Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

BREAKING : ಆಂಧ್ರಪ್ರದೇಶ ಮಾಜಿ CM ‘ನಾಡೆಂಡ್ಲ ಭಾಸ್ಕರ ರಾವ್’ ನಿಧನ | Nadendla Bhaskar Rao passes away

22/04/2026 1:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!
KARNATAKA

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

By kannadanewsnow0522/04/2026 1:38 PM

ಬೆಂಗಳೂರು : ಇಂದಿನ ದಿನಗಳಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ವಾಟ್ಸಾಪ್ ಮೂಲಕ ಅಪರಿಚಿತರ ಅಥವಾ ಹಳೆಯ ಸ್ನೇಹಿತರ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಇದು ಕೆಲವೊಮ್ಮೆ ಕೌಟುಂಬಿಕ ಬಿರುಕಿಗೆ ಕಾರಣವಾಗುತ್ತಿದೆ. ಹೌದು ಇದೀಗ ಎರಡು ಪ್ರತ್ಯೇಕ ಘಟನೆಯಲ್ಲಿ ಗಂಡ ಮಕ್ಕಳನ್ನು ಬಿಟ್ಟು ಮಹಿಳೆ ಕಟಿಂಗ್ ಶಾಪ್ ದವನ ಜೊತೆ ಓಡಿ ಹೋದ್ರೆ, ಮತ್ತೊಬ್ಬ ಮಹಿಳೆ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿದ್ದಾಳೆ.

ಮೊದಲ ಘಟನೆ

ಕಸ ಹಾಕಿ ಬರೋದಾಗಿ ಮನೆಯಿಂದ ಹೊರಗೆ ಬಂದ ಮಹಿಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾರೆ. ಇತ್ತ ಗಂಡ ಎರಡು ಮಕ್ಕಳನ್ನು ಬಿಟ್ಟು ತನ್ನ ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಾಳೆಂದು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆಯಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾದ ಪ್ರಿಯಾಂಕಾ ಮತ್ತು ಪತಿ ಶರತ್ ಕುಮಾರ್‌ಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆಯಲ್ಲಿ (Bagalgunte) ವಾಸವಾಗಿದ್ದರು.

ಈ ಸಂಬಂಧ ಬಾಗಲಗುಂಟೆಯಲ್ಲಿ ಪತಿ ದೂರು ದಾಖಲಿಸಿದ್ದು, ಕಸ ಹಾಕಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಪರಪುರುಷನೊಂದಿಗೆ ಪರಾರಿಯಾಗಿದ್ದಾಳೆ. ನಾನು ಮನೆಯಲ್ಲಿರುವಾಗಲೇ ಪ್ರಿಯಾಂಕಾ ತನ್ನ ಪ್ರಿಯಕರ ಪ್ರಭು ಜೊತೆ ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ ಎಂಬ ಆರೋಪಿಸಿದ್ದಾರೆ. ನಾನು ಕೆಲಸಕ್ಕೆ ಹೋದ ಸಮಯದಲ್ಲಿ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನನ್ನು ಭೇಟಿಯಾಗುತ್ತಿದ್ದಳು. ಜೊತೆಗೆ ಪ್ರಭು ಪ್ರಿಯಾಂಕಾಗೆ ಮೊಬೈಲ್ ಕರೆನ್ಸಿ ಹಾಕಿಸುತ್ತಿದ್ದ. ಇದೇ ವಿಚಾರಕ್ಕಾಗಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪತಿ ಶರತ್ ಪ್ರಿಯಾಂಕಾಗೆ ಹೀಗೆಲ್ಲ ಮಾಡಬೇಡ ಎಂದು ಬುದ್ಧಿವಾದ ಹೇಳಿ ವಾನ್ ಮಾಡಿದ್ದರು. ಆದರೆ ಏ.11ರ ರಾತ್ರಿ 11:57ರ ಸುಮಾರಿಗೆ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ದಾರೆ. ಮಧ್ಯರಾತ್ರೀಲಿ ಕಸ ಎಸೆದು ಬರೋದಾಗಿ ಮನೆಯಿಂದ ಕಸದ ಬಕೆಟ್ ಹಿಡಿದು ಹೊರಟಿದ್ದಾಳೆ. ಮೊದಲೇ ರೆಡಿ ಮಾಡಿ ಇಟ್ಟಿದ್ದ ಬಟ್ಟೆ ಬ್ಯಾಗ್‌ನ್ನು ಮನೆಯಲ್ಲಿನ ಪತಿ, ಮಕ್ಕಳಿಗೆ ಕಾಣದಂತೆ ಕಸದ ಜೊತೆ ಬ್ಯಾಗ್ ಸಮೇತ ಹೊರಗೆ ಬಂದಿದ್ದಾಳೆ. ಒಂದು ಕೈಯಲ್ಲಿ ಕಸದ ಬಕೆಟ್ ಮತ್ತು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಹೊರಟಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಡ್ಯದಲ್ಲಿ ಮತ್ತೊಂದು ಘಟನೆ

ಇನ್ನು ಮಂಡ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮನೆಯವರ ವಿರೋಧದ ನಡುವೆಯೂ ಅವನೇ ಬೇಕೆಂದು ಕಾಡಿಸಿ ಪೀಡಿಸಿ ಮದ್ವೆಯಾಗಿದ್ದ (Love Marriage) ಮಹಿಳೆ, ಈಗ ತಾಳಿಕಟ್ಟಿದ ಗಂಡನನ್ನ ಬಿಟ್ಟು ಮತ್ತೊಬ್ಬನ ಕೈಹಿಡಿದಿದ್ದಾಳೆ. ಮದುವೆಯಾದ 2 ವರ್ಷಕ್ಕೆ ಪ್ರೀತಿಸಿ ಗಂಡನನ್ನ ಬಿಟ್ಟು ತಂಗಿ ತಂಗಿ ಅಂತ ಕರೆಯುತ್ತಿದ್ದ ಗಂಡನ ಸ್ನೇಹಿತನನ್ನೇ ಪಟಾಯಿಸಿಕೊಂಡು ಓಡಿ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ಈ ಘಟನೆ ನಡೆದಿರೋದು ಮಂಡ್ಯದಲ್ಲಿ (Mandya)

ಹೌದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನ್ನಂಗಾಡಿಯ ಸಾಗರ್ ಹಾಗೂ ಹರವು ಗ್ರಾಮದ ಮಹಿಳೆ. ಕಳೆದ 4-5 ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಮನೆಯಿಂದ ಎಸ್ಕೇಪ್ ಆಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡು 2ನೇ ಮದುವೆ ಆಗಿದ್ದಾಳೆ. ಸಾಗರ್ ವೃತ್ತಿಯಲ್ಲಿ ಆಟೋ ಚಾಲಕ. ತನ್ನೂರಿನಿಂದ ಪಾಂಡವಪುರಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ. ಆದ್ರೆ ಅದೇ ಮಾರ್ಗದಲ್ಲಿ ಕಾಲೇಜಿಗೆ ಹೋಗ್ತಿದ್ದ ಈಕೆ ಹದಿಹರೆಯದ ವಯಸ್ಸಿನಲ್ಲೆ ಪ್ರೀತಿ ಎಂದು ಈತನ ಹಿಂದೆ ಬಿದ್ದಿದ್ದಳು‌.

ಬೇರೆ ಆಟೋ ಇದ್ದರೂ ಈತನ ಆಟೋದಲ್ಲೆ ಹೋಗೋಕೆ ಕಾದು ಕುಳಿತುಕೊಳ್ತಿದ್ದಳು. ಹೀಗೆ ಆರಂಭವಾದ ಇವರ ಸ್ನೇಹ‌ ಕೊನೆಗೆ ಪ್ರೀತಿಯಾಗಿ ಮದುವೆ ಹಂತಕ್ಕೂ ಹೋಗಿತ್ತು. ಸಾಗರ್ ನ ಮನೆಗೆ ಏಕಾಏಕಿ ಹೋದ ರಕ್ಷಿತ ಮದುವೆಯಾಗೋಣಾ ಬಾ ಎಂದು ಪಟ್ಟು ಹಿಡಿದ್ದಳು. ಅತ್ತ ತವರು ಮನೆಯವರು ಇಂತಹ ಮಗಳು ನಮಗೆ ಬೇಡ ಎಂದಿದ್ದರು.‌ ರಕ್ಷಿತಾಗೆ 18 ವರ್ಷ ತುಂಬದ ಹಿನ್ನಲೆ ಸಾಗರ್ ಆಕೆಯನ್ನ ಅಕ್ಕನ ಮನೆಯಲ್ಲಿ ಇರಿಸಿ ಕೊನೆಗೆ 18 ವರ್ಷ ತುಂಬಿದ ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಕೆಲ ದಿನಗಳು ಸುಮ್ಮನಿದ್ದ ಆಕೆ ಮತ್ತೊಬ್ಬ ಯುವಕ ಇಂದ್ರ ಎಂಬಾತನ ಪ್ರೀತಿಯ ಗಾಳಕ್ಕೆ ಸಿಲುಕಿದ್ದಳು. ಇಂದ್ರ ಪೋನ್ ಕಾಲ್, ಮೆಸೇಜ್ ನಲ್ಲಿ ಆಕೆಗೆ ಚಂದ್ರಲೋಕ ತೋರಿಸಿ ಆಕೆಯನ್ನ ಪ್ರೀತಿ ಬಲೆಗೆ ಬೀಳಿಸಿದ್ದ.

ಇನ್ನೂ ಇಂದ್ರ, ಗೃಹಿಣಿಯ ಗಂಡ ಸಾಗರ್‌ನ ಆತ್ಮೀಯ ಸ್ನೇಹಿತನೇ. ಆತನೊಂದಿಗೆ ಆಟೋ ಓಡಿಸಿಕೊಂಡೆ ಜೀವನ ಮಾಡ್ತಿದ್ದ. ಇಂದ್ರ ಆಗಾಗ ಸಾಗರ್ ನ ಮನೆಗೆ ಬರ್ತಿದ್ದರಿಂದ ಸಾಗರ್‌ನ ಹೆಂಡತಿ ಕೂಡ ಆತನಿಗೆ ಪರಿಚಯ ಆಗಿದ್ದಳು. ಇನ್ನೂ ಮನೆಯವರ ಮುಂದೆಲ್ಲ ಆತ ಸಾಗರನ ಹೆಂಡ್ತಿಯನ್ನ ತಂಗಿ ತಂಗಿ ಅಂತಾನೆ ಅಂತಿದ್ದ. ನನಗೆ ತಂಗಿಯಿಲ್ಲ, ಇವಳೆ ನನಗೆ ತಂಗಿ ಅಂತಿದ್ದ. ರಕ್ಷಾ ಬಂಧನದ ಸಂದರ್ಭ ಆಕೆಗೆ ಶುಭಕೋರಿದ.‌ ಆದ್ರೆ ಅದೆಲ್ಲ ಮನೆಯವರ ಮುಂದೆ ಆಡುತ್ತಿದ್ದ ನಾಟಕ. ಫೋನ್‌ನಲ್ಲಿ ಪ್ರೀತಿ ಪ್ರಣಯದ ಮಾತುಗಳನ್ನ ಆಡ್ತಿದ್ದ ಅವರಿಬ್ಬರು ಏಕಾಏಕಿ ಓಡಿ ಹೋಗಿ ಮದುವೆಯಾಗಿದ್ದಾರೆ.

Share. Facebook Twitter LinkedIn WhatsApp Email

Related Posts

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM2 Mins Read

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM2 Mins Read

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ : ಬಿಸಿಲ ತಾಪದಿಂದ ಪಾರಾಗಲು ತಪ್ಪದೇ ಮಾರ್ಗಸೂಚಿಗಳನ್ನು ಪಾಲಿಸಿ.!

22/04/2026 1:21 PM1 Min Read
Recent News

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

22/04/2026 1:44 PM

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

BREAKING : ಆಂಧ್ರಪ್ರದೇಶ ಮಾಜಿ CM ‘ನಾಡೆಂಡ್ಲ ಭಾಸ್ಕರ ರಾವ್’ ನಿಧನ | Nadendla Bhaskar Rao passes away

22/04/2026 1:35 PM

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM
State News
KARNATAKA

ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದು ಸ್ವಾವಲಂಬಿಯಾದ ವಿಜಯನಗರದ ಮಹಿಳೆ.!

By kannadanewsnow5722/04/2026 1:44 PM KARNATAKA 2 Mins Read

ವಿಜಯನಗರ: ಸರ್ಕಾರದ ಆರ್ಥಿಕ ನೆರವು ಬಡ ಕುಟುಂಬವೊಂದರ ಬದುಕನ್ನೇ ಬದಲಿಸಿದ ಸ್ಫೂರ್ತಿದಾಯಕ ಘಟನೆಯೊಂದು ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ…

ಗಂಡನ ಸ್ನೇಹಿತನಿಗೆ ಮರುಳಾದ ಪತ್ನಿ, ಕಟಿಂಗ್ ಶಾಪ್ ಹುಡುಗನ ಪ್ರೇಮಪಾಶಕ್ಕೆ ಬಿದ್ದ ಮತ್ತೊಬ್ಬಳು : ಬೆಚ್ಚಿಬೀಳಿಸುತ್ತಿವೆ ರಾಜ್ಯದ ಈ ಘಟನೆಗಳು!

22/04/2026 1:38 PM

ಪೋಷಕರ ಗಮನಕ್ಕೆ: ಮಕ್ಕಳನ್ನು ಓದಿನತ್ತ ಪ್ರೇರೇಪಿಸಲು ಇಲ್ಲಿವೆ 5 ಸೂಪರ್ ಟಿಪ್ಸ್!

22/04/2026 1:30 PM

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ : ಬಿಸಿಲ ತಾಪದಿಂದ ಪಾರಾಗಲು ತಪ್ಪದೇ ಮಾರ್ಗಸೂಚಿಗಳನ್ನು ಪಾಲಿಸಿ.!

22/04/2026 1:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.