Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!
INDIA

ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!

By kannadanewsnow57

ಪ್ರಸಿದ್ಧ ಇ-ಕಾಮರ್ಸ್ ದೈತ್ಯ ಅಮೆಜಾನ್‌ನ ‘ಅಮೆಜಾನ್ ನೌ’ (Amazon Now) ತನ್ನ ಇತ್ತೀಚಿನ ಬಹು-ನಗರ ಮಾರ್ಕೆಟಿಂಗ್ ಅಭಿಯಾನದಲ್ಲಿ ಭಾರತದ ಹೆಮ್ಮೆಯ 5ನೇ ಶತಮಾನದ ಗಣಿತಶಾಸ್ತ್ರಜ್ಞ ಆರ್ಯಭಟ ಅವರನ್ನು ಬಳಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಜಾಹೀರಾತು ಆರ್ಯಭಟ ಅವರಿಗೆ ಮಾಡಿದ ಅಪಮಾನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು, ಅಮೆಜಾನ್ ಸಂಸ್ಥೆ ಕ್ಷಮೆಯಾಚಿಸಬೇಕು ಮತ್ತು ಅಮೆಜಾನ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು (#Boycott_Amazon) ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಆದರೆ, ಕಂಪನಿಯು ಇದನ್ನು ಆರ್ಯಭಟ ಅವರಿಗೆ ಸಲ್ಲಿಸಿದ ಗೌರವ ಎಂದು ಸಮರ್ಥಿಸಿಕೊಳ್ಳುತ್ತಿದೆ.

ರಹಸ್ಯವಾಗಿ ಆರಂಭವಾಗಿ ವಿವಾದಕ್ಕೀಡಾದ ಅಭಿಯಾನ

ಕೆಲವು ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ (IPL) ಫೈನಲ್ ಪಂದ್ಯಾವಳಿಯ ವೇಳೆ ಆರ್ಯಭಟ ಅವರಂತೆ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಾಗ ಜನರ ಕುತೂಹಲ ಹೆಚ್ಚಾಗಿತ್ತು. ನಂತರ ಇದೇ ವ್ಯಕ್ತಿ ಮುಂಬೈ ಮತ್ತು ಬೆಂಗಳೂರಿನಲ್ಲೂ ಕಾಣಿಸಿಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಮೀಮ್ಸ್ ಹಾಗೂ ಚರ್ಚೆಗಳು ಶುರುವಾಗಿದ್ದವು.

ಅಂತಿಮವಾಗಿ ಅಮೆಜಾನ್ ನೌ ತನ್ನ ಪ್ರಚಾರದ ಭಾಗವಾಗಿ ಈ ಜಾಹೀರಾತು ಚಿತ್ರವನ್ನು ಬಿಡುಗಡೆ ಮಾಡಿತು. ಇದರಲ್ಲಿ ಆರ್ಯಭಟ ವೇಷಧಾರಿ ಇಂದಿನ ಆಧುನಿಕ ಜಗತ್ತಿನಲ್ಲಿ ‘ಶೂನ್ಯ’ದ (Zero) ಅರ್ಥವನ್ನು ಹುಡುಕುತ್ತಾ ಭಾರತದಾದ್ಯಂತ ಸಂಚರಿಸುತ್ತಾರೆ. ಕೊನೆಗೆ ಅವರು ಕ್ವಿಕ್ ಕಾಮರ್ಸ್ (ತ್ವರಿತ ವಿತರಣಾ ಸೇವೆ) ಜಗತ್ತನ್ನು ತಲುಪುತ್ತಾರೆ. ಅಲ್ಲಿ ಬೇರೆ ಕಂಪನಿಗಳು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದರೆ, ಅಮೆಜಾನ್ ನೌ ಮಾತ್ರ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ‘ಶೂನ್ಯ ರೂಪಾಯಿ’ಗೆ ಸೇವೆ ನೀಡುತ್ತದೆ ಎಂಬುದನ್ನು ತೋರಿಸಲಾಗಿತ್ತು. “ಆರ್ಯಭಟ ಅವರು ಮೊದಲಿನಿಂದಲೂ ಈ ಶೂನ್ಯವನ್ನೇ ಹುಡುಕುತ್ತಿದ್ದರು” ಎಂಬ ಧಾಟಿಯಲ್ಲಿ ಜಾಹೀರಾತನ್ನು ಕೊನೆಗೊಳಿಸಲಾಗಿತ್ತು.

ಸಾರ್ವಜನಿಕರ ಆಕ್ರೋಶ: ‘ಅವರು ಬ್ರ್ಯಾಂಡ್ ಅಂಬಾಸಿಡರ್ ಅಲ್ಲ’
ಜಾಹೀರಾತಿನ ಈ ಕಲ್ಪನೆ ದೇಶದ ಒಂದು ದೊಡ್ಡ ವರ್ಗದ ಜನರಿಗೆ ಇಷ್ಟವಾಗಿಲ್ಲ. ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ವೇದಿಕೆಗಳಲ್ಲಿ #Boycott_Amazon ಮತ್ತು ‘Amazon Insults Aryabhata’ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಕೇವಲ ವ್ಯಾಪಾರ ಲಾಭಕ್ಕಾಗಿ ಭಾರತದ ಶ್ರೇಷ್ಠ ಜ್ಞಾನ ಪರಂಪರೆಯನ್ನು ಇ-ಕಾಮರ್ಸ್ ಸಂಸ್ಥೆಯು ಕ್ಷುಲ್ಲಕಗೊಳಿಸಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.

“ಜಗತ್ತಿನ ಗಣಿತ ಮತ್ತು ಖಗೋಳಶಾಸ್ತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ಆರ್ಯಭಟ ಅವರ ಕೊಡುಗೆ ಅಪಾರ. ಆದರೆ ಅಮೆಜಾನ್ ಇಂಡಿಯಾ ತನ್ನ ಜಾಹೀರಾತಿನಲ್ಲಿ ಅವರನ್ನು ಕೇವಲ ಒಬ್ಬ ಡೆಲಿವರಿ ಬಾಯ್ ಮಟ್ಟಕ್ಕೆ ಇಳಿಸಿದೆ,” ಎಂದು ಆಕ್ರೋಶಭರಿತ ಪೋಸ್ಟ್‌ಗಳು ಹರಿದಾಡುತ್ತಿವೆ.

ಮತ್ತೊಬ್ಬ ಬಳಕೆದಾರರು, “ಆರ್ಯಭಟ ಜಗತ್ತಿಗೆ ಶೂನ್ಯದ ಪರಿಕಲ್ಪನೆಯನ್ನು ಉಡುಗೊರೆಯಾಗಿ ನೀಡಿದರು. ಆದರೆ ಅಮೆಜಾನ್ ಅವರನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡಿದೆ. ತಕ್ಷಣವೇ ಈ ಜಾಹೀರಾತನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು,” ಎಂದು ಆಗ್ರಹಿಸಿದ್ದಾರೆ. ಇದು ರಾಷ್ಟ್ರೀಯ ಗೌರವದ ವಿಷಯವಾಗಿದ್ದು, ಐಕಾನ್‌ಗಳನ್ನು ಗೌರವಿಸಬೇಕೇ ಹೊರತು ಮಾರ್ಕೆಟಿಂಗ್ ಗಿಮಿಕ್‌ಗಳಿಗೆ ಬಳಸಬಾರದು ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬಾಗವಾದ ಸಾರ್ವಜನಿಕ ಅಭಿಪ್ರಾಯ
ಈ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ಒಂದು ಕಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಕೆಲವರು ಜಾಹೀರಾತಿನ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ.

“ಈ ಜಾಹೀರಾತು ಆರ್ಯಭಟ ಅವರು ಜಗತ್ತಿಗೆ ನೀಡಿದ ಶೂನ್ಯದ ಮಹತ್ವವನ್ನು ಎತ್ತಿಹಿಡಿಯುತ್ತಿದೆ, ಇದರಲ್ಲಿ ಅಪಮಾನ ಎಲ್ಲಿದೆ?” ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಜಾಹೀರಾತು ರಂಗದ ತಜ್ಞರು ಈ ಅಭಿಯಾನದ ಸೃಜನಶೀಲತೆಯನ್ನು ಶ್ಲಾಘಿಸಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸುವಲ್ಲಿ ಅಮೆಜಾನ್ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Amazon Insults Aryabhata

⚖️ Aryabhata's contributions revolutionized mathematics and astronomy, yet an @amazonIN advertisement has reduced him to a delivery boy.

Respect for India's great scholars is non-negotiable. A thorough inquiry into the matter is needed.#Boycott_Amazon… pic.twitter.com/7WJLLYO6ZC

— Sanatan Prabhat (@SanatanPrabhat) June 12, 2026

Amazon India has insulted the legendary Indian mathematician Aryabhata in their latest ad.

Using a historical icon to peddle "zero fees" with disrespectful dialogue is unacceptable.

Time to hold @amazonIN accountable.#Boycott_Amazon
Amazon Insults Aryabhata pic.twitter.com/2AMSK1UDKe

— Guruprasad Gowda (@Gp_hjs) June 12, 2026

Amazon Insults Aryabhata' Trending on Social Media: Public Outrage Against New Ad!
Share. Facebook Twitter LinkedIn WhatsApp Email

Related Posts

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

2 Mins Read

World Blood Donor Day-2026 : ಇಂದು ʻವಿಶ್ವ ರಕ್ತದಾನಿಗಳ ದಿನʼ: ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ

2 Mins Read

SHOCKING : ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡುತ್ತಿರುವ ಭೂಪ | Video Viral

2 Mins Read
Recent News

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

ಜೈಪುರದಲ್ಲಿ ಲಂಚ ಪಡೆಯುವಾಗ, ರೆಡ್ ಹ್ಯಾಂಡ್ ಆಗಿ ‘ACB’ ಬಲೆಗೆ ಸಿಕ್ಕಿಬಿದ್ದ ಬೆಂಗಳೂರಿನ ಮೂವರು ಪೊಲೀಸರು!

ಸೋಶಿಯಲ್ ಮೀಡಿಯಾದಲ್ಲಿ ‘ಅಮೆಜಾನ್ ಇನ್ಸಲ್ಟ್ಸ್ ಆರ್ಯಭಟ’ ಟ್ರೆಂಡಿಂಗ್ : ಹೊಸ ಜಾಹೀರಾತು ವಿರುದ್ಧ ಸಾರ್ವಜನಿಕರ ಆಕ್ರೋಶ!

World Blood Donor Day-2026 : ಇಂದು ʻವಿಶ್ವ ರಕ್ತದಾನಿಗಳ ದಿನʼ: ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ

State News
KARNATAKA

ಬೆಂಗಳೂರಲ್ಲಿ ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಬ್ಬರಿಸಿದ ವರುಣ : ವಾಹನ ಸವಾರರ ಪರದಾಟ!

By ಸುರೇಶ್‌ KARNATAKA 1 Min Read

ಬೆಂಗಳೂರಿನಲ್ಲಿ ಇಂದು ಹಠಾತ್ತನೆ ವಾತಾವರಣ ಬದಲಾಗಿದ್ದು, ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ಪ್ರದೇಶಗಳಾದ ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ…

BIG ALERT: ತಂದೆ ಮಾಡಿದ ಸಾಲಕ್ಕೆ ಮಕ್ಕಳೇ ಹೊಣೆಗಾರರಾ? ಕಾನೂನು ನಿಯಮ ತಿಳಿಯಿರಿ!

BREAKING : ದಕ್ಷಿಣ ಕನ್ನಡದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ!

ALERT : ಮೊಬೈಲ್ ನಲ್ಲಿ ಆಪ್ ಕ್ಲೋಸ್ ಮಾಡಿದ್ರೂ ನಿಮ್ಮ `ಲೊಕೇಶನ್ ಟ್ರ್ಯಾಕ್’ ಆಗುತ್ತಿದೆಯೇ? ಹೀಗೆ ತಕ್ಷಣ ಆಫ್ ಮಾಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.