Author: kannadanewsnow05

ಬಳ್ಳಾರಿ : ಬಳ್ಳಾರಿಯ ಆಂಜನೇಯ ಸ್ವಾಮಿ ದೇಗುಳಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದು ಮಾಂಸದ ತುಂಡುಗಳನ್ನು ನೋಡಿ ಅರ್ಚಕ ಶಾಕ್ ಆಗಿದ್ದಾರೆ. ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಬಳ್ಳಾರಿ ನಗರದ ನಾಗಲಕೇರಿಯಲ್ಲಿರುವ ದೇವಸ್ಥಾನದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಮಾಂಸದ ತುಂಡುಗಳನ್ನ ನೋಡಿ ತಕ್ಷಣ ಅರ್ಚಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ದೇವಸ್ಥಾನದ ಬಳಿ ಭಕ್ತರ ದಂಡೆ ಜಮಾಯಿಸಿದೆ. ಘಟನಾ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಭಕ್ತರು ಯಾರು ಈ ಕೃತ್ಯ ಎಸಗಿದ್ದು? ಅಥವಾ ಇದರ ಹಿಂದೆ ಯಾರೂ ಕೈವಾಡ ಇದೆ ಅಥವಾ ಅಚಾತುರ್ಯವಾಗಿ ನಡೆದಿದೆಯೋ ಎನ್ನುವುದರ ಕುರಿತು ತನಿಖೆ ನಡೆಸಿ ಎಂದು ಭಕ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Read More

ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ಅನೇಕ ಅಮಾಯಕ ಜನರು ದೊಡ್ಡ ದೊಡ್ಡ ಉದ್ಯಮಿಗಳು ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ಸೈಬರ್ ಕ್ರೈಂ ಮಹತ್ವದ ಕಾರ್ಯಾಚರಣೆ ನಡೆಸಿದೆ. ಫೆಬ್ರವರಿ 6ರಂದು ನಡೆದ ದಾಳಿಯಲ್ಲಿ, 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿ, 13 ಪ್ರಮುಖ ವಂಚಕರನ್ನು ಬಂಧಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಫೆಬ್ರವರಿ 6ರಂದು ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ದಾಳಿಯ ವೇಳೆ…

Read More

ದಾವಣಗೆರೆ : ಅಧಿಕಾರ ಹಂಚಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ ನೀಡಿದ್ದು ಅಧಿಕಾರ ಹಂಚಿಕೆಯ ನಿರ್ಧಾರದ ಕುರಿತು ಹೈಕಮಾಂಡ್ ಸ್ಪಷ್ಟನೆ ನೀಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಎಂಬ ನಿಲುವು ನನ್ನದಾಗಿದೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇ ಬೇಕಾ ಎಂಬ ನಿಲುವು ಇದೆ ನಾನು ಅವರ ಹೆಸರಿನಿಂದಲೇ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಆದರೆ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟನೆ ನೀಡಬೇಕು ಅಧಿವೇಶನ ಮುಕ್ತಾಯವಾಗಲಿದೆ ಎರಡು ದಿನಗಳಲ್ಲಿ ದೆಹಲಿಗೆ ಕರೆಯಬಹುದು. ಡಿಸೆಂಬರ್ ಆಯ್ತು, ಸಂಕ್ರಾಂತಿ ಆಯ್ತು, ಈಗ ಬಜೆಟ್ ಬರುತ್ತಿದೆ. ಹೀಗೆ ನಾವೇ ಪದೇ ಪದೇ ಹೇಳಿಕೆ ನೀಡುವುದು ಸೂಕ್ತ ಅಲ್ಲ. ಸಿದ್ದರಾಮಯ್ಯರೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದರೆ ಸ್ವಾಗತಿಸುತ್ತೇವೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ ನೀಡಿದರು.

Read More

ಬೀದರ್ : ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾದ ಸ್ಫೋಟಕ್ಕೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೀದರ್ನಲ್ಲಿ ನಡೆದಿತ್ತು ಇದೀಗ ಬೀದರ್ ಜಿಲ್ಲೆ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ನಿಗೂಢ ಶುದ್ಧ ಕೇಳಿಸುತ್ತಿದೆ. ಹೌದು ಬೀದರ್ ಜಿಲ್ಲೆಯ ಡಾಕುಳಗಿ ಗ್ರಾಮದಲ್ಲಿ ಈ ಒಂದು ನಿಗೂಢ ಶಬ್ದ ಕೇಳಿಸುತ್ತಿದ್ದು, ಭೂಮಿಯಿಂದ ಬರುತ್ತಿರುವ ಶಬ್ದದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಿಗೂಢವಾದ ಶಬ್ದ ಕೇಳುತ್ತಿದ್ದು ನಿನ್ನೆ ರಾತ್ರಿ ಸುಮಾರಿಗೆ ಭೂಮಿಯಿಂದ ಈ ಒಂದು ಶಬ್ದ ಕೇಳಿ ಬಂದಿದೆ ಗ್ರಾಮಕ್ಕೆ ಇದೀಗ ತಹಶೀಲ್ದಾರ್ ಅಂಜುಂ ತಬಸ್ಸುಂ ಭೇಟಿ ನೀಡಿದ್ದಾರೆ.

Read More

ಮೈಸೂರು : ಈ ಹಿಂದೆ ಮಚ್ಚು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮೈಸೂರಿನ ಪಾರಂಪರಿಕ ಕಟ್ಟಡದ ಬಳಿ ವಿಲನ್ ಪಾತ್ರದಲ್ಲಿ ಸಿಗರೇಟ್ ಹಿಡಿದು ಫೋಟೋಶೂಟ್ ಮಾಡಿದ್ದಕ್ಕೆ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು ರಜತ್ ಕಿಶನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಲನ್ ಪಾತ್ರದಲ್ಲಿ ಕಾರ್ ನಲ್ಲಿ ಎಂಟ್ರಿಕೊಟ್ಟು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮೈಸೂರಿನ ಹಳೆ ಡಿಸಿ ಕಚೇರಿಯ ಬಳಿ ಪಾರಂಪರಿಕ ಕಟ್ಟಡದ ಬಳಿ ಫೋಟೋ ಶೂಟ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಬರವಣಿಗೆ ಇಲ್ಲದೆ ಪೋಸ್ಟ್ ಮಾಡಿದ್ದರಿಂದ ಕನ್ನಡಪರ ಹೋರಾಟಗಾರರು ಇದೀಗ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಗೆ ರಜತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Read More

ಮಂಡ್ಯ : ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಶೀತಲ ಸಮರ ಮುಂದುವರೆದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಇನ್ನು ನಿರ್ಧಾರವಾಗಿಲ್ಲ. 2028ರ ವಿಧಾನಸಭೆ ಚುನಾವಣೆ ಟಿಕೆಟ್ ಕೂಡ ಇದೀಗ ಫೈಟ್ ನಡೆಯುತ್ತಿದೆ. ಮಂಡ್ಯದಲ್ಲಿ ಬಿಜೆಪಿಗೆ ಮೂರು ಕ್ಷೇತ್ರ ಬಿಟ್ಟು ಕೊಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ ಕೆ.ಆರ್ ಪೇಟೆ ಸೇರಿದಂತೆ ಮೂರು ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಬೇಡಿಕೆ ಇಟ್ಟಿದೆ. ಟಿಕೆಟ್ ಒತ್ತಡದ ಜೊತೆಗೆ ನಿಖಿಲ್ ಗೆ ಬಿಜೆಪಿ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಕೆ ಆರ್ ಪೇಟೆಯಲ್ಲಿ ಎಚ್ ಡಿ ಮಂಜು ಅವರನ್ನು ಗೆಲ್ಲಿಸಿ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಿಖಿಲ್ ಕುಮಾರಸ್ವಾಮಿ ಈ ಒಂದು ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದು, ಅಭ್ಯರ್ಥಿ ಘೋಷಣೆ ಮಾಡಲು ಯಾವುದೇ ಅಧಿಕಾರ ಕೊಟ್ಟಿಲ್ಲ. ನಿಖಿಲ್ ಮೂರು ಬಾರಿ ಸೋತಿದ್ದಾರೆ ಅವರು ಬಾಯಿ ಮುಚ್ಚಬೇಕು. ನಾವು ಬಾಯಿ ಬೆಚ್ಚಿದರೆ ಬೇರೆ ರೀತಿ ಬ್ಲಾಸ್ಟ್ ಆಗುತ್ತದೆ. ನಿಖಿಲ್ ಮೊದಲು ತಮ್ಮ ಅಸ್ತಿತ್ವದ ಬಗ್ಗೆ ನೋಡಿಕೊಳ್ಳಲಿ ಎಂದು…

Read More

ತುಮಕೂರು : ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ವಿರೋಧಪಕ್ಷದ ನಾಯಕರು ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಇದರ ಮಧ್ಯ ತುಮಕೂರಿನಲ್ಲಿ ಭ್ರಷ್ಟಾಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ರೈತ ಮೂಲಂಗಿಯನ್ನೇ ಲಂಚವಾಗಿ ಇಡುತ್ತೇನೆ ಬನ್ನಿ ಬನ್ನಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಹೌದು ತುಮಕೂರಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ರೈತ ಬಿ ಸತ್ತು ಹೋಗಿದ್ದಾನೆ . ಮೂಲಂಗಿಯನ್ನು ಲಂಚವಾಗಿ ನೋಡುತ್ತೇನೆ ಬನ್ನಿ ಬನ್ನಿ ಎಂದು ತಾಲೂಕು ಕಚೇರಿಯ ಬಳಿ ಮೈಕ್ ಹಿಡಿದು ರೈತ ಘೋಷಣೆ ಕೂಗಿರುವ ಘಟನೆ ನಡೆದಿದೆ ಮಧುಗಿರಿ ತಾಲೂಕಿನ ಕಚೇರಿಯಲ್ಲಿ ರೈತ ಭ್ರಷ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಅಧಿಕಾರಿಗಳಿಗೆ ದುಡ್ಡು ಕೊಡೋಕೆ ನನ್ನತ್ರ ದುಡ್ಡಿಲ್ಲ ಮೂಲಂಗಿ ಮಾರಿಕೊಂಡು ಜೀವನ ಮಾಡುತ್ತಿದ್ದಾನೆ ಅದಕ್ಕೋಸ್ಕರ ಮೂಲಂಗಿಯನ್ನೇ ಲಂಚ ಕೊಡೋಕೆ ಬಂದಿದ್ದೇನೆ ನಮ್ಮ ಅಧಿಕಾರಿಗಳಾದ ಆರ್ ಐ ಜಯಪ್ರಕಾಶ್ ನಮ್ಮ ವಿಎ ಶರಣ್ ಅಂತ ಇಬ್ಬರು ಬಂದು ದಿನವೂ ಒಂದು ಕಥೆ ಕಟ್ಟಿಕೊಂಡು ದಿನ ತಳ್ಳುತ್ತಿದ್ದಾರೆ ಏನಾದರೂ ಮಾಡಿ…

Read More

ಬೆಳಗಾವಿ : ಬೆಳಗಾವಿಯ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ದಂಪತಿಗಳು ಆಕ್ಸಿಜನ್ ಸಿಲೆಂಡರ್ ಸಮೇತ ಬಂದು ಮಾಯಕ್ಕ ದೇವಿಯ ದರ್ಶನ ಪಡೆದ ಘಟನೆ ಇಂದು ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ನಾಯಕ ದೇವಸ್ಥಾನಕ್ಕೆ ಪಂಡರಾಪುರದ ದಂಪತಿಗಳು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಪತಿ ಹೆಜ್ಜೆ ಹಾಕಿದ್ದಾರೆ. ಮಹಿಳೆಯು ಅನಾರೋಗ್ಯದಿಂದ ಬಳಲುತ್ತಿದ್ದು ದೇವರು ಒಳಿತು ಮಾಡಲಿ ಎಂದು ಬೇಡಿಕೊಂಡಿದ್ದಾರೆ. ಕಳೆದ 18 ವರ್ಷಗಳಿಂದ ನಿರಂತರವಾಗಿ ದೇವರ ದರ್ಶನ ಮಾಡುತಿದ್ದೇವೆ. ಇಂದು ಸಹ ಮಾಯಕ್ಕ ದೇವಿ ದರ್ಶನ ಚೆನ್ನಾಗಿ ಆಗಿದೆ ಎಂದು ದಂಪತಿ ಹೇಳಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಣ್ಣ ಪುಟ್ಟ ವಿಚಾರವಾಗಿ ಬೈಕ್ ಸವಾರ ರೌಡಿಸಂ ಆಡಿಸಿರುವ ಘಟನೆ ವರದಿಯಾಗಿದೆ. ಕೇವಲ ಒಂದೇ ಮಾತಿನಲ್ಲಿ ಮುಗಿಯಬೇಕಿದ್ದ ವಿಚಾರಕ್ಕೆ ಕಿರಿಕ್ ತೆಗೆದು ಕಾರು ನಿಲ್ಲಿಸಿ ಬೈಕ್ ಸವಾರ ಕಾರನ್ನು ಡ್ಯಾಮೇಜ್ ಮಾಡಿದ್ದಾನೆ. ಬೆಂಗಳೂರಿನ ನೆಲಮಂಗಲದಿಂದ ಆದಿತ್ಯ ಎಂಬಾತ ಕೆಲಸಕ್ಕೆ ತೆರಳುತ್ತಿದ್ದ. ಮಾದಾವರ ಜಂಕ್ಷನ್ ಬಳಿ ಆದಿತ್ಯ ಮೇಲೆ ದರ್ಪ ತೋರಿದ್ದು, ಬೈಕ್ ಸವಾರ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಅಸಭ್ಯವಾಗಿ ಕೂಡ ವರ್ತನೆ ಮಾಡಿದ್ದಾನೆ, ಕಾರಿನ ಮಿರರ್ ಒಡೆದು ಅಶ್ಲೀಲ ವಾಗಿ ಬೈದು ನಿಂದನೆ ಮಾಡಿದ್ದಾನೆ. ಬೈಕ್ ಸವಾರ ಕಾರಿನ ಮಿರರ್ ಒಡೆಯುವುದು ಹಾಗೂ ಅಶ್ಲೀಲವಾಗಿ ಬೈಯುತ್ತಿರುವುದನ್ನು ಆದಿತ್ಯ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.

Read More

ಬೆಂಗಳೂರು : ಮೈಸೂರು ಜಿಲ್ಲೆಯ ಕೆ ಆರ್ ನಗರದ ಮಹಿಳೆ ಕಿಡ್ನಾಪ್ಣಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಹೆಚ್ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆಯ ವೇಳೆ ಎಚ್ ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿತು. ವಾದಮನೆಗೆ ಎಚ್ ಡಿ ರೇವಣ್ಣ ಪರ ವಕೀಲರು ಕಾಲಾವಕಾಶ ಕೋರಿದರು ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇದ್ದಾರೆ ಎಂಬ ಕಾರಣ ನೀಡಿ ಮನವಿ ಮಾಡಲಾಯಿತು ಎಚ್ ಡಿ ರೇವಣ್ಣ ಪರ ವಕೀಲರ ಮನವಿಗೆ ಹೈಕೋರ್ಟ್ ಇದೆ ವೇಳೆ ಅಸಮಾಧಾನ ಹೊರಹಾಕಿದ್ದು, ಶಾಸಕ ಎಚ್ ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸಿದಂತೆ ನೀಡಿದ್ದ ಮಧ್ಯಂತರ ತಡೆ ತೆರವುಗೊಳಿಸಲಾಯಿತು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತು.

Read More