Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದು, ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ನಿವಾಸದ ರಸ್ತೆಯಲ್ಲಿ ಕೂಡ ಗುಂಡಿಗಳಿವೆ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಮೋದಿ, ಟ್ರಂಪ್ ಏನು ಮಾಡ್ತಾರೆ ಅಂತ ನೋಡಲು ಅಧಿಕಾರ ನೀಡಿಲ್ಲ ಎಂದು ತಿರುಗೇಟು ನೀಡಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಸಾವಿರ ಗುಂಡಿ ಮುಚ್ಚಿದರೆ ಮರುದಿನ 1 ಸಾವಿರ ಗುಂಡಿಗಳು ಓಪನ್ ಆಗುತ್ತವೆ. ಗುಂಡಿ ವಿಚಾರದಲ್ಲಿ ಸರ್ಕಾರದ ನಡೆ ಕಳ್ಳ ಪೋಲಿಸ್ ಆಟದಂತಿದೆ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ ಶಾಶ್ವತ ಅಲ್ಲ. ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಮುಳುಗಿದೆ. ರಾಜ್ಯದಲ್ಲಿರುವ ರಸ್ತೆ ಗುಂಡಿಗಳು ಮರಣದ ಕೂಪಗಳಾಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. 5000 ಕೋಟಿ ಹಣ ಸರಿಯಾಗಿ ಡಾಂಬರಿಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು? ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ…
ಎಲ್ಲಿ ಬಿಜೆಪಿಯವರ ಗುಂಡಿಗಳನ್ನ ಓಪನ್ ಮಾಡ್ತೇವೆ ಅಂತ, ರಸ್ತೆಗುಂಡಿ ನೋಡ್ತಿದ್ದಾರೆ : ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಸ್ತೆಗುಂಡಿ ಮುಚ್ಚಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ, ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ ಹೇಳಿಕೆ ನೀಡಿದ್ದು, ಬಿಜೆಪಿ ಅವಧಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಮಾಡಿದ್ದಕ್ಕೆ ಇದೀಗ ರಸ್ತೆಯಲ್ಲಿ ಗುಂಡಿಗಳಾಗಿವೆ. 4 ವರ್ಷ ನೀವೇ ಇದ್ರಿ ಆಗ ಏನು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಲ್ವಾ ರೂಲ್ ಮಾಡಿದ್ದು, 4 ವರ್ಷ ನಮ್ಮ 19 ಶಾಸಕರ ನೆರವಿನಿಂದ ಅಕ್ರಮವಾಗಿ ಸರ್ಕಾರವನ್ನು ರಚಿಸಿದರು. ನಾಲ್ಕು ವರ್ಷ ನೀವು ಏನು ಕಡೆದು ಕಟ್ಟಿ ಹಾಕಿದ್ರಿ? 4 ವರ್ಷ ನೀವು ಏನು ಮಾಡಿದ್ರಿ? ಬೆಂಗಳೂರು ನಿಮ್ಮ ಕಂಟ್ರೋಲ್ ನಲ್ಲಿ ಇದು ತಾನೇ? ಎಂದು ಪ್ರಶ್ನಿಸಿದರು. ಬಿವೈ ವಿಜಯೇಂದ್ರ ಅವರ ತಂದೆ ಸಿಎಂ ಆಗಿದ್ರಲ್ಲ ಹಾಗೂ ನಿಮಗೆ ರಸ್ತೆ ಮೇಲಿನ ಗುಂಡಿಗಳ ಮೇಲೆ ಪ್ರೀತಿ ಇರಲಿಲ್ವಾ? ಅಶೋಕಣ್ಣ ನೀವು ಎಲ್ಲಾ ಖಾತೆಗಳನ್ನು ನಿರ್ವಹಿಸಿದ್ದೀರಿ. ಬಿಜೆಪಿ ಮನೆಯಲ್ಲಿಯೇ ಗುಂಡಿ ಬಿದ್ದಿದೆ. ಅವರ ಆ ಗುಂಡಿಗಳನ್ನು ನಾವೆಲ್ಲಿ…
ಬೆಂಗಳೂರು : ಕಳೆದ ತಿಂಗಳು ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ಗೆ ಸಂಕಷ್ಟ ಎದುರಾಗಿದೆ. ಭೈರತಿ ಬಸವರಾಜ್ ಬಂಧನದ ಅಗತ್ಯವಿದೆ ಎಂದು ಅರ್ಜಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಹೌದು ಭೈರತಿ ಬಸವರಾಜಗೆ ರಕ್ಷಣೆ ನೀಡಿದ ಆದೇಶ ತೆರವು ಕೋರಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಯ ವೇಳೆ ಭೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಈಗ ಭೈರತಿ ಬಸವರಾಜು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪ್ರಾಜಿಕ್ಯೂಷನ್ ಪರವಾಗಿ ಎಸ್ಪಿಪಿ ಬಿ.ಎನ್ ಜಗದೀಶ್ ವಾದ ಮಂಡಿಸಿದರು. ಈ ವೇಳೆ ಸಿಐಡಿ ಪೋಲೀಸರ ಅರ್ಜಿಗೆ ಬೈರತಿ ಬಸವರಾಜ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಕಳೆದ ಒಂದು ತಿಂಗಳಿನಿಂದ ವಿಚಾರಣೆಗೆ ಕರೆದಿಲ್ಲ. ಈ ಹಿಂದೆ ಪೊಲೀಸರು ಕರೆದಾಗಲೆಲ್ಲ ವಿಚಾರಣೆಗೆ ಭೈರತಿ ಬಸವರಾಜ್ ಸಹಕರಿಸಿದ್ದಾರೆ. ಈಗ ಬಂಧನದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ…
ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಕ್ರಿಕೆಟ್ ತರಬೇತುದಾರನ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ದಾಖಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ತರಬೇತುದಾರನ ವಿರುದ್ಧ FIR ದಾಖಲಾಗಿದೆ. ಕಾಮುಕ ಕೋಚ್ ನ ಮುಖ ಅನಾವರಣವಾಗಿದೆ. ಮದುವೆಯಾದ ಮಹಿಳೆಯರೇ ಕಾಮುಕ ಮ್ಯಾಥ್ಯೂನ ಟಾರ್ಗೆಟ್ ಆಗಿದ್ದಾರೆ. ಕ್ಯಾಂಪ್ಗೆ ಬರುವ ಮಕ್ಕಳ ಪೋಷಕರನ್ನೇ ಆತ ಟಾರ್ಗೆಟ್ ಮಾಡಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಬನ್ನೆರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ದೈಹಿಕ ಶಿಕ್ಷಣ ಆಗಿದ್ದಾನೆ. ಮೂಲತಹ ಕೇರಳ ಮೂಲದವನಾಗಿರುವ ಆರೋಪಿ ಮ್ಯಾಥ್ಯೂ ಹಲವರ ಜೊತೆ ನಗ್ನ ವಿಡಿಯೋ ಮಾಡಿಕೊಂಡಿದ್ದಾನೆ. ಮದುವೆಯಾಗಿ ವಿಚ್ಛೇದನ ಆಗಿದ್ದ ಸಂತ್ರಸ್ತ ಮಹಿಳೆಗೆ ಇದೀಗ ಆತ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ತನ್ನ ಮಗಳನ್ನು ಸಂತ್ರಸ್ತಮ್ಮೆ ಹೇಳಿ ಕ್ಯಾಂಪ್ಗೆ ಬಿಡಲು ಬರುತ್ತಿದ್ದಳು. ಈ ವೇಳೆ ಆಕೆಯನ್ನು ಮ್ಯಾಥ್ಯೂ ಪರಿಚಯ ಮಾಡಿಕೊಂಡು ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಮ್ಯಾಥ್ಯೂ ಕೈ ಕೈಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ…
ಶಿವಮೊಗ್ಗ : ಮದುವೆ ವಿಚಾರವಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಭದ್ರಾ ಕಾಲುವೆಗೆ ಪ್ರೇಯಸಿಯನ್ನು ತಳ್ಳಿ ಪ್ರಿಯಕರ ಹತ್ಯೆಗೈಯ್ದಿದ್ದಾನೆ. ಮೋಸದಿಂದ ಪ್ರಿಯತಮೆಯನ್ನು ಕರೆದೋಯ್ದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ. ನಿನ್ನೆ ಭದ್ರಾ ಕಾಲುವೆಯಲ್ಲಿ ಯುವತಿ ಸ್ವಾತೀ ಶವ ಪತ್ತೆಯಾಗಿದೆ. ತೆರೇನಹಳ್ಳಿಯ ಸ್ವಾತಿ ಹಾಗೂ ಸೂರ್ಯ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೆ ಯುವತಿ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ಮದುವೆಯಾಗಲು ಸೂರ್ಯ ಕಾಟ ಕೊಟ್ಟಿದ್ದಾನೇ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಸ್ವಾತಿಯನ್ನು ಕರೆದುಕೊಂಡು ಹೋಗಿದ್ದಾನೆ. ನಿನ್ನೆ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ಸುತ್ತ ಇದೀಗ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಮದುವೆ ವಿಚಾರಕ್ಕೆ ಸೂರ್ಯ ಮತ್ತು ಸ್ವಾತಿ ನಡುವೆ ಗಲಾಟೆ ಆಗಿದೆ. ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ ಮತ್ತು ಪ್ರೇಯಸಿ ಸ್ವಾತಿ ಗಲಾಟೆ ಮಾಡಿಕೊಂಡಿದ್ದಾರೆ. ಯುವತಿ ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು.…
ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಈಗಾಗಲೇ ಯುವ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ನಗರದಲ್ಲಿಂದು ಮಹಿಷ ದಸರಾ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ. ಇನ್ನು ನಿನ್ನೆ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು, 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್ಗೆ ಯುವಕರು ಕುಣಿದು ಕುಪ್ಪಳಿಸಿದ್ರು.
ಕಾಸರಗೋಡು : ಸಾಮಾನ್ಯವಾಗಿ ಊಟ ಮಾಡುವಾಗ, ಅಥವಾ ಏನೇ ತಿನ್ನುವಾಗಲು ನಿಧಾನಕ್ಕೆ ತಿನ್ಬೇಕು ಇಲ್ಲವಾದರೆ ನಮ್ಮ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದೀಗ ಅಂತದ್ದೆ ಘಟನೆಯೊಂದು ನಡೆದಿದ್ದು, ಆಮ್ಮೆಟ್ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಬದಿಯಡ್ಕ ಚುಳ್ಳಿಕ್ಕಾನ ನಿವಾಸಿ, ಪ್ರಸಕ್ತ ಬಾರಡ್ಕದಲ್ಲಿ ವಾಸವಿದ್ದ ವಿನ್ಸೆಂಟ್ ಕ್ರಾಸ್ತಾ (52) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಅವರು ರವಿವಾರ ಸಂಜೆ ಮನೆ ಸಮೀಪದ ಗೂಡಂಗಡಿಯಿಂದ ಆಮ್ಮೆಟ್ ಸೇವಿಸುತ್ತಿದ್ದಾಗ ಘಟನೆ ನಡೆದಿದೆ.ಆಮ್ಮೆಟ್ ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿದ್ದ ವಿನ್ಸೆಂಟ್ ರನ್ನು ತಕ್ಷಣ ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾತಾದರೂ ಅಷ್ಟರಲ್ಲಿ ಅವರು ಮೃತಪಾತ್ತಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು. ಬೇಳ ಕಟ್ಟತ್ತಂಗಡಿ ಎಂಬಲ್ಲಿ ವೆಲ್ಡಿಂಗ್ ಶಾಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನ್ಸೆಂಟ್ ಕ್ರಾಸ್ತಾ ಅವಿವಾಹಿತರಾಗಿದ್ದರು..ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗಾಗಿ ಏನೇ ತಿನ್ನುವಾಗಲು ನಿಧಾನಕ್ಕೆ ತಿನ್ನಬೇಕು ಇಲ್ಲವಾದರೆ ಇಂತಹ ದುರ್ಘಟನೆಗಳು…
-ನೀವು ಸರಿಯಿದ್ದು ನಿಯತ್ತಾಗಿದ್ರು ತೊಂದರೆ ಇದ್ರೆ ಮಾಡಿ. -ನಿಜವಾಗ್ಲೂ ಶತ್ರು ಬಾಧೆ ಇದ್ರೆ ಮಾತ್ರ ಇದು ನಿಮ್ಮ ಪರ ಕೆಲಸ ಮಾಡುತ್ತೆ. -ಸುಳ್ಳು ಆರೋಪ, ಹೊಟ್ಟೆ ಕಿಚಿಂದ ಮಾಡಿದ್ರೆ ನಿಮ್ಮನೆ ಹಾಳು ಮಾಡುತ್ತದೆ ಜೋಪಾನ. -ಅನಗತ್ಯವಾಗಿ ನಿಮ್ಮ ವಿರುದ್ಧ ತೊಂದರೆ ನೀಡುವಂತಹ ಶತ್ರುಗಳು ಇರಬಹುದು ಅಥವಾ ಹಿತಶತ್ರುಗಳು ಇರಬಹುದು, ಇವರನ್ನು ಮಟ್ಟ ಹಾಕಲು ಇದು. -ಈ ಮಂತ್ರವನ್ನು ಒಂದು ನಿಂಬೆಹಣ್ಣನ್ನು ಎಡಗೈಯಲ್ಲಿ ಮುಷ್ಟಿ ಮಾಡಿ ಹಿಡಿದುಕೊಂಡು 21 ಬಾರಿ ಜಪಿಸಿ ನಂತರ ಮೂರು ದಾರಿ ಸೇರುವ ಸ್ಥಳದಲ್ಲಿ ಎಡಗಾಲಿನಿಂದ ತುಳಿದು ಹಿಂತಿರುಗಿ ನೋಡದೆ ನಡೆಯಿರಿ ಖಂಡಿತ ಇವರ ಉಪಟಳ ನಿಗ್ರಹವಾಗುತ್ತದೆ. ||ಓಂ ಅಸ್ಯ ಕ್ಲೀಂ ರೀಂ ಹ್ರೀಂ ಹ್ರೋಂ ಸರ್ವ ಶತ್ರು, ಗ್ರಹ ಪರಾಭವಾ ಪಟ್ ಸ್ವಾಹಾ|| ಚೌಡೇಶ್ವರಿ ಶಕ್ತಿ ಪೀಠ ಕ್ಷೇತ್ರ ಈ ಮಂತ್ರ ಇಂದ ನಿಮಗೆ ಅನುಕೂಲ ಆದಾಗ ಯಾರಾದ್ರೂ ಕನಿಷ್ಠ 4 ಜನ ಬಡವರಿಗೆ/ನಿರ್ಗತಿಕರಿಗೆ, ಕನಿಷ್ಠ ಒಂದು ಹೊತ್ತು ಊಟ ದಾನ ಮಾಡಿ ಶಕ್ತಿ ಇದ್ರೆ ಹೆಚ್ಚು…
ಹಾಸನ (ಹೊಯ್ಸಳ ಪಥ): ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕಂದಾಯ ಸಚಿವರೂ ಆದ ಕೃಷ್ಣ ಬೈರೇಗೌಡ ಅವರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಮತ್ತು ಹಿಮ್ಸ್ (HIMS) ನಿರ್ದೇಶಕರೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ, ಅವರು ಆಧುನಿಕ ಜೀವನಶೈಲಿಯಿಂದ ಬರುವ ರೋಗಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೃದಯಾಘಾತ ಮತ್ತು ಮರಣ ಪ್ರಮಾಣದ ಮಾಹಿತಿ: ಸಭೆಯಲ್ಲಿ ಸಚಿವರು ಹೃದಯಾಘಾತ (ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ – MI) ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ (mortality rate) ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ವರ್ಷ ಒಟ್ಟು ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ 6.6% ಇದ್ದರೆ, ಈ ವರ್ಷ ಅದು 5.6% ಕ್ಕೆ ಇಳಿದಿದೆ. ವಿಶೇಷವಾಗಿ, ಹೃದಯಾಘಾತದಿಂದಾಗಿ ದಾಖಲಾದ 315 ಪ್ರಕರಣಗಳಲ್ಲಿ ಮರಣ ಪ್ರಮಾಣವು 6.03% ಇದೆ ಎಂದು ಸಚಿವರು ತಿಳಿದುಕೊಂಡರು. ಜೀವನಶೈಲಿ ಕಾಯಿಲೆಗಳ ಮೇಲೆ ಗಮನ…
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾಕೆ ನಿನ್ನೆ ಸಾಹಿತಿ ಬಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದೀಗ ಚಾಮುಂಡಿ ಬೆಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಚಕರೊಬ್ಬರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಹೌದು ಮೈಸೂರಿನ ಚಾಮುಂಡಿ ಬೆಟ್ಟದ ಅರ್ಚಕ ಇದೀಗ ನಿಧನರಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಿದ್ದ ರಾಜು ಎನ್ನುವ ಅರ್ಚಕರು ದೇವಸ್ಥಾನದಲ್ಲಿ ಶಿವಾರ್ಚಕರಾಗಿದ್ದರು. ಹೃದಯಾಘಾತದಿಂದ ಅರ್ಚಕ ರಾಜು ಸಾವನಪ್ಪಿದ್ದಾರೆ. ಸದ್ಯ ಗರ್ಭಗುಡಿಗೆ ತೆರೆ ಎಳೆದು ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇಂದು ರಾತ್ರಿಯವರೆಗೂ ಮೂಲ ವಿಗ್ರಹದ ದರ್ಶನಕ್ಕೆ ನಿಷೇಧಿಸಲಾಗಿದೆ.