Author: kannadanewsnow05

ಬೆಂಗಳೂರು : ಉಷ್ಣಾಂಶ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಸುಡುಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ 11ರಿಂದ 13ರವರೆಗೆ ಶಾಖದ ಅಲೆ (ಹೀಟ್‌ವೇವ್) ಅಪ್ಪಳಿಸಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಹಗಲಿನ ವೇಳೆ ಓಡಾಡಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರೆಯಲಾಗುತ್ತದೆ. ಗರಿಷ್ಟ ತಾಪಮಾನದಲ್ಲಿಡಿ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಆದರೆ, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ದಾಖಲಾಗುವ 36 ಡಿ.ಸೆ. ಉಷ್ಣಾಂಶ ಕಲಬುರಗಿಯಲ್ಲಿ ಕಂಡುಬರುವ 42 ಡಿ.ಸೆ. ತಾಪಮಾನಕ್ಕೆ ಸಮವಾಗಿರುತ್ತದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಝಳ ಹೆಚ್ಚಿರಲಿದೆ. ಆದ್ದರಿಂದ, ಬಿಸಿ ಮತ್ತು ತೇವಾಂಶದಿಂದ ಕೂಡಿದ ಉರಿಬಿಸಿಲಿನ ಜತೆಗೆ ಸೆಖೆ ಇರಲಿದೆ. ರಾಜ್ಯದ ಶೇ. 90 ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. 6 ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ. ಮುಂದಿನ 2 ದಿನ ಈ ಜಿಲ್ಲೆಗಳಲ್ಲಿ ಮಳೆ…

Read More

ಬೆಂಗಳೂರು : ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹಿಸುವ ಪಿಗ್ಮಿ ಏಜೆಂಟ್‌ಗಳು ಬ್ಯಾಂಕಿನ ನೌಕರರಾಗಿದ್ದು, ಅವರಿಗೆ ನೀಡಲಾಗುವ ಸಂಭಾವನೆ ಅಥವಾ ಕಮೀಷನ್ ಮೇಲೆ ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪಿಗ್ಗಿ ಏಜೆಂಟ್‌ಗಳಿಗೆ ಪಾವತಿಸಿದ ಕಮಿಷನ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸುವಂತೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಬ್ಯಾಂಕುಗಳು ಈ ಏಜೆಂಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ ಮತ್ತು ಇವರಿಗೆ ನೀಡುವ ಕಮಿಷನ್ ಸಂಭಾವನೆಯು ವೇತನದ ಸ್ವರೂಪದ್ದಾಗಿರುತ್ತದೆ ಜಿಎಸ್‌ಟಿ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹಾಗಾಗಿ ಅವರ ಮೇಲೆ GST ವಿಧಿಸುವಂತಿಲ್ಲ. ಪಿಗ್ನಿ ಏಜೆಂಟ್‌ಗಳು ಸ್ವತಂತ್ರ ಗುತ್ತಿಗೆದಾರ ರಲ್ಲ, ಬದಲಾಗಿ ಅವರು ಬ್ಯಾಂಕಿನ ನಿಯಂತ್ರಣದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ.

Read More

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ 1966ರಡಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ಶುಕ್ರವಾರ ಪ್ರಕಟಿಸಲಾದ ನೂತನ ಕರಡು ನಿಯಮಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೊದಲ ನಿಯಮಗಳು (ಎರಡನೇ ತಿದ್ದುಪಡಿ)-2026 ಎಂದು ಕರೆಯಲಾಗಿದ್ದು, ಇವು 2025-26ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿವೆ. ಮುಖ್ಯ ಬದಲಾವಣೆಯೆಂದರೆ, ಇನ್ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ವಿಷಯಗಳ ಅಂಕಗಳನ್ನು ಕೇವಲ ಗ್ರೇಡ್ (ಶ್ರೇಣಿ) ರೂಪದಲ್ಲಿ ನೀಡಲಾಗುತ್ತದೆ. ಈ ವಿಷಯಗಳನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳೆಂದು ಪರಿಗಣಿಸಲಾಗುತ್ತದೆಯೇ ಹೊರತು, ವಿದ್ಯಾರ್ಥಿಯ ಉತ್ತೀರ್ಣ ಅಥವಾ ಅನುತ್ತೀರ್ಣತೆ ನಿರ್ಧರಿಸಲು ಪರಿಗಣಿಸುವುದಿಲ್ಲ. ಗ್ರೇಡಿಂಗ್ ವ್ಯವಸ್ಥೆ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ತೃತೀಯ ಭಾಷೆ ಅಥವಾ ಎನ್‌ಎಸ್ ಕ್ಯೂಎಫ್‌ ವಿಷಯಗಳಲ್ಲಿ ಶೇ.80ರಿಂದ 100 ಅಂಕ ಗಳಿಸಿದರೆ ‘ಎ’ ಗ್ರೇಡ್, ಶೇ.50 ರಿಂದ 79 ಅಂಕಗಳಿಗೆ ‘ಬಿ’ ಗ್ರೇಡ್ ಮತ್ತು ಶೇ.49 ರವರೆಗೆ ಅಂಕ ಗಳಿಸಿದರೆ…

Read More

ಹಾವೇರಿ : ತುಂಬು ಗರ್ಭಿಣಿಯೊಬ್ಬರಿಗೆ ಅವಧಿಪೂರ್ವ (22 ವಾರ) ಅವಳಿ ಮಕ್ಕಳು ಜನಿಸಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ದಲ್ಲಿ ನಡೆದಿದ್ದು, ಆಕೆಯ ಮೇಲೆ ಸಾಲ ವಸೂಲಿಗೆ ಬಂದಿದ್ದವರು ಹಲ್ಲೆ ನಡೆಸಿದ್ದರಿಂದ ಅವಾಂತರ ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಲ ವಸೂಲಿಗೆ ಬಂದವರು ಗರ್ಭಿಣಿ ಹೊಟ್ಟೆಗೆ ಒದ್ದು, ಕೈನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗರ್ಭಿಣಿ ಪವಿತ್ರಾ ಲಮಾಣಿ ಅವರ ಮೇಲೆ ಮಾ. 28ರಂದು ಹಲ್ಲೆ ನಡೆದಿದೆ ಎನ್ನಲಾಗಿದ್ದು, ಏ.7ರಂದು ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳು ಅವಧಿಪೂರ್ವ ಜನಿಸಿ ಸಂಜೆ ಮೃತಪಟ್ಟಿವೆ. ಪವಿತ್ರಾ ಅವರ ತಾಯಿ ಹಾಲವ್ವ ಲಮಾಣಿ ನೀಡಿದ ದೂರಿನ ಮೇರೆಗೆ ಸವಣೂರು ಪೊಲೀಸರು ಆರೋಪಿತರಾದ ಸುರೇಶ ಹಾಲಪ್ಪ ಲಮಾಣಿ, ಪರಶುರಾಮ ಹಾಲಪ್ಪ ಲಮಾಣಿ, ಮಹೇಶ ಲಮಾಣಿ ಹಾಗೂ ಸಕ್ಕುಬಾಯಿ ಲಮಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಲವಸೂಲಿಗೆ ಹಲ್ಲೆ: ಮಾ.28ರಂದು ರಾತ್ರಿ ಪವಿತ್ರಾ ಅವರ ಸೀಮಂತದ ಸಂಬಂಧ ಮಾತಾಡುತ್ತ ಮನೆ ಮುಂದೆ ಕುಳಿತಾಗ…

Read More

ನವದೆಹಲಿ: ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವಾಗ ಹಾಲಿ ನೌಕರರು ಮತ್ತು ನಿವೃತ್ತ ನೌಕರರ (Pensioners) ನಡುವೆ ಸರ್ಕಾರ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 10, 2026) ಐತಿಹಾಸಿಕ ತೀರ್ಪು ನೀಡಿದೆ. “ಬೆಲೆ ಏರಿಕೆಯ ಹೊಡೆತವು ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಸಮಾನವಾಗಿಯೇ ಇರುತ್ತದೆ” ಎಂದು ನ್ಯಾಯಾಲಯ ಈ ವೇಳೆ ಅಭಿಪ್ರಾಯಪಟ್ಟಿದೆ. ಸಂವಿಧಾನದ 14ನೇ ವಿಧಿಯಡಿ (ಸಮಾನತೆಯ ಹಕ್ಕು) ಎಲ್ಲರಿಗೂ ಸಮಾನ ರಕ್ಷಣೆ ಇರಬೇಕು. ನೌಕರರಿಗೆ ಹೆಚ್ಚಿನ ದರದಲ್ಲಿ ಡಿಎ ನೀಡಿ, ಪೆನ್ಷನರ್‌ಗಳಿಗೆ ಕಡಿಮೆ ದರದಲ್ಲಿ ತುಟ್ಟಿ ಪರಿಹಾರ ನೀಡುವುದು ಕಾನೂನುಬಾಹಿರ ಮತ್ತು ಸ್ವೇಚ್ಛಾಚಾರದ ನಡವಳಿಕೆ ಎಂದು ಕೋರ್ಟ್ ಹೇಳಿದೆ. ನೌಕರರಿಗೆ 14% ಮತ್ತು ಪೆನ್ಷನರ್‌ಗಳಿಗೆ ಕೇವಲ 11% ಡಿಎ ಘೋಷಿಸಿದ್ದ ಕೇರಳ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ (KSRTC) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠ ವಜಾಗೊಳಿಸಿದೆ. “ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ…

Read More

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲೆ ಏಪ್ರಿಲ್ 13 ರಿಂದ ಏಪ್ರಿಲ್ 17 ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧಕ್ಕೆ ಕಾರಣವೇನು? ಪೀಣ್ಯ ಫ್ಲೈಓವರ್‌ನಲ್ಲಿ ಅಳವಡಿಸಲಾದ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ವೇತುವೆಯ ಸಮಗ್ರತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಅಂತಿಮ ‘ಲೋಡ್ ಟೆಸ್ಟಿಂಗ್’ (Load Testing) ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸಂಚಾರ ನಿರ್ಬಂಧಕ್ಕೆ ಕೋರಿಕೆ ಸಲ್ಲಿಸಿದೆ. ನಿರ್ಬಂಧದ ಸಮಯ: ಪ್ರಾರಂಭ: ದಿನಾಂಕ 13-04-2026, ಬೆಳಿಗ್ಗೆ 05:00 ಗಂಟೆಗೆ. ಅಂತ್ಯ: ದಿನಾಂಕ 17-04-2026, ಬೆಳಿಗ್ಗೆ 11:00 ಗಂಟೆಗೆ. ಯಾವ ಮಾರ್ಗದಲ್ಲಿ ಸಂಚಾರ ಬಂದ್? ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್‌ನಿಂದ (Upper ramp) ಎಸ್.ಆರ್.ಎಸ್ ಡೌನ್ ರಾಂಪ್‌ವರೆಗೆ (Down ramp) ಫ್ಲೈಓವರ್‌ನ ಎರಡು ಬದಿಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳು: 1. ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವವರು: ಕೆನ್ನಮೆಟಲ್ ವಿಡಿಯಾ…

Read More

ಕೋಲಾರ: ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಅರಣ್ಯ ಭೂಮಿಯನ್ನು ತಕ್ಷಣವೇ ಇಲಾಖೆಗೆ ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣದ ಹಿನ್ನೆಲೆ ಏನು? ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಸುಮಾರು 60.23 ಎಕರೆ ಅರಣ್ಯ ಭೂಮಿಯನ್ನು ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ಅರಣ್ಯ ಕಾಯ್ದೆ ಸೆಕ್ಷನ್ 64(ಎ) ಅನ್ವಯ ಒತ್ತುವರಿ ತೆರವುಗೊಳಿಸಲು ಈ ಹಿಂದೆ ನೋಟಿಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ರಮೇಶ್ ಕುಮಾರ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಸಮೀಕ್ಷೆ ವರದಿಯೇ ಮುಳುವಾಯ್ತು ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಜನವರಿ 15ರಂದು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷಾ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯ, ರಮೇಶ್ ಕುಮಾರ್ ಅವರು ಸಲ್ಲಿಸಿದ ಮೇಲ್ಮನವಿಯಲ್ಲಿ ಯಾವುದೇ ಅರ್ಹತೆ…

Read More

ಚಿಕ್ಕಮಗಳೂರು : ಚಿಕ್ಕಮಂಗಳೂರಿನ ಮಾಣಿಕ್ಯಧಾರ ಫಾಲ್ಸ್ ನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದ ಇಂದು 2 ಸಾವಿರ ಅಡಿ ಕೆಳಗೆ ಶವವಾಗಿ ಪತ್ತೆ ಆಗಿದ್ದಾಳೆ. ಇದೀಗ ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಚಾರವಾಗಿ ತಂದೆ ಬೈದ್ಯಕ್ಕೆ ಶ್ರೀನಂದ ಆತ್ಮಹತ್ಯೆ ಮಾಡಿಕೊಂಡಳ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಹೌದು ಇದೀಗ ಈ ಒಂದು ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದೂ, ತಂದೆ ಬೈದಿದ್ದಕ್ಕೆ ಶ್ರೀ ನಂದ ಆತ್ಮಹತ್ಯೆ ಮಾಡಿಕೊಂಡಳ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಶ್ರೀನಂದಾಗೆ ಆಕೆಯ ತಂದೆ ಬೈದಿದ್ದರು. ಮೊಬೈಲ್ ಕೊಡುವಂತೆ ಮಗಳಿಗೆ ಸ್ವಲ್ಪ ಗದರಿದ್ದರು. ಮಾಣಿಕ್ಯಧಾರ ಬಳಿ ತಂದೆ ಶ್ರೀ ನಂದಾಗೆ ವಾರ್ನಿಂಗ್ ಮಾಡಿದ್ದರು. ಆಗ ಫಾಲ್ಸ್ ಗೆ ತೆರಳದ ಶ್ರೀನಂದ ವಾಪಸ್ ಬಂದಿದಳು. ಹಾಗಾಗಿ ಮನನೊಂದು ಶ್ರೀ ನಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ಮುಂದೆ ತಂದೆ…

Read More

ನವದೆಹಲಿ : ಕುಂಭಮೇಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಮೊನಾಲಿಸಾ ಇತ್ತೀಚಿಗೆ ವರ್ಮಾನ್ ಖಾನ್ ಅವರ ಜೊತೆಗೆ ಮದುವೆಯಾಗಿದ್ದರು ಆದರೆ ಇದೀಗ ಮೊನಾಲಿಸಾ ಗೆ ಈ ಒಂದು ಮದುವೆ ಸಂಕಷ್ಟ ತಂದಿದೆ. ಹೌದು ಇದಕ್ಕೆ ಮೊನಾಲಿಸಾ ವಯಸ್ಸು ಇನ್ನು ಕೇವಲ 16 ವರ್ಷ ಎಂದು ಹೇಳಲಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ತನಿಖೆಯಲ್ಲಿ, ಮದುವೆಯ ವೇಳೆ ಮೊನಾಲಿಸಾ ಅಪ್ರಾಪ್ತ ಬಾಲಕಿ ಆಗಿದ್ದಳು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಇದರಿಂದಾಗಿ ಗಂಡ ಫರ್ಮಾನ್ ಖಾನ್ ಕಾನೂನಿನ ಸಂಕಷ್ಟ ಎದುರಿಸಬೇಕಾಗಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದಕ್ಕಾಗಿ ಫರ್ಮಾನ್ ಖಾನ್ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ಮಾರ್ಚ್ 11ರಂದು ಕೇರಳದ ತಿರುವನಂತಪುರದ ಅರುಮನೂರು ನೈನಾರ್ ದೇವಾಲಯದಲ್ಲಿ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಜೊತೆ ಮೊನಾಲಿಸಾ ವಿವಾಹ ನಡೆದಿತ್ತು. ಈ ಮದುವೆಯ ನೋಂದಣಿಗಾಗಿ ಸಲ್ಲಿಸಲಾಗಿದ್ದ ಆಧಾರ್ ಕಾರ್ಡ್‌ನಲ್ಲಿ ಆಕೆಗೆ 18 ವರ್ಷ ಎಂದು ನಮೂದಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ…

Read More

ಬೆಂಗಳೂರು : ಝಾಂಬಿ ಡ್ರಗ್‌ ಸೇವನೆಗೆ ಸಂಬಂಧಿಸಿದಂತೆ ಬೆಂಗಳೂರು ವ್ಯಕ್ತಿಯ ವಿಡಿಯೋವನ್ನು ವೈರಲ್‌ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಯುವಕನನ್ನು ಪರೀಕ್ಷೆ ಮಾಡಿದ್ದೇವೆ. ಆತ ಯಾವುದೇ ಝಾಂಬಿ ಡ್ರಗ್‌ ಸೇವಿಸಿಲ್ಲ. ಈ ವಿಡಿಯೋವನ್ನು ಶೇರ್‌ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಬಾಗಲೂರು ಪೊಲೀಸರು ವಿಡಿಯೋ ಅಪ್ಲೋಡ್ ಮಾಡಿದ್ದ ವ್ಯಕ್ತಿ ಬಂಧಿಸಿದ್ದು ಈಗ ಆತ ಕ್ಷಮೆ ಕೇಳಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನ ಯಾರೆಲ್ಲಾ ಶೇರ್ ಮಾಡಿದ್ದಾರೆ ಅವರಿಗೆ ನೋಟಿಸ್ ನೀಡುತ್ತೇವೆ. ಆಧಾರರಹಿತ ಮಾಹಿತಿ ಶೇರ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ. ಮೆಡಿಕಲ್ ರಿಪೋರ್ಟ್ ಆಧಾರದ ಮೇಲೆ ಕಾಮೆಂಟ್ ಮಾಡಬೇಕು. ಒಬ್ಬರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಆಗಬಾರದು. ಊಹೆ ಮಾಡಿಕೊಂಡು ಈ ರೀತಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ವಿದೇಶದಲ್ಲಿ ಈ ರೀತಿ ಡ್ರಗ್ ಸೇವನೆ ಇದೆ ಎಂದು…

Read More