Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ರಾಜ್ಯದಲ್ಲಿ ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Arivu scheme

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!
INDIA

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

By kannadanewsnow57

ಏಲೂರು: ತಂದೆ ಬೆಳ್ಳಗಿದ್ದರೆ ಮಗು ಕೂಡ ಬೆಳ್ಳಗಿರಬೇಕು, ತಾಯಿ ಕಪ್ಪಗಿದ್ದರೆ ಮಗು ಕಪ್ಪಗಿರಬೇಕು ಎಂಬ ಯಾವುದೇ ನಿಯಮ ಪ್ರಕೃತಿಯಲ್ಲಿಲ್ಲ. ಆದರೆ, ಕೇವಲ ಮಗುವಿನ ಚರ್ಮದ ಬಣ್ಣವನ್ನು ನೋಡಿ, “ಇವನು ನನ್ನ ಮಗನಲ್ಲ” ಎಂದು ಅನುಮಾನಿಸಿ, ಹೆತ್ತ ಮಗನನ್ನೇ ತಂದೆಯೊಬ್ಬ ಬಲಿಪಡೆದಿರುವ ಘೋರ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಪೆದಪಾಡು ಮಂಡಲದ ನಾಯುಡುಗುಡೆಂನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ನಾಯುಡುಗುಡೆಂ ನಿವಾಸಿ ಪಿಟ್ಟಾ ವಿನೋದ್ ಮತ್ತು ಪೆದಪಾಡು ಮೂಲದ ಮಹಿಳೆಯೊಂದಿಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ 11 ವರ್ಷದ ರಿಷಿಬಾಬು ಎಂಬ ಮಗನಿದ್ದನು. ಆದರೆ, ಮಗು ಹುಟ್ಟಿದಾಗಿನಿಂದಲೂ ವಿನೋದ್ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದನು. ಮಗುವಿನ ಬಣ್ಣ ಮತ್ತು ರೂಪ ತನ್ನಂತೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ, “ಇವನು ನನಗೆ ಹುಟ್ಟಿದ ಮಗನಲ್ಲ” ಎಂದು ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದನು.

ಒಂಬತ್ತು ವರ್ಷಗಳ ಹಿಂದೆ ಗಂಡನ ಕಿರುಕುಳ ತಾಳಲಾರದೆ ಆಕೆ ಮಗನನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದಳು. ಆದರೆ, 2024ರಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯಿತಿಯ ನಂತರ, ಪತಿ ಬದಲಾಗಿದ್ದಾನೆ ಎಂದು ನಂಬಿ ಆಕೆ ಮತ್ತೆ ಗಂಡನ ಮನೆಗೆ ಮರಳಿದ್ದಳು.

ಮಿತಿಮೀರಿದ ಕಿರುಕುಳ:

ಮನೆಗೆ ಬಂದ ಮೇಲೂ ವಿನೋದ್ನ ವಿಕೃತ ಬುದ್ಧಿ ಬದಲಾಗಲಿಲ್ಲ. ಮಗನನ್ನು ಶಾಲೆಗೆ ಕಳುಹಿಸದೆ, ದಿನನಿತ್ಯ ಆತನ ಮೇಲೆ ಹಲ್ಲೆ ಮಾಡುತ್ತಿದ್ದನು. ಈ ಬಗ್ಗೆ ಹಿಂದೆ ಐಸಿಡಿಎಸ್ (ICDS) ಅಧಿಕಾರಿಗಳು ವಿನೋದ್ಗೆ ಕೌನ್ಸೆಲಿಂಗ್ ನೀಡಿದ್ದರೂ ಆತ ಸುಧಾರಿಸಿರಲಿಲ್ಲ. ಮಗನ ಮೇಲೆ ಮತ್ತಷ್ಟು ದ್ವೇಷ ಸಾಧಿಸಲು ಶುರುಮಾಡಿದ್ದನು.

ಶನಿವಾರ ಬೆಳಿಗ್ಗೆ ಬಾಲಕನ ಅಜ್ಜ ರಮೇಶ್ ಅವರಿಗೆ ಸ್ಥಳೀಯರಿಂದ ಕರೆ ಬಂದಿದೆ. ರಿಷಿಬಾಬು ಮನೆಯ ಹೊರಗಿನ ಮಂಚದ ಮೇಲೆ ಶವವಾಗಿ ಬಿದ್ದಿರುವ ಮಾಹಿತಿ ತಿಳಿದು ಅವರು ಧಾವಿಸಿ ಬಂದಿದ್ದಾರೆ. ಬಾಲಕನ ದೇಹದ ಮೇಲೆ ಗಾಯದ ಗುರುತುಗಳಿದ್ದು, ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸ್ ತನಿಖೆ:

ಮೃತನ ಅಜ್ಜ ನೀಡಿದ ದೂರಿನ ಮೇರೆಗೆ ಪೆದಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನೋದ್ನನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮಗುವಿನ ಸಾವಿನ ಹಿಂದಿನ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHOCKING: A sinful father killed his 11-year-old son because he was black!
Share. Facebook Twitter LinkedIn WhatsApp Email

Related Posts

ಭಾರತೀಯರು ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗಬಹುದು? ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು ಗೊತ್ತಾ?

2 Mins Read

BIG NEWS : `NEET’ 2026 ಪ್ರಶ್ನೆಪತ್ರಿಕೆ ಸೋರಿಕೆ? ರಾಜಸ್ಥಾನ SOG ತನಿಖೆಯಲ್ಲಿ ಸ್ಫೋಟಕ ಮಾಹಿತಿ

2 Mins Read

BIG NEWS : ಚಿನ್ನ ಖರೀದಿ ಕಡಿಮೆ ಮಾಡಿ ಎಂಬ ಪ್ರಧಾನಿ ಮೋದಿ ಕರೆಯಿಂದ 1 ಕೋಟಿ ಉದ್ಯೋಗಗಳಿಗೆ ಕುತ್ತು : ಜ್ಯುವೆಲ್ಲರಿ ಕೌನ್ಸಿಲ್ ಆತಂಕ

1 Min Read
Recent News

BIG BREAKING: ರಾಜ್ಯದಲ್ಲಿ ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Arivu scheme

SHOCKING : ಕಪ್ಪಾಗಿದ್ದಾನೆ ಎಂದು 11 ವರ್ಷದ ಮಗನನ್ನೇ ಹತ್ಯೆಗೈದ ಪಾಪಿ ತಂದೆ!

State News
KARNATAKA

BIG BREAKING: ರಾಜ್ಯದಲ್ಲಿ ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆಯು…

ಚಾಮರಾಜನಗರದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Arivu scheme

ರಾಜ್ಯದ ಜನತೆ ಗಮನಕ್ಕೆ : ಕರ್ನಾಟಕದ ಎಲ್ಲಾ ಜಿಲ್ಲೆಗಳ `SP’ಗಳ ದೂರವಾಣಿ ಸಂಖ್ಯೆ ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.