ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಸಂಬಂಧ ಇಂದು ನಾಗರಿಕ ಒಕ್ಕೂಟ ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದ್ದರು. ಇದೀಗ ಚಾಮರಾಜಪೇಟೆ ಸಂಪೂರ್ಣ ಬಂದ್‌ ಆಗಿದೆ.

BIGG NEWS: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಇಂದು ಹಂತಕರು ಕೋರ್ಟ್‌ಗೆ ಹಾಜರು

ಚಾಮರಾಜಪೇಟೆಯ 7 ವಾರ್ಡ್‌ ಗಳು ಬಂದ್‌ ವಾತಾವರಣ ಸೃಷ್ಟುಯಾಗಿದೆ. ಪಾದರಾಯನಪುರ, ಆಜಾದ್‌ ನಗರದಲ್ಲಿ ಸಂಪೂರ್ಣ ಬಂದ್‌ ಆಗಿದೆ. ಇನ್ನು ಅಲ್ಲಿ ಜ್ಯೂಸ್‌ ಅಂಗಡಿ ತೆರೆದಿತ್ತು. ಹೀಗಾಗಿ ಜಮೀರ್‌ ಆಪ್ತರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರತಿಭಟನಾಕಾರರನ್ನ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಚಾಮರಾಜಪೇಟೆಯ ಪೆಟ್ರೋಲ್‌ ಬಂಕ್‌ ಕೂಡ ಬಂದ್‌ ಮಾಡಿದ್ದಾರೆ. ಇಂದು ಸಂಜೆ 5 ಗಂಟೆವರೆಗೆ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಿದ್ದಾರೆ. ಜನರು ಬಂಕ್‌ ಗೆ ಬಂದು ವಾಪಸ್‌ ಆಗುತ್ತಿದ್ದಾರೆ.

Share.
Exit mobile version