ಹಾಸನ: ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರಾಗಿ, ಕೊರೋನಾ ಸಂದರ್ಭದಲ್ಲಿ ಜನೋಪಯೋಗಿ ಕೆಲಸವನ್ನು ಮಾಡುವ ಮೂಲಕ, ಗುರ್ತಿಸಿಕೊಂಡಿದ್ದಂತ ಅಗಿಲೆ ಯೋಗೀಶ್ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾದಂತೆ ಆಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದಂತ ಅಗಿಲೆ ಯೋಗೀಶ್ ಅವರು, ಜೆಡಿಎಸ್ ನಲ್ಲಿ ಗುರ್ತಿಸಿಕೊಂಡು, ಸಮಾಜಮುಖಿ ಕೆಲಸವನ್ನು ಮಾಡುತ್ತಾ, ರಾಜಕೀಯವಾಗಿ ಬೆಳೆಯುವ ಉದ್ದೇಶದಿಂದ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದೆನು. ಆದ್ರೇ.. ಇಲ್ಲಿ ನಮ್ಮನ್ನು ಗುರ್ತಿಸೋರು ಯಾರೂ ಇಲ್ಲ. ನಮ್ಮ ಬೆಂಬಲಕ್ಕೂ ಯಾರೂ ನಿಲ್ಲೋದಿಲ್ಲ. ಹೀಗಾಗಿ ಜೆಡಿಎಸ್ ಪಕ್ಷ ತೊರೆಯುತ್ತಿರೋದಾಗಿ ಘೋಷಿಸಿದರು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ‘ಕನ್ನಡಿಗ ಪಿ.ಗುರುರಾಜ್’ಗೆ ಕಂಚಿನ ಪದಕ: ಸಿಎಂ ಬೊಮ್ಮಾಯಿ ಅಭಿನಂದನೆ
ಇನ್ಮುಂದೆ ಜೆಡಿಎಸ್ ಜೊತೆಗೆ ರಾಜಕೀಯವಾಗಿ ಯಾವುದೇ ಸಂಬಂಧ ಇರೋದಿಲ್ಲ. ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಜೆಡಿಎಸ್ ನಿಂದ ಬೆಳೆಯೋದಕ್ಕೆ, ಆ ಉದ್ದೇಶದಿಂದಲೇ ಪಾರ್ಟಿಗೆ ಸೇರಿದೆ. ಆದ್ರೇ ಅದ್ಯಾವುದು ಸಾಧ್ಯವಾಗಲಿಲ್ಲ ಎಂದರು.
ಜೆಡಿಎಸ್ ನಲ್ಲಿ ನಮಗೆ ಭದ್ರತೆ ಇಲ್ಲದಂತೆ ಆಗಿದೆ. ಜೆಡಿಎಸ್ ಕಾರ್ಯಕರ್ತರಿಗೆ, ನಾಯಕರಿಗೆ ತೊಂದರೆಯಾದಾಗ ಅವರ ಬೆನ್ನಿಗೆ ನಿಲ್ಲುವಂತ ಕೆಲಸವನ್ನು ನಾಯಕರು ಮಾಡೋದಿಲ್ಲ. ನಾನು ಜೆಡಿಎಸ್ ಪಕ್ಷವನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಬೆಂಬಲಿಸೋ ಕೆಲಸವನ್ನು ಮಾಡಲಿಲ್ಲ. ಹಾಗೆ ಮಾಡಿದ್ದರೇ ಪ್ರಶಾಂತ್ ಕೊಲೆ ಕೂಡ ಆಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ರೇವಣ್ಣ ಕೂಡ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದರು.
ಗಮನಿಸಿ: ಮತದಾರರ ಪಟ್ಟಿ ತಯಾರಿಕೆ, ಪರಿಷ್ಕರಣೆ, ಅಗತ್ಯ ಬದಲಾವಣೆ ಪ್ರಕ್ರಿಯೆ ಆರಂಭ
ಆತನ ಕೊಲೆಗೆ ಕಾರಣವೇನು.? ಹಿಂದೆ ಯಾರಿದ್ದಾರೆ ಎನ್ನುವುದನ್ನು ಕೂಲಂಕುಶವಾಗಿ ತನಿಖೆ ನಡೆಸುವ ನಿಟ್ಟಿನಲ್ಲಿ ಒತ್ತಾಯಿಸುವಂತ ಯಾವುದೇ ಕೆಲಸವನ್ನು ಜೆಡಿಎಸ್ ನಾಯಕರು ಮಾಡಲಿಲ್ಲ. ಆ ಎಲ್ಲಾ ಬೇಸರದಿಂದ ತಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಜೆಡಿಎಸ್ ಬಿಟ್ಟು, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಘೋಷಣೆ ಮಾಡಿದರು.
ನನ್ನ ಕೊಲೆ ಮಾಡೋದಾದ್ರೇ.. ಹಾಸನ ಶಾಸಕ ಪ್ರೀತಂ ಗೌಡ ಅವರೇ ಮಾಡಿಸಬೇಕು. ಅವರ ಕುಮ್ಮಕ್ಕು ಇಲ್ಲದೇ ನನ್ನ ಮೇಲೆ ಯಾವುದೇ ಕಾರ್ಯಕರ್ತರು ಹಲ್ಲೆ, ಪ್ರಕರಣ ದಾಖಲಿಸೋದಕ್ಕೆ ಸಾಧ್ಯವೇ ಇಲ್ಲ. ರೇವಣ್ಣ ಸಾಹೇಬ್ರಿಗೆ, ಭವಾನಿಗೆ ಎಲ್ಲರಿಗೂ ಗೊತ್ತು. ಈ ಹಿನ್ನಲೆಯಲ್ಲಿಯೇ ನಾನು ಜೆಡಿಎಸ್ ಪಕ್ಷ ತೊರೆಯುತ್ತಿದ್ದೇನೆ. ನಮ್ಮನ್ನು ಸರಿಯಾಗಿ ಬಳಸಿಕೊಳ್ಳದೇ ಇರೋದಕ್ಕೆ ನಮಗೆ ಬೇಸರವಾಗಿದೆ ಎಂದರು.
BIG NEWS: ರಾಜ್ಯದ ‘ಮಕ್ಕಳ ಪೋಷಕ’ರಿಗೆ ಗುಡ್ ನ್ಯೂಸ್: ‘ಹೊಸ ಶಾಲೆ ಆರಂಭ’ಕ್ಕೆ ‘ಸರ್ಕಾರ ಗ್ರೀನ್ ಸಿಗ್ನಲ್’