Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್: ಟೆಹ್ರಾನ್‌ನ ಹೊಸ ಪ್ರಸ್ತಾವನೆ ಪರಿಶೀಲಿಸಲು ಸಮ್ಮತಿ

03/05/2026 7:20 AM

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM

ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

03/05/2026 7:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ
KARNATAKA

ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

By kannadanewsnow5703/05/2026 7:09 AM

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ರಾಜ್ಯ ಸರ್ಕಾರವು ‘8 ಗ್ಯಾರಂಟಿ’ಗಳನ್ನೊಳಗೊಂಡ ವಿಶೇಷ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಈ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಶಾಲಾ ಶಿಕ್ಷಣದಲ್ಲಿ ದೀರ್ಘಕಾಲದಿಂದ ಇರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಹಳೆಯ ಬೋಧನಾ ವಿಧಾನಗಳಂತಹ ಸಮಸ್ಯೆಗಳನ್ನು ನೀಗಿಸಿ, ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಶಿಕ್ಷಣಕ್ಕೆ ‘ಅಷ್ಟ ಗ್ಯಾರಂಟಿ’ಗಳು:

ಗ್ಯಾರಂಟಿ 1- ಶಿಕ್ಷಕರ ಕೊರತೆ ಇನ್ನಿಲ್ಲ :5ನೇ ತರಗತಿವರೆಗೆ ತರಗತಿಗೊಬ್ಬರು ಹಾಗೂ 6ನೇ ತರಗತಿಯಿಂದ ವಿಷಯಕ್ಕೊಬ್ಬರಂತೆ ಶಿಕ್ಷಕರ ನೇಮಕ

ಗ್ಯಾರಂಟಿ 2-ಪೋಷಕರು ಬಯಸುವ ಮಾಧ್ಯಮ : ಎಲ್ಲಾ ಶಾಲೆಗಳಲ್ಲೂ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್ ಬೋಧನೆಗಾಗಿ ಶಿಕ್ಷಕರಿಗೆ ವಿಶೇಷ ತರಬೇತಿ

ಗ್ಯಾರಂಟಿ 3-ಉಚಿತ ಸಾರಿಗೆ ಸೌಲಭ್ಯ :ಕೆಪಿಎಸ್ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ

ಗ್ಯಾರಂಟಿ 4-ಡಿಜಿಟಲ್ ಶಿಕ್ಷಣ : 1ನೇ ತರಗತಿಯಿಂದ ಕಂಪ್ಯೂಟರ್ ಹಾಗೂ 3ನೇ ತರಗತಿಯಿಂದಲೇ AI ಕಲಿಕೆ ; 3 ವರ್ಷಗಳಲ್ಲಿ ಎಲ್ಲಾ ಕೆಪಿಎಸ್ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಕರ ನೇಮಕ

ಗ್ಯಾರಂಟಿ 5-ಕಲೆ ಮತ್ತು ದೈಹಿಕ ಶಿಕ್ಷಣ : ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರ ನೇಮಕ ; ಈ ವರ್ಷದಿಂದಲೇ ದೈಹಿಕ ಶಿಕ್ಷಕರ ಭರ್ತಿ ಆರಂಭ.

ಗ್ಯಾರಂಟಿ 6- ಶೈಕ್ಷಣಿಕೇತರ ಹೊರೆ ಮುಕ್ತಿ :ಶಿಕ್ಷಕರು ಬೋಧನೆಗಷ್ಟೇ ಸೀಮಿತ, ಬೋಧನೆಯ ಹೊರತಾದ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಗಳ ನೇಮಕ.

ಗ್ಯಾರಂಟಿ 7- ಪೋಷಕರು – ಶಿಕ್ಷಕರ ಸಭೆ : ಮಗುವಿನ ಪ್ರಗತಿ ತಿಳಿಯಲು ಪಠ್ಯ ಆಧಾರಿತ ಮೌಲ್ಯಮಾಪನ ಮತ್ತು ಪ್ರತಿ ತಿಂಗಳಿಗೊಮ್ಮೆ ಕಡ್ಡಾಯ ಪೋಷಕರು-ಶಿಕ್ಷಕರ ಸಭೆ.

ಗ್ಯಾರಂಟಿ 8- ಕೌಶಲ್ಯ ಮತ್ತು ಸ್ಪರ್ಧಾತ್ಮಕ ತರಬೇತಿ : 6ನೇ ತರಗತಿಯಿಂದಲೇ ವೃತ್ತಿ ಕೌಶಲ್ಯ ಶಿಕ್ಷಣ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
ಯೋಜನೆಯ ಮುಖ್ಯಾಂಶಗಳು:

ಶಿಕ್ಷಕರ ನೇಮಕ: ಪ್ರಾಥಮಿಕ ಶಾಲೆಗಳಲ್ಲಿ 5ನೇ ತರಗತಿವರೆಗೆ ಪ್ರತಿಯೊಂದು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. 6ನೇ ತರಗತಿಯಿಂದ ವಿಷಯವಾರು ಪರಿಣತ ಶಿಕ್ಷಕರನ್ನು ನೇಮಿಸಲಾಗುವುದು.

ಇಂಗ್ಲಿಷ್ ಮಾಧ್ಯಮ: ಪೋಷಕರ ಬೇಡಿಕೆಗೆ ಸ್ಪಂದಿಸಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಲಭ್ಯವಾಗುವಂತೆ ಮಾಡಲಾಗುವುದು.

ಕರ್ನಾಟಕ ಪಬ್ಲಿಕ್ ಸ್ಕೂಲ್: ಸುಮಾರು 900 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬೋಧನೆ ನಡೆಯಲಿದೆ.

ತಂತ್ರಜ್ಞಾನ ಮತ್ತು ಎಐ: 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಬಗ್ಗೆ ಮೂಲಭೂತ ಅರಿವು ಮೂಡಿಸಲಾಗುವುದು.

ಶಿಕ್ಷಕರಿಗೆ ಬೋಧನೆಯೇ ಪ್ರಧಾನ: ಶಿಕ್ಷಕರು ಇನ್ನು ಮುಂದೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವಂತಿಲ್ಲ. ಕೇವಲ ಬೋಧನೆಗೆ ಗಮನಹರಿಸಲು ಅನುವಾಗುವಂತೆ ಆಡಳಿತಾತ್ಮಕ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗುವುದು.

“ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದೇ ನಮ್ಮ ಗುರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

8 'guarantees' for the improvement of government schools in the state: A significant step by the government to strengthen the education system
Share. Facebook Twitter LinkedIn WhatsApp Email

Related Posts

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM2 Mins Read

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM1 Min Read

Rain Alert : ರಾಜ್ಯದ 20 ಜಿಲ್ಲೆಗಳಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಖಾಖೆ ಮುನ್ಸೂಚನೆ.!

03/05/2026 6:51 AM1 Min Read
Recent News

ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್: ಟೆಹ್ರಾನ್‌ನ ಹೊಸ ಪ್ರಸ್ತಾವನೆ ಪರಿಶೀಲಿಸಲು ಸಮ್ಮತಿ

03/05/2026 7:20 AM

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

03/05/2026 7:18 AM

ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

03/05/2026 7:09 AM
Another shooting at Kapil Sharma's cafe in Canada

BREAKING: ಕಪಿಲ್ ಶರ್ಮಾ ಕೆಫೆ ಸಮೀಪ ಬಿಷ್ಣೋಯ್ ಗ್ಯಾಂಗ್‌ನಿಂದ ಗುಂಡಿನ ದಾಳಿ: ಖ್ಯಾತ ಹಾಸ್ಯನಟನಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ ಲಾರೆನ್ಸ್ ಗ್ಯಾಂಗ್!

03/05/2026 7:02 AM
State News
KARNATAKA

ALERT : ಮಾವು ಪ್ರಿಯರೇ ಎಚ್ಚರ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಜಸ್ಟ್ ಈ ರೀತಿ ಗುರುತಿಸಿ.!

By kannadanewsnow5703/05/2026 7:18 AM KARNATAKA 2 Mins Read

ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಲಭ್ಯವಿವೆ. ಆದರೆ, ಮಾವಿನ ಹಣ್ಣಿನ…

ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗೆ 8 ‘ಗ್ಯಾರಂಟಿ’: ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರ್ಕಾರದ ಮಹತ್ವದ ಹೆಜ್ಜೆ

03/05/2026 7:09 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM

Rain Alert : ರಾಜ್ಯದ 20 ಜಿಲ್ಲೆಗಳಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಖಾಖೆ ಮುನ್ಸೂಚನೆ.!

03/05/2026 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.