Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಪಾಕಿಸ್ತಾನ: ಫ್ರೆಂಚ್ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದ ಆರೋಪಿಗಳಿಗೆ ಮರಣದಂಡನೆ ಎತ್ತಿ ಹಿಡಿದ ಹೈಕೋರ್ಟ್!

BIG NEWS : ನಿಗದಿತ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಕೆಲಸ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: `ಉಚಿತ ಬಸ್ ಪಾಸ್’ ಯೋಜನೆಗೆ ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಿಗದಿತ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಕೆಲಸ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
INDIA

BIG NEWS : ನಿಗದಿತ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಕೆಲಸ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

By kannadanewsnow57

ನವದೆಹಲಿ: ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಒಂದು ಅತ್ಯಂತ ಪ್ರಮುಖ ಹಾಗೂ ಮಹತ್ವದ ಆದೇಶವನ್ನು ಹೊರಡಿಸಿದೆ. ಹುದ್ದೆಗೆ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಆ ಉದ್ಯೋಗ ಸಿಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಡಿಮೆ ವಿದ್ಯಾಭ್ಯಾಸದ ಹಿನ್ನೆಲೆಯುಳ್ಳವರಿಗಾಗಿ ಮೀಸಲಿಟ್ಟ ಕೆಲಸಗಳನ್ನು, ಹೆಚ್ಚು ಓದಿದವರು ಗಿಟ್ಟಿಸಿಕೊಳ್ಳುವುದರಿಂದ ನಿಜವಾದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಬ್ಯಾಂಕ್ ಒಂದರ ತಾತ್ಕಾಲಿಕ ಅಟೆಂಡರ್ ಹುದ್ದೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಮರುನೇಮಕಾತಿ ಆದೇಶವನ್ನು ಸುಪ್ರೀಂ ಕೋರ್‌್ಟನ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾಮುಲ್ಲಾ ಹಾಗೂ ಆರ್. ಮಹದೇವನ್ ಅವರಿದ್ದ ನ್ಯಾಯಪೀಠವು ರದ್ದುಗೊಳಿಸಿದೆ.

ಸದರಿ ಹುದ್ದೆಗೆ ಗರಿಷ್ಠ ಹತ್ತನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಮಾತ್ರ ಅರ್ಹತೆ ಎಂದು ನಿಗದಿಪಡಿಸಲಾಗಿತ್ತು. ಆದರೆ, ಹೈಕೋರ್ಟ್ ಈ ಅಂಶವನ್ನು ಗಮನಿಸದೆ ತೀರ್ಪು ನೀಡಿತ್ತು ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಯು ತಾನು ಪದವೀಧರ ಎಂಬ ಸತ್ಯವನ್ನು ಮುಚ್ಚಿಟ್ಟು ಈ ಕೆಲಸ ಪಡೆದುಕೊಂಡಿದ್ದ.

ಜೀವನದ ಕಠಿಣ ಸಂದರ್ಭಗಳಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾದ ಜನರಿಗೆ ಇಂತಹ ಸಣ್ಣ ಉದ್ಯೋಗಗಳ ಮೂಲಕ ಬದುಕಿನ ದಾರಿ ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶವಾಗಿರುತ್ತದೆ. ಹಾಗಾಗಿ ಇಂತಹ ಹುದ್ದೆಗಳಿಗೆ ಗರಿಷ್ಠ ಶೈಕ್ಷಣಿಕ ಮಿತಿಯನ್ನು ನಿಗದಿಪಡಿಸುವುದು ಸಂಪೂರ್ಣ ನ್ಯಾಯಸಮ್ಮತವಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

BIG NEWS : Government work according to stipulated education : Supreme Court's landmark verdict
Share. Facebook Twitter LinkedIn WhatsApp Email

Related Posts

​ಪಾಕಿಸ್ತಾನ: ಫ್ರೆಂಚ್ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದ ಆರೋಪಿಗಳಿಗೆ ಮರಣದಂಡನೆ ಎತ್ತಿ ಹಿಡಿದ ಹೈಕೋರ್ಟ್!

1 Min Read

​ಟೀಮ್ ಇಂಡಿಯಾ ಟಿ20 ನಾಯಕತ್ವ ಬದಲಾವಣೆ: ಸೂರ್ಯಕುಮಾರ್ ಯಾದವ್ ಔಟ್, ನೂತನ ನಾಯಕರಾಗಿ ಶ್ರೇಯಸ್ ಅಯ್ಯರ್ ಆಯ್ಕೆ!

1 Min Read

​INDIA ಮೈತ್ರಿಕೂಟದಲ್ಲಿ ಭಿನ್ನಮತದ ಹೊಗೆ: ಕಾಂಗ್ರೆಸ್ ‘ದ್ರೋಹ’ ಮಾಡಿದೆ ಎಂದು ಆರೋಪಿಸಿ ಜೂನ್ 8ರ ಸಭೆಯನ್ನು ಬಹಿಷ್ಕರಿಸಿದ ಡಿಎಂಕೆ!

1 Min Read
Recent News

​ಪಾಕಿಸ್ತಾನ: ಫ್ರೆಂಚ್ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದ ಆರೋಪಿಗಳಿಗೆ ಮರಣದಂಡನೆ ಎತ್ತಿ ಹಿಡಿದ ಹೈಕೋರ್ಟ್!

BIG NEWS : ನಿಗದಿತ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಕೆಲಸ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: `ಉಚಿತ ಬಸ್ ಪಾಸ್’ ಯೋಜನೆಗೆ ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್.!

​ಟೀಮ್ ಇಂಡಿಯಾ ಟಿ20 ನಾಯಕತ್ವ ಬದಲಾವಣೆ: ಸೂರ್ಯಕುಮಾರ್ ಯಾದವ್ ಔಟ್, ನೂತನ ನಾಯಕರಾಗಿ ಶ್ರೇಯಸ್ ಅಯ್ಯರ್ ಆಯ್ಕೆ!

State News
KARNATAKA

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: `ಉಚಿತ ಬಸ್ ಪಾಸ್’ ಯೋಜನೆಗೆ ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದು, ಬಹುದಿನಗಳ ನಿರೀಕ್ಷೆಯಾಗಿದ್ದ ‘ಉಚಿತ ಬಸ್ ಪಾಸ್’ ಸೌಲಭ್ಯಕ್ಕೆ…

BIG NEWS : ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

ವರ್ಗಾವಣೆಯ ನಿರೀಕ್ಷೆಯಲ್ಲಿರುವ `KSRTC’ ನೌಕರರಿಗೆ ಗುಡ್ ನ್ಯೂಸ್ : ಅಂತರ ನಿಗಮ ವರ್ಗಾವಣೆಗೆ ಜೂ.11ರಿಂದ ಕೌನ್ಸೆಲಿಂಗ್.!

BIG NEWS : ರಾಜ್ಯದ `ಗ್ರಾಮ ಪಂಚಾಯಿತಿಗಳು’ ಸಾರ್ವಜನಿಕರಿಗೆ ಈ 30 ಮಾಹಿತಿಗಳನ್ನು ನೀಡುವುದು ಕಡ್ಡಾಯ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.