ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಆಯಕ್ತರಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಬಾ.ಮಾ ಹರೀಶ್ ದೂರು ನೀಡಿದ್ದಾರೆ.

BREAKING NEWS: ಈದ್ಗಾ ಮೈದಾನಕ್ಕಾಗಿ ಫೈಟ್‌ : ಚಾಮರಾಜಪೇಟೆ ಸಂಪೂರ್ಣ ಬಂದ್‌; ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ

 

ಆಹೋರಾತ್ರ ಮತ್ತು ಚರಣ್ ಎಂಬುವರ ವಿರುದ್ದ ದೂರು ನೀಡಿದ್ದಾರೆ. ಆಹೋರಾತ್ರ ಮತ್ತು ಚರಣ್ ಇಬ್ಬರು ಸೋಷಿಯಲ್ ಮೀಡಿಯಾದ ಮೂಲಕ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆನ್‌ ಲೈನ್‌ ಗೇಮ್ ಗಳ ಪ್ರಚಾರದ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದಿದ್ದರು.
ಸುದೀಪ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ.ಅವರ ಬಗ್ಗೆ ಈ ರೀತಿ ಅವಹೇಳನಕಾರಿ ಹೇಳಿಕೆ ಮೂಲಕ ಸುದೀಪ್ ಗೌರವಕ್ಕೆ ಚ್ಯುತಿ ಬರುವ ರೀತಿ ವರ್ತಿಸಲಾಗ್ತಿದೆ ಎಂದು ದೂರು ನೀಡಿದ್ದಾರೆ. ಆಹೋರಾತ್ರ ಮತ್ತು ಚರಣ್ ವಿರುದ್ದ ಕ್ರಮ ಕೈಗೊಳ್ಳುವಂತೆ ಬಾ.ಮಾ ಹರೀಶ್ ಒತ್ತಾಯಿಸಿದ್ದಾರೆ.

Share.
Exit mobile version