಾ, ಶೃತಿ, ಭಾಗ್ಯಮ್ಮ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕವಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ಇನ್ನುಳಿದವರನ್ನು ಗಂಗಾವತಿಯ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಗಂಗಾವತಿ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಈಗಾಗಲೇ ಜಾತಿನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಅವರ ವಿರುದ್ಧ ಮತ್ತೊಂದು ಆರೋಪ ಬಂದಿದ್ದು, ಮಾಜಿ ಕಾರ್ಪೊರೇಟರ್ ಒಬ್ಬರ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಸ್ಫೋಟಕವಾದ ಆರೋಪ ಕೇಳಿ ಬಂದಿದೆ. ಹೌದು ಶಾಸಕ ಮುನಿರತ್ನ ಅವರ ವಿರುದ್ಧ ಒಂದು ಗಂಭೀರವಾದ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸ್ವತಃ ಮಾಜಿ ಕಾರ್ಪೊರೇಟರ್ ಮಂಜುಳಾ ಹಾಗೂ ಅವರ ಪತಿ ಲಗ್ಗೆರೆ ನಾರಾಯಣ ಸ್ವಾಮಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ವಿರುದ್ಧ ಶಾಸಕ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸಿದ್ದರು ಎಂಬ ಸ್ಪೋಟಕ ಆರೋಪ ಮಾಡಿದರು. ಮುನಿರತ್ನ ಶಾಸಕನಾಗಿ ಹನಿ ಟ್ರ್ಯಾಪ್ ಮಾಡುವ ಕೆಲಸ ಮಾಡ್ತಿದ್ದ ಜನ ಸಾಮಾನ್ಯರಿಂದ ಹಿಡಿದು ರಾಜ್ಯದ ಓರ್ವ ಮುಖ್ಯ ಮಂತ್ರಿಯವರೆಗೆ ಹನಿ ಟ್ರ್ಯಾಪ್ ಮಾಡಿದ್ದಾನೆ ಎಂದು ಶಾಸಕ…

Read More

ನವದೆಹಲಿ : ರಾಜ್ಯಾಧ್ಯಕ್ಷರ ನಾಯಕತ್ವದ ವಿರುದ್ಧ ನಿಲುವು ತೋರಿದ್ದರೆ ಹಿನ್ನೆಲೆಯಲ್ಲಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯು ಕಾರಣ ನೀಡುವಂತೆ ನೋಟಿಸ್ ನೀಡಿದೆ. ಈ ವಿಚಾರವಾಗಿ ಶಾಸಕ ಯತ್ನಾಳ್ ನನಗೆ ಬಿಜೆಪಿಯಿಂದ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ವಾಟ್ಸಾಪ್ನಲ್ಲಿ ಬಂದಿರುವಂತಹ ನೋಟಿಸ್ ಅನ್ನು ಅವರೆ ಕಳಿಸಿದ್ದಾರೆ ಎಂದು ಹೇಗೆ ನಂಬಲಿ? ನನಗೆ ಬಂದಿರುವಂತಹ ನೋಟೀಸ್ ಡುಬ್ಲಿಕೇಟ್ ಆಗಿದ್ದು, ಇದೆಲ್ಲ ವಿಜಯೇಂದ್ರನದ್ದೇ ಕೆಲಸ ಎಂದು ಸ್ಪೋಟಕ ಹೇಳಿಕೆ ನೀಡಿದರು. ನವದೆಹಲಿಯಲ್ಲಿ ಮಾತನಾಡಿರುವ ಅವರು, ನನಗೆ ಇಲ್ಲಿಯವರೆಗೆ ಮೂರು ಸಲ ನೋಟಿಸ್ ಕೊಟ್ಟಿದ್ದಾರೆ. ಎರಡು ಸಲ ಉತ್ತರ ಕೊಟ್ಟಿದ್ದೇನೆ. ಇದೀಗ ಮೂರನೇ ಬಾರಿ ಬಂದಿರುವಂತ ನೋಟಿಸ್ ಡುಬ್ಲಿಕೇಟ್ ಇದೆ ಅಂತ ಅನಿಸುತ್ತಿದೆ. ಆವಾಗ ನಾನು ಉತ್ತರನೇ ಕೊಡಲಿಲ್ಲ. ನನಗೆ ಗೊತ್ತಾಯ್ತು ಇದು ವಿಜಯೇಂದ್ರ ಮಾಡಿಸಿರುವ ಕೆಲಸ ಇರಬಹುದು ಅಂತ ಅನಿಸಿದೆ ಎಂದು ವಾಗ್ದಾಳಿ ನಡೆಸಿದರು. ನೋಟಿಸ್ ಅಧಿಕೃತವಾಗಿ ನನಗೆ ಮೇಲ್ ಮೂಲಕ ಬಂದಿಲ್ಲ. ಅಥವಾ ಪೋಸ್ಟ್ ಮೂಲಕವು…

Read More