Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rishabh Pant: ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

BREAKING: ‘ಲಕ್ನೋ ಸೂಪರ್ ಜೈಂಟ್ಸ್’ ತಂಡದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ರಾಜೀನಾಮೆ | Rishabh Pant Quits

KSRTC ಬಸ್ ಪ್ರಯಾಣಿಕರ ದೂರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಸ್ಪಂದನೆ: ಈ ಖಡಕ್ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಲಕ್ನೋ ಸೂಪರ್ ಜೈಂಟ್ಸ್’ ತಂಡದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ರಾಜೀನಾಮೆ | Rishabh Pant Quits
INDIA

BREAKING: ‘ಲಕ್ನೋ ಸೂಪರ್ ಜೈಂಟ್ಸ್’ ತಂಡದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ರಾಜೀನಾಮೆ | Rishabh Pant Quits

By ವಸಂತ ಬಿ ಈಶ್ವರಗೆರೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂಗಳದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕತ್ವದ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾಡಿದ್ದ ವಿನಂತಿಯನ್ನು ಫ್ರಾಂಚೈಸಿ ಅಧಿಕೃತವಾಗಿ ಒಪ್ಪಿಕೊಂಡಿದೆ. ಇದರೊಂದಿಗೆ ಪಂತ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಲಕ್ನೋ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಗೌರವಪೂರ್ವಕವಾಗಿ ಒಪ್ಪಿಕೊಂಡ ಫ್ರಾಂಚೈಸಿ

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಆಡಳಿತ ಮಂಡಳಿ, “ರಿಷಭ್ ಪಂತ್ ಅವರೇ ಸ್ವತಃ ಫ್ರಾಂಚೈಸಿಯನ್ನು ಸಂಪರ್ಕಿಸಿ ಈ ವಿನಂತಿ ಮಾಡಿಕೊಂಡಿದ್ದರು. ಅವರ ನಿರ್ಧಾರವನ್ನು ನಾವು ಗೌರವಪೂರ್ವಕವಾಗಿ ಸ್ವೀಕರಿಸಿದ್ದೇವೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ನಾಯಕನಾಗಿ ಈ ಡ್ರೆಸ್ಸಿಂಗ್ ರೂಮ್‌ಗೆ ರಿಷಭ್ ನೀಡಿದ ಕೊಡುಗೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ” ಎಂದು ತಿಳಿಸಿದೆ.

Official announcement. pic.twitter.com/7WeOwpkDr6

— Lucknow Super Giants (@LucknowIPL) May 29, 2026

ಮರುಸಂಘಟನೆಯತ್ತ ಲಕ್ನೋ ತಂಡದ ಗಮನ

ನಾಯಕತ್ವ ಬದಲಾವಣೆಯ ಬೆನ್ನಲ್ಲೇ ತಂಡದ ಮುಂದಿನ ನಡೆ ಬಗ್ಗೆಯೂ ಎಲ್‌ಎಸ್‌ಜಿ ಸ್ಪಷ್ಟನೆ ನೀಡಿದೆ. “ನಮ್ಮ ಸಂಪೂರ್ಣ ಗಮನ ಈಗ ತಂಡದ ಒಗ್ಗಟ್ಟಿನ ಮೇಲಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಪ್ರದರ್ಶನವನ್ನು ತಲುಪಲು ತಂಡವನ್ನು ಮರುಸಂಘಟನೆ ಹಾಗೂ ಪುನರ್ರಚನೆ (Rebuilding and Restructuring) ಮಾಡುವತ್ತ ನಾವು ಗಮನ ಹರಿಸುತ್ತಿದ್ದೇವೆ” ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ರಿಷಭ್ ಪಂತ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಸರಣಿಗಳಿಗೆ ಹೊಸ ನಾಯಕನನ್ನು ಹುಡುಕಬೇಕಾದ ಜವಾಬ್ದಾರಿ ಎದುರಾಗಿದ್ದು, ಐಪಿಎಲ್ ವಲಯದಲ್ಲಿ ಮುಂದಿನ ನಾಯಕ ಯಾರು ಎಂಬ ಕುತೂಹಲ ಮೂಡಿಸಿದೆ.

KSRTC ಬಸ್ ಪ್ರಯಾಣಿಕರ ದೂರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಸ್ಪಂದನೆ: ಈ ಖಡಕ್ ಆದೇಶ

ಬಿಜೆಪಿಗರ ಆರೋಪಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಖತ್ ತಿರುಗೇಟು: ಮಾರಿಕಾಂಬಾ ಜಾತ್ರೆಗೆ ₹2 ಕೋಟಿ ರಿಲೀಸ್!

Share. Facebook Twitter LinkedIn WhatsApp Email

Related Posts

Rishabh Pant: ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read

ಹಸುಗೂಸಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ‘ಆರ್ಮಿ ವೈದ್ಯ’ರು: ಸಾವಿನ ದವಡೆಯಿಂದ ‘9 ತಿಂಗಳ ಮಗು’ ಪಾರು

2 Mins Read

BIG NEWS: ಪ್ರಕರಣಗಳ ಅಂತಿಮ ತೀರ್ಪು 3 ತಿಂಗಳೊಳಗೆ ಪ್ರಕಟಿಸಿ: ಹೈಕೋರ್ಟ್ ಗಳಿಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್ ಫಿಕ್ಸ್

2 Mins Read
Recent News

Rishabh Pant: ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

BREAKING: ‘ಲಕ್ನೋ ಸೂಪರ್ ಜೈಂಟ್ಸ್’ ತಂಡದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ರಾಜೀನಾಮೆ | Rishabh Pant Quits

KSRTC ಬಸ್ ಪ್ರಯಾಣಿಕರ ದೂರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಸ್ಪಂದನೆ: ಈ ಖಡಕ್ ಆದೇಶ

ಬಿಜೆಪಿಗರ ಆರೋಪಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಖತ್ ತಿರುಗೇಟು: ಮಾರಿಕಾಂಬಾ ಜಾತ್ರೆಗೆ ₹2 ಕೋಟಿ ರಿಲೀಸ್!

State News
KARNATAKA

KSRTC ಬಸ್ ಪ್ರಯಾಣಿಕರ ದೂರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಸ್ಪಂದನೆ: ಈ ಖಡಕ್ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಸಾರ್ವಜನಿಕರು ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು…

ಬಿಜೆಪಿಗರ ಆರೋಪಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಖತ್ ತಿರುಗೇಟು: ಮಾರಿಕಾಂಬಾ ಜಾತ್ರೆಗೆ ₹2 ಕೋಟಿ ರಿಲೀಸ್!

BREAKING: ಜೂನ್.5ರಂದು ‘ಅಭಿಜಿನ್ ಲಗ್ನ’ದಲ್ಲಿ ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ: ಖ್ಯಾತ ಜ್ಯೋತಿಷಿ ಮುಹೂರ್ತ ಫಿಕ್ಸ್

BIG BREAKING: ವಿಮಾನ ಪ್ರಯಾಣದಲ್ಲೇ ಸಚಿವರ ಪಟ್ಟಿ ಸಿದ್ಧಪಡಿಸಿದ ಭಾವಿ ಸಿಎಂ ಡಿ.ಕೆ. ಶಿವಕುಮಾರ್: ಯಾರಿಗೆಲ್ಲಾ ಚಾನ್ಸ್? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.