ಬೆಂಗಳೂರು : ಕರ್ನಾಟಕದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಅಲ್ಲದೆ ಶೃಂಗೇರಿ ಉಪಚುನಾವಣೆಯಲ್ಲಿ ಅಕ್ರಮ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜೇಗೌಡರಿಗೆ 58602 ಮತಗಳು ಇದ್ದವು. ಪೋಸ್ಟಲ್ ನಲ್ಲಿ 589 ಮತಗಳು ಇದ್ದವು. ಅದೇ ರೀತಿಯಾಗಿ ಜೀವರಾಜ್ ಅವರಿಗೆ 58278 ಮತಗಳು ಇದ್ದವು . ಪೋಸ್ಟಲ್ ನಲ್ಲಿ 692 ಮತಗಳು ಇದ್ದವು. 201 ಮತಗಳಿಂದ ಶೃಂಗೇರಿ ಕ್ಷೇತ್ರದಲ್ಲಿ ರಾಜೇಗೌಡ ಗೆದ್ದಿದ್ದರು. ಕೋರ್ಟ್ ಆದೇಶದ ಮೇಲೆ ಮತ ಎಣಿಕೆ ಸಹ ಆಯ್ತು.
ಮರುಮತ ಎಣಿಕೆಯಲ್ಲಿ ರಾಜೇಗೌಡಗೆ 255 ಮತಗಳು ಕಡಿಮೆ, ಮರುಮತ ಎಣಿಕೆಯಲ್ಲಿ ಜೀವರಾಜ್ ಗೆ 2 ಮತಗಳು ಕಡಿಮೆ ಬಂದಿವೆ. ಇದನ್ನು ನೋಡಿದಾಗ ವೋಟ್ ಚೋರಿ ಆಗಿರುವುದು ಪತ್ತೆಯಾಗಿದೆ. ಮರುಮದ ಎಣಿಕೆಯಲ್ಲಿ ವೋಟು ಚೂರಿ ಮಾಡಲಾಗಿದೆ ಇದು ವೋಟು ಚೂರಿ ಅಷ್ಟೇ ಅಲ್ಲ ವೋಟ್ ಡಕಾಯಿತಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಆರೋಪ ಮಾಡಿದರು.








