Subscribe to Updates
Get the latest creative news from FooBar about art, design and business.
Author: kannadanewsnow05
ಓಂ ಅಂಜನೇಯಾಯ ವಿದ್ಯಮಹೆ – ಅಂಜನಾದೇವಿಯ ಪುತ್ರನಾದ ಹನುಮಂತನನ್ನು ನಾವು ಧ್ಯಾನಿಸುತ್ತೇವೆ. ವಾಯುಪುತ್ರಾಯ ಧೀಮಹಿ – ವಾಯುದೇವನ ಮಗನಾದ ಹನುಮಂತನಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತೇವೆ. ತನ್ನೋ ಹನುಮಾನ್ ಪ್ರಚೋದಯಾತ್ – ಆ ಮಹಾ ವೀರ ಹನುಮಂತ ನಮ್ಮ ಬುದ್ಧಿಯನ್ನು, ಶಕ್ತಿ, ಧೈರ್ಯವನ್ನು ಪ್ರೇರೇಪಿಸಲಿ. ಉಪಯೋಗ ಮತ್ತು ಪ್ರಯೋಜನಗಳು: 1. ಭಯ ನಿವಾರಣೆ – ಭೂತ, ಪ್ರೇತ, ದೆವ್ವ ಅಥವಾ ಅಶುಭ ಶಕ್ತಿಗಳಿಂದ ರಕ್ಷಣೆ ಪಡೆಯಲು ಈ ಮಂತ್ರ ಅತ್ಯಂತ ಪರಿಣಾಮಕಾರಿ. 2. ಶಕ್ತಿ ಮತ್ತು ಧೈರ್ಯ ವೃದ್ಧಿ – ಹನುಮಂತ ಶಕ್ತಿಯ ಸಂಕೇತ. ಈ ಮಂತ್ರ ಜಪ ಮಾಡಿದರೆ ದೈಹಿಕ ಮತ್ತು ಮಾನಸಿಕ ಶಕ್ತಿ ಎರಡೂ ಹೆಚ್ಚಾಗುತ್ತವೆ. 3. ಮನುಷ್ಯನ ಬುದ್ಧಿ, ಸ್ಮರಣೆ ಮತ್ತು ಏಕಾಗ್ರತೆ – ವಿದ್ಯಾರ್ಥಿಗಳು ಮತ್ತು ಪರೀಕ್ಷೆಗೆ ತಯಾರಿ ಮಾಡುವವರು ಈ ಮಂತ್ರವನ್ನು ಪ್ರತಿ ದಿನ 11 ಅಥವಾ 21 ಸಲ ಜಪಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ. 4. ಆತ್ಮವಿಶ್ವಾಸ ಮತ್ತು ಧೈರ್ಯ – ಜೀವನದ ಸಂಕಷ್ಟದಲ್ಲಿ ಆತ್ಮವಿಶ್ವಾಸ…
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ 31ರ ಒಳಗೆ ಧರ್ಮಸ್ಥಳ ಪ್ರಕರಣ ಸಂಪೂರ್ಣಗೊಳ್ಳುತ್ತದೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಜಿ ಪರಮೇಶ್ವರ್ ಮಹತ್ವದ ಸುಳಿವು ನೀಡಿದ್ದು, ಅಕ್ಟೋಬರ್ 31ರ ಒಳಗಾಗಿ ಸೊಸೈಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಧರ್ಮಸ್ಥಳ ವಿರುದ್ಧ ರೂಪಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ ನಲ್ಲಿ ಎಸ್ಐಟಿ ವರದಿ ನೀಡುವುದಾಗಿ ಹೇಳಿದೆ ಅಕ್ಟೋಬರ್ 31ರ ಒಳಗೆ ತನಿಖಾ ವರದಿ ಕೊಡಬಹುದು ಒಂದೆರಡು ದಿನ ಹಿಂದೆ ಮುಂದೆ ಆಗಬಹುದು ಅಷ್ಟೇ ಎಲ್ಲವನ್ನು ಸೇರಿಸಿ ಕೊಡಲು ಹೇಳಿದ್ದೇವೆ ಯಾವ ರೀತಿ ವರದಿ ಕೊಡುತ್ತಾರೆ ಅನ್ನುವುದು ನೋಡಬೇಕು ಅಂತ ಹೇಳಿದ್ದಾರೆ ಎಂದು ಜಿ ಪರಮೇಶ್ವರ್ ತಿಳಿಸಿದರು
ಬೆಂಗಳೂರು : ಕೆ.ಎಚ್ ಮುನಿಯಪ್ಪ ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ಮುನಿಯಪ್ಪ ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದು, ಆ ಮೂಲಕ ಗೃಹ ಸಚಿವ ಜಿ ಪರಮೇಶ್ವರ್ ಅವರು ರಾಜ್ಯದಲ್ಲಿ ಸಿಎಂ ಬದಲಾವಣೆ ನಡುವೆ ದಲಿತ ಸಿಎಂ ದಾಳ ಉರುಳಿ ಸಿದ್ಧ ಎನ್ನುವ ಕುತೂಹಲ ಹೆಚ್ಚಾಗಿದೆ. ಬೆಂಗಳೂರಲ್ಲಿ ಮಾತನಾಡಿದ ಅವರು, ತುಳಿತಕ್ಕೆ ಒಳಗಾಗಿರುವ ವರ್ಗಕ್ಕೆ ಆಡಳಿತ ಬೇಕಿದೆ. ಆ ವರ್ಗಕ್ಕೆ ಆಡಳಿತ ಸಿಗುತ್ತೆ ಎಂದರೆ ಸಂತೋಷ. ಆದರೆ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುನಿಯಪ್ಪ ಅವರು ಎರಡು ಬಾರಿ ಎಂಪಿ ಆಗಿದ್ದಾರೆ ಎರಡು ಬಾರಿ ಎಂಪಿಯಾಗಿರುವುದು ಸಾಮಾನ್ಯವಲ್ಲ. ಅವರು ಹಿರಿಯರಾಗಿದ್ದಾರೆ ಅವರು ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರು ಸಮರ್ಥರಿದ್ದು ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಹಾಗಾಗಿ ಅವರು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ. ನಾವೆಲ್ಲ ಒಂದು ವರ್ಗಕ್ಕೆ…
ಹಾಸನ : ಮೂರು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದರ ಹಿನ್ನೆಲೆಯಲ್ಲಿ ಟೈಲರ್ ಶಾಪ್ ಮಹಿಳೆಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಹಾಸನದಲ್ಲಿ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿಗೆ ರಸ್ತೆಯಲ್ಲಿಯೇ ಮಹಿಳೆಯರು ಹಲ್ಲೆ ಮಾಡಿದ್ದಾರೆ. ಮಹಿಳೆಯರು ಹೇಮಾವತಿಯನ್ನು ಎಳೆದಾಡಿ ಥಳಿಸಿದ್ದಾರೆ. ಹೇಮಾವತಿ ವಿರುದ್ಧ ಸುಮಾರು 3 ಕೋಟಿಗು ಅಧಿಕ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಚಿನ್ನಾಭರಣವನ್ನು ಅಡವಿಟ್ಟು ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಆಕೆಗೆ ಕೊಟ್ಟಿದ್ದಾರೆ. ಕೊಡಚಾದ್ರಿ ಚಿಟ್ಸ್ ನಲ್ಲಿ ಒಂದು ಕೋಟಿ ರೂಪಾಯಿ ಚೀಟಿ ಹಾಕಿದ್ದೇನೆ ಎಂದು ಎಲ್ಲರಿಗೂ ತೋರಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ಮಹಿಳಾ ಗ್ರಾಹಕರನ್ನೆ ಟಾರ್ಗೆಟ್ ಮಾಡಿ ವಂಚನೆ ಆರೋಪ ಕೇಳಿಬಂದಿಸದೆ. ಅಲ್ಲದೆ ಮಗಳನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸುವುದಕ್ಕೆ ಸಾಲ ಮಾಡಿದ್ದಾರೆ ಒಂದು ಕೋಟಿ ಮನೆ ಖರೀದಿಸಿದ್ದೇನೆ ಎಂದು ಸಾಲ ಪಡೆದಿದ್ದ ಹೇಮಾವತಿ ಜ್ಯೋತಿ ಡ್ರೆಸ್ ಮೇಕರ್ಸ್ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದಳು. ಹಾಸನದ ಅರಳಿಪೇಟೆ…
ಬೆಂಗಳೂರು : ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದು, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಲೋಕಾಯುಕ್ತ ಉಪಲೋಕಾಯುಕ್ತ ಹೆಸರಲ್ಲಿ ವಂಚಕರು ಗಾಳ ಹಾಕಿದ್ದಾರೆ. ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಹೆಸರು ನಮೂದಿಸಿ ಕಿಡಿಗೇಡಿಗಳು ಕರೆ ಮಾಡಿದ್ದಾರೆ. ಹೌದು ಬಿಬಿಎಂಪಿ AEE ಗೆ ಕರೆ ಮಾಡಿದ್ದಾರೆ ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಬಿ ಎಸ್ ಪಾಟೀಲ್ ಅಂತ ಹೆಸರು ಬಂದಿದೆ. ಉಪಲೋಕಾಯುಕ್ತ ಫನೀಂದ್ರ ಅವರ ಹೆಸರು ಕೂಡ ಬಂದಿದೆ. ಈ ವಿಚಾರವಾಗಿ ದೂರು ಸಹ ದಾಖಲಾಗಿದ್ದು, ಎರಡು ಬಾರಿ ಕರೆ ಮಾಡಿದರು ಬಿಬಿಎಂಪಿ AEE ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಲುಕಾಯುಕ್ತ ಕಚೇರಿಗೆ ತೆರಳಿದ್ದಾರೆ. ಸುಳ್ಳು ಕರೆ ಬಂದಿದ್ದರ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಲೋಕಾಯುಕ್ತ ಇನ್ಸ್ಪೆಕ್ಟರ್ ರಿಂದ ದೂರು ದಾಖಲಾಗಿದ್ದು, ದೂರಿನ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಂಧ್ರಪ್ರದೇಶದಿಂದ ಕರೆ ಬಂದಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಯಾರು ಕರೆ ಮಾಡಿದ್ದಾರೆ ಎನ್ನುವುದರ ಕುರಿತು…
ಬೀದರ್ : ಸಾವು ಅನ್ನೋದು ಯಾವ ಸಮಯದಲ್ಲಿ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಆಗಲ್ಲ ಆದರೆ ಬೀದರ್ನಲ್ಲಿ ಮನಕಲಕುವ ಒಂದು ಘಟನೆ ನಡೆದಿದ್ದು ಪತ್ನಿ ಸಾವನಪ್ಪಿದ 3 ಗಂಟೆಯ ಬಳಿಕ ಪತಿ ಸಹ ಸಾವನಪ್ಪಿದ್ದು ಇಬ್ಬರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಡೆದಿದೆ. ಹೌದು ಗ್ರಾಮದ ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ಸಾವಿನಲ್ಲೂ ಒಂದಾದ ದಂಪತಿ ಎಂದು ತಿಳಿದುಬಂದಿದೆ. ಆರೇಳು ದಶಕ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿ ಒಂದೇ ದಿನ ಸಾವಿಗೀಡಾದ ಘಟನೆಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರಿದ್ದಾರೆ. ಸ್ವಗ್ರಾಮದ ಹೊಲದಲಿ ದಂಪತಿಗಳಿಬ್ಬರನ್ನು ಅಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಂಪತಿಗಳಿಬ್ಬರು ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊದಲು ಲಕ್ಷ್ಮೀಬಾಯಿ ಹೋಡಗೆ ಅವರು ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಸಾವಿನ ಸುದ್ದಿ ವಿಷಯ ತಿಳಿದು ಮೂರು ಗಂಟೆ ನಂತರ…
SHOCKING : ಹಾಸನದಲ್ಲಿ ಭೀಕರ ಮರ್ಡರ್ : ಮಿಕ್ಸ್ಚರ್ ಕೊಡದಿದ್ದಕ್ಕೆ ಹೆಂಡತಿ, ಮಕ್ಕಳೆದುರೆ ಚಾಕು ಇರಿದು ಬರ್ಬರ ಹತ್ಯೆ!
ಹಾಸನ : ಹಾಸನದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಎಣ್ಣೆ ಹೊಡೆಯಲು ಮಿಕ್ಸ್ಚರ್ ಕೊಡೋದಕ್ಕೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾರ್ ಕ್ಯಾಶಿಯರಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಹೆಂಡತಿ ಮಕ್ಕಳ ಎದುರಿನಲ್ಲಿ ಇರಿದು ಕೊಲ್ಲಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಅಶೋಕ್ ವೈನ್ಸ್ ಬಾರ್ ಕ್ಯಾಷಿಯರ್ ಕೊಲೆಯಾದ ವ್ಯಕ್ತಿ. ಹಾಸನ ಮೂಲದ ಕುಮಾರ್ ಎಂದು ತಿಳಿದುಬಂದಿದೆ ಸುಭಾಷ್ ಕೊಲೆಗೈದು ಪರಾರಿಯಾಗಿದ್ದು, ಕುಮಾರ್ ಬಾರ್ ಬಾಗಿಲು ಮುಚ್ಚುವ ವೇಳೆ ಸುಭಾಷ್ ಕುಮಾರ್ ಗೆ ಚಾಕು ಇರಿದು ಹೆಂಡತಿ ಮಕ್ಕಳ ಮುಂದೆ ಕೊಲೆ ಮಾಡಿದ್ದಾನೆ ಆರೋಪಿ ಸುಭಾಷ್ ಗೋಸ್ಕರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..
ವಿಜಯಪುರ : ಆರ್ ಎಸ್ ಎಸ್ ಪಾಠ ಸಂಚಲನಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ಅವರು ಏನು ಮಾಡುತ್ತಾರೆ ಮಾಡಲಿ ಅವರಿಗೆ ಅಧಿಕಾರ ಇರುವುದು ಏನು ಮಾಡುತ್ತಾರೆ ಮಾಡಲಿ ಇನ್ನೂ ಎರಡು ವರ್ಷ ಎಷ್ಟು ಹಾರಾಡುತ್ತಾರೆ ಹಾರಾಡಲಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಬಿವೈ ವಿಜಯೇಂದ್ರ ಏನು ಮುಖ್ಯಮಂತ್ರಿ ಆಗಿ ಬರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಯತಿಂದ್ರ ಹೇಳಿದ್ದಾರೆ ಅಂದರೆ ಸಿಎಂ ಸಿದ್ದರಾಮಯ್ಯ ಹೇಳಿದಂತೆ, ಬೆಂಗಳೂರಿನಲ್ಲಿ ಕುಳಿತು ಕಲೆಕ್ಷನ್ ಯಾರು ಮಾಡುತ್ತಿದ್ದಾರೆ. ಯತೀಂದ್ರ ಮತ್ತು ಭೈರತಿ ಸುರೇಶ್ ಇಬ್ಬರು ಕಲೆಕ್ಷನ್ ಮಾಸ್ಟರ್ ಗಳು. ಸಿಎಂ ಸಿದ್ದರಾಮಯ್ಯನವರು ಕಲೆಕ್ಷನ್ ಮಾಡಲು ಬಿಟ್ಟಿದ್ದಾರೆ. ಯತೀಂದ್ರ ಏನು ಹೇಳುತ್ತಾರೋ ಅದನ್ನು ಸಿದ್ದರಾಮಯ್ಯ ಹೇಳಿದಂತೆ. ಸತೀಶ್ ಜಾರಕಿಹೊಳಿ ಅಯೋಗ್ಯನಿದ್ದಾನೆ ಎಂದು ಸಿದ್ದರಾಮಯ್ಯ ಹೇಳಲಿ…
ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಓವರ್ ಟೇಕ್ ವೇಳೆ ಕಾರಿಗೆ ಮತ್ತೊಂದು l ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ಗಂಭೀರವಾದ ಗಾಯಗಳಾಗಿರುವ ಘಟಡ್ ಮಧುವನಹಳ್ಳಿ ಬೈಪಾಸ್ ಔಟರ್ ರಿಂಗ್ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳೆಗಾಲ ತಾಲೂಕಿನ ಮಧುವನ ಹಳ್ಳಿಯಲ್ಲಿ ಐ 10 ಕಾರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾಂತರಾಜ್, ಸೋಮಣ್ಣ, ಮೂರ್ತಿ, ಖುಷಿ ಹಾಗೂ ಸ್ವಾತಿಗೆ ಗಂಭೀರವಾದ ಗಾಯಗಳಾಗಿದ್ದು ಗಾಯಾಳುಗಳಿಗೆ ಕೊಳ್ಳೇಗಾಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಗುದ್ದಿಸಿ ಪರಾರಿಯಾದ ಚಾಲಕನಿಗೆ ಇದೀಗ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಬೆಂಗಳೂರು : ಬೆಂಗಳೂರಲ್ಲಿ ಈರುಳ್ಳಿ ಮೂಟೆ ಅಡಿ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡಲಾಗುತ್ತಿತ್ತು ಟೆಂಪೋದಲ್ಲಿ ಈರುಳ್ಳಿ ಮೂಟೆ ಅಂತ ಶ್ರೀಗಂಧ ಸಾಗಾಟ ಮಾರಾಟ ಮಾಡಲಾಗುತ್ತಿತ್ತು ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ 750 ಕೆಜಿ ಶ್ರೀಗಂಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ನಿಂದ 750 ಕೆಜಿ ಶ್ರೀಗಂಧವನ್ನು ಬೆಂಗಳೂರಿಗೆ ಆರೋಪಿಗಳು ಸಾಗಾಟ ಮಾಡುತ್ತಿದ್ದರು. ನಕ ಬಂದಿಹಾಕಿ ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಪಿಕಪ್ ವಾಹನ ಬರುತ್ತಿರುವಾಗ ಅದನ್ನು ಪರಿಶೀಲನೆ ಮಾಡಿದಾಗ ಅದರ ಮೇಲ್ಭಾಗದಲ್ಲಿ ಈರುಳ್ಳಿ ಮೂಟೆ ಏರಿಸಲಾಗುತ್ತೆ ಬಳಿಕ ಕೆಳಗಡೆ ಇನ್ನಷ್ಟು ಪರಿಶೀಲನೆ ಮಾಡಿದಾಗ ಶ್ರೀಗಂಧದ ಮರದ ತುಂಡುಗಳು ಪತ್ತೆಯಾಗಿವೆ. 18 ಬ್ಯಾಗ್ ಗಳ್ಳಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ಅವವಶಕ್ಕೆ ಶ್ಯಕ ಪಡೆದುಕೊಂಡಿದ್ದು, ಸಿದ್ದಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಶೇಕ್ ಶಾರುಖ್, ಶೇಕ್ ಅಬ್ದುಲ್ ಕಲಾಂ, ಪರಮೇಶ್ ರಾಮ ಭೂಪಾಲ್ ನನ್ನು ರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಡೀಲರ್ ಒಬ್ಬರಿಗೆ ಮಾರಾಟ ಮಾಡಲು ಸಾಗಾಟ…














